• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸುಷ್ಮಾ ಸರ್ಜಿಕಲ್ ದಾಳಿಗೆ ಪಾಕ್ ಕಂಗಾಲು

TNN Correspondent Posted On September 24, 2017
0


0
Shares
  • Share On Facebook
  • Tweet It

>>> ನಮ್ಮಲ್ಲಿ ಐಐಟಿ, ಐಐಎಂನಂಥ ಪ್ರತಿಷ್ಠಿತ ಸಂಸ್ಥೆಗಳಿವೆ. ಆದರೆ ಪಾಕ್‍ನಲ್ಲಿ ಹಕ್ಕಾನಿ, ಲಷ್ಕರ್-ಎ-ತಯ್ಯಬಾ, ಜೈಷೆ ಮೊಹಮ್ಮದ್ ನಂಥ ಉಗ್ರರ ಕಾರ್ಖಾನೆಗಳಿವೆ.

ನ್ಯೂಯಾರ್ಕ್ : ಜಾಗತಿಕ ವೇದಿಕೆಯಲ್ಲಿ ಪ್ರತಿ ಬಾರಿ ಕಾಶ್ಮೀರ ಸಮಸ್ಯೆಯನ್ನು ಎತ್ತಿ ಆಡುವ ಮೂಲಕ ತನ್ನ ಹೇಡಿ ಕೃತ್ಯಗಳನ್ನು ಮರೆಮಾಚಿಕೊಳ್ಳಲು ಯತ್ನಿಸುತ್ತಿದ್ದ ಪಾಕಿಸ್ತಾನಕ್ಕೆ ಶನಿವಾರ ವಿಶ್ವಸಂಸ್ಥೆ ಮಹಾಸಭೆಯಲ್ಲಿ ಅಡಗಿಕೊಳ್ಳಲು ಜಾಗವೇ ಸಿಗಲಿಲ್ಲ. ಕಾರಣ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಾಗ್ದಾಳಿ ಹೇಗಿತ್ತೆಂದರೆ ಪಾಕ್ ಕುತ್ತಿಗೆ ಹಿಡಿದು, “ನೋಡ್ರಯ್ಯ ನೀವು ನಿಮ್ಮ ಕಾಲುಗಳನ್ನೇ ಭಯೋತ್ಪಾದನೆಯ ಚರಂಡಿಯಲ್ಲಿ ಹೂತಿಕೊಂಡು ಬೇರೆ ದೇಶಗಳತ್ತ ಬಾಂಬ್ ಎಸೆಯಬೇಡಿ. ಒಂದು ವೇಳೆ ಭಾರತ ತಿರುಗಿಬಿದ್ದರೆ ನಿಮ್ಮ ಹೆಸರು ಅಳಿಸಿ ಹೋಗುತ್ತದೆ ” ಎಂದು ಗದರಿದಂತಿತ್ತು.
ಒಂದು ದಿನ ಹಿಂದೆ ಮುಂದೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಎರಡು ಏಷ್ಯಾ ರಾಷ್ಟ್ರಗಳು ಕಳೆದ 60 ದಶಕಗಳಲ್ಲಿ ಏನು ಸಾಧಿಸಿವೆ? ಎಲ್ಲಿ ಈಗ ನಿಂತಿವೆ ಎಂಬುದನ್ನು ಜಗತ್ತಿಗೆ ಸುಷ್ಮಾ ತಮ್ಮ ಭಾಷಣದ ಮೂಲಕ ಮನವರಿಕೆ ಮಾಡಿಕೊಟ್ಟರು.

ಮಹಾಸಭೆಯಲ್ಲಿ ಸುಷ್ಮಾ ವಾಗ್ಬಾಣದಿಂದ ಅಬ್ಬಾಸಿಗೆ ಕಪಾಳಮೋಕ್ಷ

>> ನಾನು ಪಾಕ್ ರಾಜಕಾರಣಿಗಳಿಗೆ ತಮ್ಮ ದೇಶದೊಳಗೆ ಇಣುಕಲು ಕಿವಿಮಾತು ಹೇಳುತ್ತಾನೆ. ಭಾರತ ಐಟಿಯಲ್ಲಿ ಸೂಪರ್ ಶಕ್ತಿಯಾಗಿದೆ. ಆದರೆ ಪಾಕಿಸ್ತಾನ ಜಾಗತಿಕ ಭಯೋತ್ಪಾದನೆ ರಫ್ತುದಾರ ಎಂದು ಕುಖ್ಯಾತಿ ಪಡೆದಿದೆ.
>> ನಾವು ಐಐಟಿ, ಐಐಎಂ, ಏಮ್ಸ್ ಸ್ಥಾಪನೆಯಿಂದ ಪ್ರಗತಿಯ ಹಾದಿಯಲ್ಲಿದ್ದೇವೆ. ಆದರೆ ಪಾಕ್ ಎಲ್‍ಇಟಿ, ಹಕ್ಕಾನಿ , ಜೆಇಎಂ ಥರದ ಉಗ್ರ ಜಾಲಗಳನ್ನು ಸ್ಥಾಪಿಸಿ ಅಧೋಗತಿಯಲ್ಲಿದೆ.
>> ಜಗತ್ತಿನಲ್ಲಿ ಮರಣಮೃದಂಗಕ್ಕೆ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನ, ನಮಗೆ ಮಾನವತೆಯ ಪಾಠ ಮಾಡುವುದು ಹಾಸ್ಯಾಸ್ಪದ.
>> ನಾವು ಬಡತನ ನಿಮೂರ್ಲನೆಗಾಗಿ ಹೋರಾಡುತ್ತಿದ್ದೇವೆ. ಆದರೆ ಪಾಕ್ ನಮ್ಮ ವಿರುದ್ಧ ಹೋರಾಡುತ್ತಿದೆ.
>> ವಿಶ್ವಸಂಸ್ಥೆ ಭಯೋತ್ಪಾದನೆಯನ್ನು ಶತ್ರು ಎಂದು ಘೋಷಿಸಲು ವ್ಯಾಖ್ಯಾನಕ್ಕಾಗಿ ಶೋಧಿಸುತ್ತಿದೆ. ಆದರೆ ಭಾರತ ತನ್ನ ಶತ್ರು ಯಾರೆಂದು ಗುರುತಿಸಿಯಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಉಗ್ರರ ಪಟ್ಟಿಯನ್ನು ಶತ್ರುಗಳೆಂದು ಸಿದ್ಧಪಡಿಸದಿದ್ದರೆ ನಾವೆಲ್ಲ ಹೋರಾಡುವುದು ಯಾವಾಗ?

>> ಶತ್ರುಗಳ ವಿರುದ್ಧ ಹೋರಾಟದಲ್ಲಿ ಭಯೋತ್ಪಾದನೆ ಕೆಲವರಿಗೆ ಸ್ವಹಿತಾಸಕ್ತಿಗೆ ಸಾಧನವಾಗಿ ಕಂಡಿದೆ ಎಂದು ಸುಷ್ಮಾ ಚೀನಾಗೆ ಕುಟುಕಿದ್ದಾರೆ.
>> ವಿಶ್ವಸಂಸ್ಥೆ ಭದ್ರತಾ ಮಂಡಳಿ ಪರಿಷ್ಕರಣೆಗೆ ಕೂಡಲೇ ಒತ್ತುಕೊಡಬೇಕಿದೆ. 160 ರಾಷ್ಟ್ರಗಳು ಕಳೆದ ಬಾರಿ ಬೆಂಬಲ ಘೋಷಿಸಿದ್ದರೂ ಕೆಲಸವಾಗಿಲ್ಲ. ಹವಾಮಾನ ಬದಲಾವಣೆ ವಿರುದ್ಧ ಮಾತಿಗಿಂತ ಗಂಭೀರ ಕ್ರಮಗಳು ಮುಖ್ಯವಾಗುತ್ತವೆ.
0
Shares
  • Share On Facebook
  • Tweet It


americaeamiimiitlashkarnewyorkpakistansushmaswarajterroriststrumpunga


Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Tulunadu News January 28, 2026
You may also like
ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಸೆಡ್ಡು ಹೊಡೆದ ಭಾರತ: ರಷ್ಯಾದಿಂದ ಎಸ್ -400 ಕ್ಷಿಪಣಿ ಕೊಳಲು ಮುಂದಾದ ಭಾರತ
July 1, 2018
ಬಿಜೆಪಿಗೆ ಯೋಧರ ಮೇಲೆ ನಿಜವಾದ ಪ್ರೀತಿ ಇದೆ ಎಂದಾದರೆ…..
February 3, 2018
ನೇಪಾಳದ ಹಿಂದು ದೇವಾಲಯ ಪುನರ್‍ನಿರ್ಮಾಣಕ್ಕೆ ಅಮೆರಿಕದಿಂದ ರೂ. 65 ಲಕ್ಷ ನೆರವು
October 17, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search