• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸುಷ್ಮಾ ಸರ್ಜಿಕಲ್ ದಾಳಿಗೆ ಪಾಕ್ ಕಂಗಾಲು

TNN Correspondent Posted On September 24, 2017
0


0
Shares
  • Share On Facebook
  • Tweet It

>>> ನಮ್ಮಲ್ಲಿ ಐಐಟಿ, ಐಐಎಂನಂಥ ಪ್ರತಿಷ್ಠಿತ ಸಂಸ್ಥೆಗಳಿವೆ. ಆದರೆ ಪಾಕ್‍ನಲ್ಲಿ ಹಕ್ಕಾನಿ, ಲಷ್ಕರ್-ಎ-ತಯ್ಯಬಾ, ಜೈಷೆ ಮೊಹಮ್ಮದ್ ನಂಥ ಉಗ್ರರ ಕಾರ್ಖಾನೆಗಳಿವೆ.

ನ್ಯೂಯಾರ್ಕ್ : ಜಾಗತಿಕ ವೇದಿಕೆಯಲ್ಲಿ ಪ್ರತಿ ಬಾರಿ ಕಾಶ್ಮೀರ ಸಮಸ್ಯೆಯನ್ನು ಎತ್ತಿ ಆಡುವ ಮೂಲಕ ತನ್ನ ಹೇಡಿ ಕೃತ್ಯಗಳನ್ನು ಮರೆಮಾಚಿಕೊಳ್ಳಲು ಯತ್ನಿಸುತ್ತಿದ್ದ ಪಾಕಿಸ್ತಾನಕ್ಕೆ ಶನಿವಾರ ವಿಶ್ವಸಂಸ್ಥೆ ಮಹಾಸಭೆಯಲ್ಲಿ ಅಡಗಿಕೊಳ್ಳಲು ಜಾಗವೇ ಸಿಗಲಿಲ್ಲ. ಕಾರಣ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಾಗ್ದಾಳಿ ಹೇಗಿತ್ತೆಂದರೆ ಪಾಕ್ ಕುತ್ತಿಗೆ ಹಿಡಿದು, “ನೋಡ್ರಯ್ಯ ನೀವು ನಿಮ್ಮ ಕಾಲುಗಳನ್ನೇ ಭಯೋತ್ಪಾದನೆಯ ಚರಂಡಿಯಲ್ಲಿ ಹೂತಿಕೊಂಡು ಬೇರೆ ದೇಶಗಳತ್ತ ಬಾಂಬ್ ಎಸೆಯಬೇಡಿ. ಒಂದು ವೇಳೆ ಭಾರತ ತಿರುಗಿಬಿದ್ದರೆ ನಿಮ್ಮ ಹೆಸರು ಅಳಿಸಿ ಹೋಗುತ್ತದೆ ” ಎಂದು ಗದರಿದಂತಿತ್ತು.
ಒಂದು ದಿನ ಹಿಂದೆ ಮುಂದೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಎರಡು ಏಷ್ಯಾ ರಾಷ್ಟ್ರಗಳು ಕಳೆದ 60 ದಶಕಗಳಲ್ಲಿ ಏನು ಸಾಧಿಸಿವೆ? ಎಲ್ಲಿ ಈಗ ನಿಂತಿವೆ ಎಂಬುದನ್ನು ಜಗತ್ತಿಗೆ ಸುಷ್ಮಾ ತಮ್ಮ ಭಾಷಣದ ಮೂಲಕ ಮನವರಿಕೆ ಮಾಡಿಕೊಟ್ಟರು.

ಮಹಾಸಭೆಯಲ್ಲಿ ಸುಷ್ಮಾ ವಾಗ್ಬಾಣದಿಂದ ಅಬ್ಬಾಸಿಗೆ ಕಪಾಳಮೋಕ್ಷ

>> ನಾನು ಪಾಕ್ ರಾಜಕಾರಣಿಗಳಿಗೆ ತಮ್ಮ ದೇಶದೊಳಗೆ ಇಣುಕಲು ಕಿವಿಮಾತು ಹೇಳುತ್ತಾನೆ. ಭಾರತ ಐಟಿಯಲ್ಲಿ ಸೂಪರ್ ಶಕ್ತಿಯಾಗಿದೆ. ಆದರೆ ಪಾಕಿಸ್ತಾನ ಜಾಗತಿಕ ಭಯೋತ್ಪಾದನೆ ರಫ್ತುದಾರ ಎಂದು ಕುಖ್ಯಾತಿ ಪಡೆದಿದೆ.
>> ನಾವು ಐಐಟಿ, ಐಐಎಂ, ಏಮ್ಸ್ ಸ್ಥಾಪನೆಯಿಂದ ಪ್ರಗತಿಯ ಹಾದಿಯಲ್ಲಿದ್ದೇವೆ. ಆದರೆ ಪಾಕ್ ಎಲ್‍ಇಟಿ, ಹಕ್ಕಾನಿ , ಜೆಇಎಂ ಥರದ ಉಗ್ರ ಜಾಲಗಳನ್ನು ಸ್ಥಾಪಿಸಿ ಅಧೋಗತಿಯಲ್ಲಿದೆ.
>> ಜಗತ್ತಿನಲ್ಲಿ ಮರಣಮೃದಂಗಕ್ಕೆ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನ, ನಮಗೆ ಮಾನವತೆಯ ಪಾಠ ಮಾಡುವುದು ಹಾಸ್ಯಾಸ್ಪದ.
>> ನಾವು ಬಡತನ ನಿಮೂರ್ಲನೆಗಾಗಿ ಹೋರಾಡುತ್ತಿದ್ದೇವೆ. ಆದರೆ ಪಾಕ್ ನಮ್ಮ ವಿರುದ್ಧ ಹೋರಾಡುತ್ತಿದೆ.
>> ವಿಶ್ವಸಂಸ್ಥೆ ಭಯೋತ್ಪಾದನೆಯನ್ನು ಶತ್ರು ಎಂದು ಘೋಷಿಸಲು ವ್ಯಾಖ್ಯಾನಕ್ಕಾಗಿ ಶೋಧಿಸುತ್ತಿದೆ. ಆದರೆ ಭಾರತ ತನ್ನ ಶತ್ರು ಯಾರೆಂದು ಗುರುತಿಸಿಯಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಉಗ್ರರ ಪಟ್ಟಿಯನ್ನು ಶತ್ರುಗಳೆಂದು ಸಿದ್ಧಪಡಿಸದಿದ್ದರೆ ನಾವೆಲ್ಲ ಹೋರಾಡುವುದು ಯಾವಾಗ?

>> ಶತ್ರುಗಳ ವಿರುದ್ಧ ಹೋರಾಟದಲ್ಲಿ ಭಯೋತ್ಪಾದನೆ ಕೆಲವರಿಗೆ ಸ್ವಹಿತಾಸಕ್ತಿಗೆ ಸಾಧನವಾಗಿ ಕಂಡಿದೆ ಎಂದು ಸುಷ್ಮಾ ಚೀನಾಗೆ ಕುಟುಕಿದ್ದಾರೆ.
>> ವಿಶ್ವಸಂಸ್ಥೆ ಭದ್ರತಾ ಮಂಡಳಿ ಪರಿಷ್ಕರಣೆಗೆ ಕೂಡಲೇ ಒತ್ತುಕೊಡಬೇಕಿದೆ. 160 ರಾಷ್ಟ್ರಗಳು ಕಳೆದ ಬಾರಿ ಬೆಂಬಲ ಘೋಷಿಸಿದ್ದರೂ ಕೆಲಸವಾಗಿಲ್ಲ. ಹವಾಮಾನ ಬದಲಾವಣೆ ವಿರುದ್ಧ ಮಾತಿಗಿಂತ ಗಂಭೀರ ಕ್ರಮಗಳು ಮುಖ್ಯವಾಗುತ್ತವೆ.
0
Shares
  • Share On Facebook
  • Tweet It


americaeamiimiitlashkarnewyorkpakistansushmaswarajterroriststrumpunga


Trending Now
ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
Tulunadu News July 12, 2025
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Tulunadu News July 12, 2025
You may also like
ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಸೆಡ್ಡು ಹೊಡೆದ ಭಾರತ: ರಷ್ಯಾದಿಂದ ಎಸ್ -400 ಕ್ಷಿಪಣಿ ಕೊಳಲು ಮುಂದಾದ ಭಾರತ
July 1, 2018
ಬಿಜೆಪಿಗೆ ಯೋಧರ ಮೇಲೆ ನಿಜವಾದ ಪ್ರೀತಿ ಇದೆ ಎಂದಾದರೆ…..
February 3, 2018
ನೇಪಾಳದ ಹಿಂದು ದೇವಾಲಯ ಪುನರ್‍ನಿರ್ಮಾಣಕ್ಕೆ ಅಮೆರಿಕದಿಂದ ರೂ. 65 ಲಕ್ಷ ನೆರವು
October 17, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
  • Popular Posts

    • 1
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 2
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 3
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 4
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 5
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search