• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ದಸರಾ ಹಿಂದೂಗಳಿಗೇಕೆ ಪವಿತ್ರ, ಏಕೆ ಆಚರಿಸಬೇಕು? ದೇಶಾದ್ಯಂತ ಎಲ್ಲಿ, ಹೇಗೆ ಆಚರಿಸುತ್ತಾರೆ ಗೊತ್ತಾ?

TNN Correspondent Posted On September 30, 2017
0


0
Shares
  • Share On Facebook
  • Tweet It

ದಸರಾ ಪ್ರಯುಕ್ತ ಆಯುಧ ಪೂಜೆಗೆ ಆ ಕುತ್ಸಿತ ಮನಸ್ಸಿನ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದರೇನು, ದೇಶಾದ್ಯಂತ ಎಂದಿನಂತೆಯೇ ದಸರಾ ಆಚರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಕೋಟ್ಯಂತರ ಹಿಂದೂಗಳು ದಸರಾ ಆಚರಿಸುತ್ತಿದ್ದಾರೆ. ಇಡೀ ದೇಶವೇ ದಸರಾ ಆಚರಣೆಯಲ್ಲಿ ಸಂತಸದಿಂದ ತೊಡಗಿದ್ದಾರೆ. ಒಂಬತ್ತು ದಿನ ದುರ್ಗೆಯ ಪೂಜೆ ಮಾಡಿ ಹತ್ತನೇ ದಿನ ವಿಜಯ ದಶಮಿ ಆಚರಣೆಗೆ ದೇಶವೇ ಸಜ್ಜಾಗಿದೆ.

ಅಷ್ಟಕ್ಕೂ ದಸರಾ ಏಕೆ ಆಚರಿಸಬೇಕು? ಈ ಹಬ್ಬವೇಕೆ ಹಿಂದೂಗಳಿಗೆ ಪವಿತ್ರ? ದೇಶಾದ್ಯಂತ ಹೇಗೆ ಹಬ್ಬ ಆಚರಣೆ ಮಾಡಲಾಗುತ್ತದೆ ಗೊತ್ತಾ?

ದಸರಾ, ವಿಜಯದಶಮಿ ಹಿನ್ನೆಲೆ ಏನು?

ಭಾರತೀಯ ಪುರಾಣ ಶಾಸ್ತ್ರದ ಪ್ರಕಾರ ಎರಡು ಕಾರಣಗಳಿಗಾಗಿ ದಸರಾ ಆಚರಿಸಲಾಗುತ್ತದೆ. ದುರ್ಗಾ ಮಾತೆ ರಾಕ್ಷಸ ಮಹಿಷಾಸುರನನ್ನು ಮರ್ದಿಸಿದ ಹಿನ್ನೆಲೆಯಲ್ಲಿ ಒಂಬತ್ತು ದಿನ ನವರಾತ್ರಿ ಆಚರಿಸಲಾಗುತ್ತದೆ.

ಎರಡನೆಯದಾಗಿ, ರಾಮಾಯಣದ ರಾಮನು ಒಂಬತ್ತು ದಿನ ಹೋರಾಡಿ ಹತ್ತನೇ ದಿನ ರಾವಣನನ್ನು ಸಂಹಾರ ಮಾಡಿದ ಕಾರಣ ವಿಜಯದಶಮಿ ಆಚರಿಸಲಾಗುತ್ತದೆ. ಹಾಗಾಗಿ ಹಿಂದೂಗಳಿಗೆ ಈ ಹಬ್ಬ ವಿಜಯದ ಸಂಕೇತವಾಗಿದೆ.

ದೇಶದ ಎಲ್ಲೆಲ್ಲಿ ದಸರಾ ಆಚರಣೆ?

ದೇಶಾದ್ಯಂತ ದಸರಾ ಆಚರಿಸಿದರೂ, ಬಹುತೇಕ ಕಡೆ ವೈವಿಧ್ಯಮಯವಾಗಿ ಹಬ್ಬ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ನವರಾತ್ರಿ ಹಿನ್ನೆಲೆಯಲ್ಲಿ ಗೊಂಬೆಗಳನ್ನು ಜೋಡಿಸಿ, ಒಂಬತ್ತು ದಿನ ಪೂಜೆ ಮಾಡಲಾಗುತ್ತದೆ. ಅದರಲ್ಲೂ ಕರ್ನಾಟಕದ ಮೈಸೂರಿನಲ್ಲಿ ಆಚರಿಸುವ ನವರಾತ್ರಿ, ಒಂಬತ್ತು ದಿನದ ಪೂಜೆ, ಹತ್ತನೇ ದಿನದ ವಿಜಯದಶಮಿ, ಜಂಬೂಸವಾರಿಯಂತೂ ವಿಶ್ವವಿಖ್ಯಾತವಾಗಿದೆ.

ಕೋಲ್ಕತಾದಲ್ಲಿ ದುರ್ಗೆಯ ಪೂಜೆ ಮಾಡಲಾಗುತ್ತದೆ. ಉತ್ತರ ಭಾರತದ ಹಲವೆಡೆ ಹಬ್ಬ ಆಚರಿಸಲಾಗುತ್ತದೆ. ಆದಾಗ್ಯೂ, ರಾಮಾಯಣದ ಹಲವು ಪಾತ್ರಗಳ ವೇಷಧರಿಸಿ ನಾಟಕ, ಸ್ತಬ್ಧಚಿತ್ರಗಳ ಮೂಲಕ ಹಬ್ಬ ಆಚರಿಸಲಾಗುತ್ತದೆ.

ಮಹಾರಾಷ್ಟ್ರದಲ್ಲೂ ದಸರಾ ಆಚರಿಸಲಾಗುತ್ತದೆ. ಬಂಧುಗಳು, ಸ್ನೇಹಿತರು ಸಂಬಂಧಿಕರ ಮನೆಗೆ ಹೋಗಿಯೋ, ನೆರೆಹೊರೆಯವರಿಗೋ ಬನ್ನಿ ನೀಡಿ ಪರಸ್ಪರ ಹಬ್ಬದ ಶುಭಾಶಯ ಕೋರಲಾಗುತ್ತದೆ. ಉತ್ತರ ಕರ್ನಾಟಕ ಸೇರಿ ಕರ್ನಾಟಕದಲ್ಲೂ ಬನ್ನಿ ವಿನಿಮಯ ಮೂಲಕ ಬನ್ನಿ ಬಂಗಾರವಾಗಲಿ, ಪರಸ್ಪರ ಸೌಹಾರ್ದಯುತವಾಗಿ ಜೀವನ ಸಾಗಿಸೋಣ ಎಂದು ಶುಭಾಶಯ ಕೋರುತ್ತರೆ.

ಒಟ್ಟಿನಲ್ಲಿ, ಶಾಂತಿ, ವಿಜಯ, ಸೌಹಾರ್ದದ ಸಂಕೇತವಾಗಿ ದೇಶಾದ್ಯಂತ ದಸರಾ ಆಚರಿಸುವುದು ದೇಶದ ಸಂಪ್ರದಾಯ, ಪುರಾಣ, ಘನತೆಗೆ ಹಿಡಿದ ಕನ್ನಡಿಯಾಗಿದೆ.

ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು…

-ರಮಾನಂದ ಶಾಸ್ತ್ರಿ, ಮಂಗಳೂರು

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!

  • Privacy Policy
  • Contact
© Tulunadu Infomedia.

Press enter/return to begin your search