• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ದಸರಾ ಹಿಂದೂಗಳಿಗೇಕೆ ಪವಿತ್ರ, ಏಕೆ ಆಚರಿಸಬೇಕು? ದೇಶಾದ್ಯಂತ ಎಲ್ಲಿ, ಹೇಗೆ ಆಚರಿಸುತ್ತಾರೆ ಗೊತ್ತಾ?

TNN Correspondent Posted On September 30, 2017


  • Share On Facebook
  • Tweet It

ದಸರಾ ಪ್ರಯುಕ್ತ ಆಯುಧ ಪೂಜೆಗೆ ಆ ಕುತ್ಸಿತ ಮನಸ್ಸಿನ ಮಮತಾ ಬ್ಯಾನರ್ಜಿ ಅಡ್ಡಿಪಡಿಸಿದರೇನು, ದೇಶಾದ್ಯಂತ ಎಂದಿನಂತೆಯೇ ದಸರಾ ಆಚರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಕೋಟ್ಯಂತರ ಹಿಂದೂಗಳು ದಸರಾ ಆಚರಿಸುತ್ತಿದ್ದಾರೆ. ಇಡೀ ದೇಶವೇ ದಸರಾ ಆಚರಣೆಯಲ್ಲಿ ಸಂತಸದಿಂದ ತೊಡಗಿದ್ದಾರೆ. ಒಂಬತ್ತು ದಿನ ದುರ್ಗೆಯ ಪೂಜೆ ಮಾಡಿ ಹತ್ತನೇ ದಿನ ವಿಜಯ ದಶಮಿ ಆಚರಣೆಗೆ ದೇಶವೇ ಸಜ್ಜಾಗಿದೆ.

ಅಷ್ಟಕ್ಕೂ ದಸರಾ ಏಕೆ ಆಚರಿಸಬೇಕು? ಈ ಹಬ್ಬವೇಕೆ ಹಿಂದೂಗಳಿಗೆ ಪವಿತ್ರ? ದೇಶಾದ್ಯಂತ ಹೇಗೆ ಹಬ್ಬ ಆಚರಣೆ ಮಾಡಲಾಗುತ್ತದೆ ಗೊತ್ತಾ?

ದಸರಾ, ವಿಜಯದಶಮಿ ಹಿನ್ನೆಲೆ ಏನು?

ಭಾರತೀಯ ಪುರಾಣ ಶಾಸ್ತ್ರದ ಪ್ರಕಾರ ಎರಡು ಕಾರಣಗಳಿಗಾಗಿ ದಸರಾ ಆಚರಿಸಲಾಗುತ್ತದೆ. ದುರ್ಗಾ ಮಾತೆ ರಾಕ್ಷಸ ಮಹಿಷಾಸುರನನ್ನು ಮರ್ದಿಸಿದ ಹಿನ್ನೆಲೆಯಲ್ಲಿ ಒಂಬತ್ತು ದಿನ ನವರಾತ್ರಿ ಆಚರಿಸಲಾಗುತ್ತದೆ.

ಎರಡನೆಯದಾಗಿ, ರಾಮಾಯಣದ ರಾಮನು ಒಂಬತ್ತು ದಿನ ಹೋರಾಡಿ ಹತ್ತನೇ ದಿನ ರಾವಣನನ್ನು ಸಂಹಾರ ಮಾಡಿದ ಕಾರಣ ವಿಜಯದಶಮಿ ಆಚರಿಸಲಾಗುತ್ತದೆ. ಹಾಗಾಗಿ ಹಿಂದೂಗಳಿಗೆ ಈ ಹಬ್ಬ ವಿಜಯದ ಸಂಕೇತವಾಗಿದೆ.

ದೇಶದ ಎಲ್ಲೆಲ್ಲಿ ದಸರಾ ಆಚರಣೆ?

ದೇಶಾದ್ಯಂತ ದಸರಾ ಆಚರಿಸಿದರೂ, ಬಹುತೇಕ ಕಡೆ ವೈವಿಧ್ಯಮಯವಾಗಿ ಹಬ್ಬ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ನವರಾತ್ರಿ ಹಿನ್ನೆಲೆಯಲ್ಲಿ ಗೊಂಬೆಗಳನ್ನು ಜೋಡಿಸಿ, ಒಂಬತ್ತು ದಿನ ಪೂಜೆ ಮಾಡಲಾಗುತ್ತದೆ. ಅದರಲ್ಲೂ ಕರ್ನಾಟಕದ ಮೈಸೂರಿನಲ್ಲಿ ಆಚರಿಸುವ ನವರಾತ್ರಿ, ಒಂಬತ್ತು ದಿನದ ಪೂಜೆ, ಹತ್ತನೇ ದಿನದ ವಿಜಯದಶಮಿ, ಜಂಬೂಸವಾರಿಯಂತೂ ವಿಶ್ವವಿಖ್ಯಾತವಾಗಿದೆ.

ಕೋಲ್ಕತಾದಲ್ಲಿ ದುರ್ಗೆಯ ಪೂಜೆ ಮಾಡಲಾಗುತ್ತದೆ. ಉತ್ತರ ಭಾರತದ ಹಲವೆಡೆ ಹಬ್ಬ ಆಚರಿಸಲಾಗುತ್ತದೆ. ಆದಾಗ್ಯೂ, ರಾಮಾಯಣದ ಹಲವು ಪಾತ್ರಗಳ ವೇಷಧರಿಸಿ ನಾಟಕ, ಸ್ತಬ್ಧಚಿತ್ರಗಳ ಮೂಲಕ ಹಬ್ಬ ಆಚರಿಸಲಾಗುತ್ತದೆ.

ಮಹಾರಾಷ್ಟ್ರದಲ್ಲೂ ದಸರಾ ಆಚರಿಸಲಾಗುತ್ತದೆ. ಬಂಧುಗಳು, ಸ್ನೇಹಿತರು ಸಂಬಂಧಿಕರ ಮನೆಗೆ ಹೋಗಿಯೋ, ನೆರೆಹೊರೆಯವರಿಗೋ ಬನ್ನಿ ನೀಡಿ ಪರಸ್ಪರ ಹಬ್ಬದ ಶುಭಾಶಯ ಕೋರಲಾಗುತ್ತದೆ. ಉತ್ತರ ಕರ್ನಾಟಕ ಸೇರಿ ಕರ್ನಾಟಕದಲ್ಲೂ ಬನ್ನಿ ವಿನಿಮಯ ಮೂಲಕ ಬನ್ನಿ ಬಂಗಾರವಾಗಲಿ, ಪರಸ್ಪರ ಸೌಹಾರ್ದಯುತವಾಗಿ ಜೀವನ ಸಾಗಿಸೋಣ ಎಂದು ಶುಭಾಶಯ ಕೋರುತ್ತರೆ.

ಒಟ್ಟಿನಲ್ಲಿ, ಶಾಂತಿ, ವಿಜಯ, ಸೌಹಾರ್ದದ ಸಂಕೇತವಾಗಿ ದೇಶಾದ್ಯಂತ ದಸರಾ ಆಚರಿಸುವುದು ದೇಶದ ಸಂಪ್ರದಾಯ, ಪುರಾಣ, ಘನತೆಗೆ ಹಿಡಿದ ಕನ್ನಡಿಯಾಗಿದೆ.

ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು…

-ರಮಾನಂದ ಶಾಸ್ತ್ರಿ, ಮಂಗಳೂರು

  • Share On Facebook
  • Tweet It


- Advertisement -


Trending Now
ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
Tulunadu News June 29, 2022
ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
Tulunadu News June 27, 2022
Leave A Reply

  • Recent Posts

    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
  • Popular Posts

    • 1
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 2
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • 3
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 4
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 5
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search