• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಎಡಪಂಥಿಯರನ್ನು ಬಲಪಂಥಿಯರೇ ಯಾಕೆ ಹೊಡೆಯುತ್ತಾರೆ?

Satish Sasi Posted On October 7, 2017


  • Share On Facebook
  • Tweet It

ಎಡಪರ ಚಿಂತನೆಗಳನ್ನು ಹೊಂದಿರುವ ವ್ಯಕ್ತಿಗಳು ಹತ್ಯೆಯಾದಾಗ ತಕ್ಷಣ ಅವರ ಬೆಂಬಲಿಗರು ಹೇಳುವುದು ಯಾವುದೋ ಬಲಪಂಥಿಯ ಸಂಘಟನೆಯವರು ಕೊಂದಿರಬೇಕು. ಅನೇಕ ಬಾರಿ ಕೊಂದಿರಬೇಕು ಎನ್ನುವುದಕ್ಕಿಂತ ಬಲಪಂಥಿಯರೇ ಕೊಂದಿದ್ದಾರೆ ಎನ್ನುವ ಹೇಳಿಕೆಯನ್ನು ಪೊಲೀಸರು ಇನ್ನೇನೂ ಹೆಣ ಇರುವ ಸ್ಥಳ ತಲುಪುವ ಮೊದಲೇ ಎಡಪಂಥಿಯರು ಹೇಳಿ ಆಗಿರುತ್ತದೆ. ತನಿಖೆ, ವಿಚಾರಣೆ ಎಲ್ಲವೂ ಪ್ರಾರಂಭವಾಗುವ ಮೊದಲೇ ತಮಗೆ ನೇರವಾಗಿ ಕೊಂದವರು ಫೋನ್ ಮಾಡಿ ಹೇಳಿದ್ದಾರೆ ಎನ್ನುವಂತೆ ತಮ್ಮ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಹೇಳಿ ಬಿಟ್ಟಿರುತ್ತಾರೆ.
ಅದಕ್ಕೆ ಮೊನ್ನೆ ಗೌರಿ ಲಂಕೇಶ್ ಹತ್ಯೆ ಕೂಡ ಹೊರತಾಗಿರಲಿಲ್ಲ. ಅಲ್ಲಿಯೂ ಹಾಗೆ ನಡೆಯಿತು. ಹತ್ಯೆ ನಡೆದ ರಾತ್ರಿಯೇ ಮೋದಿಗೆ ದಿಕ್ಕಾರ ಎಂದು ಕೂಗುವವರು ಅಲ್ಲಿ ಕಾಣಿಸಿಕೊಂಡರು. ಕಲ್ಬುರ್ಗಿ ಹತ್ಯೆ ಆದಾಗಲೂ ಹೀಗೆ ನಡೆಯಿತು. ಹಾಗಾದರೆ ಇಂತಹ ಪೂರ್ವಾಗ್ರಹ ಯಾಕೆ ಎನ್ನುವುದರ ಬಗ್ಗೆ ಚಿಂತನೆ ನಡೆಯಲೇಬೇಕು. ಹೇಗೆ ಕುದುರೆ ಓಡುವಾಗ ಕಣ್ಣಿಗೆ ಕಟ್ಟುತ್ತಾರಲ್ಲ, ಅದರಿಂದ ಕುದುರೆಗೆ ಅಕ್ಕಪಕ್ಕದಲ್ಲಿ ಏನಾಗುತ್ತಿದೆ ಎಂದು ಗೊತ್ತೆ ಅಗುವುದಿಲ್ಲ. ಅಂತಹ ಮನಸ್ಥಿತಿಯವರು ಎಡಪಕ್ಷ ಮತ್ತು ಸಂಘಟನೆಗಳಲ್ಲಿ ಇರುವುದರಿಂದ ಅವರಿಗೆ ಆರೋಪ ಹಾಕುವುದು ಸಲೀಸು. ಉಳ್ಳಾಲದಲ್ಲಿ ಮೊನ್ನೆ ಜುಬೇರ್ ಎನ್ನುವ ಯುವಕನ ಕೊಲೆಯಾಯಿತು. ಆದರೆ ಇಲ್ಲಿ ಎಡಪಂಥಿಯರು ಚಳುವಳಿ ತೆಗೆದಿಲ್ಲ. ಯಾಕೆಂದರೆ ಮೃತನಾದವ ಬಿಜೆಪಿ ಕಾರ್ಯಕರ್ಥ. ಅದೇ ಗೌರಿ ತಮ್ಮ ಬರವಣಿಗೆಯಲ್ಲಿ ತೀವ್ರವಾಗಿ ಹಿಂದೂತ್ವವನ್ನು, ಹಿಂದೂ ಸಂಘಟನೆಗಳನ್ನು, ಹಿಂದೂ ಮುಖಂಡರನ್ನು, ಭಾರತದ ಪ್ರಧಾನಿ ಮೋದಿಯವರನ್ನು, ದೇವರನ್ನು, ದೇವಸ್ಥಾನಗಳನ್ನು ಟೀಕಿಸಿ, ಅವಹೇಳನವಾಗಿ, ನಿಂದಿಸಿ, ಪರಮ ಅಸಹ್ಯ ಪದಗಳನ್ನು ಹುಡುಕಿ ತಂದು ಬರೆಯುತ್ತಿದ್ದ ಕಾರಣ ಅವಳ ಕೊಲೆಯನ್ನು ಬಲಪಂಥಿಯರೇ ಮಾಡಿದ್ದಾರೆ ಎಂದು ಎಡಪಂಥಿಯರು ಹಟಕ್ಕೆ ಕುಳಿತವರಂತೆ ಹೇಳುತ್ತಿದ್ದಾರೆ. ಇದರಿಂದ ಏನಾಗುತ್ತದೆ ಎಂದರೆ ತನಿಖೆಯಲ್ಲಿ ಹತ್ಯೆ ಆದದ್ದು ಬೇರೆ ಯಾರೋ, ಬೇರೆ ಯಾವುದೋ ಕಾರಣಕ್ಕೆ ಎಂದು ತಿಳಿದು ಬಂದರೂ ಕಾಂಗ್ರೆಸ್ ಸರಕಾರ ಅದನ್ನು ಹೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಯಾಕೆಂದರೆ ಹೇಳಿದರೆ ಎಡಪಂಥಿಯರು ಕೋಪಿಸಿಕೊಂಡು, ಅವರ ಹೋರಾಟಕ್ಕೆ ಹಿನ್ನಡೆಯಾಗುತ್ತದೆ, ಅವರಿಗೆ ಇರಿಸುಮುರುಸಾಗುತ್ತದೆ ಎನ್ನುವ ನಂಬಿಕೆಯಿಂದ ಸತ್ಯವನ್ನು ಮುಚ್ಚಿ ಹಾಕಿ ಒಂದೋ ಯಾವುದಾದರೂ ಬಲಪಂಥಿಯರ ತಲೆಗೆ ಕಟ್ಟುತ್ತಾರೆ ಅಥವಾ ಆರೋಪಿ ಸಿಗಲಿಲ್ಲ ಎಂದು ಕೈತೊಳೆದುಕೊಂಡು ಬಿಡುತ್ತಾರೆ. ಕಲ್ಬುರ್ಗಿ ಪ್ರಕರಣದಲ್ಲಿ ಎರಡನೇಯದ್ದಾಗಿದೆ. ಈ ಬಾರಿ ವಿಭಿನ್ನವಾಗಿ ಗೃಹಸಚಿವ ರಾಮಲಿಂಗಾ ರೆಡ್ಡಿಯವರು ಹೇಳಿದ ಹಾಗೆ ಹಂತಕ ಯಾರೆಂದು ಗೊತ್ತಾಗಿದೆ, ಸಾಕ್ಷ್ಯ ಒಟ್ಟು ಮಾಡುತ್ತಿದ್ದೇವೆ!
ಗೌರಿಯ ನಿಲುವುಗಳು ಏನು, ಎತ್ತ ಎಂದು ಯಾರೂ ಕೂಡ ಊಹಿಸಬಹುದಂತೆ ಆಕೆ ಬರೆಯುತ್ತಿದ್ದಳು. ಅದು ಪತ್ರಕರ್ಥೆಯ ನಿಲುವುಗಳು ಎನ್ನುವುದಕ್ಕಿಂತ ತಾನು ಒಪ್ಪಿಕೊಂಡ ಸಿದ್ಧಾಂತ ಅವಳ ಬರವಣಿಗೆಯಲ್ಲಿ ಕಾಣುತ್ತಿತ್ತು. ತನ್ನ ಸಿದ್ಧಾಂತವನ್ನು ಜನರಿಗೆ ತಲುಪಿಸಲು ಅವಳು ಪತ್ರಿಕೆಯನ್ನು ಅಸ್ತ್ರವನ್ನಾಗಿ ಬಳಸಿದಳು. ಆಕೆಯ ಪತ್ರಿಕೆ ಓಮ್ಮೆ ಓದಿದವರಿಗೆ ಮುಂದಿನ ಸಂಚಿಕೆಯಲ್ಲಿ ವಿಷಯ ಹೇಗಿರುತ್ತೆ ಎನ್ನುವ ಕಲ್ಪನೆ ಇರುತ್ತಿತ್ತು. ಅಂತವರ ಪತ್ರಿಕೆ ವಾಸ್ತವಕ್ಕಿಂತ ವಿಡಂಬನೆಯನ್ನೇ ಹೆಚ್ಚು ಹೊರಚೆಲ್ಲುತ್ತಿದ್ದ ಕಾರಣ ಅದರ ಓದುಗ ವಲಯವೇ ಬೇರೆ, ಅದರ ಚೌಕಟ್ಟು ಅಷ್ಟೇ. ಅಂತವರನ್ನು ಕೊಂದು ಯಾರು ತಾನೇ ತಮ್ಮ ಮೇಲೆ ರಿಸ್ಕ್ ತೆಗೆದುಕೊಳ್ಳಲು ಹೋಗುತ್ತಾರೆ, ಅದು ಕೂಡ ಕಾಂಗ್ರೆಸ್ ಸರಕಾರ ಇರುವಾಗ.
ಆದ್ದರಿಂದ ಪ್ರತಿ ಬಾರಿ ಹೀಗೆ ಎಡಪರರು ಸತ್ತಾಗ ಅದನ್ನು ಬಲಪಂಥಿಯರ ತಲೆಗೆ ಕಟ್ಟುವ ಕುರಿತು ಇವತ್ತು ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಸಂಜೆ 5 ಗಂಟೆಗೆ ಸೆಮಿನಾರ್ ನಡೆಯಲಿದೆ. ಚಕ್ರವರ್ತಿ ಸೂಲಿಬೆಲೆ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರುತ್ತಾರೆ. ನೀವು ಕೂಡ ಭಾಗವಹಿಸಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು!

  • Share On Facebook
  • Tweet It


- Advertisement -
Chakravarthy Sulibele


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Satish Sasi May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Satish Sasi May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search