• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸ್ಮಾರ್ಟ್ ಸಿಟಿಗೆ ಕಾವಲು ಸಮಿತಿ ಮಾಡದಿದ್ದರೆ ಹತ್ತು ವರ್ಷ ಹಿಂದಿನ ಕಥೆ ಪುನರಾರ್ವನೆಯಾಗುತ್ತದೆ!

Hanumantha Kamath Posted On October 10, 2017
0


0
Shares
  • Share On Facebook
  • Tweet It

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬರುವ ಸಾವಿರ ಕೋಟಿ ರೂಪಾಯಿಗಳನ್ನು ಹೇಗೆ ಬೇಕಾದರೆ ಹಾಗೆ ಖರ್ಚು ಮಾಡಿಬಿಡಿ ಎಂದು ಶಾಸಕ ಜೆ ಆರ್ ಲೋಬೊ ಅವರಿಗೆ, ಪಾಲಿಕೆಯ ಕಮೀಷನರ್ ಮೊಹಮ್ಮದ್ ನಜೀರ್ ಮತ್ತು ಮೇಯರ್ ಕವಿತಾ ಸನಿಲ್ ಅವರಿಗೆ ಬಿಟ್ಟರೆ ಏನಾಗಬಹುದು ಎಂದು ಯೋಚಿಸುತ್ತಿದ್ದೇನೆ. ಅದು ಅನುಷ್ಟಾನಕ್ಕೆ ಬರುವಾಗ ಸ್ಪೆಶಲ್ ಪರ್ಪಸ್ ವೆಹಿಕಲ್ ಎಂದು ಮಾಡಿ ಒಬ್ಬರು ಐಎಎಸ್ ಅಧಿಕಾರಿಯನ್ನು ಉಸ್ತುವಾರಿ ಕೊಡಬಹುದು. ಆದರೆ ಅವರು ಕೂಡ ಅಧಿಕಾರಿಯೇ ಆಗಿಯಿರುವುದರಿಂದ ಮಂಗಳೂರಿನ ಅಭಿವೃದ್ಧಿಗೆ ಈ ಅನುದಾನ ಎಷ್ಟು ಸಮರ್ಪಕವಾಗಿ ಬಳಕೆಯಾಗುತ್ತೆ ಎನ್ನುವುದನ್ನು ನೋಡಬೇಕಾಗಿರುವುದು ಯಾರು?
ಪ್ರಧಾನಿ ಅಥವಾ ಸಿಎಂ ಇಲ್ಲಿ ಬಂದು ಕುಳಿತು ನೋಡಲು ಆಗುವುದಿಲ್ಲ. ಆದ್ದರಿಂದ ಜನಪ್ರತಿನಿಧಿಗಳಿಲ್ಲದ ಮತ್ತು ಜನಸಾಮಾನ್ಯರೇ ಇರುವ ಒಂದು ಸಾರ್ವಜನಿಕ ಸಮಿತಿಯನ್ನು ರಚಿಸಲು ನಾನು ವಿಝನ್ 2025 ರ ಸಭೆಯಲ್ಲಿ ಕೇಳಿಕೊಂಡದ್ದು. ಕೇವಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ಇದ್ದರೆ ಯೋಜನೆ ಹೇಗೆ ಹಳ್ಳ ಹಿಡಿಯುತ್ತದೆ ಎನ್ನುವುದನ್ನು ಉದಾಹರಣೆಯೊಂದಿಗೆ ನಾನು ವಿವರಿಸುತ್ತೇನೆ. ಹತ್ತು ವರ್ಷಗಳ ಹಿಂದಿನ ಕಥೆ. ಏಶಿಯನ್ ಡೆವಲಪ್ ಮೆಂಟ್ ಬ್ಯಾಂಕಿನಿಂದ ಮಂಗಳೂರಿಗೆ ಸಾಲ ಸಿಕ್ಕಿತ್ತು. ಚಿಕ್ಕ ಮೊತ್ತವೇನಲ್ಲ. ಭರ್ಥಿ 308 ಕೋಟಿ ರೂಪಾಯಿ. ಆ 308 ಕೋಟಿ ರೂಪಾಯಿ ಖರ್ಚು ಮಾಡಿ ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಮತ್ತು ಒಳಚರಂಡಿಯನ್ನು ಮಾಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆಗ ಇದರ ಜವಾಬ್ದಾರಿ ಇದ್ದದ್ದು ಆಗ ಕುಂಡ್ಸೆಂಪು ನಿರ್ದೇಶಕರಾಗಿದ್ದ ಜೆ ಆರ್ ಲೋಬೋ ಅವರಿಗೆ. ಲೋಬೋ ಅವರು ಏನು ಮಾಡಿದ್ರು ಎಂದು ಇಡೀ ಊರಿಗೆ ಗೊತ್ತಿದೆ. ಇವತ್ತಿಗೂ ಒಂದು ಗಂಟೆ ಜೋರು ಮಳೆ ಬಂದರೆ ಮಂಗಳೂರಿನ ಹೃದಯ ಭಾಗದಲ್ಲಿಯೇ ರಸ್ತೆಗಳು ಕೃತಕ ಕೆರೆಗಳಾಗುತ್ತವೆ. ಅದರ ಚೆಂದ ನೋಡಲು ಆಗ ಅಧಿಕಾರಿಯಾಗಿದ್ದ ಮತ್ತು ಈಗ ಶಾಸಕರಾಗಿರುವ ಜೆಆರ್ ಲೋಬೋ ಧಾವಿಸುತ್ತಾರೆ. ಅಂದರೆ ಪರಿಸ್ಥಿತಿ ಆವತ್ತಿನಿಂದ ಇವತ್ತಿನಿಂದ ಹಾಗೆ ಇದೆ. ಲೋಬೋ ಅವರ ಸ್ಥಾನ ಮಾತ್ರ ಬದಲಾಗಿದೆ. ಆಗಾದರೆ ಒಳಚರಂಡಿಗೆ ಬಂದ ಕೋಟಿಗಟ್ಟಲೆ ಹಣ ಒಳಗೊಳಗೆ ಇಂಗಿ ಹೋಯಿತಾ? ಲೋಬೋ ಅವರು ಹೇಳಬೇಕು. ಶಾಸಕ ಲೋಬೋ ಆಗಿ ಅಲ್ಲ. ಆವತ್ತು ಜವಾಬ್ದಾರಿಯಲ್ಲಿದ್ದ ಕುಡ್ಸೆಂಪು ನಿರ್ದೇಶಕರಾಗಿ. ಇನ್ನು ಕುಡಿಯುವ ನೀರಿನ ಯೋಜನೆ.
ಆ 308 ಕೋಟಿ ರೂಪಾಯಿಯಲ್ಲಿ 2025 ರ ತನಕ 24 ಗುಣಿಸು 7 ನೀರನ್ನು ಪಾಲಿಕೆಯ ವ್ಯಾಪ್ತಿಯಲ್ಲಿ ಪೂರೈಸುವ ಯೋಜನೆ ಇತ್ತು. ಆದರೆ ಇವತ್ತಿನ್ನೂ 2017. ಅಶೋಕನಗರ, ಮಣ್ಣಗುಡ್ಡೆ, ಬೋಳಾರದಲ್ಲಿ 48 ಗಂಟೆಗಳಲ್ಲಿ 4 ಗಂಟೆ ನೀರು ಬಂದರೆ ಅದೇ ಆಶ್ಚರ್ಯ. ಒಂದು ಕಡೆ ಕೃತಕ ನೆರೆಗೆ ಮ್ಯಾನ್ ಹೋಲ್ ಗಳು ತುಂಬಿ ತ್ಯಾಜ್ಯ ಮೇಲೆ ಬರುತ್ತಿದ್ದರೆ, ಪೈಪಿನಲ್ಲಿ ನೀರು ಹೊರಗೆ ಬರಲು ಜನ ಕಾಯುತ್ತಿದ್ದಾರೆ. ಹಾಗಾದರೆ 308 ಕೋಟಿ ರೂಪಾಯಿ ಎಲ್ಲಿಗೆ ಹೋಯಿತು? ಇಡೀ ದಿನ ನೀರು ಕೊಡಿ ಎಂದು ಕೋಟಿಗಟ್ಟಲೆ ಹಣ ಬಂದರೆ ಇವರು ಆ ಯೋಜನೆಗೆ ಎಳ್ಳುನೀರು ಬಿಟ್ಟರು. ತುಂಬೆಯಿಂದ ಮಂಗಳೂರು ತನಕ ಮತ್ತು ಮಂಗಳೂರಿನಿಂದ ಸುರತ್ಕಲ್ ತನಕ ಹೊಸ ನೀರಿನ ಪೈಪ್ ಹಾಕಿ, ಅಲ್ಲಲ್ಲಿ ವಾಟರ್ ಹೆಡ್ ಟ್ಯಾಂಕ್ ರಚಿಸಿ ನೀರು ಪೂರೈಸುವ ವ್ಯವಸ್ಥೆ ಎಲ್ಲಿಗೆ ಹೋಯಿತು. ಕೇಳುವವರಿಲ್ಲ.
ಅದಕ್ಕೆ ನಾನು ಹೇಳಿದ್ದು, ಸಾರ್ವಜನಿಕರೇ ಇರುವ ಒಂದು ಸಮಿತಿಯನ್ನು ರಚಿಸಿ. ಪಾರದಶ್ಯಕತೆ ಮುಖ್ಯ ಎಂದು ಕೇಂದ್ರ ಅಥವಾ ರಾಜ್ಯ ಸರಕಾರಕ್ಕೆ ಅನಿಸಿದ್ದಲ್ಲಿ ಈ ಸಮಿತಿ ಅಸ್ತಿತ್ವಕ್ಕೆ ಬರಬೇಕು. ಹೇಗೂ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವುದರಿಂದ ಈ ಸಮಿತಿಯ ಸಭೆಗಳು ಆಗಾಗ ನಡೆಯಬಹುದು. ಬೇಕಾದರೆ ಈ ಸಮಿತಿಯ ಸದಸ್ಯರಿಗೆ ಯಾವುದೇ ಟಿಎ, ಡಿಎ ಕೊಡಬೇಕಾಗಿಲ್ಲ. ಒಂದು ವಾಚ್ ಡಾಗ್ ಆಗಿ ಈ ಸಮಿತಿ ಕಾರ್ಯ ನಿರ್ವಹಿಸಲಿದೆ. ಆದರೆ ನನಗೇಕೋ ಜನಪ್ರತಿನಿಧಿಗಳ ಮೇಲೆ ಡೌಟು. ಅವರು ತಮ್ಮ ಭ್ರಷ್ಟಾಚಾರವನ್ನು ಹೊರಗೆಡಹಲು ಯಾರಿಗೂ ಬಿಡುವುದಿಲ್ಲ. ಒಂದು ವೇಳೆ ಈ ಸಮಿತಿ ಅಸ್ತಿತ್ವಕ್ಕೆ ಬಂದರೆ ಯಾವುದೇ ಗುತ್ತಿಗೆದಾರನಿಗೆ ತಿನ್ನಲು, ತಿನ್ನಿಸಲು ಆಗುವುದಿಲ್ಲ. ಅದರೊಂದಿಗೆ ಟೈಮ್ ಬಾಂಡ್ ಆಧಾರದ ಮೇಲೆ ಎಲ್ಲ ಕಾಮಗಾರಿಗಳು ಕೂಡ ಮುಗಿಯಲಿವೆ. ಆದರೆ ವಾರ್ಡ್ ಸಮಿತಿ ಮಾಡಲು ಧೈರ್ಯ ತೋರದ ಮಂಗಳೂರು ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿಗೆ ಕಾವಲು ಸಮಿತಿ ಮಾಡಲು ಮುಂದೆ ಬರುತ್ತಾ!

0
Shares
  • Share On Facebook
  • Tweet It


JR LoboKUDCEMPOMCC


Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
You may also like
ಈ ಬಾರಿ ಪಾಲಿಕೆಗೆ ತಲೆ ಇದ್ದವರು ಬರಲಿ, ಹಸಿವಿದ್ದವರು ಅಲ್ಲ!!
October 22, 2019
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಇಂಟರ್ ಲಾಕ್ ಕಾಂಕ್ರೀಟ್ ಬ್ಯಾಂಡ್ ಗಳು ಪಪ್ಪಡ ಒಡೆದಂತೆ ಒಡೆದು ಹೋಗಿವೆ!
May 24, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search