• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ದೇಸಾಯಿ, ಡೈನೆಸ್ಟಿ, ಡೆವಲಪ್‍ಮೆಂಟ್- ಮೋದಿ 3ಡಿ ಮಂತ್ರ

TNN Correspondent Posted On October 17, 2017
0


0
Shares
  • Share On Facebook
  • Tweet It

>> ಭ್ರಷ್ಟಾಚಾರ, ಜಾತೀಯತೆ, ಕೋಮುಗಲಭೆ ಮತ್ತು ವಂಶಾಡಳಿತ – ಇದು ಕಾಂಗ್ರೆಸ್ ಅಭಿವೃದ್ಧಿಯ ಮಾದರಿಗೆ ಆಧಾರಸ್ತಂಭಗಳು.

>> ಈ ವಿಧಾನಸಭೆ ಚುನಾವಣೆ ವಂಶಾಡಳಿತ ಮತ್ತು ಅಭಿವೃದ್ಧಿ ನಡುವೆ.

>> ಸರ್ದಾರ್ ಪಟೇಲ್ ತುಳಿಯಲು ಹರಸಾಹಪಟ್ಟ ಕಾಂಗ್ರೆಸ್, ಈಗಲೂ ಗುಜರಾತಿಗರನ್ನು ಮುಗಿಸುವ ಹುನ್ನಾರದಿಂದ ಚುನಾವಣೆ ರಣತಂತ್ರ

>> ರಾಜ್ಯದ ರೈತರಿಗೆ ರೂ. 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಘೋಷಿಸಿದ ಸಿಎಂ ರೂಪಾನಿ

ಗಾಂಧಿನಗರ : ಪ್ರಧಾನಿ ಮೋದಿ ಮತ್ತೆ ಗುಡುಗಿದ್ದಾರೆ. ಆದರೆ ಈ ಬಾರಿ ತವರು ರಾಜ್ಯ ಗುಜರಾತ್‍ನಲ್ಲಿ ಡಿಸೆಂಬರ್‍ಗೆ ಎದುರಾಗುವ ವಿಧಾನಸಭೆ ಚುನಾವಣೆಗೆ ರಣಕಹಳೆ ಎನ್ನಲಾದ “ಗುಜರಾತ್ ಗೌರವ್ ಮಹಾಸಮ್ಮೇಳನ” ದಲ್ಲಿ ಕಾಂಗ್ರೆಸ್ ಒಳಸಂಚುಗಳನ್ನು ಬಟಾಬಯಲು ಮಾಡಿ ಆರ್ಭಟಿಸಿದ್ದಾರೆ. ಸೋಮವಾರ ನಡೆದ ಮಹಾಸಮ್ಮೇಳನದಲ್ಲಿ 7 ಲಕ್ಷ ಮಂದಿ ಪ್ರಧಾನಿ ಅವರ ಅಭಿವೃದ್ಧಿ ಘೋಷಣೆಗೆ ಸಾಕ್ಷಿಯಾದರು.

ಮೊರಾರ್ಜಿ ದೇಸಾಯಿ ಪ್ರಧಾನಿಯಾದಾಗ ಅವರ ಬಗ್ಗೆ ಇಲ್ಲಸಲ್ಲದ ವದಂತಿ ಹಬ್ಬಿಸಿದ್ದು ಕಾಂಗ್ರೆಸ್. ಸರ್ದಾರ್ ಪಟೇಲ್‍ರನ್ನು ರಾಜಕೀಯವಾಗಿ ಮುಗಿಸಲು ಹರಸಾಹಸಪಟ್ಟಿತ್ತು ಕಾಂಗ್ರೆಸ್. ಇಂಥ ಕಾಂಗ್ರೆಸ್ ಕುಟುಂಬ ರಾಜಕಾರಣ ಗುಜರಾತಿಗರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮೋದಿ ಎಚ್ಚರಿಸಿದ್ದಾರೆ.

ಅಮಿತ್ ಷಾ “ಪಂದ್ಯ ಪುರುಷೋತ್ತಮ”

ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಶ್ರಮಕಾರಣ. ಅವರು ಮ್ಯಾನ್ ಆಫ್ ದಿ ಮ್ಯಾಚ್ ಎಂದು ಮೋದಿ ಹೊಗಳಿದರು. ಅಂಥ ಷಾರನ್ನು ಜೈಲಿಗೆ ಅಟ್ಟಲು ಕಾಂಗ್ರೆಸ್ ಯುಪಿಎ ಅವಧಿಯಲ್ಲಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಷಾ ಮೂಲಕ ನನ್ನನ್ನು ಹಣಿಯಲು ಹೊರಟಿತ್ತು ನೆಹರು-ಗಾಂಧಿ ಫ್ಯಾಮಿಲಿ ಎಂದು ಮೋದಿ ಕುಟುಕಿದ್ದಾರೆ.

ಜಿಎಸ್‍ಟಿಯಲ್ಲಿ ಕಾಂಗ್ರೆಸ್ ಪಾಲಿದೆ 

ಪ್ರಸ್ತುತ ಜಿಎಸ್‍ಟಿ ಬಗ್ಗೆ ಅಪಪ್ರಚಾರವನ್ನೇ ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್, ತನ್ನ ಆಡಳಿತದ ರಾಜ್ಯಗಳ ಸರ್ಕಾರಗಳಿಂದ ಅನುಮೋದನೆ ಕೊಡಿಸಿದ್ದೇಕೆ? ಕೇಂದ್ರ ಸರಕಾರ ಎಲ್ಲ ರಾಜ್ಯ ಸರಕಾರಗಳನ್ನು ಸಂಪರ್ಕಿಸಿ, ಅವರ ಒಪ್ಪಿಗೆ ಪಡೆದೇ ಜಿಎಸ್‍ಟಿ ಜಾರಿ ಮಾಡಿತು ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.

ನ.8 “ಕಪ್ಪುಹಣ ಮುಕ್ತ ದಿನಾಚರಣೆ”
ದೇಶದ ಆರ್ಥಿಕತೆಗೆ ಸಬಲೀಕರಣ ತಂದ ನೋಟು ಅಮಾನ್ಯೀಕರಣ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್ ನ.8ನ್ನು “ಕರಾಳ ದಿನ’ ಎಂದು ಆಚರಿಸಲು ಮುಂದಾಗಿದೆ. ಇದು ದುರಾದೃಷ್ಟ. ಆದರೆ ಬಿಜೆಪಿ ಮಾತ್ರ ನ.8ಕ್ಕೆ ಸಂಭ್ರಮಿಸಿ ಕಾಳಧನ ಮುಕ್ತ ದಿನ ಎಂದು ಆಚರಿಸಲಿದೆ ಎಂದು ಮೋದಿ ಕಾಂಗ್ರೆಸ್ ಕಾಲೆಳೆದಿದ್ದಾರೆ.

ರಾಹುಲ್‍ರಿಂದ ಅಸಮಾಧಾನದ ಟೀಕೆ
ಮೋದಿ ಗುಜರಾತ್‍ನಲ್ಲಿ ಭಾಷಣ ಆರಂಭಿಸುವ ಮುನ್ನ ಟ್ವಿಟ್ಟರ್‍ನಲ್ಲಿ ಟಾಂಗ್ ಕೊಟ್ಟ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ” ಇಂದು ಹವಾಮಾನ ಇಲಾಖೆ ಪ್ರಕಾರ, ಪೊಳ್ಳು ಭರವಸೆಗಳ ಮಳೆ ಸುರಿಯಲಿದೆ” ಎಂದು ಟೀಕೆ ಮಾಡಿದ್ದರು. ಆದರೆ ಮೋದಿ ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಂಶಾಡಳಿತ ಟೀಕಿಸಿ, ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ರಾಹುಲ್ ಪಟ್ಟಾಭಿಷೇಕದ ತಯಾರಿಯನ್ನು ಕುಟುಕಿ ನೆಹರು-ಗಾಂಧಿ ಕುಟುಂಬಕ್ಕೆ ಮುಜುಗರ ತಂದಿಟ್ಟರು.

0
Shares
  • Share On Facebook
  • Tweet It


- Advertisement -
2017amitassemblybjjpbjpelectiongandhigandhinagargujaratindiamahasammelanmodindaneharunehrurahulshahsoniaupa


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Tulunadu News June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Tulunadu News June 18, 2025
You may also like
ಈ ಬಾರಿ ಪಾಲಿಕೆಗೆ ತಲೆ ಇದ್ದವರು ಬರಲಿ, ಹಸಿವಿದ್ದವರು ಅಲ್ಲ!!
October 22, 2019
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
September 22, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search