• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಳ್ತಪ್ಪಿಸಿಕೊಂಡಿದ್ದ ಕಾಂಗ್ರೆಸ್‍ಗೆ ಮತ್ತೆ ಹೆಗಲೇರಲಿದೆ ಬೋಫೋರ್ಸ್ ಬೇತಾಳ

TNN Correspondent Posted On October 21, 2017
0


0
Shares
  • Share On Facebook
  • Tweet It

>> ರಾಜೀವ್ ಗಾಂಧಿ ಪಾಪದ ಕೂಸು ಬಗ್ಗೆ ಮರುತನಿಖೆಗೆ ಮೋದಿ ಸರ್ಕಾರ ಅನುಮತಿ ಕೊಡುವುದೇ?

>> ಹಿಂದುಜಾ ಸಹೋದರರ ಅಪರಾಧ ಸಾಬೀತಾಗುವುದೇ?

>> 2005ರಿಂದಲೇ ಸಿಬಿಐಗೆ ಅನುಮತಿ ನೀಡದೇ ಯುಪಿಎ ಸರ್ಕಾರ ಮೌನ ವಹಿಸಿದ್ದು ಯಾಕೆ?

ದೆಹಲಿ : ಸುಪ್ರೀಂಕೋರ್ಟ್‍ನಲ್ಲಿ ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ಆಡಳಿತದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ “ಬೋಫೋರ್ಸ್’ ಬಗ್ಗೆ ಮರುತನಿಖೆಗೆ ಅನುಮತಿ ನೀಡಲು ಸಿಬಿಐ ಮತ್ತೆ ಎಸ್‍ಎಲ್‍ಪಿ ನಡೆಸಲು ಮುಂದಾಗಿದೆ. ಅಂದರೆ ವಿಶೇಷ ಅರ್ಜಿ ಸಲ್ಲಿಸಿ ಕೋರ್ಟ್‍ನ ರಜಾವಧಿಯಲ್ಲಿ ವಿಚಾರಣೆಗೆ ನಡೆಸಲು ಮನವಿ ಮಾಡಲು ಸಿಬಿಐ ಕೇಂದ್ರ ಸರಕಾರದ ಅನುಮತಿ ಕೇಳಿದೆ. ಶುಕ್ರವಾರ ಕೇಂದ್ರೀಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸಿಬಿಐ ಈ ಕುರಿತು ಪತ್ರ ಬರೆದಿದೆ.


2005ರಿಂದಲೂ ಸಿಬಿಐ ಎಸ್‍ಎಲ್‍ಪಿ ಸಲ್ಲಿಕೆಗೆ ಯುಪಿಎ ಸರಕಾರಕ್ಕೆ ಅನುಮತಿ ಕೋರುತ್ತಲೇ ಇತ್ತು. ಆದರೆ ತನ್ನ ಪ್ರಧಾನಿ ರಾಜೀವ್ ಹೆಸರು ಕೆಡುವ ಆತಂಕದಿಂದ ಸೋನಿಯಾ ಗಾಂಧಿ ನೇತೃತ್ವದ ಮನಮೋಹನ್ ಸಿಂಗ್ ಆಡಳಿತ ಮೌನಕ್ಕೆ ಶರಣಾಗಿತ್ತು.

ಯುರೋಪ್‍ನಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿಕೊಂಡು ಅಲ್ಲೇ ನೆಲಸಿರುವ ಹಿಂದುಜಾ ಸೋದರರ ವಿರುದ್ಧ ಬಫಫೋರ್ಸ್ ಹಗರಣದಲ್ಲಿ ದಾಖಲಾಗಿದ್ದ ಎಫ್‍ಐಆರ್ ದೆಹಲಿ ಹೈಕೋರ್ಟ್‍ನಿಂದ ಮೇ. 31, 2005ರಲ್ಲಿ ರದ್ದಾಗಿತ್ತು. ಇದನ್ನು ಎಸ್‍ಎಲ್‍ಪಿ ಸಲ್ಲಿಕೆಯಲ್ಲಿ ಪ್ರಶ್ನಿಸಲಾಗುತ್ತಿದೆ. ನಂತರ ದೆಹಲಿ ಹೈಕೋರ್ಟ್ ನ್ಯಾ. ಜೆ.ಡಿ.ಕಪೂರ್ ಬೋಫೋರ್ಸ್ ಹಗರಣದಲ್ಲಿ ಆರೋಪ ಕೇಳಿಬಂದಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ನಿರಪರಾಧಿ ಎಂದು ತೀರ್ಪು ನೀಡಿದ್ದರು. ಅವರ ಸಹಿಯನ್ನು ಬೋಫೋರ್ಸ್ ಒಪ್ಪಂದದಲ್ಲಿ ನಕಲು ಮಾಡಲಾಗಿದೆ. ಅದರ ವಿರುದ್ಧ ತನಿಖೆಗೆ ಆದೇಶಿಸಿದ್ದರು.

ಪತ್ತೆದಾರಿ ಹೆರ್ಷ್‍ಮನ್ ಬಾಯ್ಬಿಟ್ಟ ಸ್ವಿಸ್ ಬ್ಯಾಂಕ್ ಸತ್ಯ 

ಇತ್ತೀಚೆಗೆ ಬೋಫೋರ್ಸ್ ಬಗ್ಗೆ ಅಂದಿನ ಹಣಕಾಸು ಸಚಿವ ವಿ.ಪಿ.ಸಿಂಗ್ ನೇಮಿಸಿದ್ದ ಅಮೆರಿಕ ಮೂಲದ ಖಾಸಗಿ ಪತ್ತೆದಾರಿ ಕಂಪನಿ ಫೇರ್‍ಫ್ಯಾಕ್ಸ್ ಮುಖ್ಯಸ್ಥ ಮೈಕೆಲ್ ಹೆರ್ಷ್‍ಮೆನ್ ಭಾರತಕ್ಕೆ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದರು. ಮಾಧ್ಯಮಗಳು ನಡೆಸಿದ ಸಂದರ್ಶನದಲ್ಲಿ ಅವರು,


” ನಾನು ನಡೆಸಿದ ಬೋಫೋರ್ಸ್ ಹಗರಣದ ಪತ್ತೆದಾರಿಯಲ್ಲಿ ಮಧ್ಯವರ್ತಿಯೊಬ್ಬನ ಸ್ವಿಸ್ ಬ್ಯಾಂಕ್ ಖಾತೆ “ಮಾಂಟ್ ಬ್ಲಾಂಕ್’ ಹೆಸರಲ್ಲಿರುವುದು ಪತ್ತೆ ಮಾಡಿದ್ದೆ. ಆದರೆ ಇದು ರಾಜೀವ್ ಗಾಂಧಿಗೆ ತುಂಬಾ ಅಸಮಾಧಾನ ಮೂಡಿಸಿತ್ತು. ನನ್ನ ತನಿಖೆಯನ್ನು ರಾಜೀವ್ ಸರಕಾರ ಮಟ್ಟಹಾಕಲು ಎಲ್ಲ ಯತ್ನ ನಡೆಸಿತ್ತು” ಎಂದು ಆರೋಪಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಬಿಐ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಮರುತನಿಖೆ ಅನುಮತಿ ಕೇಳಿದೆ.

0
Shares
  • Share On Facebook
  • Tweet It


boforsbrotherscbidealenglandgandhihindujamanmohanmodindarajivsinghsoniaupa


Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?
June 2, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search