• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಳ್ತಪ್ಪಿಸಿಕೊಂಡಿದ್ದ ಕಾಂಗ್ರೆಸ್‍ಗೆ ಮತ್ತೆ ಹೆಗಲೇರಲಿದೆ ಬೋಫೋರ್ಸ್ ಬೇತಾಳ

TNN Correspondent Posted On October 21, 2017
0


0
Shares
  • Share On Facebook
  • Tweet It

>> ರಾಜೀವ್ ಗಾಂಧಿ ಪಾಪದ ಕೂಸು ಬಗ್ಗೆ ಮರುತನಿಖೆಗೆ ಮೋದಿ ಸರ್ಕಾರ ಅನುಮತಿ ಕೊಡುವುದೇ?

>> ಹಿಂದುಜಾ ಸಹೋದರರ ಅಪರಾಧ ಸಾಬೀತಾಗುವುದೇ?

>> 2005ರಿಂದಲೇ ಸಿಬಿಐಗೆ ಅನುಮತಿ ನೀಡದೇ ಯುಪಿಎ ಸರ್ಕಾರ ಮೌನ ವಹಿಸಿದ್ದು ಯಾಕೆ?

ದೆಹಲಿ : ಸುಪ್ರೀಂಕೋರ್ಟ್‍ನಲ್ಲಿ ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ಆಡಳಿತದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ “ಬೋಫೋರ್ಸ್’ ಬಗ್ಗೆ ಮರುತನಿಖೆಗೆ ಅನುಮತಿ ನೀಡಲು ಸಿಬಿಐ ಮತ್ತೆ ಎಸ್‍ಎಲ್‍ಪಿ ನಡೆಸಲು ಮುಂದಾಗಿದೆ. ಅಂದರೆ ವಿಶೇಷ ಅರ್ಜಿ ಸಲ್ಲಿಸಿ ಕೋರ್ಟ್‍ನ ರಜಾವಧಿಯಲ್ಲಿ ವಿಚಾರಣೆಗೆ ನಡೆಸಲು ಮನವಿ ಮಾಡಲು ಸಿಬಿಐ ಕೇಂದ್ರ ಸರಕಾರದ ಅನುಮತಿ ಕೇಳಿದೆ. ಶುಕ್ರವಾರ ಕೇಂದ್ರೀಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸಿಬಿಐ ಈ ಕುರಿತು ಪತ್ರ ಬರೆದಿದೆ.


2005ರಿಂದಲೂ ಸಿಬಿಐ ಎಸ್‍ಎಲ್‍ಪಿ ಸಲ್ಲಿಕೆಗೆ ಯುಪಿಎ ಸರಕಾರಕ್ಕೆ ಅನುಮತಿ ಕೋರುತ್ತಲೇ ಇತ್ತು. ಆದರೆ ತನ್ನ ಪ್ರಧಾನಿ ರಾಜೀವ್ ಹೆಸರು ಕೆಡುವ ಆತಂಕದಿಂದ ಸೋನಿಯಾ ಗಾಂಧಿ ನೇತೃತ್ವದ ಮನಮೋಹನ್ ಸಿಂಗ್ ಆಡಳಿತ ಮೌನಕ್ಕೆ ಶರಣಾಗಿತ್ತು.

ಯುರೋಪ್‍ನಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿಕೊಂಡು ಅಲ್ಲೇ ನೆಲಸಿರುವ ಹಿಂದುಜಾ ಸೋದರರ ವಿರುದ್ಧ ಬಫಫೋರ್ಸ್ ಹಗರಣದಲ್ಲಿ ದಾಖಲಾಗಿದ್ದ ಎಫ್‍ಐಆರ್ ದೆಹಲಿ ಹೈಕೋರ್ಟ್‍ನಿಂದ ಮೇ. 31, 2005ರಲ್ಲಿ ರದ್ದಾಗಿತ್ತು. ಇದನ್ನು ಎಸ್‍ಎಲ್‍ಪಿ ಸಲ್ಲಿಕೆಯಲ್ಲಿ ಪ್ರಶ್ನಿಸಲಾಗುತ್ತಿದೆ. ನಂತರ ದೆಹಲಿ ಹೈಕೋರ್ಟ್ ನ್ಯಾ. ಜೆ.ಡಿ.ಕಪೂರ್ ಬೋಫೋರ್ಸ್ ಹಗರಣದಲ್ಲಿ ಆರೋಪ ಕೇಳಿಬಂದಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ನಿರಪರಾಧಿ ಎಂದು ತೀರ್ಪು ನೀಡಿದ್ದರು. ಅವರ ಸಹಿಯನ್ನು ಬೋಫೋರ್ಸ್ ಒಪ್ಪಂದದಲ್ಲಿ ನಕಲು ಮಾಡಲಾಗಿದೆ. ಅದರ ವಿರುದ್ಧ ತನಿಖೆಗೆ ಆದೇಶಿಸಿದ್ದರು.

ಪತ್ತೆದಾರಿ ಹೆರ್ಷ್‍ಮನ್ ಬಾಯ್ಬಿಟ್ಟ ಸ್ವಿಸ್ ಬ್ಯಾಂಕ್ ಸತ್ಯ 

ಇತ್ತೀಚೆಗೆ ಬೋಫೋರ್ಸ್ ಬಗ್ಗೆ ಅಂದಿನ ಹಣಕಾಸು ಸಚಿವ ವಿ.ಪಿ.ಸಿಂಗ್ ನೇಮಿಸಿದ್ದ ಅಮೆರಿಕ ಮೂಲದ ಖಾಸಗಿ ಪತ್ತೆದಾರಿ ಕಂಪನಿ ಫೇರ್‍ಫ್ಯಾಕ್ಸ್ ಮುಖ್ಯಸ್ಥ ಮೈಕೆಲ್ ಹೆರ್ಷ್‍ಮೆನ್ ಭಾರತಕ್ಕೆ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದರು. ಮಾಧ್ಯಮಗಳು ನಡೆಸಿದ ಸಂದರ್ಶನದಲ್ಲಿ ಅವರು,


” ನಾನು ನಡೆಸಿದ ಬೋಫೋರ್ಸ್ ಹಗರಣದ ಪತ್ತೆದಾರಿಯಲ್ಲಿ ಮಧ್ಯವರ್ತಿಯೊಬ್ಬನ ಸ್ವಿಸ್ ಬ್ಯಾಂಕ್ ಖಾತೆ “ಮಾಂಟ್ ಬ್ಲಾಂಕ್’ ಹೆಸರಲ್ಲಿರುವುದು ಪತ್ತೆ ಮಾಡಿದ್ದೆ. ಆದರೆ ಇದು ರಾಜೀವ್ ಗಾಂಧಿಗೆ ತುಂಬಾ ಅಸಮಾಧಾನ ಮೂಡಿಸಿತ್ತು. ನನ್ನ ತನಿಖೆಯನ್ನು ರಾಜೀವ್ ಸರಕಾರ ಮಟ್ಟಹಾಕಲು ಎಲ್ಲ ಯತ್ನ ನಡೆಸಿತ್ತು” ಎಂದು ಆರೋಪಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಬಿಐ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಮರುತನಿಖೆ ಅನುಮತಿ ಕೇಳಿದೆ.

0
Shares
  • Share On Facebook
  • Tweet It


boforsbrotherscbidealenglandgandhihindujamanmohanmodindarajivsinghsoniaupa


Trending Now
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
Tulunadu News January 23, 2026
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
Tulunadu News January 20, 2026
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?
June 2, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
  • Popular Posts

    • 1
      ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • 2
      ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!

  • Privacy Policy
  • Contact
© Tulunadu Infomedia.

Press enter/return to begin your search