• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ನೂರು ಜನರ ಪ್ರಾಣ ಉಳಿಸಿ ತನ್ನ ಪ್ರಾಣವನ್ನೇ ಕಳೆದುಕೊಂಡ ವೀರಯೋಧನ ಜನ್ಮದಿನ ಇಂದು

ವಿಶಾಲ್ ಗೌಡ ಕುಶಾಲನಗರ Posted On April 21, 2018
0


0
Shares
  • Share On Facebook
  • Tweet It

ಜಮ್ಮು-ಕಾಶ್ಮೀರದಲ್ಲಿ ಸೈನಿಕರಿಗೆ ನಾಲ್ಕು ಸವಾಲುಗಳು ಹಿಂಡಿ ಹಿಪ್ಪೆ ಮಾಡುತ್ತವೆ. ಒಂದು ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಬೇಕು, ಇನ್ನೊಂದು ಉಗ್ರರಿಮದ ಜನರ ಪ್ರಾಣ ರಕ್ಷಿಸಬೇಕು, ಮಗದೊಂದು ಮೈ ಕೊರೆಯುವ ಚಳಿಯನ್ನೂ ಎದುರಿಸಬೇಕು, ಕೊನೆಗೆ ಇಷ್ಟೆಲ್ಲ ಮಾಡಿ ತಮ್ಮ ಪ್ರಾಣ ಉಳಿಸಿಕೊಳ್ಳಬೇಕು.

ಹೀಗೆ ನಾಲ್ಕೂ ವಿಧದಲ್ಲಿ ಅಪರೂಪಕ್ಕೆ ಜಮ್ಮು-ಕಾಶ್ಮೀರದಲ್ಲಿ ಸೈನಿಕರು ಯಶಸ್ಸು ಕಾಣುತ್ತಾರೆ. ಆದರೆ ಆ ವೀರಯೋಧ ಮಾತ್ರ ಈ ನಾಲ್ಕೂ ಸವಾಲುಗಳನ್ನು ಎದುರಿಸಿದ. ಕೊನೆಗೆ ಒಂದರಲ್ಲಿ ಹಿನ್ನಡೆ ಅನುಭವಿಸಿ ನಮ್ಮ ಮನದಲ್ಲಿ ಅಮರನಾಗಿ ಉಳಿಯುವ ಮೂಲಕ ನಾಲ್ಕನ್ನೂ ಸಾಧಿಸಿದ ವೀರಯೋಧ ಎನಿಸಿದ.

ಆ ವೀರಯೋಧನ ಹೆಸರು ಕ್ಯಾಪ್ಟನ್ ತುಷಾರ್ ಮಹಾಜನ್ ಅಂತ. 2016ರಲ್ಲಿ ಜಮ್ಮು-ಕಾಶ್ಮೀರದ ಉದ್ಯಮ ಅಭಿವೃದ್ಧಿ ಸಂಸ್ಥೆ (ಇಡಿಐ) ಮೇಲೆ ಉಗ್ರರು ಮಾಡಿದ ದಾಳಿಯನ್ನು ಪ್ರಾಯಶಃ ಯಾರೂ ಮರೆತಿರಲಿಕ್ಕಿಲ್ಲ. 2010ರಲ್ಲಿ ಸೇನೆ ಸೇರಿದರೂ ತುಷಾರ್ ಜಮ್ಮು-ಕಾಶ್ಮೀರ ಗಡಿ ಸೇರಿದ್ದು 2016ರಲ್ಲಿ. ಅಂದರೆ ದಾಳಿ ನಡೆಯುವ ವರ್ಷದಲ್ಲಿ.

ಹೀಗೆ ದಾಳಿ ನಡೆಯುತ್ತಲೇ ತುಷಾರ್ ಮಹಾಜನ್ ಅವರಿಗೆ ದಾಳಿಯ ಮುಂದಾಳತ್ವ ನೀಡಲಾಯಿತು. ಫೆ.20, 2016ರಂದು ನಡೆದ ದಾಳಿ ನೂರಕ್ಕೂ ಅಧಿಕ ಜನರ ಪ್ರಾಣಕ್ಕೇ ಕುತ್ತು ತಂದಿತು. ನಮ್ಮ ವೀರಯೋಧರು ಆ ಬಹುಮಹಡಿ ಕಟ್ಟಡ ಸುತ್ತುವರಿದರು. ಉಗ್ರರ ದಾಳಿಗೆ ಪ್ರತಿದಾಳಿ ನಡೆಸಿದರು.

ಕೊನೆಗೂ ತುಷಾರ್ ಮಹಾಜನ್ ನೇತೃತ್ವದಲ್ಲಿ ನಮ್ಮ ಭದ್ರತಾ ಸಿಬ್ಬಂದಿ ಕಟ್ಟಡದಲ್ಲಿದ್ದ ನೂರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾದರು. ಆದರೆ ಅಂದು ನಡೆದ ಗುಂಡಿನ ದಾಳಿಯಲ್ಲಿ ತುಷಾರ್ ಗಾಯಗೊಂಡರು. ಕೊನೆಗೆ ದೇಶಕ್ಕಾಗಿ ಮಾಡುವ ಗರಿಷ್ಠ ತ್ಯಾಗವಾದ ಪ್ರಾಣವನ್ನೂ ನೂರು ಜನರ ರಕ್ಷಣೆಗಾಗಿ ಸಮರ್ಪಿಸಿದರು. ಆ ಮೂಲಕ ಯೋಧನಾಗಿ ನಮ್ಮ ಮನದಲ್ಲಿ ಅಮರರಾಗಿಬಿಟ್ಟರು.

ಜಮ್ಮು-ಕಾಶ್ಮೀರದ ಪ್ರತಿಷ್ಠಿತ ಶೈಕ್ಷಣಿಕ ತಜ್ಞ ದೇವರಾಜ್ ಗುಪ್ತ ಅವರ ಮುದ್ದಿನ ಮಗನಾಗಿ ಜನಿಸಿದ ತುಷಾರ್ ಮಹಾಜನ್, ತಮ್ಮ ಪೋಷಕರಿಗೆ ತಾವು ಎಂಜಿನಿಯರ್ ಆಗುವ ಕನಸಿತ್ತು ಎಂಬುದನ್ನು ಮನಗಂಡಿದ್ದ. ಆದರೂ ಬಾಲ್ಯದಲ್ಲಿದ್ದ ಸೇನೆ ಸೇರಬೇಕು ಎಂಬ ಕನಸಿಗೆ ನೀರೆರೆದು ರಾಷ್ಟ್ರೀಯ ಭದ್ರತಾ ಅಕಾಡೆಮಿ ಸೇರಿದ. ಆದರೆ ಮದುವೆಯೂ ಆಗದ ಆತ ದೇಶಕ್ಕಾಗಿ ಸರ್ವಶ್ರೇಷ್ಠ ತ್ಯಾಗ ಮಾಡಿದ.

(so jaegi kal lipatkar tirange ke sath, yeh deshbhakti hai sahab, tarikhon per jagti hai) ನನ್ನ ದೇಶಪ್ರೇಮ ಈಗ ಭಾರತದ ತ್ರಿವರ್ಣ ಧ್ವಜ ಹೊದ್ದುಕೊಂಡು ಮಲಗಿರಬಹುದು. ಆದರೆ ಅದು ಸಂದರ್ಭಕ್ಕನುಸಾರವಾಗಿ ಧುತ್ತನೆ ಎದ್ದು ಕುಳಿತುಬಿಡುತ್ತದೆ ಎಂಬುದು 2017ರ ಜನವರಿ 26ರಂದು ತುಷಾರ್ ಮಹಾಜನ್ ವಾಟ್ಸ್ ಆ್ಯಪ್ ಸ್ಟೇಟಸ್ ಆಗಿತ್ತು. ಅಂದು ಭಾರತ ಸರ್ಕಾರ ಈ ವೀರಯೋಧನಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿ ನೀಡಿತ್ತು. ಇಂತಹ ವೀರಯೋಧನಿಗೆ ಜನ್ಮದಿನದ ಶುಭಾಶಯ ಹೇಳಬೇಕು. ನಮ್ಮ ಮನದಲ್ಲಾದರೂ!

0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
ವಿಶಾಲ್ ಗೌಡ ಕುಶಾಲನಗರ September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
ವಿಶಾಲ್ ಗೌಡ ಕುಶಾಲನಗರ September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search