• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಆ ಯೋಧನಿಗೆ ಬೆದರಿಕೆ ಹಾಕಿದ್ದ ಉಗ್ರ ಕೆಲವೇ ತಾಸುಗಳಲ್ಲಿ ಹೆಣವಾದ ಎಂದರೆ ಯೋಧನ ಕೆಚ್ಚೆದೆ ಎಂಥಾದ್ದಿರಬೇಕು!

TNN Correspondent Posted On May 5, 2018


  • Share On Facebook
  • Tweet It

ಶ್ರೀನಗರ: ಕಳೆದ ವಾರ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಮೀರ್ ಟೈಗರ್‌ನನ್ನು ಭಾರತೀಯ ‘ಭದ್ರತಾ ಸಿಬ್ಬಂದಿ ಎನ್‌ಕೌಂಟರ್ ಮಾಡಿ ಬಿಸಾಕುವ ಮೂಲಕ ಶೌರ್ಯತನ ಮೆರೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಹೀಗೆ, ಹಿಜ್ಬುಲ್ ಕ್ರಿಮಿಯನ್ನು ಹತ್ಯೆ ಮಾಡುವ ಶೌರ್ಯದ ಹಿಂದೆ ಯೋಧರೊಬ್ಬರ ಶೌರ್ಯ ಹಾಗೂ ಚಾಣಾಕ್ಷತನದ ನಡೆ ಇದೆ ಎಂಬುದು ತುಂಬ ಜನರಿಗೆ ಗೊತ್ತಿಲ್ಲ.

ಹೌದು, ‘ಭದ್ರತಾ ಸಿಬ್ಬಂದಿ ತನ್ನನ್ನು ಹತ್ಯೆ ಮಾಡುವ ಮುನ್ನ ಉಗ್ರ ಸಮೀರ್ ಟೈಗರ್ 44ನೇ ರಾಷ್ಟ್ರೀಯ ರೈಫಲ್ಸ್ ನ ಮೇಜರ್ ರೋಹಿತ್ ಶುಕ್ಲಾ ಅವರಿಗೆ ಬೆದರಿಕೆ ಹಾಕಿದ್ದ. ಆದರೆ ಇದರಿಂದ ಕುಪಿತಗೊಂಡ ಮೇಜರ್ ರೋಹಿತ್ ಶುಕ್ಲಾ ಪುಲ್ವಾಮಾದಲ್ಲಿ ಉಗ್ರ ತಂಗಿದ್ದ ಸ್ಥಳಕ್ಕೆ ಸೇನೆ ನುಗ್ಗಿಸಿ ಆತ ಕೊನೆಯುಸಿರು ಎಳೆಯುವಂತೆ ಮಾಡಿದರು.

ಹೀಗೆ ರೋಹಿತ್ ಶುಕ್ಲಾ ಸೈನ್ಯವನ್ನು ಮುನ್ನಡೆಸಿ ಪುಲ್ವಾಮಾದಲ್ಲಿ ಉಗ್ರ ಅಡಗಿದ್ದ ತಾಣದ ಮೇಲೆ ಸಿಬ್ಬಂದಿ ಗುಂಡಿನ ಸುರಿಮಳೆಗೈಯುತ್ತಲ್ಲೇ ಬೆಚ್ಚಿಬಿದ್ದ ಸಮೀರ್ ಆಗಯಾ ಎಂದು ಕಿರುಚಿರುವ ಕುರಿತ ವೀಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಭಾರತೀಯ ಸೈನಿಕರ ಮೇಲೆ ನಮಗಿರುವ ಹೆಮ್ಮೆಯೂ ಇಮ್ಮಡಿಯಾಗಿದೆ.

2016ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹಾನ್ ವಾನಿ ಸೈನಿಕರ ಗುಂಡಿಗೆ ಹತ್ಯೆಯಾದ ಬಳಿಕ ಚುರುಕಿನ ಸಂಘಟನೆಯಲ್ಲಿ ತೊಡಗಿದ್ದ ಸಮೀರ್, ಸುಮಾರು 11 ಉಗ್ರರ ನಾಯಕನಾಗಿ ಕೆಲಸ ಮಾಡುತ್ತಿದ್ದ. ಅಲ್ಲದೆ ಹಲವು ದಾಳಿಗಳ ರೂವಾರಿಯಾಗಿಯೂ ಕಾರ್ಯನಿರ್ವಹಿಸಿದ್ದ ಎನ್ನಲಾಗುತ್ತಿತ್ತು. ಆದರೇನಂತೆ ಯೋಧನಿಗೆ ಸವಾಲು ಹಾಕಿದ ಆತನ ಪ್ರಾಣ ಪಕ್ಷಿ  ಕ್ಷಣಮಾತ್ರದಲ್ಲೇ ಹಾರಿಹೋಯಿತು.

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search