• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಲಿಕೆ ಬಿಳಿ ಆನೆಗಳನ್ನು ಸಾಕುತ್ತಿರುವುದು ಸ್ಥಳೀಯ ಕಾಂಗ್ರೆಸ್ ನಾಯಕರ ಶಿಫಾರಸ್ಸಿನಿಂದ!!

Hanumantha Kamath Posted On October 30, 2019


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯ ಮಾಲೀಕತ್ವದ ಅನೇಕ ಕಟ್ಟಡಗಳು ಮಂಗಳೂರಿನಲ್ಲಿವೆ. ಆ ಕಟ್ಟಡಗಳಲ್ಲಿ ಅನೇಕ ಮಳಿಗೆಗಳನ್ನು ಬಾಡಿಗೆಗೆ ಕೊಡಲಾಗಿದೆ. ಜನಸಾಮಾನ್ಯರ ನೀರಿನ ದರವನ್ನು ಹೆಚ್ಚಳ ಮಾಡುವುದರ ಬದಲು ಪಾಲಿಕೆಯವರು ತಮ್ಮ ಅಂಗಡಿಗಳ ಬಾಡಿಗೆಯನ್ನು ಹೆಚ್ಚಳ ಮಾಡಬಹುದಲ್ಲ. ಯಾಕೆಂದರೆ ಪಾಲಿಕೆಯ ಅಂಗಡಿಗಳ ಬಾಡಿಗೆ ಖಾಸಗಿ ಮಾಲೀಕತ್ವದ ಅಂಗಡಿಗಳಿಗೆ ಹೋಲಿಸಿದರೆ ಸಿಕ್ಕಾಪಟ್ಟೆ ಕಡಿಮೆ ಇದೆ. ಉದಾಹರಣೆಗೆ ಪಾಲಿಕೆಯ ಅಂಗಡಿಯೊಂದಕ್ಕೆ ಬಾಡಿಗೆ ತಿಂಗಳಿಗೆ ಹತ್ತು ಸಾವಿರ ಇದ್ದರೆ ಅದರ ಪಕ್ಕದ ಖಾಸಗಿ ಕಟ್ಟಡದ ಮಳಿಗೆಯೊಂದರ ಬಾಡಿಗೆ ಇಪ್ಪತ್ತೈದು ಸಾವಿರ ರೂಪಾಯಿ ಇರುತ್ತದೆ. ಆದ್ದರಿಂದ ನಾನು ಹೇಳುವುದೇನೆಂದರೆ ಪಾಲಿಕೆಯ ಎಲ್ಲಾ ಕಟ್ಟಡಗಳ ಮಳಿಗೆಗಳ ಬಾಡಿಗೆಯನ್ನು 25% ದಷ್ಟು ಏರಿಸಿದರೆ ಆಗ ಪಾಲಿಕೆಗೆ ಬರುವ ಆದಾಯ ಸಾಕಷ್ಟು ಜಾಸ್ತಿಯಾಗುತ್ತದೆ. ಅದನ್ನು ಯಾಕೆ ಇವರು ಮಾಡಲ್ಲ ಎನ್ನುವುದನ್ನು ನೋಡಬೇಕು.
ಇನ್ನು ಪಾಲಿಕೆಯಲ್ಲಿ ಎಇಇ (ಅಸ್ಟಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್) ಎನ್ನುವ ಹುದ್ದೆ ಇದೆ. ಎಂಟು ಜನ ಎಇಇ ಇದ್ದಾರೆ. ಅವರಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಹೋಗಿ ಬರಲಿಕ್ಕೆ ಎಂಟು ಬಾಡಿಗೆ ಕಾರುಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗಿದೆ. ಆ ಎಂಟು ಕಾರುಗಳು ಇಡೀ ದಿನ ಉಪಯೋಗಕ್ಕೆ ಬೀಳುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಇಂಜಿನಿಯರ್ ಗಳನ್ನು ಒಂದು ಕಡೆಯಿಂದ ಪಿಕ್ ಮಾಡಿ ಮತ್ತೊಂದು ಕಡೆಯಲ್ಲಿ ಬಿಡುವ ಕೆಲಸ ಮಾಡುವುದು ಮಾತ್ರ ಈ ಕಾರುಗಳ ಕೆಲಸ. ಆ ಎಂಟು ಕಾರುಗಳಿಗೆ ಕೊಡುವ ಬಾಡಿಗೆ ಹೆಚ್ಚಿನ ಸಂದರ್ಭದಲ್ಲಿ ವೇಸ್ಟ್. ಆ ಎಂಟು ಕಾರುಗಳ ಬದಲಿಗೆ ಎರಡೋ, ಮೂರೋ ಕಾರು ಬಾಡಿಗೆಗೆ ತೆಗೆದುಕೊಂಡು ಅದನ್ನೇ ಪೂರ್ಣವಾಗಿ ಬಳಸಿದರೆ ಎಷ್ಟೋ ಒಳ್ಳೆಯದಲ್ವಾ? ಪಾಲಿಕೆಯ ಜನರ ತೆರಿಗೆಯ ಹಣ ಉಳಿಯಲ್ವಾ?
ಇನ್ನು ಹಣ ಉಳಿಸುವ ಇನ್ನೊಂದು ಪಾಯಿಂಟ್ ಎಂದರೆ ಪಾಲಿಕೆಯಲ್ಲಿರುವ ಬೇರೆ ಇಲಾಖೆಗಳ ಇಂಜಿನಿಯರ್ ಗಳನ್ನು ಅವರವರ ಮಾತೃ ಇಲಾಖೆಗೆ ವಾಪಾಸ್ ಕಳುಹಿಸುವುದು. ಒಂದು ಕಾಲದಲ್ಲಿ ಪಾಲಿಕೆಯಲ್ಲಿ ಇಂಜಿನಿಯರ್ ಗಳ ಕೊರತೆ ಇದೆ ಎಂದು ಬೇರೆ ಇಲಾಖೆಗಳ ಅಂದರೆ ಲೋಕೋಪಯೋಗಿ ಇಲಾಖೆ, ನೀರು ಪೂರೈಕೆ ಮತ್ತು ಡ್ರೈನೇಜ್ ಇಲಾಖೆಗಳ ಇಂಜಿನಿಯರ್ ಗಳನ್ನು ಪಾಲಿಕೆಗೆ ಎರವಲು ಆಧಾರದ ಮೇಲೆ ಪಡೆಯಲಾಗುತ್ತಿತ್ತು. ಪಾಲಿಕೆಯಲ್ಲಿ ಅವರಿಗೆ ಸಂಬಳ ಮಾತ್ರ ತಮ್ಮ ಮಾತೃ ಇಲಾಖೆಯಲ್ಲಿ ಎಷ್ಟು ಸಿಗುತ್ತಿತ್ತೋ ಅಷ್ಟೇ ಪಾಲಿಕೆ ಕೊಡುತ್ತಿತ್ತು. ಇದರಿಂದ ಪಾಲಿಕೆಗೆ ತಿಂಗಳಿಗೆ ಹೆಚ್ಚುವರಿ ಮೂರು ಲಕ್ಷ ಹೊರೆ ಬೀಳುತಿತ್ತು. ಆದರೆ ಎರಡು ವರ್ಷ ಮೊದಲು ಕಾಂಗ್ರೆಸ್ ಸರಕಾರವೇ ಅಂತಹ ಇಂಜಿನಿಯರ್ ಗಳು ಮರಳಿ ಮಾತೃ ಇಲಾಖೆಗೆ ಹೋಗಿ ವರದಿ ಮಾಡಿ, ಇಲ್ಲಿ ಬೇಡಾ ಎಂದು ಕಮೀಷನರ್ ಅವರಿಗೆ ಸುತ್ತೋಲೆ ಕಳುಹಿಸಿದ್ದರೂ ಆ ಇಂಜಿನಿಯರ್ ಗಳು ಹೋಗಿಲ್ಲ. ಸ್ಥಳೀಯ ಕಾಂಗ್ರೆಸ್ ಫುಡಾರಿಗಳ ಶಿಫಾರಸ್ಸು ಹಿಡಿದುಕೊಂಡು ಇಲ್ಲಿಯೇ ಉಳಿದುಬಿಟ್ಟಿದ್ದಾರೆ. ಈಗ ರಾಜ್ಯ ಸರಕಾರ ಬದಲಾಗಿರುವುದರಿಂದ ಪಾಲಿಕೆಯ ಹೊರೆ ಇಳಿಸುವುದಕ್ಕಾಗಿ ಅಂತಹ ಇಂಜಿನಿಯರ್ ಗಳನ್ನು ವಾಪಾಸು ಕಳುಹಿಸುವುದು ತುಂಬಾ ಒಳ್ಳೆಯದು. ಹಾಗೆ ಮಾಡಲಾಗುತ್ತದೆಯಾ? ಪ್ರಶ್ನೆ ಉದ್ಭವಿಸುತ್ತದೆ. ಒಟ್ಟಿನಲ್ಲಿ ಹಣ ಉಳಿಸುವುದಕ್ಕೆ ಮತ್ತು ಬೇರೆ ಮೂಲಗಳಿಂದ ಆದಾಯ ಕ್ರೋಢಿಕರಿಸುವ ಹಲವು ದಾರಿಗಳು ಇರುವಾಗ ಜನಸಾಮಾನ್ಯರ ಮನೆಬಳಕೆಯ ಕುಡಿಯುವ ನೀರಿಗೆ ದರ ಅವೈಜ್ಞಾನಿಕವಾಗಿ ಏರಿಸುವುದು ಎಷ್ಟು ಸರಿ!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search