• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗದ ಸರಕಾರ!

Hanumantha Kamath Posted On April 20, 2020
0


0
Shares
  • Share On Facebook
  • Tweet It

ಈ ನಾಡಿನ ನಿಯಮಗಳಿಗೆ ತಲೆಬಾಗಿ ಇರುತ್ತೀರಿ ಎಂದರೆ ಇದ್ದುಬಿಡಿ, ಇಲ್ಲದಿದ್ದರೆ ಏನು ಮಾಡಬೇಕು ಎಂದು ಗೊತ್ತಿದೆ ಎಂದು ಲಕ್ನೊದಲ್ಲಿ ಕುಳಿತು ಯೋಗಿ ಆದಿತ್ಯನಾಥ ಗುಡುಗಿದ ನಂತರ ಒಂದೇ ಒಂದು ಸಾರ್ವಜನಿಕ ಸೊತ್ತಿಗೆ ಕೈ ಹಾಕಲು ಯಾರೂ ಧೈರ್ಯ ಮಾಡಿಲ್ಲ. ಅದು ಸಿಎಂ ಪವರ್. ಅದು ಬಿಟ್ಟು ಮಾತುಕತೆ ನಡೆಸಿದ್ದೇನೆ. ಮುಸ್ಲಿಂ ಶಾಸಕರನ್ನು ಕರೆಸಿ ಮಾತನಾಡಿದ್ದೇನೆ. ಎಲ್ಲರೂ ಒಪ್ಪಿದ್ದಾರೆ. ಇನ್ನು ಯಾರೂ ಕೂಡ “ಅವರ” ವಿರುದ್ಧ ಬರಹ, ಟೀಕೆ ಮಾಡಬಾರದು. ಮಾಡಿದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕೈಲಾಗದ ಒಬ್ಬ ಸಿಎಂ ಹೇಳುತ್ತಿದ್ದರು ಎನ್ನುವುದನ್ನು ಇತಿಹಾಸ ಯಾವತ್ತೂ ನೆನಪಿಸಿಕೊಳ್ಳಲಿದೆ. ಹಿಂದೂತ್ವದ ತಳಹಾದಿಯ ಮೇಲೆ ಗೋಪುರ ಕಟ್ಟಿ ದಂತ ಸಿಂಹಾಸನದ ಮೇಲೆ ಕುಳಿತ ರಾಜ ತನ್ನ ರಾಜ್ಯದಲ್ಲಿ ದಂಗೆ ಮಾಡುತ್ತಿರುವವರಿಗೆ ಎಲ್ಲಿ ಬಾರಿಸಬೇಕು ಎಂದು ಗೊತ್ತಿಲ್ಲದೆ ಮುದಿಭ್ರಾಂತಿಯಂತೆ ಮಾತನಾಡುತ್ತಿದ್ದರೆ ಅವರ ಆಸ್ಥಾನದಲ್ಲಿ ಕೈಲಾಗದ ಮಂತ್ರಿಗಳು ಮೈಪರಚಿಕೊಳ್ಳುತ್ತಿದ್ದಾರೆ. ವಿಷಯ ಏನೆಂದರೆ ಬೆಂಗಳೂರಿನಲ್ಲಿ ಪಾದರಾಯನಪುರ ಎನ್ನುವ ಪ್ರದೇಶವಿದೆ.

ಪಾದರಾಯನಪುರದಲ್ಲಿ 58 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆ ಏರಿಯಾವನ್ನು ಸೀಲ್ ಡೌನ್ ಕೂಡ ಮಾಡಲಾಗಿತ್ತು. 14 ದಿನಗಳ ಬಳಿಕ 58 ಜನರನ್ನು ಪರೀಕ್ಷೆ ಮಾಡಿ ನೋಡಬೇಕಲ್ಲ ಎನ್ನುವ ಕಾರಣಕ್ಕೆ ಸರಕಾರ ಅಲ್ಲಿ ಟೆಂಟ್ ತರಹ ಹಾಕಿ ವ್ಯವಸ್ಥೆ ಮಾಡಲಾಗಿತ್ತು. 17 ಜನ ಮಾತ್ರ ಬಂದು ಪರೀಕ್ಷೆ ಮಾಡಿಸಿಕೊಂಡಿದ್ದರು. ಉಳಿದವರು ಟೆಂಟ್ ಕಡೆ ತಲೆ ಹಾಕಿ ಕೂಡ ಮಲಗಲಿಲ್ಲ. ಅವರು ಬರಲಿಲ್ಲ ಎಂದು ಇವರು ಬಿಡೋಕೆ ಆಗುತ್ತಾ? ಸತ್ತರೆ ಸಾಯಲಿ ಎಂದು ಹೇಳಬಹುದಿತ್ತು. ಆದರೆ ಅವರು ಮಾತ್ರ ಸತ್ತರೆ ಪರವಾಗಿಲ್ಲ, ಉಳಿದವರಿಗೂ ಅಂಟಿಸಿ ಸತ್ತರೆ ಅಮಾಯಕರ ಕಥೆ ಏನು? ಅದಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಮತ್ತು ಆರೋಗ್ಯಾಧಿಕಾರಿಗಳು ಆಶಾ ಕಾರ್ಯಕರ್ತೆಯರ ಜೊತೆ ಅಲ್ಲಿಗೆ ತೆರಳಿದ್ದರು. ಹೋಂ ಕ್ವಾರಂಟೈನ್ ನಲ್ಲಿದವರನ್ನು ಗುರುತಿಸಿ ಪರೀಕ್ಷೆ ಮಾಡಲು ಮುಂದಾಗಿದ್ದರು. ಆದರೆ ಪಾದರಾಯನಪುರ ಒಂದು ಘಳಿಗೆ ಮಿನಿ ಪಾಕಿಸ್ತಾನದ ಸ್ವರೂಪವನ್ನು ಪಡೆದುಕೊಂಡುಬಿಟ್ಟಿತ್ತು. ಒಂದು ಪಕ್ಕಾ ಪ್ಲ್ಯಾನ್ ಮಾಡಿ ಪೊಲೀಸರ ಮೇಲೆ, ವೈದ್ಯರ ಮೇಲೆ, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದು ಸಾರ್ವಜನಿಕ ಸೊತ್ತುಗಳನ್ನು ನಾಶಪಡಿಸಲಾಗಿದೆ. ಸುಮಾರು 200 ಜನರ ಗುಂಪು ತಮ್ಮಲ್ಲಿಯೇ ನಾಲ್ಕು ಭಾಗ ಮಾಡಿಕೊಂಡಿದೆ. ಬೀದಿಬದಿ ಲೈಟ್ ಆರಿಸಲಾಗಿದೆ. ಪುಂಡರು ಎಂದು ನಿಮಗೆ ಗೊಂದಲ ಮಾಡುವುದು ಯಾಕೆ, ಮುಸ್ಲಿಮರ ಒಂದು ಗುಂಪು ಮುಖ್ಯರಸ್ತೆಯನ್ನು ಬಂದ್ ಮಾಡಿ ಅಲ್ಲಿ ಕಾವಲು ನಿಂತಿದೆ. ಒಂದು ವೇಳೆ ವಿಷಯ ತಿಳಿದು ಹೆಚ್ಚುವರಿ ಪೊಲೀಸರು ಬಂದರೆ ಅಲ್ಲಿ ದಾಳಿ ಮಾಡುವ ಉದ್ದೇಶ. ಇನ್ನೊಂದು ಗುಂಪು ಆಶಾ ಕಾರ್ಯಕರ್ತೆಯರ, ಅಧಿಕಾರಿಗಳ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡುವಲ್ಲಿ ನಿರತವಾಗಿತ್ತು. ಮೂರನೇ ಗುಂಪು ಟೆಂಟ್ ನಾಶ ಮಾಡುವಲ್ಲಿ ಬಿಝಿಯಾಗಿತ್ತು. ನಾಲ್ಕನೇ ಗುಂಪು ಸಾರ್ವಜನಿಕ ಸೊತ್ತುಗಳನ್ನು ಹಾನಿಗೊಳಿಸುವಲ್ಲಿ ತನ್ನ ಪೂರ್ಣ ಶಕ್ತಿಯನ್ನು ಬಳಸುತ್ತಿತ್ತು. ಇವರೆಲ್ಲರ ಪ್ರಧಾನ ನಾಯಕಿ ಗಾಂಜಾ ವ್ಯಾಪಾರಿ ಫೀರೋಜಾ. ಅವಳನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನೊಬ್ಬ ಪ್ರಧಾನ ನಾಯಕ ಸದ್ಯ ತಲೆಮರೆಸಿಕೊಂಡಿದ್ದಾನೆ. ಅವನು ಕೂಡ ಶೀಘ್ರ ಬಂಧನಕ್ಕೆ ಒಳಗಾಗಲಿದ್ದಾನೆ.

ಈ ಒಟ್ಟು ಘಟನೆಯನ್ನು ಸಮರ್ಥಿಸಲು ಕಾಂಗ್ರೆಸ್ ನಾಯಕರಲ್ಲಿ ನಾಲಗೆ ಹೊರಳುತ್ತಿಲ್ಲ. ಮಾಜಿ ಸಚಿವ ಸಿಎಂ ಇಬ್ರಾಹಿಂ, ಜಮೀರ್ ಅಹ್ಮದ್ ನಂತವರು ಇದನ್ನು ತಿಪ್ಪೆ ಸಾರಿಸಿ ಮುಗಿಸುವ ಯತ್ನದಲ್ಲಿದ್ದಾರೆ. ಸಿಎಂ ಇಬ್ರಾಹಿಂ ” ನಮ್ಮವರಿಗೆ ಎಜುಕೇಶನ್ ಇಲ್ಲ, ಅರಿವಿಲ್ಲ, ಅದಕ್ಕೆ ಹಿಂಗೆ ಆಡ್ತಾವ್ರೆ” ಎನ್ನುತ್ತಿದ್ದಾರೆ. ವಿದ್ಯಾಭ್ಯಾಸ ಇಲ್ಲದಿದ್ದರೆ ತೆಪ್ಪಗೆ ಸರಕಾರ ಹೇಳಿದ ಹಾಗೆ ಕೇಳಿ ಮನೆಯ ಒಳಗೆ ಮಲಗಬಹುದಲ್ಲ. ತಮ್ಮ ಒಳ್ಳೆಯದಕ್ಕೆ ಬರುವ ಆಶಾ ಕಾರ್ಯಕರ್ತೆಯರು ಕೇಳಿದ ಪ್ರಶ್ನೆಗೆ ಉತ್ತರಿಸಬಹುದಲ್ಲ. ವೈದ್ಯರೊಂದಿಗೆ ಸಹಕರಿಸಬಹುದಲ್ಲ. ಅದು ಬಿಟ್ಟು ಹಲ್ಲೆ ಮಾಡಲು ಬಂದರೆ ಎಜುಕೇಶನ್ ಇಲ್ಲ ಎನ್ನುತ್ತಾರಾ. ಪೊಲೀಸರು ಕರೆದುಕೊಂಡು ಹೋಗಿ ತಮ್ಮ ಭಾಷೆಯಲ್ಲಿ ಪಾಠ ಮಾಡಿದರೆ ಎಲ್ಲಾ ವಿದ್ಯೆ ಬರುತ್ತದೆ. ಈ ನಡುವೆ ಆ ಭಾಗದ ಶಾಸಕರೂ ಆಗಿರುವ ಜಮೀರ್ ಅಹ್ಮದ್ ತಮ್ಮ ಕ್ಷೇತ್ರದಲ್ಲಿ ಕೊರೊನಾದಿಂದ ಒಬ್ಬರು ಸತ್ತರು ಎಂದು ಶವದಹನ ಮಾಡುವ ಸ್ಮಶಾನಕ್ಕೆ ಕೂಡ ಹೋಗಿದ್ದಾರೆ. ಕೊರೊನಾದಿಂದ ಯಾರಾದರೂ ಸತ್ತರೆ ಅವರ ಅಂತ್ಯಕ್ರಿಯೆಗೆ ಬೆರಳೆಣಿಕೆಯ ಆಪ್ತ ಸಂಬಂಧಿಗಳನ್ನು ಬಿಟ್ಟರೆ ಬೇರೆ ಯಾರೂ ಹೋಗುವಂತಿಲ್ಲ. ಹಾಗಿರುವಾಗ ಜಮೀರ್ ಅಂತವರು ನಿಯಮಗಳನ್ನು ಉಲ್ಲಂಘಿಸಿ ಅಲ್ಲಿ ಹೋಗಿ ಫೋಟೋ ತೆಗೆಸಿ ಅದರಲ್ಲಿಯೂ ಪ್ರಚಾರ ತೆಗೆಯುತ್ತಾರಲ್ಲ. ಕೆಲವು ದಿನಗಳ ಹಿಂದೆ ಇದೇ ಜಮೀರ್ ಅಹ್ಮದ್ ಕ್ಷೇತ್ರದಲ್ಲಿ ಕೆಲವು ಮುಸ್ಲಿಮರು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿ ಚರಂಡಿಗೆ ದೂಡಿದಾಗ ಅಂತವರ ಕೈಕಾಲು ಮುರಿದು ಮಲಗಿಸಿದ್ದರೆ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ. ಈಗಲಾದರೂ ಅಂತವರ ವಿರುದ್ಧ ಏನಾದರೂ ಕ್ರಮ ತೆಗೆದುಕೊಳ್ಳುತ್ತೀರಾ ಸಿಎಂ?

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Hanumantha Kamath December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Hanumantha Kamath December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • 2
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 3
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 4
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

  • Privacy Policy
  • Contact
© Tulunadu Infomedia.

Press enter/return to begin your search