• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!

Hanumantha Kamath Posted On March 25, 2023
0


0
Shares
  • Share On Facebook
  • Tweet It

ರಾಹುಲ್ ಗಾಂಧಿ ವಿರುದ್ಧ ಸೂರತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ತೀರ್ಪಿನಿಂದ ಕಾಂಗ್ರೆಸ್ ಖಂಡಿತವಾಗಿ ಇರಿಸುಮುರಿಸು ಅನುಭವಿಸುತ್ತಿದೆ. ಯಾಕೆಂದರೆ ಜನಪ್ರತಿನಿಧಿಗಳ ಕಾಯ್ದೆ 1951 ರಲ್ಲಿ ಬಹಳ ಸ್ಪಷ್ಟವಾಗಿ ಏನು ನಮೂದಿಸಿದೆ ಎಂದರೆ ಯಾವನೇ ಚುನಾಯಿತ ಜನಪ್ರತಿನಿಧಿ ಯಾವುದೇ ಪ್ರಕರಣದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಅವಧಿಗೆ ಶಿಕ್ಷೆ ಘೋಷಿತನಾದರೆ ಆಗ ಆ ಜನಪ್ರತಿನಿಧಿಯ ಸ್ಥಾನಕ್ಕೆ ಚ್ಯುತಿ ಬರುತ್ತದೆ. ಅಂತವರನ್ನು ಸದನದಿಂದ ಅನರ್ಹಗೊಳಿಸಬಹುದು. ಈಗ ರಾಹುಲ್ ವಿರುದ್ಧವೂ ಆಗಿರುವುದು ಅದೇ. ಇದರಿಂದ ಏನು ಸಂದೇಶ ಹೋಗುತ್ತದೆ ಎಂದರೆ ಜನಪ್ರತಿನಿಧಿಗಳು ತಮ್ಮ ಸೇವಾವಧಿಯಲ್ಲಿ ಆದಷ್ಟು ಶುದ್ಧತೆಯನ್ನು ಕಾಪಾಡಬೇಕು. ಯಾಕೆಂದರೆ ಅವರನ್ನು ಜನ ಗಮನಿಸುತ್ತಾ ಇರುತ್ತಾರೆ. ರಾಜಕಾರಣಿಗಳ ನಡೆ, ನುಡಿ ಮಾದರಿಯಾಗಿರಬೇಕು. ಅವರು ಹೇಳಿಕೆ ಮತ್ತು ಜೀವನದಲ್ಲಿ ದಾರಿ ತಪ್ಪಿದರೆ ಅದರ ದೂರಗಾಮಿ ಪರಿಣಾಮ ನೋಡಬೇಕಾಗುತ್ತದೆ. ಸೂರತ್ ನ್ಯಾಯಾಲಯದಲ್ಲಿ ಗುಜರಾತ್ ರಾಜ್ಯದ ಭಾರತೀಯ ಜನತಾ ಪಾರ್ಟಿಯ ಶಾಸಕ ಪೂರ್ಣೇಶ್ ಈ ಪ್ರಕರಣವನ್ನು ದಾಖಲಿಸಿದಾಗ ಇದರ ತೀರ್ಪು ಈ ಪರಿ ಇರುತ್ತೆ ಎಂದು ಕಾಂಗ್ರೆಸ್ಸಿಗರಿಗೆ ಮತ್ತು ಸ್ವತ: ರಾಹುಲ್ ಗಾಂಧಿಯವರಿಗೂ ಅಂದಾಜು ಇರಲಿಲ್ಲ. ಯಾಕೆಂದರೆ ಯಾವುದೇ ಹೇಳಿಕೆ ತಮ್ಮನ್ನು ಅನರ್ಹ ತನಕ ತೆಗೆದುಕೊಂಡು ಹೋಗಬಹುದು ಎಂದು ಈ ತಲೆಮಾರಿನ ರಾಜಕಾರಣಿಗಳು ಮರೆತು ಯಾವುದೋ ಕಾಲವಾಗಿದೆ. ಇಂತಹ ಮನಸ್ಥಿತಿಯಲ್ಲಿಯೇ ರಾಹುಲ್ ಕರ್ನಾಟಕದ ಕೋಲಾರದಲ್ಲಿ ನಿಂತು ಮೋದಿ ಹೆಸರಿನ ಎಲ್ಲರೂ ಕಳ್ಳರೇ ಯಾಕೆ ಎನ್ನುವ ಅರ್ಥದ ಮಾತುಗಳನ್ನು ಆಡಿದ್ದರು.

2019ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಈ ಮಾತನ್ನು ಹೇಳಿಯೂ ಅಲ್ಲಿ ಕೋಲಾರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಾಗಲಿಲ್ಲ. ಕೋಲಾರ ಬಿಡಿ, ಇಡೀ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿರುವುದು 2019 ರಲ್ಲಿ ಒಂದೇ ಒಂದು ಲೋಕಸಭಾ ಸ್ಥಾನ. ಆದರೆ ನಾಲ್ಕು ವರ್ಷಗಳ ಬಳಿಕ ಬಂದಿರುವ ತೀರ್ಪು ರಾಹುಲ್ ಅವರಿಗಂತೂ ದೊಡ್ಡ ಅವಮಾನ. ಇದರಿಂದ ಅವರ ರಾಜಕೀಯ ಜೀವನ ಮುಗಿಯಿತು ಎಂದಲ್ಲ. ಬೇರೆ ಸಾಮಾನ್ಯ ಸಂಸದರಿಗೆ ಹೀಗೆ ಆಗಿದ್ದರೆ ಅವರನ್ನು ಇಷ್ಟೊತ್ತಿಗೆ ಪಕ್ಷದಿಂದಲೇ ಉಚ್ಚಾಟನೆ ಮಾಡಿ ಮನೆಗೆ ಕಳುಹಿಸಲಾಗುತ್ತಿತ್ತು. ಆದರೆ ರಾಹುಲ್ ಮನೆಯಲ್ಲಿಯೇ ಪಕ್ಷ ಇರುವುದರಿಂದ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಕಾಂಗ್ರೆಸ್ ಈ ಹಂತದಲ್ಲಿ ಧೈರ್ಯ ಮಾಡುವುದಿಲ್ಲ. ಆದರೆ ಅದೇ ಕಾಂಗ್ರೆಸ್ ರಾಹುಲ್ ಪರ ಪ್ರತಿಭಟನೆ ಮಾಡುವುದು ಕೂಡ ಅಷ್ಟೇ ಅಸಂಬದ್ಧ. ಅವರ ರಾಜಕೀಯ ಅವರು ಏನು ಬೇಕಾದರೂ ಮಾಡಿಕೊಳ್ಳಬಹುದು. ಆದರೆ ರಾಹುಲ್ ಏನು ಮಾಡಿದರೂ ಅದನ್ನು ಸಮರ್ಥನೆ ಮಾಡುವುದು ಕಾಂಗ್ರೆಸ್ಸಿನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ.

 

ರಾಹುಲ್ ವಿರುದ್ಧ ಕ್ರಮ ಕೈಗೊಂಡಿರುವುದು ಅದಾನಿ ವಿರುದ್ಧ ಅವರು ಧ್ವನಿ ಎತ್ತುತ್ತಿರುವುದಕ್ಕೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ರಾಹುಲ್ ಅವರಿಗೂ ಅದಾನಿಗೂ, ಮೋದಿ ಜಾತಿಯ ವಿರುದ್ಧ ಹೇಳಿಕೆಗೂ, ನ್ಯಾಯಾಲಯದ ತೀರ್ಪಿಗೂ ಯಾವುದೇ ಸಂಬಂಧ ಇಲ್ಲ. ಒಂದಕ್ಕೊಂದು ಸಂಬಂಧ ಕಲ್ಪಿಸಿ ಖರ್ಗೆ ಅವರು ಹೇಳುವುದು ಕೂಡ ಅವರ ಆರು ದಶಕಗಳ ರಾಜಕೀಯ ಜೀವನಕ್ಕೂ ಒಂದು ಕಪ್ಪುಚುಕ್ಕೆ. ರಾಹುಲ್ ನಿಜ ಹೇಳಿದ್ದಾರೆ ಎಂದು ಖರ್ಗೆ ಅದೇಗೆ ಹೇಳುತ್ತಾರೋ ಅವರಿಗೆ ಗೊತ್ತು. ಅಭಿಮಾನ ಇರಬೇಕು. ಆದರೆ ದುರಾಭಿಮಾನ ಇರಬಾರದು. ಕಾಂಗ್ರೆಸ್ ಮೊದಲ ಕುಟುಂಬಕ್ಕೆ ಇಷ್ಟು ತಲೆಬಾಗಿ ಹೇಳಿದ್ದೆಲ್ಲವನ್ನು ಕೂಡ ಸರಿ ಎನ್ನುವುದು ಖರ್ಗೆ ಅವರಿಗೂ ಶೋಭೆ ತರುವುದಿಲ್ಲ. ಇನ್ನು ರಾಹುಲ್ ಸಹೋದರಿ ಪ್ರಿಯಾಂಕಾ ವಾದ್ರಾ ತಮ್ಮ ಸಹೋದರ ಯಾರಿಗೂ ಹೆದರಲ್ಲ ಎಂದು ಹೇಳಿದ್ದಾರೆ. ನಿಮ್ಮ ಸಹೋದರ ಯಾರಿಗೂ ಹೆದರದೇ ಇದ್ದರೂ ಪರವಾಗಿಲ್ಲ. ಆದರೆ ತಾನು ಮಾತನಾಡುವಾಗ ಒಂದಿಷ್ಟು ಯೋಚಿಸಿ ಮಾತನಾಡಲಿ ಎಂದು ಪ್ರಿಯಾಂಕಾ ಹೇಳಿದರೆ ಸಾಕು.
ಇನ್ನು ರಾಹುಲ್ ಅವರನ್ನು ಅನರ್ಹ ಮಾಡಿದ್ದು ಬಿಜೆಪಿ ಪಕ್ಷ ಅಲ್ಲ. ನರೇಂದ್ರ ಮೋದಿ ಅಲ್ಲ. ಕೇಂದ್ರ ಸರಕಾರ ಅಲ್ಲ. ಹಾಗೆ ಮಾಡಿದ್ದರೆ ದ್ವೇಷ ಎಂದು ಹೇಳಬಹುದಿತ್ತು. ಆದರೆ ಈಗ ಅನರ್ಹ ಮಾಡಿರುವುದು 1951 ರಲ್ಲಿ ರಾಹುಲ್ ಮುತ್ತಜ್ಜ ಮಾಡಿಟ್ಟಿದ್ದ ಕಾನೂನು. ಇನ್ನು ಇದು ನ್ಯಾಯಾಲಯದಿಂದ ಸಾಬೀತು ಆದ ನಂತರವೇ ಮುಂದಿನ ಪ್ರಕ್ರಿಯೆ ನಡೆದಿರುವುದು. ಹಾಗಂತ ನ್ಯಾಯಾಲಯದಿಂದ ಬಿಜೆಪಿ ಪರ ವಕೀಲರು ಮಾತ್ರ ವಾದ ಮಾಡಿರುವುದಲ್ಲ. ಅಲ್ಲಿ ರಾಹುಲ್ ಪರ ವಕೀಲರು ಕೂಡ ವಾದ ಮಾಡಿರುತ್ತಾರೆ. ಇದರಿಂದ ಅಂತಿಮವಾಗಿ ನ್ಯಾಯಾಲಯಕ್ಕೆ ರಾಹುಲ್ ಹೇಳಿರುವುದು ತಪ್ಪು ಎಂದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ. ಹಾಗಂತ ಕಾನೂನಾತ್ಮಕ ದಾರಿಗಳು ರಾಹುಲ್ ಗೆ ಮುಗಿದಿವೆ ಎಂದಲ್ಲ. ಅವರು ಗುಜರಾತ್ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು. ಅದಕ್ಕೆ 30 ದಿನಗಳ ಅವಕಾಶ ಇದೆ. ಅಲ್ಲಿ ಉಚ್ಚ ನ್ಯಾಯಾಲಯ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯುತ್ತಾ, ವಜಾ ಮಾಡುತ್ತಾ ಎನ್ನುವುದನ್ನು ಕಾಲವೇ ಹೇಳುತ್ತದೆ!

0
Shares
  • Share On Facebook
  • Tweet It




Trending Now
ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
Hanumantha Kamath July 12, 2025
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Hanumantha Kamath July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
  • Popular Posts

    • 1
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 2
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 3
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 4
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 5
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search