• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಪ್ರಾಚೀನ ಯೋಗಿನಿ ದೇವಾಲಯ: ಶಿವನನ್ನು ಕೇಂದ್ರವಾಗಿಸಿದ ದೇವಿಯ 65 ರೂಪಗಳು

Santhosh Kumar Mudradi Posted On October 13, 2023
0


0
Shares
  • Share On Facebook
  • Tweet It

ಇದು ಮಧ್ಯಪ್ರದೇಶದ ಗ್ವಾಲಿಯರ್ ಹತ್ತಿರದ ಮಿತಾವಲಿ ಎನ್ನುವ ಹಳ್ಳಿಯಲ್ಲಿರುವ ದೇಶದ ಏಕೈಕ ಯೋಗಿನಿ ದೇವಾಲಯ. ದಿಲ್ಲಿಯ ಸಂಸತ್ ಭವನವನ್ನು ಹೋಲುವ ಅತ್ಯಂತ ವೈಶಿಷ್ಟ ಪೂರ್ಣವಾದ ಆಕಾರವುಳ್ಳ ಶಿವನ ಮಂದಿರ.

ಶಿವನನ್ನು ಕೇಂದ್ರವಾಗಿಸಿಕೊಂಡು ತಾಯಿ ಪಾರ್ವತಿಯಿಂದ ಕೂಡಿ ಅರವತ್ತನಾಲ್ಕು ಗುಡಿಗಳು ಇಲ್ಲಿಯ ವಿಶೇಷತೆ. ಒಟ್ಟಿಗೆ ದೇವಿಯ 65 ರೂಪಗಳಿಗೆ ಪ್ರತ್ಯೇಕವಾಗಿ ಗರ್ಭಗೃಹ ಹಾಗೂ ಮಧ್ಯದಲ್ಲಿ ಶಿವನ ಮಂದಿರ. ಎಲ್ಲವೂ ವರ್ತುಲಾಕಾರದಲ್ಲಿದೆ.

ರಜಪೂತ ರಾಜ ದೇವಪಾಲ ಎನ್ನುವವನಿಂದ 13ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಿಸಲ್ಪಟ್ಟಿದೆ. ಪುರುಷ ಪ್ರಕೃತಿ ಎನ್ನುವ ಅನುಬಂಧದಿಂದ ಶಿವ ಪಾರ್ವತಿಯರು ಈ ದೇವಸ್ಥಾನದ ಅಧಿಷ್ಠಾತೃ ದೇವತೆಗಳು. ಆದ್ದರಿಂದ ಭೂಮಿಯು ವರ್ತುಲ ಆಕಾರ ಎನ್ನುವ ಉದ್ದೇಶದಿಂದ ಈ ದೇವಾಲಯವನ್ನು ವರ್ತುಲಾಕಾರದಲ್ಲಿ ಮಾಡಲ್ಪಟ್ಟಿದೆ ಎನ್ನಬಹುದು.

ದೇಶದಲ್ಲಿ ಸುಮಾರು 10 ಕಡೆ ಯೋಗಿನಿ ದೇವಾಲಯಗಳು ನಮಗೆ ಕಾಣುತ್ತವೆ. ಸಾಧಾರಣ ಎಲ್ಲಾ ಕಡೆಯೂ ಗರ್ಭಗೃಹದ ಗೋಡೆಯಲ್ಲಿ ಅಥವಾ ಹೊರಾವರಣದ ಒಳಭಾಗದ ಗೋಡೆಗಳಲ್ಲಿ ಅಥವಾ ಕಂಬಗಳಲ್ಲಿ ಯೋಗಿನಿ ದೇವತೆಗಳು ಕೆತ್ತಲ್ಪಟ್ಟಿರುತ್ತದೆ. ಆದರೆ ಪ್ರತ್ಯೇಕವಾಗಿ ಗರ್ಭಗುಡಿಯನ್ನು ಹೊಂದಿರುವಂತಹ ದೇವಾಲಯ ಇದು ಮಾತ್ರವಾಗಿರಬಹುದು.

ಎಲ್ಲಾ ದೇವಾಲಯಗಳಂತೆ ಪರಕೀಯರ ಆಕ್ರಮಣಕ್ಕೆ ತುತ್ತಾಗಿ ಇಲ್ಲಿ ಯೋಗಿನಿ ದೇವತೆಗಳ ಮೂರ್ತಿ ನಾಶವಾಗಿದೆ. ಗರ್ಭಗೃಹಗಳಲ್ಲಿ ಶಿವಲಿಂಗ ಪ್ರತಿಷ್ಠಾಪಿತವಾಗಿದೆ. ಆದರೆ ಗರ್ಭಗೃಹದ ಹೊರಭಾಗದಲ್ಲಿ ಯೋಗಿನಿ ದೇವತೆಗಳ ಕೆತ್ತನೆಗಳು ಕಾಣುತ್ತವೆ. ಮತ್ತೆ ಉಳಿದಂತೆ ಬಹು ಭಾಗ ನಾಶವಾದಂತೆ ಕಾಣುತ್ತದೆ. ದೇವಸ್ಥಾನದ ಪ್ರಧಾನ ಅಂಗವಾದ ಶಿಖರ ಇಲ್ಲಿ ನಮಗೆ ಕಾಣುವುದಿಲ್ಲ. ಕಟ್ಟುವಾಗಲೇ ಅರ್ಧಕ್ಕೆ ನಿಂತಿದೆಯೋ ಅಥವಾ ನಷ್ಟವಾಗಿರುವ ದೇವಸ್ಥಾನವನ್ನು ಸರಿ ಮಾಡಿ ಇಷ್ಟರಮಟ್ಟಿಗೆ ತಂದು ನಿಲ್ಲಿಸಿದ್ದಾರೆಯೋ ಎನ್ನುವುದು ಅಸ್ಪಷ್ಟ ಮಾಹಿತಿ. ಆದರೆ ಮತ್ತುಳಿದ ಭಾಗಗಳೆಲ್ಲವೂ ಆದಷ್ಟು ಮಟ್ಟಿಗೆ ತನ್ನ ನೈಜತೆಯನ್ನು ಉಳಿಸಿಕೊಂಡಿದೆ.

ನೆಲದಿಂದ ನೂರು ಅಡಿ ಎತ್ತರದ ಪರ್ವತದಲ್ಲಿ ಈ ದೇವಸ್ಥಾನಕ್ಕೆ ಕಟ್ಟಲ್ಪಟ್ಟಿರುವುದು. ಯಾವುದೇ ಭೂಕಂಪ ಬಿರುಗಾಳಿಗೆ ಬಲಿಯಾಗದೆ ಗಟ್ಟಿಯಾಗಿ ನಿಂತಿದೆ. ಹಾಗೆಯೇ ಪ್ರಾಚೀನ ಕಾಲದಲ್ಲಿ ಭೌಗೋಳಿಕವಾದಂತಹ ಅಧ್ಯಯನ ಕೇಂದ್ರವಾಗಿತ್ತು ಎನ್ನುತ್ತದೆ ಕೆಲವು ಇತಿಹಾಸಗಳು. ಸಂಸತ್ ಭವನದ ನಿರ್ಮಾಣದ ಸಮಯದಲ್ಲೂ ಕೂಡ ವೃತ್ತಾಕಾರದ ತೀರ್ಮಾನವನ್ನು ಈ ಮಂದಿರವನ್ನು ನೋಡಿಯೇ ಸ್ವೀಕರಿಸಿದ್ದಾರೆ ಎನ್ನುವ ವದಂತಿಯಿದೆ. ಏನೇ ಆಗಲಿ ಮಧ್ಯಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ದಿಲ್ಲಿಯನ್ನು ಹೋಲುವ ವೈಭವ ನಾವಿಲ್ಲಿ ಕಾಣುತ್ತೇವೆ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Santhosh Kumar Mudradi October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Santhosh Kumar Mudradi October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search