• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಐಪಿಎಲ್ ನಲ್ಲಿ ದಾಂಡಿಗರ ಬ್ಯಾಟ್ ಪರಿಶೀಲನೆ ಅಂಪೈರ್ ಮಾಡುವುದು ಯಾಕೆ!

Tulunadu News Posted On April 17, 2025
0


0
Shares
  • Share On Facebook
  • Tweet It

ಐಪಿಎಲ್ ನಲ್ಲಿ ದಾಂಡಿಗ ಬ್ಯಾಟ್ ಹಿಡಿದು ಕ್ರೀಸಿಗೆ ಬರುತ್ತಿದ್ದಾರೆ. ಸಡನ್ನಾಗಿ ಅಂಪೈರ್ ಅವರ ಬ್ಯಾಟ್ ಹಿಡಿದು ಅದನ್ನು ಪರೀಕ್ಷಿಸುತ್ತಿದ್ದಾರೆ. ಹೀಗೆ ಯಾಕೆ ಮಾಡುತ್ತಾರೆ, ಇದು ಅವಮಾನವಲ್ಲವೇ, ಆಟಗಾರರ ಕ್ಷಮತೆ ಮೇಲೆ ಅನುಮಾನವೇಕೆ ಎಂದು ಅನಿಸಬಹುದು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ ನಿಯಮಗಳಲ್ಲಿ ಹೊಸ ಬದಲಾವಣೆಯನ್ನು ತರುತ್ತಿದ್ದು, ನಾಲ್ಕೈದು ದಿನಗಳಿಂದ ಅಂಪೈರ್ ಗಳು ಬ್ಯಾಟ್ಸಮೆನ್ ಗಳ ಬ್ಯಾಟಿನ ಸೈಜ್ ಬಗ್ಗೆ ತಪಾಸಣೆಗೆ ಇಳಿದಿದ್ದಾರೆ.

ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಇವರ ಬ್ಯಾಟ್ ಗಳನ್ನು ಚೆಕ್ ಮಾಡಿರುವ ಅಂಪೈರ್ ಗಳು ಸಮಾಧಾನಗೊಂಡ ಬಳಿಕ ಆಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಐಪಿಎಲ್ ಎಂದರೆ ಅಲ್ಲಿ ರನ್ ಸುರಿಮಳೆ ಇಲ್ಲದಿದ್ದರೆ ಬ್ಯಾಟರ್ ಗೆ ಮರ್ಯಾದೆ ಇಲ್ಲ. ಆದ್ದರಿಂದ ಮೈದಾನದಲ್ಲಿ ಸಿಕ್ಸರ್, ಫೋರ್ ಬಾರಿಸುವ ದಾಂಡಿಗನ ಬ್ಯಾಟ್ ಐಪಿಎಲ್ 5.7 ನಿಯಮಗಳ ಪ್ರಕಾರ ಇದೆಯೇ ಎನ್ನುವುದು ಕೂಡ ಅಷ್ಟೇ ಮುಖ್ಯ.

ಹಾಗಾದರೆ ಐಪಿಎಲ್ 5.7 ನಿಯಮ ಏನು?

ಕ್ರಿಕೆಟ್ ನಲ್ಲಿ ಬ್ಯಾಟ್ ಎರಡು ಭಾಗಗಳನ್ನು ಹೊಂದಿರುತ್ತದೆ. ಮೊದಲನೇಯದು ಹ್ಯಾಂಡಲ್ ಮತ್ತು ಎರಡನೇಯದು ಬ್ಲೇಡ್. ಹ್ಯಾಂಡಲ್ ಹೊರತುಪಡಿಸಿ ಒಟ್ಟು ಉದ್ದ 38 ಇಂಚು ಇರಬೇಕು ಅಥವಾ 96.52 ಸೆಂಟಿಮೀಟರ್ ಮೀರಬಾರದು. ಬ್ಲೇಡ್ ನ ಅಗಲ ಗರಿಷ್ಟ 4.25 ಇಂಚುಗಳಾಗಿರಬಹುದು. ಬ್ಯಾಟ್ ನ ಆಳ 2.64 ಇಂಚು ಮೀರಬಾರದು. ಮತ್ತು ಅಂಚುಗಳು 1.56 ಇಂಚು ಮೀರಬಾರದು. ಇಷ್ಟಿದ್ದೂ ಬ್ಯಾಟರ್ ಗಳು ನಿಯಮ ಉಲ್ಲಂಘಿಸಿ ಕ್ರೀಸಿಗೆ ಬಂದರೆ ಬ್ಯಾಟ್ಸಮೆನ್ ಗಳಿಗೆ ಬೇರೆ ಬ್ಯಾಟ್ ಬಳಸಲು ಅಂಪೈರ್ ಗಳು ಸೂಚಿಸಬಹುದೇ ವಿನ: ದಂಡದ ಅವಕಾಶ ನಿಯಮಗಳಲ್ಲಿ ಇಲ್ಲ.

ಆದ್ದರಿಂದ ಒಂದು ವೇಳೆ ನಿಯಮಗಳು ಉಲ್ಲಂಘನೆಯಾದರೆ ಬ್ಯಾಟ್ಸಮೆನ್ ಗಳು ಇರಿಸುಮುರಿಸು ಅನುಭವಿಸುವ ಬದಲು ಮೊದಲೇ ನಿಯಮಗಳ ಪ್ರಕಾರ ಬ್ಯಾಟ್ ಹಿಡಿದು ಆಡಲು ಆಗಮಿಸುವುದರಿಂದ ಇಲ್ಲಿಯ ತನಕ ನಿಯಮ ಉಲ್ಲಂಘನೆಯಾದ ಉದಾಹರಣೆ ಇಲ್ಲ.

0
Shares
  • Share On Facebook
  • Tweet It




Trending Now
ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
Tulunadu News February 12, 2026
ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
Tulunadu News February 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
  • Popular Posts

    • 1
      ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • 2
      ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 3
      'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • 4
      ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • 5
      ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್

  • Privacy Policy
  • Contact
© Tulunadu Infomedia.

Press enter/return to begin your search