• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ತಿಂಗಳಾಂತ್ಯಕ್ಕೆ ಮಂಗಳೂರು ಏರ್‍ಪೋರ್ಟ್ ಲಗ್ಗೇಜ್ ಸ್ಟ್ಯಾಂಪಿಂಗ್ ಮುಕ್ತ

TNN Correspondent Posted On September 11, 2017
0


0
Shares
  • Share On Facebook
  • Tweet It

ನಾಗರಿಕ ವಿಮಾನ ಪ್ರಯಾಣ ಸೂಪರ್‍ಫಾಸ್ಟ್!

ದೆಹಲಿ: ನಾಗರಿಕ ವಿಮಾನಯಾನ ಪ್ರಯಾಣಿಕರಿಗೆ ಪ್ರಯಾಣ ಅವಧಿ 1 ಅಥವಾ 2 ಗಂಟೆಯದಾಗಿದ್ದರೆ ಅದರಷ್ಟೇ ಸಮಯ ವ್ಯರ್ಥವಾಗುತ್ತಿದ್ದದ್ದು ಲಗ್ಗೇಜ್ ತಪಾಸಣೆ(ಸ್ಟ್ಯಾಂಪಿಂಗ್). ಮಾರುದ್ದ ಸಾಲಿನಲ್ಲಿ ನಿಂತು ಹೊತ್ತುಕೊಂಡಿದ್ದ ಲಗ್ಗೇಜ್‍ಗಳನ್ನು ಪೊಲೀಸ್ ಸಮವಸ್ತ್ರಧಾರಿಗೆ ಒಂದೊಂದಾಗಿ ನೀಡುತ್ತಾ ಕೈ ಎತ್ತಿ, ಬೆಲ್ಟ್ ಬಿಚ್ಚಿ ಎಂದು ಆತ ಕುಣಿಸಿದಂತೆ ಕುಣಿದು ವಿಮಾನಯಾನ ಸಂಸ್ಥೆ ಲಾಬಿಗೆ ಬಂದು ಕೂರುವಷ್ಟರಲ್ಲಿ ಸಾಕಪ್ಪಾ ಸಾಕು ಅನಿಸುತ್ತಿತ್ತು.


ಆದರೆ ಇನ್ಮುಂದೆ ಆ ಸಮಸ್ಯೆಯೇ ಬೇಡ ಎಂದು ಪ್ರಧಾನಿ ಮೋದಿ ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ತಪಾಸಣೆಯನ್ನು ಜಾರಿಗೆ ತಂದಿತ್ತು. ಜೂನ್ 1ರಿಂದಲೇ ಚೆನ್ನೈ, ಜೈಪುರ, ಪಟನಾದಲ್ಲಿ ಆರಂಭಗೊಂಡು ಯಶಸ್ವಿಯಾಗಿತ್ತು ಕೂಡ.
ಈಗ ಮಂಗಳೂರಿಗೂ ಈ ವ್ಯವಸ್ಥೆ ವಿಸ್ತರಿಸಲಿದ್ದೇವೆ ಎಂದು ದೇಶದ ಸುಮಾರು 59 ನಾಗರಿಕ ನಾಗರಿಕ ವಿಮಾನಿಲ್ದಾಣಗಳ ಭದ್ರತೆ ಹೊಣೆ ಹೊತ್ತಿರುವ ಕೇಂದ್ರೀಯ ಕೈಗಾರಿಕಾ ಭದ್ರತೆ ಪಡೆ(ಸಿಐಎಸ್‍ಎಫ್) ತಿಳಿಸಿದೆ. ಪ್ರಸ್ತುತ 17 ಏರ್‍ಪೋರ್ಟ್‍ಗಳಲ್ಲಿ ಲಗ್ಗೇಜ್ ಸ್ಟ್ಯಾಂಪಿಂಗ್ ಇಲ್ಲ. ಬದಲಿಗೆ ಅತ್ಯಾಧುನಿಕ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಹೆಚ್ಚುವರಿಯಾಗಿ ಇನ್ನೂ 10 ನಗರಗಳ ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಸ್ಯಾಂಪಿಂಗ್ ಮುಕ್ತ ತಪಾಸಣೆ ವಿಸ್ತರಿಸಲಿದ್ದೇವೆ ಎಂದು ಸಿಐಎಸ್‍ಎಫ್ ಪ್ರಧಾನ ನಿರ್ದೇಶಕ ಒ.ಪಿ. ಸಿಂಗ್ ಹೇಳಿದ್ದಾರೆ.

ಅಕ್ಟೋಬರ್ ಮೊದಲ ವಾರದೊಳಗೆ ಮಂಗಳೂರು, ಅಮೃತಸರ, ವಾರಾಣಸಿ, ಉದಯಪುರ, ದಿಬ್ರುಘರ್, ನಾಗ್ಪುರಾ, ತಿರುಚ್ಚಿ, ಪುಣೆ ಹಾಗೂ ರಾಂಚಿ ನಾಗರಿಕ ವಿಮಾನ ನಿಲ್ದಾಣಗಳು ಲಗ್ಗೇಜ್ ಸ್ಟ್ಯಾಂಪಿಂಗ್ ಮುಕ್ತವಾಗಲಿವೆ ಎಂದು ಸಿಂಗ್ ತಿಳಿಸಿದ್ದಾರೆ.

0
Shares
  • Share On Facebook
  • Tweet It


airportaviationcisfciviljanardhan poojarikateelkonkaniluggagemangalamangaloremangalurumodipilotsadanandagowdastampingtulutulunadu


Trending Now
ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
Tulunadu News April 27, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
You may also like
ಗೋಡೆಯಲ್ಲಿ ಬರೆದಾಗಲೇ ಕೈಕಾಲು ಮುರಿಯಬೇಕಿತ್ತು!!
September 22, 2022
ಸಿದ್ಧಾಂತದ ಮೇಲೆ ಭಾಷಣ ಮಾಡುವುದೆಂದರೆ ಟೆಂಟ್ ನಲ್ಲಿ ಗಿಡಮೂಲಿಕೆ ಮಾರುವುದಲ್ಲ!!
December 7, 2018
ಕಲಿಯುಗದ ಶ್ರವಣಕುಮಾರ..!
December 3, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search