• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ತಿಂಗಳಾಂತ್ಯಕ್ಕೆ ಮಂಗಳೂರು ಏರ್‍ಪೋರ್ಟ್ ಲಗ್ಗೇಜ್ ಸ್ಟ್ಯಾಂಪಿಂಗ್ ಮುಕ್ತ

TNN Correspondent Posted On September 11, 2017


  • Share On Facebook
  • Tweet It

ನಾಗರಿಕ ವಿಮಾನ ಪ್ರಯಾಣ ಸೂಪರ್‍ಫಾಸ್ಟ್!

ದೆಹಲಿ: ನಾಗರಿಕ ವಿಮಾನಯಾನ ಪ್ರಯಾಣಿಕರಿಗೆ ಪ್ರಯಾಣ ಅವಧಿ 1 ಅಥವಾ 2 ಗಂಟೆಯದಾಗಿದ್ದರೆ ಅದರಷ್ಟೇ ಸಮಯ ವ್ಯರ್ಥವಾಗುತ್ತಿದ್ದದ್ದು ಲಗ್ಗೇಜ್ ತಪಾಸಣೆ(ಸ್ಟ್ಯಾಂಪಿಂಗ್). ಮಾರುದ್ದ ಸಾಲಿನಲ್ಲಿ ನಿಂತು ಹೊತ್ತುಕೊಂಡಿದ್ದ ಲಗ್ಗೇಜ್‍ಗಳನ್ನು ಪೊಲೀಸ್ ಸಮವಸ್ತ್ರಧಾರಿಗೆ ಒಂದೊಂದಾಗಿ ನೀಡುತ್ತಾ ಕೈ ಎತ್ತಿ, ಬೆಲ್ಟ್ ಬಿಚ್ಚಿ ಎಂದು ಆತ ಕುಣಿಸಿದಂತೆ ಕುಣಿದು ವಿಮಾನಯಾನ ಸಂಸ್ಥೆ ಲಾಬಿಗೆ ಬಂದು ಕೂರುವಷ್ಟರಲ್ಲಿ ಸಾಕಪ್ಪಾ ಸಾಕು ಅನಿಸುತ್ತಿತ್ತು.


ಆದರೆ ಇನ್ಮುಂದೆ ಆ ಸಮಸ್ಯೆಯೇ ಬೇಡ ಎಂದು ಪ್ರಧಾನಿ ಮೋದಿ ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ತಪಾಸಣೆಯನ್ನು ಜಾರಿಗೆ ತಂದಿತ್ತು. ಜೂನ್ 1ರಿಂದಲೇ ಚೆನ್ನೈ, ಜೈಪುರ, ಪಟನಾದಲ್ಲಿ ಆರಂಭಗೊಂಡು ಯಶಸ್ವಿಯಾಗಿತ್ತು ಕೂಡ.
ಈಗ ಮಂಗಳೂರಿಗೂ ಈ ವ್ಯವಸ್ಥೆ ವಿಸ್ತರಿಸಲಿದ್ದೇವೆ ಎಂದು ದೇಶದ ಸುಮಾರು 59 ನಾಗರಿಕ ನಾಗರಿಕ ವಿಮಾನಿಲ್ದಾಣಗಳ ಭದ್ರತೆ ಹೊಣೆ ಹೊತ್ತಿರುವ ಕೇಂದ್ರೀಯ ಕೈಗಾರಿಕಾ ಭದ್ರತೆ ಪಡೆ(ಸಿಐಎಸ್‍ಎಫ್) ತಿಳಿಸಿದೆ. ಪ್ರಸ್ತುತ 17 ಏರ್‍ಪೋರ್ಟ್‍ಗಳಲ್ಲಿ ಲಗ್ಗೇಜ್ ಸ್ಟ್ಯಾಂಪಿಂಗ್ ಇಲ್ಲ. ಬದಲಿಗೆ ಅತ್ಯಾಧುನಿಕ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಹೆಚ್ಚುವರಿಯಾಗಿ ಇನ್ನೂ 10 ನಗರಗಳ ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಸ್ಯಾಂಪಿಂಗ್ ಮುಕ್ತ ತಪಾಸಣೆ ವಿಸ್ತರಿಸಲಿದ್ದೇವೆ ಎಂದು ಸಿಐಎಸ್‍ಎಫ್ ಪ್ರಧಾನ ನಿರ್ದೇಶಕ ಒ.ಪಿ. ಸಿಂಗ್ ಹೇಳಿದ್ದಾರೆ.

ಅಕ್ಟೋಬರ್ ಮೊದಲ ವಾರದೊಳಗೆ ಮಂಗಳೂರು, ಅಮೃತಸರ, ವಾರಾಣಸಿ, ಉದಯಪುರ, ದಿಬ್ರುಘರ್, ನಾಗ್ಪುರಾ, ತಿರುಚ್ಚಿ, ಪುಣೆ ಹಾಗೂ ರಾಂಚಿ ನಾಗರಿಕ ವಿಮಾನ ನಿಲ್ದಾಣಗಳು ಲಗ್ಗೇಜ್ ಸ್ಟ್ಯಾಂಪಿಂಗ್ ಮುಕ್ತವಾಗಲಿವೆ ಎಂದು ಸಿಂಗ್ ತಿಳಿಸಿದ್ದಾರೆ.

  • Share On Facebook
  • Tweet It


- Advertisement -
airportaviationcisfciviljanardhan poojarikateelkonkaniluggagemangalamangaloremangalurumodipilotsadanandagowdastampingtulutulunadu


Trending Now
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Tulunadu News February 3, 2023
ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
Tulunadu News February 2, 2023
You may also like
ಗೋಡೆಯಲ್ಲಿ ಬರೆದಾಗಲೇ ಕೈಕಾಲು ಮುರಿಯಬೇಕಿತ್ತು!!
September 22, 2022
ಸಿದ್ಧಾಂತದ ಮೇಲೆ ಭಾಷಣ ಮಾಡುವುದೆಂದರೆ ಟೆಂಟ್ ನಲ್ಲಿ ಗಿಡಮೂಲಿಕೆ ಮಾರುವುದಲ್ಲ!!
December 7, 2018
ಕಲಿಯುಗದ ಶ್ರವಣಕುಮಾರ..!
December 3, 2018
Leave A Reply

  • Recent Posts

    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
  • Popular Posts

    • 1
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 2
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 3
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 4
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 5
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search