ಪಾಕಿಸ್ತಾನದಿಂದ ಹಣ ಪಡೆದಿದ್ದು ನಿಜ: ತಪ್ಪೊಪ್ಪಿಕೊಂಡ ಆರೋಪಿಗಳು, ಪ್ರತ್ಯೇಕತಾವಾದಿಗಳಿಗಿದೆ ಹಬ್ಬ
Posted On September 20, 2017
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ, ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪಾಕಿಸ್ತಾನದಿಂದ ಹಣಕಾಸು ನೆರವು ಪಡೆದಿರುವುದಾಗಿ ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಪ್ರತ್ಯೇಕತಾವಾದಿಗಳ ಬಣ್ಣ ಬಯಲಾಗಿದೆ.
ಇಬ್ಬರು ಆರೋಪಿಗಳಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) “ಲಿಖಿತ ತಪ್ಪೊಪ್ಪಿಗೆ ಹೇಳಿಕೆ” ಪಡೆದಿದೆ ಎಂದು ತಿಳಿದುಬಂದಿದೆ.
ಕಣಿವೆ ರಾಜ್ಯದಲ್ಲಿ ಗಲಭೆ ಹಾಗೂ ಕಲ್ಲು ತೂರಾಟ ನಡೆಸಲು ಹಣಕಾಸು ನೆರವು ಪಡೆದಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದು, ಇದು ಪ್ರತ್ಯೇಕತಾವಾದಿಗಳ ವಿರುದ್ಧದ ತನಿಖೆಗೆ ಸಹಕಾರಿಯಾಗಲಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಅದಾಗಲೇ ಪ್ರತ್ಯೇಕತಾವಾದಿ ಮುಖಂಡ ಸೈಯದ್ ಶಾ ಗಿಲಾನಿ ಅಳಿಯ ಸೇರಿ ಹಲವು ಪ್ರತ್ಯೇಕತಾವಾಗಿಳು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
- Advertisement -
Trending Now
ಗೋಲ್ಡಿ ಬ್ರಾರ್ ಸಾವನ್ನಪ್ಪಿಲ್ಲ ಎಂದ ಅಮೇರಿಕಾ ಪತ್ರಿಕೆ!
May 2, 2024
ಪ್ರಜ್ವಲ್ ಮೊಬೈಲಿನಿಂದ ವಿಡಿಯೋ ಲೀಕ್ ಆದದ್ದು ಹೇಗೆ?
May 2, 2024
Leave A Reply