• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಈ ಹಿಂದೂಗಳ ಬಗ್ಗೆ ಯಾರೂ ಮಾತಾಡಲಿಲ್ಲ, ಆದರೂ ಅವರಿಗೆ ಸಿಕ್ಕಿತು ಭಾರತದ ನಾಗರಿಕತ್ವ

TNN Correspondent Posted On October 27, 2017


  • Share On Facebook
  • Tweet It

ನಮ್ಮ ದೇಶವನ್ನ ಜಾತ್ಯತೀತ, ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ ಎಂದು ನಾವು ಎಷ್ಟೇ ಹೇಳಿದರೂ, ಇಬ್ಬಂದಿತನ, ತಾರತಮ್ಯ, ಓಲೈಸುವಿಕೆಯಿಂದ ಮಾತ್ರ ನಾವು ಬಿಡುಗಡೆ ಹೊಂದಿಲ್ಲ ಹಾಗೂ ಹೊಂದುವ ಲಕ್ಷಣಗಳೂ ಇಲ್ಲ.

ಯೋಚಿಸಿ ನೋಡಿ. ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳುವ ಮುಸ್ಲಿಮರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಕಿ ಸಲಹುವ ಜತೆಗೆ ಅವರಿಗೆ ದೇಶದ ಮತದಾನದ ಹಕ್ಕು, ಐಡಿ, ಆಧಾರ್ ಕಾರ್ಡ್ ನೀಡುತ್ತಾರೆ. ಅವರೇ ಕೋಮುಗಲಭೆಗೆ, ಹಿಂದೂ ವಿರೋಧಿ ಕೃತ್ಯಗಳಲ್ಲಿ ತೊಡಗುತ್ತಾರೆ ಎಂಬುದು ಗೊತ್ತಿದ್ದರೂ ಮಮತಾ ಹೀಗೆ ಮಾಡುತ್ತಾರೆ. ಇನ್ನು ಮ್ಯಾನ್ಮಾರಿನಿಂದ ಗಡಿಪಾರಾಗಿ ಬರುವ ರೋಹಿಂಗ್ಯಾ ಮುಸ್ಲಿಮರು ಮಗ್ಗಲು ಮುಳ್ಳು ಎಂದು ಗೊತ್ತಿದ್ದರೂ ರಾಹುಲ್ ಗಾಂಧಿ, ಅಸಾದುದ್ದೀನ್ ಓವೈಸಿಯಂಥವರು ಅವರನ್ನು ಸಾಕಬೇಕು ಎಂದು ಬೊಬ್ಬೆ ಹಾಕುತ್ತಾರೆ.

ಆದರೆ, ಕಾಶ್ಮೀರದ ನಿರಾಶ್ರಿತ ಹಿಂದೂ ಪಂಡಿತರು, ಹಿಂದೂಗಳ ರಕ್ಷಣೆ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇಷ್ಟಾದರೂ ಹಿಂದೂಗಳನ್ನು ರಕ್ಷಿಸುವ ಕೆಲಸವನ್ನು ಕೇಂದ್ರ ಸರ್ಕಾರ ಕೊನೆಗೂ ಮಾಡಿತಲ್ಲ ಎಂಬುದೇ ಸಮಾಧಾನಕರ.

ಹೌದು, ಹಲವು ವರ್ಷಗಳ ಹಿಂದೆ ಕಾಶ್ಮೀರದಲ್ಲಿ ಹಿಂಸೆ ಅನುಭವಿಸಿ ಭಾರತಕ್ಕೆ ಬಂದು ನೆಲೆಸಿದ್ದ 51 ಹಿಂದೂ ಕುಟುಂಬಗಳಿಗೆ ಕೇಂದ್ರ ಸರ್ಕಾರ ದೇಶದ ನಾಗರಿಕತ್ವ ನೀಡಿ ಮಾನವೀಯತೆ ಮೆರೆದಿದೆ.

ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಆಸಕ್ತಿ ವಹಿಸಿ ಹಿಂದೂ ಕುಟುಂಬಗಳಿಗೆ ದೇಶದ ನಾಗರಿಕತ್ವ ನೀಡಿದ್ದು, ಕೇಂದ್ರ ಗೃಹಖಾತೆ ರಾಜ್ಯ ಸಚಿವ ಹಂಸರಾಜ್ ಆಹಿರ್ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ.

ಹಿಂದೂ ಕುಟುಂಬಗಳಿಗೆ ದೇಶದ ನಾಗರಿಕತ್ವ ನೀಡುವ ಮೂಲಕ, ಕೇಂದ್ರ ಸರ್ಕರದ ನೆರವಿನೊಂದಿಗೆ ಛತ್ತೀಸ್ ಗಡ ವಲಸಿಗರಿಗೆ ಭಾರತದ ನಾಗರಿಕತ್ವ ನೀಡಿದ ಮೊದಲ ರಾಜ್ಯ ಎಂಬ ಖ್ಯಾತಿಗೂ ಭಾಜನವಾಗಿದೆ ಎಂದು ಆಹಿರ್ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಹಿಂಸೆ ತಾಳಲಾರದೆ ಹಲವು ವರ್ಷಗಳ ಹಿಂದೆ ಸುಮಾರು 51 ಹಿಂದೂ ಕುಟುಂಬಗಳು ಛತ್ತೀಸ್ ಗಡದಲ್ಲಿ ನೆಲೆಸಿದ್ದವು. ಇದನ್ನು ಮನಗಂಡ ಸರ್ಕಾರ ನಾಗರಿಕತ್ವ ನೀಡಿದೆ. ಆದಾಗ್ಯೂ, ಈ ಹಿಂದೂ ಕುಟುಂಬಗಳ ರಕ್ಷಣೆ ಬಗ್ಗೆ ಯಾರೂ ಮಾತನಾಡದಿದ್ದರೂ, ಮಾಧ್ಯಮಗಳು ವರದಿ ಮಾಡದಿದ್ದರೂ ಹಿಂದೂಗಳ ರಕ್ಷಣೆಗೆ ಮುಂದಾಗಿದ್ದು ಕೇಂದ್ರ ಸರ್ಕಾರದ ಹೆಗ್ಗಳಿಕೆಯೇ ಸರಿ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search