• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಕ್ಸಲ್ ಪೀಡಿತ ಮಕ್ಕಳ ಕೈಗೆ ಗನ್ನಿನ ಬದಲಾಗಿ ಪೆನ್ನು ಕೊಡುತ್ತಿರುವ ಯೋಧರಿಗೊಂದು ಸೆಲ್ಯೂಟ್

TNN Correspondent Posted On April 6, 2018


  • Share On Facebook
  • Tweet It

ರಾಯಪುರ: ಅದು ಜಮ್ಮು-ಕಾಶ್ಮೀರದ ಗಡಿ ಇರಲಿ, ನಕ್ಸಲರ ಉಪಟಳ ಜಾಸ್ತಿ ಇರುವ ಯಾವುದೇ ದಟ್ಟಾರಣ್ಯ ಇರಲಿ, ಅಲ್ಲೆಲ್ಲ ವೈರಿಗಳಿಂದ ದೇಶವನ್ನು ರಕ್ಷಿಸಲು, ಅವರನ್ನು ಸದೆಬಡಿಯುವಲ್ಲಿ ಕೇಂದ್ರೀಯ ಸಶಸ್ತ್ರ ಮೀಸಲು ಪಡೆ (ಸಿಆರ್ ಪಿಎಫ್) ಯೋಧರ ಪಾತ್ರ ಮಹತ್ತರವಾದುದು.

ಹೀಗೆ ಗಡಿಯಲ್ಲಿ, ಅರಣ್ಯದಲ್ಲಿ ದುಷ್ಟಶಕ್ತಿಗಳ ಸದೆಬಡೆಯುವ ಯೋಧರು ಮತ್ತೊಂದು ಸಾರ್ಥಕ ಕೆಲಸ ಮಾಡುತ್ತಿದ್ದು, ಛತ್ತೀಸ್ ಗಡದ ನಕ್ಸಲ್ ಪೀಡಿತ ಪ್ರದೇಶದ ಮಕ್ಕಳಿಗೆ ಉಚಿತವಾಗಿ ತರಗತಿ ತೆಗೆದುಕೊಳ್ಳುವ ಮೂಲಕ ತಾವು ಬರೀ ದುಷ್ಟಶಕ್ತಿಗಳ ಸಂಹಾರ ಮಾಡುವವರಲ್ಲ, ಬದಲಿಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಹೆಮ್ಮೆಯ ಯೋಧರು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಹೌದು, ಗಂಗಾಲೂರ್ ಮತ್ತು ಬಿಜಾಪುರ್ ಪ್ರದೇಶದಲ್ಲಿ ಸುಮಾರು 50 ಮಕ್ಕಳು ಮಾವೋವಾದಿಗಳ ಗುಂಪು ಸೇರಿದ್ದಾರೆ ಎಂದು ತಿಳಿದುಬಂದಿದ್ದು, ಅವರಿಗೆ ಗನ್ನಿನ ಬದಲು ಪೆನ್ನು ನೀಡಿ, ಅವರನ್ನೂ ಸಾಕ್ಷರರನ್ನಾಗಿ ಮಾಡುತ್ತಿದ್ದಾರೆ ನಮ್ಮ ವೀರ ಯೋಧರು.

ಬಿಜಾಪುರ ಜಿಲ್ಲೆಯ ಬಸ್ತಾರ್ ವಿಭಾಗದ ಸಿಆರ್ ಪಿಎಫ್ ಯೋಧರು, ಈ 50 ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಗತಿ ತೆಗೆದುಕೊಳ್ಳುವ ಮೂಲಕ ಸಾಕ್ಷರರನ್ನಾಗಿ ಮಾಡುತ್ತಿದ್ದು, ಶಿಕ್ಷಣ, ಮೌಲ್ಯ ಒದಗಿಸುವ ಮೂಲಕ ಅವರನ್ನು ನಾಗರಿಕ ಸಮಾಜಕ್ಕೆ ಕರೆತರುತ್ತಿರುವುದು ಶ್ಲಾಘನೀಯವಾಗಿದೆ.

ಈ ಕುರಿತು ಕಮಾಂಡಂಟ್ ಸುಧೀರ್ ಕುಮಾರ್ ಪ್ರತಿಕ್ರಿಯಿಸಿದ್ದು, ವಾರದಲ್ಲಿ ಐದರಿಂದ ಆರು ದಿನ ದಿನಾಲೂ ಒಂದರಿಂದ ಎರಡು ತಾಸು ಮರದ ಬುಡದಲ್ಲಿ ಮಕ್ಕಳಿಗೆ ವಿಶೇಷ ತರಗತಿ ತೆಗೆದುಕೊಳ್ಳಲಾಗುತ್ತಿದೆ. ನಮ್ಮ ಯೋಧರ ಗುಂಪಿನಲ್ಲಿ ಅವಿನಾಶ್ ರೈ ಎಂಬುವರು ಬಿ.ಎಡ್ ಮುಗಿಸಿದ್ದು, ಅವರೇ ಜಾಸ್ತಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬಂದೂಕಿನ ನಳಿಕೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟುವುದಿಲ್ಲ ಎಂಬ ಮಾತಿದೆ, ಆದರೆ ಅಂತಹ ಬಂದೂಕು ಕಿತ್ತೆಸೆದು ಪೆನ್ನು ಕೊಟ್ಟರೆ ಖಂಡಿತವಾಗಿಯೂ ಮಕ್ಕಳು ಎಂಬ ಗುಬ್ಬಚ್ಚಿಗಳು ಸ್ವಚ್ಛಂದ ಸಮಾಜದಲ್ಲಿ ಗೂಡು ಕಟ್ಟಬಹುದು ಎಂಬುದನ್ನು ಸಿಆರ್ ಪಿಎಫ್ ಯೋಧರು ತೋರಿಸಿಕೊಟ್ಟಿದ್ದಾರೆ. ಇಂತಹ ಹೆಮ್ಮೆಯ ಯೋಧರಿಗೊಂದು ಸೆಲ್ಯೂಟ್.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search