• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನಕ್ಸಲ್ ಪೀಡಿತ ಮಕ್ಕಳ ಕೈಗೆ ಗನ್ನಿನ ಬದಲಾಗಿ ಪೆನ್ನು ಕೊಡುತ್ತಿರುವ ಯೋಧರಿಗೊಂದು ಸೆಲ್ಯೂಟ್

TNN Correspondent Posted On April 6, 2018
0


0
Shares
  • Share On Facebook
  • Tweet It

ರಾಯಪುರ: ಅದು ಜಮ್ಮು-ಕಾಶ್ಮೀರದ ಗಡಿ ಇರಲಿ, ನಕ್ಸಲರ ಉಪಟಳ ಜಾಸ್ತಿ ಇರುವ ಯಾವುದೇ ದಟ್ಟಾರಣ್ಯ ಇರಲಿ, ಅಲ್ಲೆಲ್ಲ ವೈರಿಗಳಿಂದ ದೇಶವನ್ನು ರಕ್ಷಿಸಲು, ಅವರನ್ನು ಸದೆಬಡಿಯುವಲ್ಲಿ ಕೇಂದ್ರೀಯ ಸಶಸ್ತ್ರ ಮೀಸಲು ಪಡೆ (ಸಿಆರ್ ಪಿಎಫ್) ಯೋಧರ ಪಾತ್ರ ಮಹತ್ತರವಾದುದು.

ಹೀಗೆ ಗಡಿಯಲ್ಲಿ, ಅರಣ್ಯದಲ್ಲಿ ದುಷ್ಟಶಕ್ತಿಗಳ ಸದೆಬಡೆಯುವ ಯೋಧರು ಮತ್ತೊಂದು ಸಾರ್ಥಕ ಕೆಲಸ ಮಾಡುತ್ತಿದ್ದು, ಛತ್ತೀಸ್ ಗಡದ ನಕ್ಸಲ್ ಪೀಡಿತ ಪ್ರದೇಶದ ಮಕ್ಕಳಿಗೆ ಉಚಿತವಾಗಿ ತರಗತಿ ತೆಗೆದುಕೊಳ್ಳುವ ಮೂಲಕ ತಾವು ಬರೀ ದುಷ್ಟಶಕ್ತಿಗಳ ಸಂಹಾರ ಮಾಡುವವರಲ್ಲ, ಬದಲಿಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಹೆಮ್ಮೆಯ ಯೋಧರು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಹೌದು, ಗಂಗಾಲೂರ್ ಮತ್ತು ಬಿಜಾಪುರ್ ಪ್ರದೇಶದಲ್ಲಿ ಸುಮಾರು 50 ಮಕ್ಕಳು ಮಾವೋವಾದಿಗಳ ಗುಂಪು ಸೇರಿದ್ದಾರೆ ಎಂದು ತಿಳಿದುಬಂದಿದ್ದು, ಅವರಿಗೆ ಗನ್ನಿನ ಬದಲು ಪೆನ್ನು ನೀಡಿ, ಅವರನ್ನೂ ಸಾಕ್ಷರರನ್ನಾಗಿ ಮಾಡುತ್ತಿದ್ದಾರೆ ನಮ್ಮ ವೀರ ಯೋಧರು.

ಬಿಜಾಪುರ ಜಿಲ್ಲೆಯ ಬಸ್ತಾರ್ ವಿಭಾಗದ ಸಿಆರ್ ಪಿಎಫ್ ಯೋಧರು, ಈ 50 ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಗತಿ ತೆಗೆದುಕೊಳ್ಳುವ ಮೂಲಕ ಸಾಕ್ಷರರನ್ನಾಗಿ ಮಾಡುತ್ತಿದ್ದು, ಶಿಕ್ಷಣ, ಮೌಲ್ಯ ಒದಗಿಸುವ ಮೂಲಕ ಅವರನ್ನು ನಾಗರಿಕ ಸಮಾಜಕ್ಕೆ ಕರೆತರುತ್ತಿರುವುದು ಶ್ಲಾಘನೀಯವಾಗಿದೆ.

ಈ ಕುರಿತು ಕಮಾಂಡಂಟ್ ಸುಧೀರ್ ಕುಮಾರ್ ಪ್ರತಿಕ್ರಿಯಿಸಿದ್ದು, ವಾರದಲ್ಲಿ ಐದರಿಂದ ಆರು ದಿನ ದಿನಾಲೂ ಒಂದರಿಂದ ಎರಡು ತಾಸು ಮರದ ಬುಡದಲ್ಲಿ ಮಕ್ಕಳಿಗೆ ವಿಶೇಷ ತರಗತಿ ತೆಗೆದುಕೊಳ್ಳಲಾಗುತ್ತಿದೆ. ನಮ್ಮ ಯೋಧರ ಗುಂಪಿನಲ್ಲಿ ಅವಿನಾಶ್ ರೈ ಎಂಬುವರು ಬಿ.ಎಡ್ ಮುಗಿಸಿದ್ದು, ಅವರೇ ಜಾಸ್ತಿ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬಂದೂಕಿನ ನಳಿಕೆಯಲ್ಲಿ ಗುಬ್ಬಚ್ಚಿ ಗೂಡು ಕಟ್ಟುವುದಿಲ್ಲ ಎಂಬ ಮಾತಿದೆ, ಆದರೆ ಅಂತಹ ಬಂದೂಕು ಕಿತ್ತೆಸೆದು ಪೆನ್ನು ಕೊಟ್ಟರೆ ಖಂಡಿತವಾಗಿಯೂ ಮಕ್ಕಳು ಎಂಬ ಗುಬ್ಬಚ್ಚಿಗಳು ಸ್ವಚ್ಛಂದ ಸಮಾಜದಲ್ಲಿ ಗೂಡು ಕಟ್ಟಬಹುದು ಎಂಬುದನ್ನು ಸಿಆರ್ ಪಿಎಫ್ ಯೋಧರು ತೋರಿಸಿಕೊಟ್ಟಿದ್ದಾರೆ. ಇಂತಹ ಹೆಮ್ಮೆಯ ಯೋಧರಿಗೊಂದು ಸೆಲ್ಯೂಟ್.

0
Shares
  • Share On Facebook
  • Tweet It




Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Tulunadu News December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Tulunadu News December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search