• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಚೀನಾ ಗೂಡು ದೀಪಕ್ಕೆ‌ ಹೇಳಿ ಗುಡ್ ಬೈ…!! ನಮ್ಮಲ್ಲಿ ಇದೆ ಸ್ವದೇಶಿ ಗೂಡು ದೀಪ..!!

TNN Correspondent Posted On November 5, 2018


  • Share On Facebook
  • Tweet It

ಮಂಗಳೂರು-ಇನ್ಮುಂದೆ ಚೀನಾದ ಆಕಾಶ ಬುಟ್ಟಿಗೆ ಗುಡ್ ಬೈ.. ಬಾಲಾಪರಾಧಿಗಳನ್ನು ಬಳಸಿಕೊಂಡು ಸ್ವದೇಶಿ ನಿರ್ಮಿತ ಆಕಾಶ ಬುಟ್ಟಿ ನಮ್ಮಲ್ಲೇ ತಯಾರು!!

ದೀಪಗಳ ಹಬ್ಬ ದೀಪಾವಳಿಗೆ ಇನ್ನೇನೂ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದ್ದು, ಎಲ್ಲರ ಮನೆಯನ್ನೂ ಬೆಳಗಿಸಲೂ ಇದೀಗ ಸ್ವದೇಶಿ ನಿರ್ಮಿತ ಆಕಾಶ ಬುಟ್ಟಿಗಳು ವಿಶಿಷ್ಟ ಚಿತ್ತಾರದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮನೆಯಲ್ಲೆ ತಯಾರಿಸಬಹುದಾದ ಈ ಆಕಾಶ ಬುಟ್ಟಿಯನ್ನು ನಾವು ಇಲ್ಲಿಯವೆರೆಗೆ ಚೀನಾದಿಂದ ಖರೀದಿ ಮಾಡಿಕೊಳ್ಳಬಹುದಾದ ಪರಿಸ್ಥಿತಿ ಬಂದೊಂದಗಿತ್ತು!! ಆದರೆ ಈ ಬಾರಿ ಚೀನಾದ ಆಕಾಶ ಬುಟ್ಟಿಗೆ ಗುಡ್ ಬೈ ಹೇಳುವ ಸಂದರ್ಭ ಬಂದಿದ್ದು ಸಮರ್ಪಣಾ ಟ್ರಸ್ಟ್‍ನಿಂದ ಮಾರುಕಟ್ಟೆಗೆ ಬಣ್ಣ ಬಣ್ಣದ ಆಕಾಶ ಬುಟ್ಟಿಗಳನ್ನು ಪರಿಚಯಿಸಿದ್ದಾರೆ. ಇಲ್ಲಿಯರೆಗೆ ಚೀನಾದ ಆಕಾಶ ಬುಟ್ಟಿಗಳಿಂದ ಮಿನುಗುತ್ತಿದ್ದ ನಮ್ಮ ಮನೆಗಳೆಲ್ಲಾ ಈ ಬಾರಿ ಸ್ವದೇಶಿ ನಿರ್ಮಿತ ಆಕಾಶ ಬುಟ್ಟಿಗಳಿಂದ ಜಗಮಗಿಸಲಿದ್ದು ಇದಕ್ಕೆ ಬಾಲಾಪರಾದಿಗಳನ್ನು ಬಳಸಿಕೊಳ್ಳಲಾಗಿದೆ ಎಂಬುವುದೇ ವಿಶೇಷ. ಇಂತಹ ಮಕ್ಕಳಿಗೆ ದೀಪಾಳಿಯ ಸುಸಂದರ್ಭದಲ್ಲಿ ಹೊಸ ಜೀವನ ರೂಪಿಸಲು ಅವಕಾಶಕೊಟ್ಟಂತಾಗಿದೆ.

ಚೀನಾದಿಂದ ಬರುವ ಗೂಡು ದೀಪಗಳಿಗೆ ಲೆಕ್ಕವಿಲ್ಲದಷ್ಟು ವಿನ್ಯಾಸದ ವಿವಿಧ ಬಣ್ಣ, ಆಕಾರಗಳಲ್ಲಿ ಸಿಗುವ ಗೂಡು ದೀಪಗಳು ಅನೇಕರ ಆಕರ್ಷಣೆಯಾಗಿತ್ತು. ಆದರೆ ಈ ಬಾರಿ ಇಲ್ಲಿ ತಯಾರಿಸಿದ ಪ್ರತಿ ಲ್ಯಾಂಟರ್ನ್‍ಗಳನ್ನು 36 ಕಡ್ಡಿ ಹಾಗೂ ವರ್ಣರಂಜಿತ ಬಟ್ಟೆಗಳಿಂದ ಇದನ್ನು ತಯಾರಿಸಲಾಗಿದ್ದು ಇದರ ವೆಚ್ಚ ಕೇವಲ 300 ರೂಪಾಯಿ ಮಾತ್ರ. ಚೀನಾದ ಆಕಾಶ ದೀಪಕ್ಕೆ ಗುಡ್‍ಬೈ ಹೇಳುತ್ತಾ 100% ಶುದ್ಧ ಭಾರತೀಯರು ಮಾಡಿದ ಆಕಾಶ ದೀಪವನ್ನು ಮನೆಯಲ್ಲಿ ಬೆಳಗಲು ಮುಂದಾಗಿ ಈ ಬಾರಿಯ ದೀಪದ ಹಬ್ಬವನ್ನು ಮತ್ತಷ್ಟು ವರ್ಣರಂಜಿತವಾಗಿಸೋಣ. ಇದೀಗ ಇಂತಹ ವಿಶಿಷ್ಟ ಆಕಾಶ ಬುಟ್ಟಿಗಳು ಮಂಗಳೂರಿನಲ್ಲಿರುವ ವಿವೇಕ್ ಟ್ರೇಡರ್ಸ್, ಮಂಗಳೂರು ಧ್ವನಂತರಿ ನಗರ, ವಿಟೋಬ ದೇವಸ್ಥಾನ ರಸ್ತೆ ಇಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9008416493

  • Share On Facebook
  • Tweet It


- Advertisement -
mangaloremangalorefans


Trending Now
ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
Tulunadu News May 31, 2023
ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
Tulunadu News May 30, 2023
You may also like
ಗೋಡೆಯಲ್ಲಿ ಬರೆದಾಗಲೇ ಕೈಕಾಲು ಮುರಿಯಬೇಕಿತ್ತು!!
September 22, 2022
ಸಿದ್ಧಾಂತದ ಮೇಲೆ ಭಾಷಣ ಮಾಡುವುದೆಂದರೆ ಟೆಂಟ್ ನಲ್ಲಿ ಗಿಡಮೂಲಿಕೆ ಮಾರುವುದಲ್ಲ!!
December 7, 2018
ಕಲಿಯುಗದ ಶ್ರವಣಕುಮಾರ..!
December 3, 2018
Leave A Reply

  • Recent Posts

    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
  • Popular Posts

    • 1
      ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • 2
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 3
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 4
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 5
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search