• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಎಡಿಬಿ-2 ರಲ್ಲಿ 739 ಕೋಟಿ ಬರಲು ಇದೆ. ಕೆಲಸ ಸರಿಯಾದರೆ ಬಿಜೆಪಿ ಬಚಾವ್, ಇಲ್ಲದಿದ್ದರೆ….!

Hanumantha Kamath Posted On August 26, 2020
0


0
Shares
  • Share On Facebook
  • Tweet It

ಸ್ಮಾರ್ಟ್ ಸಿಟಿಯ ಕರ್ಮವನ್ನು ಮೊನ್ನೆ ಬರೆದಾಗ ಕೊನೆಯಲ್ಲಿಯೇ ಹೇಳಿದ್ದೆ. ಇನ್ನೆರಡು ಬರೆಯಲು ಇದೆ. ಅದರಲ್ಲಿ ಎರಡನೇಯದ್ದು ಎಡಿಬಿ-2. ಏಶಿಯನ್ ಡೆವಲಪಮೆಂಟ್ ಬ್ಯಾಂಕ್ ನ ಎರಡನೇ ಕಂತಿನ ಸಾಲ ಸುಮಾರು 739 ಕೋಟಿ ಬರಲಿದೆ. ಮೊದಲ ಕಂತಿನಲ್ಲಿ ಬಂದ ಕೋಟ್ಯಾಂತರ ರೂಪಾಯಿಯಲ್ಲಿ ಎಷ್ಟು ಚಿಲ್ಲರೆ ಕೆಲಸ ಆಗಿದೆ ಎನ್ನುವುದನ್ನು ನಾನು ಈ ಮೊದಲೇ ಬರೆದಿದ್ದೇನೆ. ಈಗ ಎರಡನೇಯ ಕಂತು ಪಾಲಿಕೆಯ ಮುಂದೆ ಬರುವಾಗ ಇಲ್ಲಿ ಪಾಲಿಕೆಯಲ್ಲಿಯೂ ಭಾರತೀಯ ಜನತಾ ಪಾರ್ಟಿಯ ಸರಕಾರ ಇದೆ. ಅದೇ ರೀತಿಯಲ್ಲಿ ಮಂಗಳೂರು ನಗರ ದಕ್ಷಿಣ ಹಾಗೂ ಉತ್ತರದಲ್ಲಿ ಎರಡರಲ್ಲಿಯೂ ಬಿಜೆಪಿ ಶಾಸಕರು ಇದ್ದಾರೆ. ಕಾಂಗ್ರೆಸ್ ಇದ್ದಾಗ ಆರೋಪ ಮಾಡುವುದು ಸುಲಭ. ಈಗ ಕೈಯಲ್ಲಿ ಜನ ಅಧಿಕಾರ ಕೊಟ್ಟು ನೋಡುತ್ತಿದ್ದಾರೆ. ಈಗ ಎಡಿಬಿ 739 ಕೋಟಿ ಹೇಗೆ ಸದ್ಭಳಕೆಯಾಗುತ್ತದೆ ಎನ್ನುವುದರ ಮೇಲೆ ಎರಡೂವರೆ ವರ್ಷಗಳ ನಂತರ ಬರುವ ವಿಧಾನಸಭಾ ಚುನಾವಣೆಯ ಮೇಲೆ ಅದು ವಿಷಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪಾಲಿಕೆ, ವಿವಿಧ ಇಲಾಖೆ ಮತ್ತು ಶಾಸಕರ ಕಚೇರಿಗಳ ನಡುವೆ ಸೂಕ್ತ ಸಂವಹನ ಆಗಲೇಬೇಕು. ಏಕೆಂದರೆ ಪಾಲಿಕೆಗೂ ನೀರಿನ ಸಮಸ್ಯೆ ಸರಾಗವಾಗಿ ಪರಿಹಾರವಾಗಲು ಕೋಟಿಗಟ್ಟಲೆ ಅನುದಾನ ಬಿಡುಗಡೆಯಾಗುತ್ತದೆ. ಅದು ಯಾವುದಕ್ಕೆ ಸಮರ್ಪಕವಾಗಿ ಬಳಕೆಯಾಗುತ್ತದೆ ಎನ್ನುವುದನ್ನು ಕೂಡ ನೋಡಬೇಕು. ಇದು ನಾನು ಸುಮ್ಮನೆ ಬರೆಯುತ್ತಿಲ್ಲ. ದಾಖಲೆಯೊಂದಿಗೆ ಬರೆಯುತ್ತಿದ್ದೇನೆ. ಇತ್ತೀಚೆಗೆ ಪಾಲಿಕೆಯ ಜಂಟಿ ಆಯುಕ್ತ ಸಂತೋಷ ಕುಮಾರ್ ಅವರು ನೀರಿನ ಕಾಮಗಾರಿ ಎಂದು ನಾಲ್ಕೂವರೆ ಕೋಟಿ ರೂಪಾಯಿಯನ್ನು ಮಂಜೂರು ಮಾಡಿದ್ದಾರೆ. ಮೊದಲನೇಯದಾಗಿ ಅವರಿಗೆ ಹಾಗೆ ಹಣ ಮಂಜೂರು ಮಾಡಲು ಯಾವುದೇ ಅಧಿಕಾರ ಇಲ್ಲ. ಅದು ಅಲ್ಲದೇ ಆಯುಕ್ತರ ರಜಾದಿನದಂದು ಯಾವುದೇ ಅಂದಾಜುಪಟ್ಟಿ ಇಲ್ಲದೆ ಮಂಜೂರಾತಿಗೊಳಿಸಲು ಅಧಿಕಾರ ಇಲ್ಲ ಎಂದು ಅವರಿಗೆ ಗೊತ್ತಿರಬೇಕಿತ್ತು. ಅದು ಬಿಟ್ಟು ಹೀಗೆ ಬೇಕಾಬಿಟ್ಟಿ ಹಣ ಮಂಜೂರು ಮಾಡುವುದು ಎಷ್ಟು ಸರಿ. ಎರಡನೇಯದಾಗಿ ಅದು ಅಗತ್ಯವೂ ಅಲ್ಲ. ಇದನ್ನೆಲ್ಲ ನೋಡಬೇಕಾದವರು ಯಾರು? ಮಾತನಾಡಿದರೆ ನನಗೆ ಟೆಕ್ನಿಕಲ್ ನಾಲ್ಡೆಜ್ ಇಲ್ಲ ಎನ್ನುವವರು ಈಗ ಹೊಸದಾಗಿ ಹುಟ್ಟಿಕೊಂಡಿದ್ದಾರೆ. ಒಂದು ವೇಳೆ ಹಾಗೆ ಟೆಕ್ನಿಕಲ್ ಜ್ಞಾನ ಇಲ್ಲದಿದ್ದರೆ ಗೊತ್ತಿದ್ದವರ ಕೇಳಿ ಬರೆದು ಅದನ್ನು ಮನನ ಮಾಡಿಕೊಂಡು ಸಭೆಗಳಲ್ಲಿ ಯಾರ ಎದುರು ಕೂಡ ಮಾತನಾಡುವಷ್ಟು ಸಾಮರ್ತ್ಯ ಕಳೆದ 30 ವರ್ಷಗಳಲ್ಲಿ ಬೆಳೆಸಿಕೊಂಡಿದ್ದೇನೆ. ಅಷ್ಟಕ್ಕೂ ನಾನು ಸಭೆಗಳಲ್ಲಿ ಮಾತನಾಡುವುದು ನನ್ನ ಲಾಭಕ್ಕಾಗಿ ಅಲ್ಲ. ಜನರ ತೆರಿಗೆಯ ಹಣ ಪೋಲಾಗಬಾರದು ಎನ್ನುವ ಕಾರಣಕ್ಕೆ. ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲಾ ವಿಷಯಗಳಲ್ಲಿ ನಾವು ಒಂದೇ ಎಂದು ಸಾಬೀತು ಮಾಡುತ್ತಾ ಹೋದರೆ ನಾನು ಮಾತನಾಡಲು, ಬರೆಯಲು ಹಿಂಜರಿಯುವ ಪ್ರಶ್ನೆನೆ ಇಲ್ಲ.

 ಮೊದಲಿಗೆ ಇಷ್ಟು ದೊಡ್ಡ ಮೊತ್ತ ಉಪಯೋಗವಾಗುವಾಗ ಡಿಪಿಆರ್ ಅಂತಿಮವಾಗಲೇಬೇಕು. ಅಧಿಕಾರಿಗಳನ್ನು ಕುಳ್ಳಿರಿಸಿ ಅದನ್ನು ಮಾಡಲೇಬೇಕು. ಎಡಿಬಿ-2 ಇದು ಕೂಡ ಸಮಗ್ರ ಕುಡಿಯುವ ನೀರಿನ ಯೋಜನೆ. ಎಡಿಬಿ ಒಂದರಲ್ಲಿ ವಿಫಲವಾದದ್ದನ್ನು ಸೇರಿಸಿ ಇಲ್ಲಿ ಎಡಿಬಿ-2 ಸರಿಮಾಡಬೇಕಾಗುತ್ತದೆ. ಪಾಲಿಕೆಯ ವ್ಯಾಪ್ತಿಯಲ್ಲಿ 24*7 ಸಮಗ್ರ ಕುಡಿಯುವ ನೀರಿನ ಯೋಜನೆ ಈ ಬಾರಿ ಎಡಿಬಿ-2 ನಲ್ಲಿ ಆಗಲೇಬೇಕಿದೆ. ಎಲ್ಲರಿಗೂ ಗೊತ್ತಿರುವಂತೆ ತುಂಬೆಯಿಂದ ನೀರು ಪಂಪ್ ಆಗಿ ಮಂಗಳೂರು ನಗರಕ್ಕೆ ಬರುವಾಗ 35% ರಿಂದ 40% ತನಕ ನೀರು ಪೋಲಾಗುತ್ತಿರುವುದು ನಿಜ. ಇನ್ನು ಹಾಗೆ ಆಗಬಾರದು. ಮೊದಲನೇಯದಾಗಿ ತುಂಬೆಯಲ್ಲಿ ಮೀಟರ್ ಅಳವಡಿಸಲಾಗುತ್ತದೆ. ಇದರಿಂದ ಎಷ್ಟು ನೀರು ಪಂಪ್ ಮಾಡಲಾಗುತ್ತದೆ ಎನ್ನುವ ನಿಖರ ಅಂಶ ಗೊತ್ತಾಗುತ್ತದೆ. ಅಲ್ಲಿಂದ ಪಡೀಲ್ ಮತ್ತು ಬೆಂದೂರ್ ವೆಲ್ ಗೆ ಎಷ್ಟು ನೀರು ಬಂದು ಮುಟ್ಟುತ್ತದೆ ಎನ್ನುವುದು ಗೊತ್ತಾಗುತ್ತದೆ. ಅಲ್ಲಿಂದ ಲಾಲ್ ಭಾಗ್ ಮತ್ತು ಟೌನ್ ಹಾಲ್ ವಾಟರ್ ಟ್ಯಾಂಕ್ ಗೆ ಎಷ್ಟು ನೀರು ಬರುತ್ತದೆ ಎನ್ನುವುದು ಕೂಡ ಲೆಕ್ಕ ಸಿಗುತ್ತದೆ. ಎಡಿಬಿ-1 ಲೈನ್ ನಲ್ಲಿ ನೀರು ಕಳ್ಳತನ ಆಗುತ್ತದೆ. ಅಷ್ಟೇ ಅಲ್ಲದೆ ಎಡಿಬಿ-1 ಲೈನ್ ನಲ್ಲಿ ಕನಿಷ್ಟ 2 ಎಂಜಿಡಿ ನೀರು ತುಂಬೆಯಿಂದ ಗ್ರಾಮಾಂತರ ಪ್ರದೇಶಗಳನ್ನು ದಾಟಿ ಮಂಗಳೂರು ನಗರದ ಗಡಿಯನ್ನು ಪ್ರವೇಶಿಸುವಾಗ ಕಳ್ಳತನ ಮತ್ತು ಪೋಲಾಗಿಯೂ ಹೋಗುತ್ತದೆ. ಇನ್ನು ಎಡಿಬಿ-2 ನಲ್ಲಿ ನೀರು ಹೋಗುವಾಗ ಅದರಲ್ಲಿ ಸೋರಿಕೆ ಆಗುವುದಿಲ್ಲ. ಎಡಿಬಿ-1 ಪೈಪ್ ಲೈನ್ ನಲ್ಲಿ ಬರುವ ನೀರನ್ನು ಗ್ರಾಮಾಂತರ ಪ್ರದೇಶಗಳಲ್ಲಿ ತೆಗೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಇನ್ನು ಮನೆಮನೆಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಎಡಿಬಿ-2 ಇದರ ಗುತ್ತಿಗೆದಾರರಿಗೆ ಇದರ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗಿದೆ. ಅವರು ಇದನ್ನು ಪ್ರಾರಂಭಿಸಿದ್ದಾರೆ. ಈಗಾಗಲೇ ಅನೇಕ ವಾರ್ಡುಗಳಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ಸ್ಮಾರ್ಟ್ ಮೀಟರ್ ಹಾಕಿದ ಏಳು ವರ್ಷಗಳ ತನಕ ಅದರ ಸಂಪೂರ್ಣ ಮೇಲ್ವಿಚಾರಣೆಯನ್ನು ಆ ಗುತ್ತಿಗೆದಾರರೇ ನಿರ್ವಹಿಸಬೇಕು. ಆದರೆ ಪಾಲಿಕೆಯೊಳಗಿನ ಒಂದು ಶಕ್ತಿ ಈ ಗುತ್ತಿಗೆದಾರರಿಗೆ ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಆ ಲಾಬಿ ಯಾವುದು? ಅವರು ಯಾಕೆ ಬಿಡಲ್ಲ? ಅವರಿಗೇನು ಲಾಭ? ಅದನ್ನು ತಡೆಯುವುದು ಹೇಗೆ? ಎಲ್ಲವನ್ನು ನಾಳೆ ಹೇಳುತ್ತೇನೆ!
0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Hanumantha Kamath September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Hanumantha Kamath September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search