• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಎಡಿಬಿ-2 ರಲ್ಲಿ 739 ಕೋಟಿ ಬರಲು ಇದೆ. ಕೆಲಸ ಸರಿಯಾದರೆ ಬಿಜೆಪಿ ಬಚಾವ್, ಇಲ್ಲದಿದ್ದರೆ….!

Hanumantha Kamath Posted On August 26, 2020


  • Share On Facebook
  • Tweet It

ಸ್ಮಾರ್ಟ್ ಸಿಟಿಯ ಕರ್ಮವನ್ನು ಮೊನ್ನೆ ಬರೆದಾಗ ಕೊನೆಯಲ್ಲಿಯೇ ಹೇಳಿದ್ದೆ. ಇನ್ನೆರಡು ಬರೆಯಲು ಇದೆ. ಅದರಲ್ಲಿ ಎರಡನೇಯದ್ದು ಎಡಿಬಿ-2. ಏಶಿಯನ್ ಡೆವಲಪಮೆಂಟ್ ಬ್ಯಾಂಕ್ ನ ಎರಡನೇ ಕಂತಿನ ಸಾಲ ಸುಮಾರು 739 ಕೋಟಿ ಬರಲಿದೆ. ಮೊದಲ ಕಂತಿನಲ್ಲಿ ಬಂದ ಕೋಟ್ಯಾಂತರ ರೂಪಾಯಿಯಲ್ಲಿ ಎಷ್ಟು ಚಿಲ್ಲರೆ ಕೆಲಸ ಆಗಿದೆ ಎನ್ನುವುದನ್ನು ನಾನು ಈ ಮೊದಲೇ ಬರೆದಿದ್ದೇನೆ. ಈಗ ಎರಡನೇಯ ಕಂತು ಪಾಲಿಕೆಯ ಮುಂದೆ ಬರುವಾಗ ಇಲ್ಲಿ ಪಾಲಿಕೆಯಲ್ಲಿಯೂ ಭಾರತೀಯ ಜನತಾ ಪಾರ್ಟಿಯ ಸರಕಾರ ಇದೆ. ಅದೇ ರೀತಿಯಲ್ಲಿ ಮಂಗಳೂರು ನಗರ ದಕ್ಷಿಣ ಹಾಗೂ ಉತ್ತರದಲ್ಲಿ ಎರಡರಲ್ಲಿಯೂ ಬಿಜೆಪಿ ಶಾಸಕರು ಇದ್ದಾರೆ. ಕಾಂಗ್ರೆಸ್ ಇದ್ದಾಗ ಆರೋಪ ಮಾಡುವುದು ಸುಲಭ. ಈಗ ಕೈಯಲ್ಲಿ ಜನ ಅಧಿಕಾರ ಕೊಟ್ಟು ನೋಡುತ್ತಿದ್ದಾರೆ. ಈಗ ಎಡಿಬಿ 739 ಕೋಟಿ ಹೇಗೆ ಸದ್ಭಳಕೆಯಾಗುತ್ತದೆ ಎನ್ನುವುದರ ಮೇಲೆ ಎರಡೂವರೆ ವರ್ಷಗಳ ನಂತರ ಬರುವ ವಿಧಾನಸಭಾ ಚುನಾವಣೆಯ ಮೇಲೆ ಅದು ವಿಷಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪಾಲಿಕೆ, ವಿವಿಧ ಇಲಾಖೆ ಮತ್ತು ಶಾಸಕರ ಕಚೇರಿಗಳ ನಡುವೆ ಸೂಕ್ತ ಸಂವಹನ ಆಗಲೇಬೇಕು. ಏಕೆಂದರೆ ಪಾಲಿಕೆಗೂ ನೀರಿನ ಸಮಸ್ಯೆ ಸರಾಗವಾಗಿ ಪರಿಹಾರವಾಗಲು ಕೋಟಿಗಟ್ಟಲೆ ಅನುದಾನ ಬಿಡುಗಡೆಯಾಗುತ್ತದೆ. ಅದು ಯಾವುದಕ್ಕೆ ಸಮರ್ಪಕವಾಗಿ ಬಳಕೆಯಾಗುತ್ತದೆ ಎನ್ನುವುದನ್ನು ಕೂಡ ನೋಡಬೇಕು. ಇದು ನಾನು ಸುಮ್ಮನೆ ಬರೆಯುತ್ತಿಲ್ಲ. ದಾಖಲೆಯೊಂದಿಗೆ ಬರೆಯುತ್ತಿದ್ದೇನೆ. ಇತ್ತೀಚೆಗೆ ಪಾಲಿಕೆಯ ಜಂಟಿ ಆಯುಕ್ತ ಸಂತೋಷ ಕುಮಾರ್ ಅವರು ನೀರಿನ ಕಾಮಗಾರಿ ಎಂದು ನಾಲ್ಕೂವರೆ ಕೋಟಿ ರೂಪಾಯಿಯನ್ನು ಮಂಜೂರು ಮಾಡಿದ್ದಾರೆ. ಮೊದಲನೇಯದಾಗಿ ಅವರಿಗೆ ಹಾಗೆ ಹಣ ಮಂಜೂರು ಮಾಡಲು ಯಾವುದೇ ಅಧಿಕಾರ ಇಲ್ಲ. ಅದು ಅಲ್ಲದೇ ಆಯುಕ್ತರ ರಜಾದಿನದಂದು ಯಾವುದೇ ಅಂದಾಜುಪಟ್ಟಿ ಇಲ್ಲದೆ ಮಂಜೂರಾತಿಗೊಳಿಸಲು ಅಧಿಕಾರ ಇಲ್ಲ ಎಂದು ಅವರಿಗೆ ಗೊತ್ತಿರಬೇಕಿತ್ತು. ಅದು ಬಿಟ್ಟು ಹೀಗೆ ಬೇಕಾಬಿಟ್ಟಿ ಹಣ ಮಂಜೂರು ಮಾಡುವುದು ಎಷ್ಟು ಸರಿ. ಎರಡನೇಯದಾಗಿ ಅದು ಅಗತ್ಯವೂ ಅಲ್ಲ. ಇದನ್ನೆಲ್ಲ ನೋಡಬೇಕಾದವರು ಯಾರು? ಮಾತನಾಡಿದರೆ ನನಗೆ ಟೆಕ್ನಿಕಲ್ ನಾಲ್ಡೆಜ್ ಇಲ್ಲ ಎನ್ನುವವರು ಈಗ ಹೊಸದಾಗಿ ಹುಟ್ಟಿಕೊಂಡಿದ್ದಾರೆ. ಒಂದು ವೇಳೆ ಹಾಗೆ ಟೆಕ್ನಿಕಲ್ ಜ್ಞಾನ ಇಲ್ಲದಿದ್ದರೆ ಗೊತ್ತಿದ್ದವರ ಕೇಳಿ ಬರೆದು ಅದನ್ನು ಮನನ ಮಾಡಿಕೊಂಡು ಸಭೆಗಳಲ್ಲಿ ಯಾರ ಎದುರು ಕೂಡ ಮಾತನಾಡುವಷ್ಟು ಸಾಮರ್ತ್ಯ ಕಳೆದ 30 ವರ್ಷಗಳಲ್ಲಿ ಬೆಳೆಸಿಕೊಂಡಿದ್ದೇನೆ. ಅಷ್ಟಕ್ಕೂ ನಾನು ಸಭೆಗಳಲ್ಲಿ ಮಾತನಾಡುವುದು ನನ್ನ ಲಾಭಕ್ಕಾಗಿ ಅಲ್ಲ. ಜನರ ತೆರಿಗೆಯ ಹಣ ಪೋಲಾಗಬಾರದು ಎನ್ನುವ ಕಾರಣಕ್ಕೆ. ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲಾ ವಿಷಯಗಳಲ್ಲಿ ನಾವು ಒಂದೇ ಎಂದು ಸಾಬೀತು ಮಾಡುತ್ತಾ ಹೋದರೆ ನಾನು ಮಾತನಾಡಲು, ಬರೆಯಲು ಹಿಂಜರಿಯುವ ಪ್ರಶ್ನೆನೆ ಇಲ್ಲ.

 ಮೊದಲಿಗೆ ಇಷ್ಟು ದೊಡ್ಡ ಮೊತ್ತ ಉಪಯೋಗವಾಗುವಾಗ ಡಿಪಿಆರ್ ಅಂತಿಮವಾಗಲೇಬೇಕು. ಅಧಿಕಾರಿಗಳನ್ನು ಕುಳ್ಳಿರಿಸಿ ಅದನ್ನು ಮಾಡಲೇಬೇಕು. ಎಡಿಬಿ-2 ಇದು ಕೂಡ ಸಮಗ್ರ ಕುಡಿಯುವ ನೀರಿನ ಯೋಜನೆ. ಎಡಿಬಿ ಒಂದರಲ್ಲಿ ವಿಫಲವಾದದ್ದನ್ನು ಸೇರಿಸಿ ಇಲ್ಲಿ ಎಡಿಬಿ-2 ಸರಿಮಾಡಬೇಕಾಗುತ್ತದೆ. ಪಾಲಿಕೆಯ ವ್ಯಾಪ್ತಿಯಲ್ಲಿ 24*7 ಸಮಗ್ರ ಕುಡಿಯುವ ನೀರಿನ ಯೋಜನೆ ಈ ಬಾರಿ ಎಡಿಬಿ-2 ನಲ್ಲಿ ಆಗಲೇಬೇಕಿದೆ. ಎಲ್ಲರಿಗೂ ಗೊತ್ತಿರುವಂತೆ ತುಂಬೆಯಿಂದ ನೀರು ಪಂಪ್ ಆಗಿ ಮಂಗಳೂರು ನಗರಕ್ಕೆ ಬರುವಾಗ 35% ರಿಂದ 40% ತನಕ ನೀರು ಪೋಲಾಗುತ್ತಿರುವುದು ನಿಜ. ಇನ್ನು ಹಾಗೆ ಆಗಬಾರದು. ಮೊದಲನೇಯದಾಗಿ ತುಂಬೆಯಲ್ಲಿ ಮೀಟರ್ ಅಳವಡಿಸಲಾಗುತ್ತದೆ. ಇದರಿಂದ ಎಷ್ಟು ನೀರು ಪಂಪ್ ಮಾಡಲಾಗುತ್ತದೆ ಎನ್ನುವ ನಿಖರ ಅಂಶ ಗೊತ್ತಾಗುತ್ತದೆ. ಅಲ್ಲಿಂದ ಪಡೀಲ್ ಮತ್ತು ಬೆಂದೂರ್ ವೆಲ್ ಗೆ ಎಷ್ಟು ನೀರು ಬಂದು ಮುಟ್ಟುತ್ತದೆ ಎನ್ನುವುದು ಗೊತ್ತಾಗುತ್ತದೆ. ಅಲ್ಲಿಂದ ಲಾಲ್ ಭಾಗ್ ಮತ್ತು ಟೌನ್ ಹಾಲ್ ವಾಟರ್ ಟ್ಯಾಂಕ್ ಗೆ ಎಷ್ಟು ನೀರು ಬರುತ್ತದೆ ಎನ್ನುವುದು ಕೂಡ ಲೆಕ್ಕ ಸಿಗುತ್ತದೆ. ಎಡಿಬಿ-1 ಲೈನ್ ನಲ್ಲಿ ನೀರು ಕಳ್ಳತನ ಆಗುತ್ತದೆ. ಅಷ್ಟೇ ಅಲ್ಲದೆ ಎಡಿಬಿ-1 ಲೈನ್ ನಲ್ಲಿ ಕನಿಷ್ಟ 2 ಎಂಜಿಡಿ ನೀರು ತುಂಬೆಯಿಂದ ಗ್ರಾಮಾಂತರ ಪ್ರದೇಶಗಳನ್ನು ದಾಟಿ ಮಂಗಳೂರು ನಗರದ ಗಡಿಯನ್ನು ಪ್ರವೇಶಿಸುವಾಗ ಕಳ್ಳತನ ಮತ್ತು ಪೋಲಾಗಿಯೂ ಹೋಗುತ್ತದೆ. ಇನ್ನು ಎಡಿಬಿ-2 ನಲ್ಲಿ ನೀರು ಹೋಗುವಾಗ ಅದರಲ್ಲಿ ಸೋರಿಕೆ ಆಗುವುದಿಲ್ಲ. ಎಡಿಬಿ-1 ಪೈಪ್ ಲೈನ್ ನಲ್ಲಿ ಬರುವ ನೀರನ್ನು ಗ್ರಾಮಾಂತರ ಪ್ರದೇಶಗಳಲ್ಲಿ ತೆಗೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಇನ್ನು ಮನೆಮನೆಗೆ ಸ್ಮಾರ್ಟ್ ಮೀಟರ್ ಅಳವಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಎಡಿಬಿ-2 ಇದರ ಗುತ್ತಿಗೆದಾರರಿಗೆ ಇದರ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗಿದೆ. ಅವರು ಇದನ್ನು ಪ್ರಾರಂಭಿಸಿದ್ದಾರೆ. ಈಗಾಗಲೇ ಅನೇಕ ವಾರ್ಡುಗಳಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ಸ್ಮಾರ್ಟ್ ಮೀಟರ್ ಹಾಕಿದ ಏಳು ವರ್ಷಗಳ ತನಕ ಅದರ ಸಂಪೂರ್ಣ ಮೇಲ್ವಿಚಾರಣೆಯನ್ನು ಆ ಗುತ್ತಿಗೆದಾರರೇ ನಿರ್ವಹಿಸಬೇಕು. ಆದರೆ ಪಾಲಿಕೆಯೊಳಗಿನ ಒಂದು ಶಕ್ತಿ ಈ ಗುತ್ತಿಗೆದಾರರಿಗೆ ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಆ ಲಾಬಿ ಯಾವುದು? ಅವರು ಯಾಕೆ ಬಿಡಲ್ಲ? ಅವರಿಗೇನು ಲಾಭ? ಅದನ್ನು ತಡೆಯುವುದು ಹೇಗೆ? ಎಲ್ಲವನ್ನು ನಾಳೆ ಹೇಳುತ್ತೇನೆ!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search