• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ರಶ್ಮಿಯಿಂದ ಪರಂ ತನಕ ಧ್ವನಿ ಎತ್ತಿದವರಿಗೆ ಲಗಾಡಿ ಸರಕಾರ ಬಿಟ್ಟಿಲ್ಲ!!

Tulunadu News Posted On March 25, 2021
0


0
Shares
  • Share On Facebook
  • Tweet It

ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಿರುವ ಲಗಾಡಿ ಮೈತ್ರಿ ಪಕ್ಷಗಳ ಒಳಗೆ ಒಬ್ಬರಿಗೊಬ್ಬರಿಗೆ ಒಂದು ಚೂರು ವಿಶ್ವಾಸ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಅದಕ್ಕೆ ಪರಂಬೀರ್ ಸಿಂಗ್ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿರುವ ಒಂದು ಹೆಸರಿನ ಸುತ್ತಮುತ್ತ ಈಗ ಪ್ರಕರಣ ವಿಶಿಷ್ಟ ತಿರುವನ್ನು ಪಡೆದುಕೊಂಡಿದೆ. ಪರಂಬೀರ್ ಸಿಂಗ್ ತಮ್ಮ ಅಹವಾಲಿನಲ್ಲಿ ರಶ್ಮಿ ಶುಕ್ಲ ಎನ್ನುವ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಹೆಣ್ಣುಮಗಳು ಈಗ ಸೆಂಟ್ರಲ್ ರಿಸರ್ವ್ ಪೋರ್ಸ್ ಹುದ್ದೆಯಲ್ಲಿದ್ದಾರೆ. ಅದಕ್ಕಿಂತ ಮೊದಲು ಮುಂಬೈಯ ಇಂಟೆಲಿಜೆನ್ಸ್ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಒಂದು ವರದಿ ತಯಾರಿಸಿ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರಿಗೆ ಕಳೆದ ವರ್ಷದ ಅಗಸ್ಟ್ ನಲ್ಲಿ ಸಲ್ಲಿಸಿದ್ದರು. ಆ ವರದಿಯಲ್ಲಿ ಮಹಾರಾಷ್ಟ್ರದ ಉನ್ನತ ಅಧಿಕಾರಿಗಳು ಹೇಗೆ ವಿವಿಧ ಇಲಾಖೆಗಳಲ್ಲಿ ಟ್ರಾನ್ಸಫರ್ ದಂಧೆಯನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾರೆ ಎಂದು ಉಲ್ಲೇಖಿಸಿದ್ದರು. ಅದಕ್ಕೆ ಅವರ ಬಳಿ ಸಾಕ್ಷ್ಯಧಾರಗಳಿದ್ದವು. ಅವರು ಅನೇಕ ಅಧಿಕಾರಿಗಳ ಟೆಲಿಫೋನ್ ಗಳ ಕದ್ದಾಲಿಕೆಯನ್ನು ಮಾಡಿದ್ದರು. ಆ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕಿದ್ದ ಸಿಎಂ ಠಾಕ್ರೆ ಅವರು ರಶ್ಮಿ ಶುಕ್ಲ ಅವರನ್ನು ಎತ್ತಂಗಡಿ ಮಾಡಿದ್ದರು. ತಾನು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಟೆಲಿಫೋನ್ ಕದ್ದಾಲಿಕೆ ಮಾಡಿ ಸಾಕ್ಷಿಗಳನ್ನು ಸಂಗ್ರಹಿಸಿ ವರದಿ ಮಾಡಿದ್ದೆ ಎಂದು ರಶ್ಮಿ ಹೇಳಿದ್ದರೂ ಅವರು ಮಾಡಿದ್ದೇ ಅಪರಾಧ ಎನ್ನುವ ಆಧಾರದಲ್ಲಿ ಅವರಿಗೆ ಎತ್ತಂಗಡಿ ಮಾಡಲಾಗಿತ್ತು. ಸಿಂಗ್ ಹಾಗೂ ರಶ್ಮಿ ಶುಕ್ಲ ಒಂದೇ ಬ್ಯಾಚಿನ ಐಪಿಎಸ್ ಅಧಿಕಾರಿಗಳು. ರಶ್ಮಿ ವರದಿ ಬಗ್ಗೆನೂ ಸಿಬಿಐ ತನಿಖೆ ಮಾಡಬೇಕೆಂದು ಈ ಮೂಲಕ ವರ್ಗಾವಣೆಯಲ್ಲಿ ಹರಡಿರುವ ವ್ಯಾಪಕ ಭ್ರಷ್ಟಾಚಾರವನ್ನು ಹೋಗಲಾಡಿಸಬೇಕೆಂದು ಅಂತಿಮವಾಗಿ ಪರಂಬೀರ್ ಮಾನ್ಯ ಸುಪ್ರೀಂಕೋರ್ಟ್ ಅನ್ನು ಮನವಿ ಮಾಡಿದ್ದಾರೆ. ಇಲ್ಲಿ ಏನಾಗಿದೆ ಎಂದರೆ ಎನ್ ಸಿಪಿ ಹಾಗೂ ಕಾಂಗ್ರೆಸ್ ತಾವು ಅಧಿಕಾರದಲ್ಲಿ ಇದ್ದಷ್ಟು ಸಮಯ ಯಾವ ಮೂಲೆಯಿಂದಾದರೂ ಸರಿ ಗೆಬರಿ ಹೆಕ್ಕಿ ಮುಕ್ಕಿ ಬಿಡಬೇಕು ಎಂದು ನಿರ್ಧರಿಸಿರುವುದು ಉದ್ದವ್ ಗೆ ಗೊತ್ತಿಲ್ಲದ ಸಂಗತಿ ಏನಲ್ಲ. ಆದ್ದರಿಂದ ಇವರು ಬಾಚುತ್ತಿರುವ ಹಣದ ಮೂಲವನ್ನು ಸಾಕ್ಷಿಗಳ ಸಮೇತ ಹಿಡಿದು ಇನ್ನೊಂದು ಆಟ ಆಡಲು ಉದ್ದವ್ ತೀರ್ಮಾನಿಸಿದ್ದಾರೆ. ಅದಕ್ಕಾಗಿ ಅದೇ ಅಧಿಕಾರಿಗಳನ್ನು ಅವರು ಬಳಸುತ್ತಿದ್ದಾರೆ. ಆದರೆ ವರದಿ ಸಿದ್ಧವಾದ ನಂತರ ಆ ಅಧಿಕಾರಿಗಳು ಮೈತ್ರಿ ಪಕ್ಷಗಳ ಒತ್ತಡಕ್ಕೋ ಏನೋ ವರ್ಗಾವಣೆ ಆಗುತ್ತಿದ್ದಾರೆ. ರಶ್ಮಿ ಹಾಗೂ ಪರಂಬೀರ್ ಅದೇ ಜಾಲಕ್ಕೆ ಸಿಲುಕಿ ಬಿದ್ದ ಅಧಿಕಾರಿಗಳು. ಇವರು ಎನ್ ಸಿಪಿ ವಿರುದ್ಧ ಸಾಕ್ಷ್ಯ ನೀಡಿದ ನಂತರ ವರ್ಗಾವಣೆಗೊಂಡಿದ್ದಾರೆ.

ಒಂದು ಗೃಹಸಚಿವರಾಗಿದ್ದವರು ರಾಜ್ಯದಲ್ಲಿ ಅದರಲ್ಲಿಯೂ ಮಹಾರಾಷ್ಟ್ರದಂತಹ ರಾಜ್ಯದಲ್ಲಿ ಮಾಡಲು ತುಂಬಾ ಕೆಲಸಗಳಿವೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿರುತ್ತವೆ. ಅದು ಬಿಟ್ಟು ನೂರು ಕೋಟಿ ಒಟ್ಟು ಮಾಡಿ ಕೊಡಿ. ವರ್ಗಾವಣೆಯಲ್ಲಿ ಹೇಗೆ ಹಣ ಮಾಡಬಹುದು ಎಂದು ನೋಡಿ ಎಂದು ಅಧಿಕಾರಿಗಳಿಗೆ ಹೇಳುವುದು ನಿಜಕ್ಕೂ ಅಸಹ್ಯದ ಪರಮಾಧಿಕಾರಿ. ಪರಂಬೀರ್ ಸಿಂಗ್ ಏನೋ ತಮಗೆ ಕೊಟ್ಟ ಟಾರ್ಗೆಟ್ ಬಗ್ಗೆ ಸಿಎಂ ಅವರಿಗೆ ಮತ್ತು ಅವರು ಕೂಡ ಕೇಳಿಸಿಕೊಳ್ಳುವುದಿಲ್ಲ ಎಂದು ಗೊತ್ತಾದ ನಂತರ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಲು ಸಿಬಿಐಗೆ ಸೂಚನೆ ಕೊಡಿ ಎಂದು ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾರೆ. ಆದರೆ ಎಲ್ಲಾ ಅಧಿಕಾರಿಗಳು ಹಾಗೆ ಮಾಡುತ್ತಾರಾ? ಗೃಹಸಚಿವರು ಹೇಳಿದ್ದನ್ನು ಚಾಚೂತಪ್ಪದೆ ಮಾಡುತ್ತಾರೆ. ಹಾಗಾದರೆ ಇದನ್ನು ನಿಲ್ಲಿಸುವುದು ಹೇಗೆ? ಯಾರಾದರೂ ಒಬ್ಬ ಗಟ್ಟಿ ಧ್ವನಿಯ ಅಧಿಕಾರಿ ಬಾಯಿಬಿಟ್ಟು ಹೇಳಿದ್ರೆ ಈ ಶರದ್ ಪವಾರ್ ಅವರ ಸಮಜಾಯಿಷಿಕೆ ಏನು ಗೊತ್ತಾ? ನಮ್ಮ ಅನಿಲ್ ದೇಶಮುಖ್ ಅಪ್ಪಟ ಅಮಾಯಕ. ಮುಗ್ಧ. ಅವರಿಗೆ ಬಾಯಿಗೆ ಬೆರಳು ಇಟ್ಟರೆ ಕಚ್ಚಲು ಕೂಡ ಬರಲ್ಲ. ಅವರು ಕೊರೊನಾ ಪಾಸಿಟಿವ್ ಆಗಿ ಮಲಗಿದ್ದರು. ಅವರು ಹಣ ಒಟ್ಟು ಮಾಡಲು ಸೂಚನೆ ಕೊಡಲು ಸಾಧ್ಯವಿಲ್ಲ. ಆದರೆ ವೃದ್ಧ ಪವಾರ್ ಗೆ ಗೊತ್ತಿಲ್ಲದ ಸಂಗತಿ ಎಂದರೆ ಇದೇ ಅನಿಲ್ ದೇಶಮುಖ್ ಇದೇ ಫೆಬ್ರವರಿಯಲ್ಲಿ ಸುದ್ದಿಗೋಷ್ಟಿ ಮಾಡಿದ್ದಾರೆ. ಪಾಸಿಟಿವ್ ಇದ್ದರೆ ಯಾಕೆ ಹಾಗೆ ಮಾಡಿದರು. ವಿಮಾನದ ಮೂಲಕ ಪುಣೆಗೋ, ಎಲ್ಲಿಯೋ ಹೋಗಿದ್ದಾರೆ. ಇನ್ನು ನಾನು ಕಳೆದ ಜಾಗೃತ ಅಂಕಣದಲ್ಲಿ ಬರೆದ ಹಾಗೆ ಪರಂಬೀರ್ ಸಿಂಗ್ ಹೇಳಿರುವ ಸಿಸಿಟಿವಿ ಫೂಟೇಜ್ ಗಳನ್ನು ಪರೀಕ್ಷಿಸಿದರೆ ಮುಗಿಯಿತು. ಅನಿಲ್ ದೇಶಮುಖ್ ನಿಜ ಬಣ್ಣ ಬಯಲಾಗುತ್ತದೆ. ನಾನು ಹೇಳುವುದಾದರೆ ಇಂತಹ ರಾಜಕಾರಣಿಗಳು ಚುನಾವಣೆಯಲ್ಲಿ ಗೆಲ್ಲಲೇಬಾರದು. ಅವರು ನಿಂತರೆ ಜನ ವೋಟ್ ಹಾಕಲೇಬಾರದು. ಆದರೆ ನಮ್ಮ ದೇಶದ ದುರಂತ ಏನೆಂದರೆ ಇಲ್ಲಿ ಗೆಲ್ಲಬೇಕಾದವರು ನಿಲ್ಲಲ್ಲ. ಹಣ ಸುರಿಯದಿದ್ದರೆ ಗೆಲ್ಲಲ್ಲ. ನೈತಿಕತೆ ಇಲ್ಲದವರಿಗೆ ಸೋಲುವ ಭಯವಿಲ್ಲ. ಇನ್ನು ಅಧಿಕಾರಕ್ಕೆ ಬರುವ ಮೊದಲು ಚೆಲ್ಲುವ ಹಣವನ್ನು ಇವರು ಮಾಡಲು ನಿಂತರೆ ಜನಸಾಮಾನ್ಯರು ಮಾತನಾಡಲ್ಲ!!!

0
Shares
  • Share On Facebook
  • Tweet It




Trending Now
ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
Tulunadu News July 19, 2025
ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
Tulunadu News July 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
    • ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
  • Popular Posts

    • 1
      ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
    • 2
      ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • 3
      ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • 4
      ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • 5
      ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ

  • Privacy Policy
  • Contact
© Tulunadu Infomedia.

Press enter/return to begin your search