• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಕ್ ಕ್ರಿಕೆಟಿಗರ ಸ್ವಾಗತಕ್ಕೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಯಾರೂ ಬಂದಿಲ್ಲ!

Tulunadu News Posted On December 2, 2023
0


0
Shares
  • Share On Facebook
  • Tweet It

ಇಂತಹ ದುರವಸ್ಥೆಯನ್ನು ಪಾಕಿಸ್ತಾನ ಅನುಭವಿಸುತ್ತಿದೆ. ಪಕ್ಕಾ ಭಿಕ್ಷುಕರ ದೇಶವಾಗಿರುವ ಪಾಕಿಸ್ತಾನಕ್ಕೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಯಾರೂ ಮರ್ಯಾದೆ ಕೊಡುತ್ತಿಲ್ಲ. ಅದರಲ್ಲಿಯೂ ಇತ್ತೀಚೆಗೆ ನಡೆದ ವಿಶ್ವಕಪ್ ನಲ್ಲಿ ದಯನೀಯ ಸೋಲಿನ ಬಳಿಕ ಪಾಕಿಸ್ತಾನಕ್ಕೆ ಇನ್ನಷ್ಟು ಅವಮಾನ ಅವರ ಮಾಜಿ ಕ್ರಿಕೆಟಿಗರಿಂದಲೇ ಆಗಿದೆ. ನಿತ್ಯ ಕೆಜಿಗಟ್ಟಲೆ ಬಿರಿಯಾನಿ ತಿಂದರೆ ಮೈದಾನದಲ್ಲಿ ದೇಹ ಬಗ್ಗತ್ತಾ ಎಂದು ಅವರದ್ದೇ ಹಳೆ ಕ್ರಿಕೆಟಿಗರಿಂದ ಉಗಿಸಿಕೊಂಡು ಪಾಕ್ ತಂಡಕ್ಕೂ ಸಾಕುಸಾಕಾಗಿದೆ. ಇನ್ನು ತಂಡದ ರೂಪುರೇಶೆ ಚರ್ಚೆಯಾಗುತ್ತಿರುವ ಹೊತ್ತಿಗೆ ಕಪ್ತಾನ ಅದನ್ನು ಗಂಭೀರವಾಗಿ ತೆಗೆದುಕೊಳ್ಳದೇ ಬಿರಿಯಾನಿ ತರಹ ಏನನ್ನೋ ಮುಕ್ಕುತ್ತಿರುವ ವಿಡಿಯೋ ಕೂಡ ಇತ್ತೀಚೆಗೆ ವೈರಲ್ ಆಗಿತ್ತು. ಆಡುವುದಕ್ಕಿಂತ ತಿನ್ನಲು ಜಾಸ್ತಿ ಮಹತ್ವ ಕೊಟ್ಟ ಪಾಕಿ ಕ್ರಿಕೆಟಿಗರಿಗೆ ಈಗ ಹೊರದೇಶದಲ್ಲಿಯೂ ಅಂತಹ ಪ್ರಾಮುಖ್ಯತೆ ಸಿಗುವುದು ಡೌಟು ಎನ್ನುವುದು ಈಗ ಸಾಬೀತಾಗಿದೆ.

24 ಗಂಟೆ ಪ್ರಯಾಣ ಮಾಡಿ ಸಿಡ್ನಿಗೆ ಬಂದಿಳಿದ ಪಾಕ್ ಕ್ರಿಕೆಟಿಗರಿಗೆ ವಿಮಾನ ನಿಲ್ದಾಣದಲ್ಲಿ ಆಸ್ಟ್ರೇಲಿಯಾದ ಶಿಷ್ಟಾಚಾರದ ಯಾವ ಅಧಿಕಾರಿಯೂ ಬಂದು ಎದುರುಗೊಂಡಿಲ್ಲ. ಹೋಗಲಿ, ಪಾಕಿಸ್ತಾನದ ರಾಯಭಾರಿ ಕಚೇರಿಯಿಂದ ಕನಿಷ್ಟ ಒಬ್ಬ ಗುಮಾಸ್ತನೂ ಸ್ವಾಗತಕ್ಕೆ ಬರಲಿಲ್ಲ. ಎಲ್ಲಿಯ ತನಕ ಎಂದರೆ ವಿಮಾನ ನಿಲ್ದಾಣದಲ್ಲಿ ಕ್ರಿಕೆಟಿಗರ ಲಗೇಜಿಗೆ ಕೈಕೊಡಲು ಒಬ್ಬನೇ ಒಬ್ಬ ವ್ಯಕ್ತಿ ಇರಲಿಲ್ಲ. ಕೊನೆಗೆ ತಂಡದ ಹೊಸ ಕಪ್ತಾನ ಶಾನ್ ಮಸೂದ್ ತಾವೇ ಲಗೇಜುಗಳನ್ನು ಮಿನಿ ಲಾರಿಯೊಂದಕ್ಕೆ ತುಂಬಿಸಿ ಸಹ ಆಟಗಾರರ ನೆರವಿಗೆ ಮುಂದಾದ ಫೋಟೋ ಮಾತ್ರ ಎಲ್ಲೆಡೆ ಈಗ ವೈರಲ್ ಆಗಿದೆ.

ಒಟ್ಟಿನಲ್ಲಿ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲು ಪಾಕಿಸ್ತಾನ ಸಿಡ್ನಿಗೆ ಬಂದಿದೆ. ಇಲ್ಲಿಯವರೆಗೆ ಆಸ್ಟ್ರೇಲಿಯಾ ನೆಲದಲ್ಲಿ ಪಾಕಿಸ್ತಾನ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. 2019 ರ ಬಳಿಕ ಪ್ರಥಮ ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ಇಲ್ಲಿ ಕನಿಷ್ಟ ಒಂದು ಪಂದ್ಯವನ್ನಾದರೂ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ. ಯಾಕೆಂದರೆ ಕೊನೆಯ ಬಾರಿ ಆಸ್ಟ್ರೇಲಿಯ ಪ್ರವಾಸ ಕೈಗೊಂಡ ಪಾಕಿಸ್ತಾನ 2-0 ಅಂತರದಲ್ಲಿ ಸೋತಿತ್ತು. ಆಗ ಅಜರ್ ಆಲಿ ಕಪ್ತಾನರಾಗಿದ್ದರು.

0
Shares
  • Share On Facebook
  • Tweet It




Trending Now
ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
Tulunadu News April 27, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search