• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಏಕನಾಥ ಶೆಟ್ಟಿ ಇದ್ದ ಸೇನಾ ವಿಮಾನ ಏಳೂವರೆ ವರ್ಷಗಳ ಬಳಿಕ ಪತ್ತೆ!

Tulunadu News Posted On January 13, 2024
0


0
Shares
  • Share On Facebook
  • Tweet It

ಅವರ ಹೆಸರು ಏಕನಾಥ ಶೆಟ್ಟಿ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅದು 2016 ರ ಜುಲೈ ತಿಂಗಳ 22 ನೇ ದಿನ. ನಮ್ಮ ಹೆಮ್ಮೆಯ ಯೋಧ ಏಕನಾಥ ಶೆಟ್ಟಿ ಸೇರಿ 29 ಯೋಧರಿದ್ದ ಭಾರತೀಯ ವಾಯುಸೇನೆಯ ಎಎನ್ 37 ವಿಮಾನ ಚೆನೈನ ತಾಂಬರಂ ವಾಯುನೆಲೆಯಿಂದ ಆಗಸಕ್ಕೆ ನೆಗೆದಿತ್ತು. ಅದು ಅಂಡಮಾನ್ ನ ಫೋರ್ಟ್ ಬ್ಲೇರ್ ಗೆ ತೆರಳಬೇಕಿತ್ತು. ಆದರೆ ವಿಧಿಯ ಕ್ರೂರ ಅಟ್ಟಹಾಸ. ಏಕನಾಥ್ ಶೆಟ್ಟಿ ಇದ್ದ ಆ ವಿಮಾನ ನಾಪತ್ತೆಯಾಗಿ ಹೋಗಿತ್ತು.

ವಾಯುಸೇನೆ, ನೌಕಾ ಸೇನೆ ಮತ್ತು ಭೂಸೇನೆಯ ಸತತ ಪ್ರಯತ್ನ, ಶೋಧದ ನಂತರವೂ ವಿಮಾನ ಎಲ್ಲಿ ನಾಪತ್ತೆಯಾಯಿತು ಎಂದು ಗೊತ್ತಾಗಲೇ ಇಲ್ಲ.


ತುರ್ತು ಪರಿಹಾರ ಎಂದು ಆಗಿನ ಸರಕಾರ ಐದು ಲಕ್ಷ ರೂಪಾಯಿ ನೀಡಿ ಕೈತೊಳೆದುಕೊಂಡಿತು. ಈಗ ಇದೆಲ್ಲಾ ಆಗಿ ಏಳೂವರೆ ವರ್ಷಗಳು ಕಳೆದಿವೆ. ಆವತ್ತು ಕಣ್ಮರೆಯಾಗಿದ್ದ ವಿಮಾನ ಈಗ ಪತ್ತೆಯಾಗಿದೆ. ಆದರೆ ಪತ್ತೆಯಾಗಿರುವುದು ಬಂಗಾಳ ಕೊಲ್ಲಿಯ ತಳಭಾಗದಲ್ಲಿ 140 ನಾಟಿಕಲ್ ಮೈಲ್ ಕೆಳಗೆ ಅಂದರೆ ಸುಮಾರು 310 ಕಿ.ಮೀ ದೂರದಲ್ಲಿ.

ಚೆನೈಯಿಂದ ಹೊರಟ ವಿಮಾನ ಆವತ್ತು ಪತನಗೊಂಡು ಬಂಗಾಳಕೊಲ್ಲಿಯಲ್ಲಿ ಬಿದ್ದಿರಬಹುದು. ಈಗ ತಳಭಾಗದಲ್ಲಿ ಅದರ ಅವಶೇಷಗಳು ಪತ್ತೆಯಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ನೆಲೆಸಿರುವ ಏಕನಾಥ ಶೆಟ್ಟಿ ಕುಟುಂಬ ತಮ್ಮ ಮನೆಯ ಯಜಮಾನ ಈಗಲೂ ಬದುಕುಳಿದಿರಬಹುದು ಎಂಬ ನಿರೀಕ್ಷೆಯಲ್ಲಿದೆ. ಎಲ್ಲಿಯಾದರೂ ದೇಶಸೇವೆ ಮಾಡುತ್ತಿರಬಹುದು ಎಂಬ ಆಶಾಭಾವನೆಯಲ್ಲಿದೆ. ಆದರೆ ಸರಕಾರಗಳು ಮಾತ್ರ ಈ ವೀರಯೋಧನ ತ್ಯಾಗವನ್ನು, ಬಲಿದಾನವನ್ನು ಮರೆತು ಸರಕಾರಿ ಉದ್ಯೋಗ, ನೀಡಬೇಕಾಗಿದ್ದ ನಿವೇಶನವನ್ನು ನೀಡದೇ ಮರೆತಿರುವುದು ಮಾತ್ರ ದುರಂತ…

0
Shares
  • Share On Facebook
  • Tweet It




Trending Now
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
Tulunadu News September 15, 2025
ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
Tulunadu News September 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
  • Popular Posts

    • 1
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 2
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 3
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 4
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 5
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ

  • Privacy Policy
  • Contact
© Tulunadu Infomedia.

Press enter/return to begin your search