• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಏಕನಾಥ ಶೆಟ್ಟಿ ಇದ್ದ ಸೇನಾ ವಿಮಾನ ಏಳೂವರೆ ವರ್ಷಗಳ ಬಳಿಕ ಪತ್ತೆ!

Tulunadu News Posted On January 13, 2024


  • Share On Facebook
  • Tweet It

ಅವರ ಹೆಸರು ಏಕನಾಥ ಶೆಟ್ಟಿ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅದು 2016 ರ ಜುಲೈ ತಿಂಗಳ 22 ನೇ ದಿನ. ನಮ್ಮ ಹೆಮ್ಮೆಯ ಯೋಧ ಏಕನಾಥ ಶೆಟ್ಟಿ ಸೇರಿ 29 ಯೋಧರಿದ್ದ ಭಾರತೀಯ ವಾಯುಸೇನೆಯ ಎಎನ್ 37 ವಿಮಾನ ಚೆನೈನ ತಾಂಬರಂ ವಾಯುನೆಲೆಯಿಂದ ಆಗಸಕ್ಕೆ ನೆಗೆದಿತ್ತು. ಅದು ಅಂಡಮಾನ್ ನ ಫೋರ್ಟ್ ಬ್ಲೇರ್ ಗೆ ತೆರಳಬೇಕಿತ್ತು. ಆದರೆ ವಿಧಿಯ ಕ್ರೂರ ಅಟ್ಟಹಾಸ. ಏಕನಾಥ್ ಶೆಟ್ಟಿ ಇದ್ದ ಆ ವಿಮಾನ ನಾಪತ್ತೆಯಾಗಿ ಹೋಗಿತ್ತು.

ವಾಯುಸೇನೆ, ನೌಕಾ ಸೇನೆ ಮತ್ತು ಭೂಸೇನೆಯ ಸತತ ಪ್ರಯತ್ನ, ಶೋಧದ ನಂತರವೂ ವಿಮಾನ ಎಲ್ಲಿ ನಾಪತ್ತೆಯಾಯಿತು ಎಂದು ಗೊತ್ತಾಗಲೇ ಇಲ್ಲ.


ತುರ್ತು ಪರಿಹಾರ ಎಂದು ಆಗಿನ ಸರಕಾರ ಐದು ಲಕ್ಷ ರೂಪಾಯಿ ನೀಡಿ ಕೈತೊಳೆದುಕೊಂಡಿತು. ಈಗ ಇದೆಲ್ಲಾ ಆಗಿ ಏಳೂವರೆ ವರ್ಷಗಳು ಕಳೆದಿವೆ. ಆವತ್ತು ಕಣ್ಮರೆಯಾಗಿದ್ದ ವಿಮಾನ ಈಗ ಪತ್ತೆಯಾಗಿದೆ. ಆದರೆ ಪತ್ತೆಯಾಗಿರುವುದು ಬಂಗಾಳ ಕೊಲ್ಲಿಯ ತಳಭಾಗದಲ್ಲಿ 140 ನಾಟಿಕಲ್ ಮೈಲ್ ಕೆಳಗೆ ಅಂದರೆ ಸುಮಾರು 310 ಕಿ.ಮೀ ದೂರದಲ್ಲಿ.

ಚೆನೈಯಿಂದ ಹೊರಟ ವಿಮಾನ ಆವತ್ತು ಪತನಗೊಂಡು ಬಂಗಾಳಕೊಲ್ಲಿಯಲ್ಲಿ ಬಿದ್ದಿರಬಹುದು. ಈಗ ತಳಭಾಗದಲ್ಲಿ ಅದರ ಅವಶೇಷಗಳು ಪತ್ತೆಯಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ನೆಲೆಸಿರುವ ಏಕನಾಥ ಶೆಟ್ಟಿ ಕುಟುಂಬ ತಮ್ಮ ಮನೆಯ ಯಜಮಾನ ಈಗಲೂ ಬದುಕುಳಿದಿರಬಹುದು ಎಂಬ ನಿರೀಕ್ಷೆಯಲ್ಲಿದೆ. ಎಲ್ಲಿಯಾದರೂ ದೇಶಸೇವೆ ಮಾಡುತ್ತಿರಬಹುದು ಎಂಬ ಆಶಾಭಾವನೆಯಲ್ಲಿದೆ. ಆದರೆ ಸರಕಾರಗಳು ಮಾತ್ರ ಈ ವೀರಯೋಧನ ತ್ಯಾಗವನ್ನು, ಬಲಿದಾನವನ್ನು ಮರೆತು ಸರಕಾರಿ ಉದ್ಯೋಗ, ನೀಡಬೇಕಾಗಿದ್ದ ನಿವೇಶನವನ್ನು ನೀಡದೇ ಮರೆತಿರುವುದು ಮಾತ್ರ ದುರಂತ…

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search