• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಏಕನಾಥ ಶೆಟ್ಟಿ ಇದ್ದ ಸೇನಾ ವಿಮಾನ ಏಳೂವರೆ ವರ್ಷಗಳ ಬಳಿಕ ಪತ್ತೆ!

Tulunadu News Posted On January 13, 2024
0


0
Shares
  • Share On Facebook
  • Tweet It

ಅವರ ಹೆಸರು ಏಕನಾಥ ಶೆಟ್ಟಿ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅದು 2016 ರ ಜುಲೈ ತಿಂಗಳ 22 ನೇ ದಿನ. ನಮ್ಮ ಹೆಮ್ಮೆಯ ಯೋಧ ಏಕನಾಥ ಶೆಟ್ಟಿ ಸೇರಿ 29 ಯೋಧರಿದ್ದ ಭಾರತೀಯ ವಾಯುಸೇನೆಯ ಎಎನ್ 37 ವಿಮಾನ ಚೆನೈನ ತಾಂಬರಂ ವಾಯುನೆಲೆಯಿಂದ ಆಗಸಕ್ಕೆ ನೆಗೆದಿತ್ತು. ಅದು ಅಂಡಮಾನ್ ನ ಫೋರ್ಟ್ ಬ್ಲೇರ್ ಗೆ ತೆರಳಬೇಕಿತ್ತು. ಆದರೆ ವಿಧಿಯ ಕ್ರೂರ ಅಟ್ಟಹಾಸ. ಏಕನಾಥ್ ಶೆಟ್ಟಿ ಇದ್ದ ಆ ವಿಮಾನ ನಾಪತ್ತೆಯಾಗಿ ಹೋಗಿತ್ತು.

ವಾಯುಸೇನೆ, ನೌಕಾ ಸೇನೆ ಮತ್ತು ಭೂಸೇನೆಯ ಸತತ ಪ್ರಯತ್ನ, ಶೋಧದ ನಂತರವೂ ವಿಮಾನ ಎಲ್ಲಿ ನಾಪತ್ತೆಯಾಯಿತು ಎಂದು ಗೊತ್ತಾಗಲೇ ಇಲ್ಲ.


ತುರ್ತು ಪರಿಹಾರ ಎಂದು ಆಗಿನ ಸರಕಾರ ಐದು ಲಕ್ಷ ರೂಪಾಯಿ ನೀಡಿ ಕೈತೊಳೆದುಕೊಂಡಿತು. ಈಗ ಇದೆಲ್ಲಾ ಆಗಿ ಏಳೂವರೆ ವರ್ಷಗಳು ಕಳೆದಿವೆ. ಆವತ್ತು ಕಣ್ಮರೆಯಾಗಿದ್ದ ವಿಮಾನ ಈಗ ಪತ್ತೆಯಾಗಿದೆ. ಆದರೆ ಪತ್ತೆಯಾಗಿರುವುದು ಬಂಗಾಳ ಕೊಲ್ಲಿಯ ತಳಭಾಗದಲ್ಲಿ 140 ನಾಟಿಕಲ್ ಮೈಲ್ ಕೆಳಗೆ ಅಂದರೆ ಸುಮಾರು 310 ಕಿ.ಮೀ ದೂರದಲ್ಲಿ.

ಚೆನೈಯಿಂದ ಹೊರಟ ವಿಮಾನ ಆವತ್ತು ಪತನಗೊಂಡು ಬಂಗಾಳಕೊಲ್ಲಿಯಲ್ಲಿ ಬಿದ್ದಿರಬಹುದು. ಈಗ ತಳಭಾಗದಲ್ಲಿ ಅದರ ಅವಶೇಷಗಳು ಪತ್ತೆಯಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ನೆಲೆಸಿರುವ ಏಕನಾಥ ಶೆಟ್ಟಿ ಕುಟುಂಬ ತಮ್ಮ ಮನೆಯ ಯಜಮಾನ ಈಗಲೂ ಬದುಕುಳಿದಿರಬಹುದು ಎಂಬ ನಿರೀಕ್ಷೆಯಲ್ಲಿದೆ. ಎಲ್ಲಿಯಾದರೂ ದೇಶಸೇವೆ ಮಾಡುತ್ತಿರಬಹುದು ಎಂಬ ಆಶಾಭಾವನೆಯಲ್ಲಿದೆ. ಆದರೆ ಸರಕಾರಗಳು ಮಾತ್ರ ಈ ವೀರಯೋಧನ ತ್ಯಾಗವನ್ನು, ಬಲಿದಾನವನ್ನು ಮರೆತು ಸರಕಾರಿ ಉದ್ಯೋಗ, ನೀಡಬೇಕಾಗಿದ್ದ ನಿವೇಶನವನ್ನು ನೀಡದೇ ಮರೆತಿರುವುದು ಮಾತ್ರ ದುರಂತ…

0
Shares
  • Share On Facebook
  • Tweet It




Trending Now
ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
Tulunadu News February 19, 2026
ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
Tulunadu News February 18, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
  • Popular Posts

    • 1
      ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • 2
      ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!

  • Privacy Policy
  • Contact
© Tulunadu Infomedia.

Press enter/return to begin your search