• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ವೈನ್ ಶಾಪಿಗೆ ನುಗ್ಗಿದ ಕಳ್ಳ ಬಿಟ್ಟಿ ಕುಡಿದು ಮಾಡಿದ್ದೇನು?

Tulunadu News Posted On December 31, 2024
0


0
Shares
  • Share On Facebook
  • Tweet It

ಅವನು ಕಳ್ಳ. ತೆಲಂಗಾಣ ರಾಜ್ಯದ ಮೇದಕ ಜಿಲ್ಲೆಯಲ್ಲಿ ಕಳ್ಳತನಕ್ಕೆ ಇಳಿದಿದ್ದ. ಅಲ್ಲಿ ಆವತ್ತು ಕಳ್ಳತನ ಮಾಡಲು ಅವನು ಆಯ್ಕೆ ಮಾಡಿದ್ದು ವೈನ್ ಶಾಪ್ ಅನ್ನು. ವೈನ್ ಶಾಪ್ ಹೆಸರು ಕನಕದುರ್ಗಾ. ಬಹಳ ಕಷ್ಟಪಟ್ಟು ಅಂಗಡಿಯ ನೆತ್ತಿಯ ಮಾರ್ಬಲ್ ಗಳನ್ನು ಕಳಚಿ ಬಹಳ ಜಾಗರೂಕನಾಗಿ ಅಂಗಡಿಯೊಳಗೆ ಇಳಿದ. ಇಳಿಯುವಾಗ ಮುಖಕ್ಕೆ ಒಂದಿಷ್ಟು ಪರಚಿದ ಗಾಯಗಳಾದವು. ಆದರೆ ಹೇಗೋ ಕೆಳಗೆ ಇಳಿದುಬಿಟ್ಟ, ನಂತರ ಅಂಗಡಿಯೊಳಗಿದ್ದ ಸಿಸಿಟಿವಿಗಳನ್ನು ಆಫ್ ಮಾಡಿಬಿಟ್ಟ. ಇನ್ನು ಏನೂ ಸಮಸ್ಯೆ ಇಲ್ಲ. ಸೀದಾ ಕಳ್ಳತನ ಮಾಡೋದು ಮತ್ತು ಎಸ್ಕೇಪ್ ಆಗೋದು ಎಂದು ನಿರ್ಧರಿಸಿಬಿಟ್ಟ.

ಗಲ್ಲಾಪೆಟ್ಟಿಗೆಯಲ್ಲಿದ್ದ ಹಣವನ್ನು ಬ್ಯಾಗಿಗೆ ತುಂಬಿಸಿಕೊಂಡ. ಇನ್ನೇನೂ ಹಿಂದಿರುಗಬೇಕು. ಅಲ್ಲಿದ್ದ ತರಹೇವಾರಿ ಮದ್ಯದ ಬಾಟಲುಗಳನ್ನು ನೋಡಿ ಆಸೆಗೆ ಬಿದ್ದುಬಿಟ್ಟ. ಎಲ್ಲವನ್ನು ತೆಗೆದುಕೊಂಡು ಹೋಗಲು ಕಷ್ಟಸಾಧ್ಯ. ಆದ್ದರಿಂದ ಪ್ರತಿಯೊಂದರ ಒಂದಿಷ್ಟು ರುಚಿ ನೋಡಿಬಿಡಲೇ ಎನ್ನುವ ಬಯಕೆ ಚಿಗುರು ಒಡೆದಿತು. ಸ್ವಲ್ಪ ಸ್ವಲ್ಪ ಎಲ್ಲ ಬಾಟಲಿಗಳಲ್ಲಿದ್ದ ಮದ್ಯಗಳನ್ನು ಬಾಯಿಗೆ ಹಾಕುತ್ತಾ ಬಂದ. ಬಯಕೆ ಈಡೇರಿಲ್ಲ. ಇನ್ನು ಚೂರು ಚೂರು ಎಂದು ಕುಡಿಯುತ್ತಾ ಹೋದವನಿಗೆ ಯಾವಾಗ ಲಿಮಿಟ್ ತಪ್ಪಿತ್ತೋ ಗೊತ್ತಿಲ್ಲ. ಅಲ್ಲಿಯೇ ಟೈ ಆಗಿ ಬಿದ್ದುಬಿಟ್ಟಿದ್ದಾನೆ.

ಬಿದ್ದವನಿಗೆ ಲೋಕ ಇಲ್ಲ. ಬೆಳಿಗ್ಗೆ ಅಂಗಡಿಯ ಸಿಬ್ಬಂದಿಗಳು ಹತ್ತು ಗಂಟೆಗೆ ಅಂಗಡಿ ತೆರೆದು ನೋಡಿದರೆ ಒಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಅವನ ಸುತ್ತಲೂ ಹಣದ ನೋಟುಗಳು ಚೆಲ್ಲಾಪಿಲ್ಲಿ ಆಗಿ ಬಿದ್ದಿವೆ. ಡ್ರಾವರ್ ನಲ್ಲಿರುವ ಹಣ ಇರಬೇಕಾದ ಕಡೆ ಇಲ್ಲ. ವಾತಾವರಣ ನೋಡಿದಾಗ ಸಂಶಯವೇ ಇಲ್ಲ, ಕಳ್ಳ ಕುಡಿದು ಮೂರ್ಚೆ ಬಿದ್ದಿದ್ದಾನೆ.

ನಂತರ ಪೊಲೀಸರು ಅವನನ್ನು ಎತ್ತಾಕಿಕೊಂಡು ಆಸ್ಪತ್ರೆಗೆ ಸೇರಿಸಿ ಅವನು ಪ್ರಜ್ಞೆಗೆ ಮರಳುವುದನ್ನು ಕಾಯುತ್ತಿದ್ದಾರೆ. ಆದರೆ ಅವನು ಯಾವ ಊರಿನ ಕಳ್ಳ, ಹೆಸರೇನು, ಹಿನ್ನಲೆ ಏನು ಎಂದು ಗೊತ್ತಾಗಲು ಅವನಿಗೆ ಪ್ರಜ್ಞೆ ಬರಬೇಕು.

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 3
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search