• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ವೈನ್ ಶಾಪಿಗೆ ನುಗ್ಗಿದ ಕಳ್ಳ ಬಿಟ್ಟಿ ಕುಡಿದು ಮಾಡಿದ್ದೇನು?

Tulunadu News Posted On December 31, 2024
0


0
Shares
  • Share On Facebook
  • Tweet It

ಅವನು ಕಳ್ಳ. ತೆಲಂಗಾಣ ರಾಜ್ಯದ ಮೇದಕ ಜಿಲ್ಲೆಯಲ್ಲಿ ಕಳ್ಳತನಕ್ಕೆ ಇಳಿದಿದ್ದ. ಅಲ್ಲಿ ಆವತ್ತು ಕಳ್ಳತನ ಮಾಡಲು ಅವನು ಆಯ್ಕೆ ಮಾಡಿದ್ದು ವೈನ್ ಶಾಪ್ ಅನ್ನು. ವೈನ್ ಶಾಪ್ ಹೆಸರು ಕನಕದುರ್ಗಾ. ಬಹಳ ಕಷ್ಟಪಟ್ಟು ಅಂಗಡಿಯ ನೆತ್ತಿಯ ಮಾರ್ಬಲ್ ಗಳನ್ನು ಕಳಚಿ ಬಹಳ ಜಾಗರೂಕನಾಗಿ ಅಂಗಡಿಯೊಳಗೆ ಇಳಿದ. ಇಳಿಯುವಾಗ ಮುಖಕ್ಕೆ ಒಂದಿಷ್ಟು ಪರಚಿದ ಗಾಯಗಳಾದವು. ಆದರೆ ಹೇಗೋ ಕೆಳಗೆ ಇಳಿದುಬಿಟ್ಟ, ನಂತರ ಅಂಗಡಿಯೊಳಗಿದ್ದ ಸಿಸಿಟಿವಿಗಳನ್ನು ಆಫ್ ಮಾಡಿಬಿಟ್ಟ. ಇನ್ನು ಏನೂ ಸಮಸ್ಯೆ ಇಲ್ಲ. ಸೀದಾ ಕಳ್ಳತನ ಮಾಡೋದು ಮತ್ತು ಎಸ್ಕೇಪ್ ಆಗೋದು ಎಂದು ನಿರ್ಧರಿಸಿಬಿಟ್ಟ.

ಗಲ್ಲಾಪೆಟ್ಟಿಗೆಯಲ್ಲಿದ್ದ ಹಣವನ್ನು ಬ್ಯಾಗಿಗೆ ತುಂಬಿಸಿಕೊಂಡ. ಇನ್ನೇನೂ ಹಿಂದಿರುಗಬೇಕು. ಅಲ್ಲಿದ್ದ ತರಹೇವಾರಿ ಮದ್ಯದ ಬಾಟಲುಗಳನ್ನು ನೋಡಿ ಆಸೆಗೆ ಬಿದ್ದುಬಿಟ್ಟ. ಎಲ್ಲವನ್ನು ತೆಗೆದುಕೊಂಡು ಹೋಗಲು ಕಷ್ಟಸಾಧ್ಯ. ಆದ್ದರಿಂದ ಪ್ರತಿಯೊಂದರ ಒಂದಿಷ್ಟು ರುಚಿ ನೋಡಿಬಿಡಲೇ ಎನ್ನುವ ಬಯಕೆ ಚಿಗುರು ಒಡೆದಿತು. ಸ್ವಲ್ಪ ಸ್ವಲ್ಪ ಎಲ್ಲ ಬಾಟಲಿಗಳಲ್ಲಿದ್ದ ಮದ್ಯಗಳನ್ನು ಬಾಯಿಗೆ ಹಾಕುತ್ತಾ ಬಂದ. ಬಯಕೆ ಈಡೇರಿಲ್ಲ. ಇನ್ನು ಚೂರು ಚೂರು ಎಂದು ಕುಡಿಯುತ್ತಾ ಹೋದವನಿಗೆ ಯಾವಾಗ ಲಿಮಿಟ್ ತಪ್ಪಿತ್ತೋ ಗೊತ್ತಿಲ್ಲ. ಅಲ್ಲಿಯೇ ಟೈ ಆಗಿ ಬಿದ್ದುಬಿಟ್ಟಿದ್ದಾನೆ.

ಬಿದ್ದವನಿಗೆ ಲೋಕ ಇಲ್ಲ. ಬೆಳಿಗ್ಗೆ ಅಂಗಡಿಯ ಸಿಬ್ಬಂದಿಗಳು ಹತ್ತು ಗಂಟೆಗೆ ಅಂಗಡಿ ತೆರೆದು ನೋಡಿದರೆ ಒಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ. ಅವನ ಸುತ್ತಲೂ ಹಣದ ನೋಟುಗಳು ಚೆಲ್ಲಾಪಿಲ್ಲಿ ಆಗಿ ಬಿದ್ದಿವೆ. ಡ್ರಾವರ್ ನಲ್ಲಿರುವ ಹಣ ಇರಬೇಕಾದ ಕಡೆ ಇಲ್ಲ. ವಾತಾವರಣ ನೋಡಿದಾಗ ಸಂಶಯವೇ ಇಲ್ಲ, ಕಳ್ಳ ಕುಡಿದು ಮೂರ್ಚೆ ಬಿದ್ದಿದ್ದಾನೆ.

ನಂತರ ಪೊಲೀಸರು ಅವನನ್ನು ಎತ್ತಾಕಿಕೊಂಡು ಆಸ್ಪತ್ರೆಗೆ ಸೇರಿಸಿ ಅವನು ಪ್ರಜ್ಞೆಗೆ ಮರಳುವುದನ್ನು ಕಾಯುತ್ತಿದ್ದಾರೆ. ಆದರೆ ಅವನು ಯಾವ ಊರಿನ ಕಳ್ಳ, ಹೆಸರೇನು, ಹಿನ್ನಲೆ ಏನು ಎಂದು ಗೊತ್ತಾಗಲು ಅವನಿಗೆ ಪ್ರಜ್ಞೆ ಬರಬೇಕು.

0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Tulunadu News February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!

  • Privacy Policy
  • Contact
© Tulunadu Infomedia.

Press enter/return to begin your search