• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಚೌತಿಗೆ ಮುಗಿಸುವ ಭರವಸೆ ನವರಾತ್ರಿ ಆದರೂ ಈಡೇರಿಲ್ಲ!

Hanumantha Kamath Posted On September 19, 2017


  • Share On Facebook
  • Tweet It

ನೀವು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಒಂದು ರಸ್ತೆಯಲ್ಲಿ ಕಳೆದ ವರ್ಷ ನಡೆದುಕೊಂಡು ಹೋಗಿದ್ದಿರಿ ಎಂದು ಅಂದುಕೊಳ್ಳೋಣ. ನಂತರ ನಿಮಗೆ ಕಾರಣಾಂತರಗಳಿಂದ ಅದೇ ರಸ್ತೆಯಲ್ಲಿ ಒಂದು ವರ್ಷ ಹೋಗುವ ಅಗತ್ಯ ಬರಲಿಲ್ಲ ಎಂದು ಅಂದುಕೊಳ್ಳೋಣ. ಈ ವರ್ಷ ನೀವು ಮತ್ತೆ ಅದೇ ರಸ್ತೆಯಲ್ಲಿ ಹೋಗಬೇಕಾಯಿತು ಎಂದು ಇಟ್ಟುಕೊಳ್ಳೋಣ. ಆಗ ನಿಮಗೆ ಈ ರಸ್ತೆ ಕಳೆದ ವರ್ಷ ಕೂಡ ಹೀಗೆ ಅರ್ಧ ಕಾಮಗಾರಿಯಾಗಿ ಇದ್ದ ನೆನಪಾಗುತ್ತದೆ. ಹಾಗೆ ಈ ಬಾರಿಯೂ ಹಾಗೆ ಕಾಮಗಾರಿ ಅರ್ಧದಲ್ಲಿಯೇ ಇದೆ ಎಂದು ಅನಿಸುತ್ತದೆ. ಹಾಗಾದರೆ ಏನೂ ಬದಲಾವಣೆ ಯಾಕೆ ಆಗಿಲ್ಲ ಎಂದು ನಿಮಗೆ ಅನಿಸಬಹುದು. ಅನಿಸುವುದಲ್ಲ, ಏನೂ ಆಗಿರುವುದಿಲ್ಲ. ನೀವು ಮುಂದಿನ ವರ್ಷ ಆ ರಸ್ತೆಯಲ್ಲಿ ಹೋದರೂ ಆ ರಸ್ತೆ ಹಾಗೆ ಇರುತ್ತದೆ. ಇದು ನಮ್ಮ ಪಾಲಿಕೆಯ ವಿಶೇಷ. ನಿಮಗೆ ಶೀಘ್ರದಲ್ಲಿ ಒಂದು ರಸ್ತೆಯ ಕಾಮಗಾರಿ ಮುಗಿದು ಹೋದರೆ ತಾವು ಮಾಡುವ ಘನಂದಾರಿ ಕೆಲಸಗಳು ಗೊತ್ತಾಗುವುದಿಲ್ಲ ಎಂದು ಅಂದುಕೊಂಡಿರುವ ಮಹಾನಗರ ಪಾಲಿಕೆಯ ಕಮೀಷನರ್, ಅಧಿಕಾರಿಗಳು, ಇಂಜಿನಿಯರ್ಸ್ ಗಳು ಒಂದು ರಸ್ತೆಯ ಕಾಮಗಾರಿ ಪ್ರಾರಂಭವಾದರೆ ಜನ ಸಾಕಪ್ಪ ಸಾಕು ಎಂದು ಅಂದುಕೊಳ್ಳುವ ತನಕ ಅದನ್ನು ಜೀವಂತ ಇಟ್ಟುಕೊಂಡಿರುತ್ತಾರೆ.
ಮಂಗಳೂರು ಮಹಾನಗರ ಪಾಲಿಕೆಯ ಕಾಮಗಾರಿಗಳು ಯಾವಾಗ ಶುರುವಾಗುತ್ತೆ ಮತ್ತು ಯಾವಾಗ ಮುಗಿಯುತ್ತೆ ಎಂದು ಗೊತ್ತಾಗಲು ಏನು ಮಾಡಬೇಕು ಎನ್ನುವ ಪ್ರಶ್ನೆಯನ್ನು ನನಗೆ ಯಾರಾದರೂ ಕೇಳಿದರೆ ಕಾಮಗಾರಿಯ ಒಪ್ಪಂದದ ಸಮಯದಲ್ಲಿ ಗುತ್ತಿಗೆದಾರರು ಮತ್ತು ಪಾಲಿಕೆ ನಡುವೆ ಆದ ಕರಾರು ಪತ್ರ ನೋಡಿ ಎಂದು ನಾನು ಹೇಳುವುದಿಲ್ಲ. ಅದರ ಬದಲಿಗೆ ಯಾವುದಾದರೂ ಜ್ಯೋತಿಷಿಯನ್ನು ಕೇಳಿ ಎಂದು ಹೇಳುತ್ತೇನೆ. ಯಾಕೆಂದರೆ ಕರಾರು ಪತ್ರಗಳು ಪಾಲಿಕೆಯಲ್ಲಿ ನಾಮಕಾವಸ್ತೆ. ಅದರಲ್ಲಿ ಕಾಮಗಾರಿ ಪ್ರಾರಂಭವಾದ ದಿನ ಮತ್ತು ಮುಗಿಯಬೇಕಾದ ದಿನ ಎಂದು ಏನು ಬರೆದಿರುತ್ತದೆಯೊ ಅದು ಕೇವಲ ಕಾಲಂ ಭರ್ತಿ ಮಾಡಲು ಮಾತ್ರ. ಅದರ ಮೇಲೆ ಅದನ್ನು ಯೋಜನಾ ವಿಭಾಗದ ಯಾವುದಾದರೂ ಹಳೆ ಕಪಾಟಿನ ಒಳಗೆ ಇಟ್ಟರೆ ಅದರ ಅಗತ್ಯ ಯಾರಿಗೂ ಬೀಳುವುದಿಲ್ಲ.
ಇಷ್ಟು ಹೇಳಲು ಕಾರಣ ಮಂಗಳೂರಿನ ರಥಬೀದಿಯ ಸಮೀಪವಿರುವ ರಾಮಮಂದಿರದಿಂದ ರಾಮ ಲಂಚ್ ಹೋಂ ಇದೆಯಲ್ಲ, ಆ ರಸ್ತೆಯ ಕಾಮಗಾರಿ ಯಾವತ್ತೋ ಪ್ರಾರಂಭವಾಗಿತ್ತು. ಅದರಲ್ಲಿ ರಾಮ ಮಂದಿರದಿಂದ ರಾಮಕಾಂತಿ ಸಿನೆಮಾ ಗೃಹದ ತನಕದ ಕಾಮಗಾರಿ ಅರ್ಧ ಮುಗಿದಿದೆ. ನಂತರ ಗುತ್ತಿಗೆದಾರರ ಕಣ್ಣಿಗೆ ಅಪರಿಚಿತರು ಬಟ್ಟೆ ಕಟ್ಟಿ ಎಲ್ಲಿಯಾದರೂ ಕಾಡಿನಲ್ಲಿ ಬಿಟ್ಟು ಬಂದಿದ್ದಾರಾ ಎನ್ನುವಂತೆ ಗುತ್ತಿಗೆದಾರರು ಈ ಕಡೆ ಸುಳಿಯಲಿಲ್ಲ. ಅವರಿಗೆ ಇಲ್ಲಿನ ವಿಳಾಸವೇ ಮರೆತು ಹೋದಂತಿತ್ತು. ಅದರ ಪರಿಣಾಮವಾಗಿ ಕೆಲಸ ನಿಂತು ಹೋಯಿತು. ಕಾಮಗಾರಿ ಮುಂದುವರೆಯದೆ ಇದ್ದ ಕಾರಣ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿತ್ತು. ಇಲ್ಲಿನ ಮನಪಾ ಸದಸ್ಯೆ ಪೂರ್ಣಿಮಾ ಅವರು ಎಷ್ಟು ಸಲ ಹೋಗಿ ಕಮೀಷನರ್ ಅವರತ್ರ ವಿನಂತಿ ಮಾಡಿಕೊಂಡರೂ ಕೆಲಸ ಮುಂದುವರೆಯಲೇ ಇಲ್ಲ. ನಂತರ ಪೂರ್ಣಿಮಾ ಅವರ ಅದೃಷ್ಟವೋ ಏನೋ, ಈ ಹೆಂಗಸು ಇಷ್ಟು ಸಲ ಕೇಳಿಕೊಂಡ ಮೇಲೆ ಒಂದು ನೂರು ಮೀಟರ್ ಉದ್ದದ ಕಾಮಗಾರಿಯನ್ನು ಮುಗಿಸುವ ಮಾತುಕತೆಯೊಂದಿಗೆ ಗಣೇಶ್ ಚೌತಿ ಹತ್ತಿರದಲ್ಲಿ ಇರುವುದರಿಂದ ಅಷ್ಟರೊಳಗೆ ಮುಗಿಸುವ ಭರವಸೆಯೊಂದಿಗೆ ಕಮೀಷನರ್ ಮೊಹಮ್ಮದ್ ನಝೀರ್ ಕಾಮಗಾರಿಯನ್ನು ಪ್ರಾರಂಭಿಸುವ ಭರವಸೆ ನೀಡಿದರು. ಅಬ್ಬಾ, ಇನ್ನಾದರೂ ಕೆಲಸ ಬೇಗ ಮುಗಿಯುತ್ತೆ ಎಂದು ಈ ರಸ್ತೆಯಲ್ಲಿ ಅಂಗಡಿ ಇಟ್ಟುಕೊಂಡವರು, ವ್ಯಾಪಾರ ಮಾಡುತ್ತಿರುವವರು ಎಲ್ಲಾ ಅಂದುಕೊಂಡರು. ಆದರೆ ಚೌತಿ ಮುಗಿದು ಎರಡು ತಿಂಗಳಾಗುತ್ತಾ ಬಂದರೂ ಕೆಲಸ ಪೂರ್ಣಗೊಂಡಿಲ್ಲ. ಶ್ರೀರಾಮ ಲಂಚ್ ಹೋಂ ಎದುರಿನ ರಾಘವೇಂದ್ರ ಮಠಕ್ಕೆ ಹೋಗುವ ರಸ್ತೆ ಇಳಿಜಾರು ಮಾಡಿಕೊಡದೇ ಈ ರಸ್ತೆಯಲ್ಲಿ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಇದಕ್ಕೆಲ್ಲಾ ಏನು ಕಾರಣ. ಸಿಂಪಲ್, ಪಾಲಿಕೆಯ ಗುತ್ತಿಗೆದಾರರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲ. ಹೇಳುವ ನೈತಿಕತೆ ಅಧಿಕಾರಿಗಳಿಗಿಲ್ಲ, “ಕೇಳುವುದು” ಅಭ್ಯಾಸವಾಗಿರುವುದರಿಂದ ಅದು ನೈತಿಕತೆಯನ್ನು ನುಂಗಿ ಹಾಕಿದೆ. ಒಬ್ಬ ಗುತ್ತಿಗೆದಾರ ಇಷ್ಟು ನಿಗದಿತ ಸಮಯದೊಳಗೆ ಕೆಲಸ ಮುಗಿಸದಿದ್ದರೆ ಅವನನ್ನು ಕಪ್ಪು ಪಟ್ಟಿಗೆ ಸೇರಿಸುವ ಅವಕಾಶ ಇಂಜಿನಿಯರ್ ವಿಭಾಗಕ್ಕೆ ಇದೆ. ಆದರೆ ಇವರು ಅವನಿಂದ ಕಪ್ಪು ಹಣ ಸ್ವೀಕರಿಸುವುದರಿಂದ ಕಪ್ಪು ಪಟ್ಟಿ ಇವರ ಚರಿತ್ರೆಯಲ್ಲಿಯೇ ಇಲ್ಲ. ಎಲ್ಲವೂ ಸೆಟಲ್ ಮೆಂಟ್ ಬಿಜಿನೆಸ್. ಆದ್ದರಿಂದ ಕೆಲಸ ಪ್ರಾರಂಭಿಸುವಾಗ 20 ರೂಪಾಯಿ ಸ್ಟ್ಯಾಂಪ್ ಪೇಪರ್ ಮೇಲೆ ನಡೆದ ಕರಾರು ಒಪ್ಪಂದ ಹಾಗೆ ಮುದುಡಿ ಗಾಳಿಯಾಡದ ಕಪಾಟಿನಲ್ಲಿ ಪ್ರಾಣ ಬಿಡುತ್ತಿದ್ದರೆ ಇತ್ತ ಈ ರಸ್ತೆಯಲ್ಲಿ ನಡೆಯುವ ಜನ, ಓಡಾಡುವ ವಾಹನಗಳು ಪಾಲಿಕೆಗೆ ಶಾಪ ಹಾಕುತ್ತಿರುತ್ತವೆ.

  • Share On Facebook
  • Tweet It


- Advertisement -
Bhavanthi street roadMCC


Trending Now
ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
Hanumantha Kamath May 24, 2025
ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
Hanumantha Kamath May 23, 2025
You may also like
ಈ ಬಾರಿ ಪಾಲಿಕೆಗೆ ತಲೆ ಇದ್ದವರು ಬರಲಿ, ಹಸಿವಿದ್ದವರು ಅಲ್ಲ!!
October 22, 2019
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಇಂಟರ್ ಲಾಕ್ ಕಾಂಕ್ರೀಟ್ ಬ್ಯಾಂಡ್ ಗಳು ಪಪ್ಪಡ ಒಡೆದಂತೆ ಒಡೆದು ಹೋಗಿವೆ!
May 24, 2018
Leave A Reply

  • Recent Posts

    • ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!
    • ಕನ್ನಡತಿಯ ಮುಸ್ಲಿಂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕತೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
    • ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
  • Popular Posts

    • 1
      ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • 2
      ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • 3
      ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • 4
      ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • 5
      ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search