• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮನಪಾ ಹೇಳುತ್ತಿದೆ ದಿಲ್ ಮಾಂಗೇ “ಮೋರ್” ಅದಕ್ಕೆ ಅತಿಕ್ರಮಣ ತೆರವಾಗುತ್ತಿಲ್ಲ!

Hanumantha Kamath Posted On October 4, 2017
0


0
Shares
  • Share On Facebook
  • Tweet It

ಮೋರ್ ನವರು ತಮ್ಮ ಅತಿಕ್ರಮಣವನ್ನು ಹೇಗೆ ರಾಜಾರೋಷವಾಗಿ ಮಾಡುತ್ತಾರೆ ಎಂದರೆ ಇವತ್ತು, ನಿನ್ನೆ ಪೋಸ್ಟ್ ಮಾಡಿರುವ ಫೋಟೋಗಳನ್ನು ನೋಡಿ. ಇದು ಅಪ್ಪಟ ಅತಿಕ್ರಮಣ ಮತ್ತು ಅನಧಿಕೃತ ವ್ಯವಸ್ಥೆ ಎಂದು ಪಾಲಿಕೆಯಲ್ಲಿ ಕಸ ಗುಡಿಸುವವರಿಗೂ ಗೊತ್ತಿರುತ್ತದೆ. ಮಂಗಳೂರಿನ ಚಿಲಿಂಬಿಯಲ್ಲಿರುವ ಮೋರ್ ಮಾಡಿರುವ ಅತಿಕ್ರಮಣವನ್ನು ತೆರವುಗೊಳಿಸಲು ಕೆಲವು ಸಮಯದ ಮೊದಲು ಒಮ್ಮೆ ಮೇಯರ್ ಕವಿತಾ ಸನಿಲ್ ಆದೇಶ ಕೊಟ್ಟಿದ್ದರು. ಮೇಯರ್ ಸುಮ್ಮನೆ ಕುಳಿತು ಅತಿಕ್ರಮಣಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ಅವರ ಆದೇಶದ ನಂತರ ಏನಾಯಿತು ಎನ್ನುವುದೇ ಇವತ್ತಿನ ಟ್ವಿಸ್ಟ್.
ಮೇಯರ್ ಆದೇಶದಂತೆ ಪಾಲಿಕೆಯ ಅಧಿಕಾರಿಗಳು ಅಕ್ರಮ ತೆರವುಗೊಳಿಸಲು ಜೆಸಿಬಿ ಹಿಡಿದುಕೊಂಡು ಹೋಗಿದ್ದರು. ಅಲ್ಲಿ ಹೋದಾಗ ಅಲ್ಲಿನ ವ್ಯವಸ್ಥಾಪಕರು “ನೀವೆ ತೆರವು ಕಾರ್ಯಾಚರಣೆ ಮಾಡಿದರೆ ಅಕ್ಕಪಕ್ಕದಲ್ಲಿ ನಮ್ಮ ಮಾನ ಮರ್ಯಾದೆ ಹರಾಜಾಗುತ್ತದೆ. ಅದರ ಬದಲು ನಮಗೆ ಒಂದು ವಾರ ಕಾಲಾವಕಾಶ ಕೊಡಿ. ಅಷ್ಟರ ಒಳಗೆ ನಾವೇ ತೆರವುಗೊಳಿಸಿ ಕೊಡುತ್ತೇವೆ” ಎಂದು ವಿನಂತಿ ಮಾಡಿಕೊಂಡಿದ್ದರು. ಸರಿ, ನಮಗೆ ಬಂದ ಕೆಲಸ ಉಳಿಯಿತು. ಇನ್ನು ಶರ್ಟ್, ಪ್ಯಾಂಟ್ ಧೂಳಿ ಮಾಡಿಕೊಳ್ಳುವುದೇಕೆ, ಆಯಿತು, ನಿಮ್ಮ ಮರ್ಯಾದೆಯ ಕಾಳಜಿ ನಮಗೆ ಇದೆ, ವಾರದೊಳಗೆ ತೆರವು ಮಾಡಿಕೊಡಿ ಎಂದು ಅಧಿಕಾರಿಗಳು ಹೇಳಿ ಎಂಕ ಪಣಂಬೂರಿಗೆ ಹೋದ ಹಾಗೆ ಹೋಗಿ ಬಂದಿದ್ದರು.
ಆ ಬಳಿಕ ಒಂದು ವಾರ ಆಯಿತು, ಹತ್ತು ದಿನ ಆಯಿತು, ಮೋರ್ ನವರು ಆರಾಮವಾಗಿದ್ದಾರೆ, ಬುಧವಾರದ ಸಂತೆ ಎಂದು ಇನ್ನಷ್ಟು ತರಕಾರಿ, ಹಣ್ಣು ಹಂಪಲು, ಇವರ ತಳ್ಳುವ ಗಾಡಿಗಳು ಹೊರಗೆ ಹರಡಿಕೊಳ್ಳುತ್ತಿವೆ ಬಿಟ್ಟರೆ ತೆರವುಗೊಳಿಸುವ ಸೂಚನೆಯೇ ಕಾಣುತ್ತಿಲ್ಲ ಎಂದಾಗ ಅಧಿಕಾರಿಗಳು ಮತ್ತೊಮ್ಮೆ ಜೆಸಿಬಿ ಹಿಡಿದು ಹೊರಟರು. ಈ ಬಾರಿ ತೆರವುಗೊಳಿಸಿಯೇ ಹಿಂತಿರುಗುತ್ತೇವೆ ಅಂತ “ದಂಡ”ಯಾತ್ರೆಗೆ ಹೊರಟರು. ಇನ್ನೇನೂ ಇವರು ಚಿಲಿಂಬಿ ತಲುಪಿ ಜೆಸಿಬಿ ನೆಟ್ಟಗೆ ನಿಂತು ಮೈ ಕೊಡವಿ ತನ್ನ 18 ಹಲ್ಲುಗಳನ್ನು ತೆರೆದು ಬಾಯಿ ಅಗಲ ಮಾಡಿ ಮೋರ್ ನವರ ಅತಿಕ್ರಮಣವನ್ನು ನುಂಗಿ ಬಿಡಬೇಕು ಎಂದು ತಯಾರಾಗುವಷ್ಟರಲ್ಲಿ ಅಪ್ಪಟ ಕಾಲಿವುಡ್ ಸಿನೆಮಾದಂತೆ ಒಂದು ಟ್ವಿಸ್ಟ್ ಬರುತ್ತದೆ.
ಇನ್ನೇನೂ ಪಾಲಿಕೆಯ ಪಟ್ಟಣ ಯೋಜನಾ ಅಧಿಕಾರಿಯವರು “ಎಕ್ಷನ್” ಎಂದು ಹೇಳಬೇಕು ಅಷ್ಟರಲ್ಲಿ ಅವರ ಮೊಬೈಲಿಗೆ ಒಂದು ಕರೆ ಬರುತ್ತದೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿ ತೆರವು ಗಿರವು ಮಾಡುವುದು ಏನೂ ಬೇಡಾ, ಅಲ್ಲಿಯೇ ನಿಲ್ಲಿಸಿ ಸೀದಾ ಹೊರಟು ಬನ್ನಿ ಎಂದು ಸೂಚನೆ ಕೊಡುತ್ತಾರೆ. ಆ ಕಡೆಯಿಂದ ಸೂಚನೆ ಕೊಟ್ಟ ಮಹಾನುಭಾವ ಯಾರು ಎಂದು ಆ ಅಧಿಕಾರಿಗೆ ಬಿಟ್ಟರೆ ಯಾರಿಗೂ ಗೊತ್ತಿಲ್ಲ. ಅವರು ತಕ್ಷಣ ಎಕ್ಷನ್ ಅನ್ನಬೇಕಾದರೂ ಪ್ಯಾಕ್ ಅಪ್ ಎಂದು ಹೇಳಿ ತಮ್ಮ ಗಾಡಿಯನ್ನು ತಿರುಗಿಸುತ್ತಾರೆ. ಜೆಸಿಬಿ ಬಾಯಿಯನ್ನು ಮುಚ್ಚಿ ಮತ್ತೆ ಹಿಂದಿರುಗುತ್ತದೆ. ಇದು ನಮ್ಮ ಪಾಲಿಕೆಯ ಅವಸ್ಥೆ. ದೊಡ್ಡವರ ಮೇಲೆ ಕೈ ಹಾಕಲು ಇವರು ಹೋಗುವುದಿಲ್ಲ. ಸಣ್ಣವರ ಮೇಲೆ ಕೈ ಹಾಕಿದರೆ ಕೈ ಹಾಕಿದರೆ ಕೇಳುವವರಿಲ್ಲ. ನನ್ನ ವಿನಂತಿ ಇಷ್ಟೇ, ಮೊನ್ನೆಯ ಪರಿಷತ್ ಸಭೆಯಲ್ಲಿ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲು ಸೂಚನೆ ಕೊಡಲಾಗಿದೆ. ಅಕ್ಟೋಬರ್ ನ ಪರಿಷತ್ ಸಭೆಯಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಸೂಚನೆ ಹೊರಗೆ ಬರಲಿ. ಎಷ್ಟು ಅಂತ ಆ ಗೂಡಂಗಡಿಗಳನ್ನೇ ತೆರವುಗೊಳಿಸುವುದು, ಪಾಲಿಕೆ ಕೂಡ ಬೆಳೆಯಬೇಕಲ್ಲ. ದೊಡ್ಡ ದೊಡ್ಡದಕ್ಕೆ ಕೈ ಹಾಕಿ.
ಇನ್ನು ಮೇಯರ್ ಒಂದು ವೇಳೆ ಧೈರ್ಯ ತೋರಿಸಿ ಅಕ್ರಮ ಕಟ್ಟಡಗಳ ತೆರವಿಗೆ ಸೂಚನೆ ಕೊಟ್ಟರೂ ಅವರ ಸೂಚನೆ ಜಾರಿಗೆ ಬರುವ ಮೊದಲೇ ಬೇರೆ ಸದಸ್ಯರು, ಅಧಿಕಾರಿಗಳು ತಮ್ಮ ಚಿಲ್ಲರೆ ಬುದ್ಧಿ ತೋರಿಸಿ ಮೇಲೆಯಿಂದ ಫೋನ್ ಬರುವ ಹಾಗೆ ಮಾಡಬೇಡಿ. ಒಂದು ವೇಳೆ ಹಾಗೆ ಯಾರಾದರೂ ಮಾಡಿದರೆ ಅವರನ್ನು ಸದಸ್ಯರು, ಅಧಿಕಾರಿಗಳು ಎಂದು ಕರೆಯುವ ಬದಲಿಗೆ ಬ್ರೋಕರ್ ಗಳು ಎಂದು ಕರೆಯುವುದು ಸೂಕ್ತ. ನಾನು ಬ್ರೋಕರ್ ಎಂಬ ಮರ್ಯಾದಸ್ಥ ಶಬ್ದವನ್ನೇ ಬಳಸುತ್ತಿದ್ದೇನೆ, ಬೇಕಾದರೆ ಪಿಂಪ್ ಎಂದು ಕೂಡ ಕರೆಯಬಹುದಿತ್ತು. ಆದರೆ ಒಂದು ಅವಕಾಶ ಇನ್ನೊಮ್ಮೆ ಕೊಟ್ಟು ನೋಡೋಣ ಎನ್ನುವ ಕಾರಣಕ್ಕಾಗಿ ಮರ್ಯಾದೆ ಇನ್ನು ಕೊಡುತ್ತಿದ್ದೇನೆ. ಪಾಲಿಕೆಯ ಸದಸ್ಯರು ಅನಧಿಕೃತ ಬ್ರೋಕರ್ ಗಳಾಗುವುದು ನಿಲ್ಲಿಸಿ. ಇಲ್ಲದಿದ್ರೆ ಪಾಲಿಕೆಯ ಒಳಗೆ ಒಂದು ಕೋಣೆ ಖಾಲಿ ಮಾಡಿ “ಬ್ರೋಕರ್ಸ್ ರೆಸ್ಟ್ ರೂಂ” ಅಂತ ಮಾಡಿ. ಆಗ ಜನರಿಗೂ, ಬಿಲ್ಡರ್ಸ್ ಗಳಿಗೂ ಅನುಕೂಲವಾಗುತ್ತದೆ. ಪುನ: ಹುಡುಕುವ ಅಗತ್ಯ ಬರುವುದಿಲ್ಲ!

0
Shares
  • Share On Facebook
  • Tweet It


- Advertisement -
MCCMORE Genereal store


Trending Now
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
Hanumantha Kamath June 18, 2025
You may also like
ಈ ಬಾರಿ ಪಾಲಿಕೆಗೆ ತಲೆ ಇದ್ದವರು ಬರಲಿ, ಹಸಿವಿದ್ದವರು ಅಲ್ಲ!!
October 22, 2019
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಇಂಟರ್ ಲಾಕ್ ಕಾಂಕ್ರೀಟ್ ಬ್ಯಾಂಡ್ ಗಳು ಪಪ್ಪಡ ಒಡೆದಂತೆ ಒಡೆದು ಹೋಗಿವೆ!
May 24, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
    • 114 ಮುಸ್ಲಿಮರು ಸೇರಿ ದೇಗುಲದ 167 ಸಿಬ್ಬಂದಿ ವಜಾ ಮಾಡಿ ಆದೇಶ!
  • Popular Posts

    • 1
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 2
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 3
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 4
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • 5
      ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search