• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಾಷ್ಟ್ರಗೀತೆ ಹಾಡಿಸಲು ಸಿನಿಮಾ ಮಂದಿರವೇನು ಶಾಲೆಯೇ: ವಿದ್ಯಾಬಾಲನ್ ಅವಿದ್ಯಾವಂತ ಪ್ರಶ್ನೆ

TNN Correspondent Posted On October 30, 2017


  • Share On Facebook
  • Tweet It

ನಮ್ಮ ದೇಶದ ಜನರೇ ಹಾಗೆ, ರೇಷನ್ ಗಾಗಿ ಇಡೀ ದಿನಕಾಯುತ್ತೇವೆ, ಜಿಯೋ ಸಿಮ್ ಪಡೆಯಲು ಎರಡು ತಾಸು ಸಾಲಿನಲ್ಲಿ ನಿಲ್ಲಲು ನಮಗೆ ಏನೂ ತೊಂದರೆಯಾಗಲ್ಲ. ಅಷ್ಟೇ ಅಲ್ಲ, ಸಿನಿಮಾ ಮಂದಿರದಲ್ಲಿ ಅರ್ಧತಾಸು ಗುದ್ದಾಡಿಯಾದರೂ ಮೊದಲ ಶೋಗೆ ಟಿಕೆಟ್ ತರುತ್ತೇವೆ. ಆದರೆ, ಸಿನಿಮಾ ಮಂದಿರದಲ್ಲಿ ರಾಷ್ಟ್ರಗೀತೆ ಮೊಳಗಿದರೆ 52 ಸೆಕೆಂಡ್ ನಿಲಲ್ಲು ನಮ್ಮ ನರಗಳಲ್ಲಿ ಶಕ್ತಿಯಿರಲ್ಲ.

ಅಲ್ಲದೆ, ಇದು ದೇಶಭಕ್ತಿಯ ವಿಷಯವೂ ಆಗಿರುವುದರಿಂದ ಕೆಲವು ಎಡಬಿಡಂಗಿಗಳು, ನರಸತ್ತವರು, ವಿಚಾರಹೀನರು, ವಿಕ್ಷಿಪ್ತ ಮನಸ್ಸಿನ ರಾಜಕಾರಣಿಗಳು ಮಾತ್ರ ನಾವೇಕೆ ರಾಷ್ಟ್ರಗೀತೆ ಎದ್ದು ನಿಲ್ಲಬೇಕು ಎನ್ನುತ್ತಾರೆ.

ಈ ಸಾಲಿಗೆ ಬಾಲಿವುಡ್ ನಟಿ ವಿದ್ಯಾಬಾಲನ್ ಸಹ ಸೇರಿದ್ದು, “ರಾಷ್ಟ್ರಗೀತೆ ಹಾಡಿಸಲು ಸಿನಿಮಾ ಮಂದಿರವೇನು ಶಾಲೇಯೇ?” ಎಂದು ಪೆದ್ದಾಗಿ ಪ್ರಶ್ನೆ ಕೇಳಿದ್ದಾರೆ.

ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಬಾರದು. ದೇಶಭಕ್ತಿಯನ್ನು ಬಲವಂತವಾಗಿ ಹೇರಬಾರದು ಎಂದಿದ್ದಾರೆ.

ಅಲ್ಲ, ವಿದ್ಯಾಬಾಲನ್, ದೇಶಭಕ್ತಿಯನ್ನು ಬಲವಂತವಾಗಿ ಹೇರುತ್ತಿದ್ದಾರೆ ಎನ್ನಲು, ರಾಷ್ಟ್ರಗೀತೆ ಎರಡು ತಾಸಿನದ್ದಲ್ಲ. ಟಿಕೆಟಿಗಾಗಿ ಅರ್ಧತಾಸು ಬಡಿದಾಡುವ ನಾವು ರಾಷ್ಟ್ರಗೀತೆಗೆ ಎದ್ದು ನಿಲ್ಲುವಷ್ಟು ತಾಳ್ಮೆ ಇಲ್ಲ ಎಂದರೆ ಹೇಗೆ? ಅಷ್ಟಕ್ಕೂ ಬರೀ ಶಾಲೆಯಲ್ಲಿ ಮಾತ್ರ ರಾಷ್ಟ್ರಗೀತೆ ಹಾಡಬೇಕೆ?

ಇನ್ನೂ ಮುಂದುವರಿದು ನಾನು ಎಲ್ಲೇ ರಾಷ್ಟ್ರಗೀತೆ ಕೇಳಿದರೂ ಎದ್ದು ನಿಲ್ಲುತ್ತೇನೆ ಎನ್ನುತ್ತೀರಿ.ಮತ್ತೆ ಸಿನಿಮಾ ಮಂದಿರದಲ್ಲಿ ರಾಷ್ಟ್ರಗೀತೆ ಬೇಡ ಎನ್ನುತ್ತೀರಿ. ನಿಮ್ಮ ಈ ಇಬ್ಬಂದಿತನಕ್ಕೆ ಏನೆನ್ನಬೇಕು?

ಇನ್ನು ನಮ್ಮ ತಂದೆಗೆ ರಾಷ್ಟ್ರಗೀತೆ ಕೇಳಿಸಲಾದರೂ ನಾನು ಒಲಿಂಪಿಕ್ ನಲ್ಲಿ ಪದಕ ಗೆಲ್ಲಬೇಕು ಎಂದುಕೊಂಡಿದ್ದೆ ಎಂದು ಪದಕ ಗೆದ್ದ ಬಳಿಕ ಸೈನಾ ನೆಹ್ವಾಲ್ ಹೇಳಿದ್ದರು. ರಾಷ್ಟ್ರಗೀತೆ ಅಷ್ಟರಮಟ್ಟಿಗೆ ಸ್ಫೂರ್ತಿ ನೀಡುವಂಥಾದ್ದು. ಆದರೆ ಅಂಥ ಗೀತೆಯನ್ನೇ ಬೇಡ ಎನ್ನುತ್ತಿರುವ ವಿದ್ಯಾಬಾಲನ್ “ಡರ್ಟಿ” ಮನಸ್ಥಿತಿಗೆ ಬೇಸರ ವ್ಯಕ್ತಪಡಿಸದೆ ಬೇರೆ ದಾರಿಯಿಲ್ಲ.

 

  • Share On Facebook
  • Tweet It


- Advertisement -


Trending Now
ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
Tulunadu News September 25, 2023
ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
Tulunadu News September 22, 2023
Leave A Reply

  • Recent Posts

    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
    • ಈ ಬಾರಿ ಮಹಿಷ ದಸರಾ ಯಾಕೆ ನಡೆಯಬೇಕು!
    • ಸೌದಿಗೆ ಇಂಧನ ಶಕ್ತಿ ತುಂಬಲಿರುವ ಭಾರತ!
  • Popular Posts

    • 1
      ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • 2
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search