• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಉಡುಪಿ ಕೃಷ್ಣಮಠದ ಮೇಲಿನ ಕೋಪದಿಂದ ಸಿದ್ಧರಾಮಯ್ಯ ಮಾಡಲು ಹೊರಟಿರುವುದೇನು?

Hanumantha Kamath Posted On December 12, 2017
0


0
Shares
  • Share On Facebook
  • Tweet It

ಎ ಗ್ರೇಡಿನ ದೇವಸ್ಥಾನಗಳ ಅರ್ಚಕರು ಪುಣ್ಯವಂತರು, ನಾವು ಸಿ ಗ್ರೇಡಿನ ದೇವಸ್ಥಾನಗಳ ಅರ್ಚಕರು ನತದೃಷ್ಟವಂತರು ಎಂದು ಯಾವ ಪುರೋಹಿತರು ಅಂದುಕೊಳ್ಳಬಾರದು. ಅಂತಹ ವಾತಾವರಣ ನಿರ್ಮಿಸುವ ಕೆಲಸ ರಾಜ್ಯ ಸರಕಾರಗಳು ಮಾಡಬೇಕು. ಅದರಿಂದ ಸರಕಾರಕ್ಕೆ ಏನೂ ಹೊರೆಯಾಗುವುದಿಲ್ಲ. ಅಡುಗೆ ಕೋಣೆಯಲ್ಲಿ ಅಡುಗೆ ಮಾಡಿ ವರಾಂಡದಲ್ಲಿ ಬಡಿಸಿದಷ್ಟೇ ಸುಲಭ. ಅಲ್ಲಿಂದ ತಂದು ಇಲ್ಲಿ ಬಡಿಸಿದರೇ ಆಯಿತು. ಇದೇನೂ ರಾಜ್ಯ ಸರಕಾರಕ್ಕೆ ಕಷ್ಟವಲ್ಲ. ಯಾಕೆಂದರೆ ರಾಜ್ಯ ಸರಕಾರಕ್ಕೆ ಇದನ್ನು ಬೇರೆ ವಿಷಯಗಳಲ್ಲಿ ಮಾಡಿ ಅಭ್ಯಾಸ ಇದೆ. ಉದಾಹರಣೆಗೆ ರಾಜ್ಯದಲ್ಲಿರುವ ಮಸೀದಿಗಳಲ್ಲಿರುವ ಧರ್ಮಬೋಧಕರಿಗೆ ರಾಜ್ಯ ಸರಕಾರ ವಕ್ಫ್ ಬೋರ್ಡ್ ಕಡೆಯಿಂದ ಗೌರವಧನ ಎಂದು ಕೊಡಲಾಗುತ್ತದೆ. ಅಂದರೆ ಅದು ಸರಕಾರದ ಹಣ. ಅದೇ ಮಸೀದಿಗಳಿಂದ ಎಷ್ಟು ಆದಾಯ ಸರಕಾರಕ್ಕೆ ಹೋಗುತ್ತದೆ. ಆದರೆ ದೇವಸ್ಥಾನಗಳ ವಿಷಯ ಆಗಲ್ಲ. ಎ ಗ್ರೇಡ್ ದೇವಸ್ಥಾನಗಳಿಂದ ಸರಕಾರಕ್ಕೆ ಹೋಗುವ ವಾರ್ಷಿಕ ಆದಾಯದಿಂದ ಎಷ್ಟೋ ಬೇರೆ ದೇವಸ್ಥಾನಗಳನ್ನು ಕಟ್ಟಬಹುದು. ಆದರೆ ಅದೇ ಎ ಗ್ರೇಡಿನ ದೇವಸ್ಥಾನವೊಂದರಲ್ಲಿ ಏನಾದರೂ ಅಭಿವೃದ್ಧಿ ಆಗಬೇಕು ಎಂದು ಹೇಳಿ ನೋಡಿ. ಅದರಷ್ಟು ನಿಧಾನವಾಗಿ ಬೇರೆ ಯಾವ ಕೆಲಸ ಕೂಡ ಆಗುವುದಿಲ್ಲ. ಎ ಗ್ರೇಡ್ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಊಟಕ್ಕೆ ಹೋಗುವ ದಾರಿಯಲ್ಲಿ ಸರದಿಯಂತೆ ಹೋಗಲು ಬ್ಯಾರಿಕೇಡಿನ ವ್ಯವಸ್ಥೆಯಂತಹ ಏನಾದರೂ ಚಿಕ್ಕ ಕೆಲಸವಾಗಬೇಕಾದರೂ ಅದಕ್ಕೆ ನಿರಂತರವಾಗಿ ಮೀಟಿಂಗ್ ಮಾಡಿ ಆ ಪ್ರಪೋಸಲ್ ಅನ್ನು ಧಾರ್ಮಿಕ ದತ್ತಿ ಇಲಾಖೆಗೆ ಕಳುಹಿಸಿ ಅಲ್ಲಿನ ಕಾರ್ಯದರ್ಶಿಗಳು ಅದನ್ನು ನೋಡಿ ಅವರು ಫ್ರೀ ಇದ್ದಾಗ ಸಂಬಂಧಪಟ್ಟವರೊಂದಿಗೆ ಸಭೆ ನಡೆಸಿ ನಂತರ ಅಲ್ಲಿಂದ ಹಣ ಬಂದಾಗ ಈ ಸಲದ ಮಳೆಗಾಲಕ್ಕೆ ಮಾಡಿಸಬೇಕು ಎಂದಿದ್ದು ಮುಂದಿನ ಬೇಸಿಗೆ ಬರುತ್ತದೆ. ಅಷ್ಟಕ್ಕೂ ಹಣ ಇದೇ ಎ ಗ್ರೇಡ್ ದೇವಸ್ಥಾನಗಳದ್ದು. ಸರಕಾರ ಏನೂ ಪ್ರೀತಿಯಿಂದ ಕೊಡುವುದಲ್ಲ. ಆದರೆ ಹಣ ಬಿಡುಗಡೆಯಾಗುವುದು ಮಾತ್ರ ಸರಕಾರದ ಕಡೆಯಿಂದ ಆದ ಕಾರಣ ಸರಕಾರದ ಕೆಲಸ ದೇವರ ಕೆಲಸ ಎನ್ನುವುದು ಇಲ್ಲಿ ಉಲ್ಟಾ ಆಗಿ ದೇವರ ಕೆಲಸ ಸರಕಾರದ ಕೆಲಸ ಅದಕ್ಕೆ ಇವತ್ತು ಹೇಳಿದರೆ ಮುಂದಿನ ವರ್ಷ ಆಗುತ್ತೆ ಎನ್ನುವ ಮಾತು ಪ್ರಚಲಿತದಲ್ಲಿದೆ. ಹೀಗೆ ದೇವಸ್ಥಾನಗಳ ಅಭಿವೃದ್ಧಿ ಕೆಲಸಗಳು ಆಮೆಗತಿಯಲ್ಲಿ ನಡೆಯುವುದರಿಂದ ಅಲ್ಲಿನ ಟ್ರಸ್ಟಿಗಳಿಗೆ, ಆಡಳಿತಾಧಿಕಾರಿಗಳಿಗೆ ಎಷ್ಟು ಆಸಕ್ತಿ ಉಳಿದಿರುತ್ತದೆ ಎನ್ನುವುದು ನಮಗೆ ಗೊತ್ತಿರುವ ವಿಚಾರ. ಇನ್ನು ತಮ್ಮ ಸರಕಾರಗಳು ಇರುವಷ್ಟು ದಿನ ಮಾತ್ರ ತಮಗೆ ವಿಐಪಿಗಳಿಗೆ ಹಾರ ಹಾಕುವುದು, ಫೋಟೋ ತೆಗೆಯುವುದು ಇರುತ್ತದೆ ಎಂದು ಗೊತ್ತಿರುವುದರಿಂದ, ಈ ಅಭಿವೃದ್ಧಿಗೆ ತಲೆ ಹಾಕಿದರೂ ಅದರಿಂದ ತಮ್ಮ ಪಬ್ಲಿಸಿಟಿ ಏನೂ ಆಗುವುದಿಲ್ಲ ಎಂದು ಅಂದುಕೊಂಡಿರುವುದರಿಂದ ಅಂತವರು ಆಸಕ್ತಿ ತೋರಿಸುವುದಿಲ್ಲ. ಜನಪ್ರತಿನಿಧಿಗಳ ಹಿಂಬಾಲಕರು ಎನ್ನುವ ಕಾರಣಕ್ಕೆ ಸಿಕ್ಕಿದ ಪೋಸ್ಟ್ ಗಳಿಂದ ಯಾವ ಸುಧಾರಣೆ ಕೂಡ ಆಗುವುದಿಲ್ಲ.
ಪ್ರಸ್ತುತ ಪರಿಸ್ಥಿತಿಯೇ ಹೀಗಿರುವಾಗ ನಮ್ಮ ರಾಜ್ಯ ಸರಕಾರ ಮಠ,ಮಂದಿರಗಳ ಮೇಲೆ ಕಣ್ಣು ಹಾಕಿದೆ. ಸರಕಾರ ಮಠಗಳನ್ನು ತನ್ನ ಸುಪರ್ಧಿಗೆ ತೆಗೆದುಕೊಳ್ಳಲು ಯೋಚಿಸುತ್ತಿದೆ. ಇಲ್ಲಿ ಒಂದು ವಿಷಯ ಸ್ಪಷ್ಟ. ಅದೇನೆಂದರೆ ಮಠ ಎಂದರೆ ಸಾರ್ವಜನಿಕ ದೇವಸ್ಥಾನ ಅಲ್ಲ. ಇದನ್ನು ರಾಜ್ಯ ಸರಕಾರ ಮೊದಲು ಅರ್ಥ ಮಾಡಿಕೊಳ್ಳಬೇಕು.
ಆಯಾ ಮಠಾಧಿಪತಿಗಳು ದೇವಸ್ಥಾನಗಳನ್ನು ಕಟ್ಟಿ ತಮ್ಮ ಮಠದ ಆರಾಧ್ಯ ದೇವರ ಮೂರ್ತಿಗಳನ್ನು ಪ್ರತಿಷ್ಟಾಪಿಸಿಪೂಜಿಸಲು ಮಾಡಿದ ವ್ಯವಸ್ಥೆ. ಅದರ ಆಯವ್ಯಯಗಳನ್ನು ಆಯಾ ಮಠಾಧಿಪತಿಗಳೇ ನೋಡಿಕೊಳ್ಳುತ್ತಾರೆ. ಉದಾಹರಣೆಗೆ ಉಡುಪಿಯ ಶ್ರೀಕೃಷ್ಣ ಮಠ. ಅದು ಕೇವಲ ಒಂದು ಮಠಕ್ಕೆ ಸಂಬಂಧಪಟ್ಟದ್ದಲ್ಲ. ಅದು ಅಷ್ಟಮಠದ ಸುಪರ್ಧಿಗೆ ಒಳಪಟ್ಟಿದ್ದು. ಸಾವಿರಾರು ವರ್ಷಗಳಿಂದ ಅಲ್ಲಿ ಅವರದ್ದೇ ಸಂಪ್ರದಾಯ ನಡೆದುಕೊಂಡು ಬಂದಿದೆ. ಅಂದರೆ ಪ್ರತಿ ಎರಡು ವರ್ಷಗಳಿಗೊಮ್ಮೆ ಶ್ರೀಕೃಷ್ಣನಿಗೆ ಪೂಜೆ ಮಾಡುವ ಪರ್ಯಾಯ ಸರದಿಯಂತೆ ಬದಲಾಗುತ್ತಾ ಹೋಗುತ್ತದೆ. ಪರ್ಯಾಯ ಪೀಠಾಧಿಪತಿಗಳು ತಮ್ಮ ಪರ್ಯಾಯದ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿ ಮಾಡುತ್ತಾರೆ. ಯಾವುದೇ ಖರ್ಚು ಅಥವಾ ಆರ್ಥಿಕ ಅವಶ್ಯಕತೆ ಎದುರಾದಾಗಲೂ ಅದನ್ನು ಪರ್ಯಾಯದ ಸ್ವಾಮೀಜಿಗಳೇ ಭರಿಸಬೇಕಾಗುತ್ತದೆ. ಅದನ್ನು ರಾಜ್ಯ ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳುವುದರಿಂದ ಗೊಂದಲ ಏಳುವುದು ಬಿಟ್ಟರೆ ಬೇರೆ ಏನೂ ಆಗುವುದಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಉಡುಪಿ ಶ್ರೀಕೃಷ್ಣಮಠದ ಮೇಲೆ ಕೋಪ ಇರಬಹುದು. ಹಾಗಂತ ಇಡೀ ಮಠವನ್ನು ರಾಜ್ಯ ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳುವುದರಿಂದ ಸಿದ್ಧರಾಮಯ್ಯನವರ ಕೋಪ ತಣಿಸಬಹುದು. ಅಲ್ಲಿನ ಸ್ವಾಮೀಜಿಗಳು ಪ್ರತಿಯೊಂದಕ್ಕೂ ಸರಕಾರದ ಮುಂದೆ ಅಂಗಲಾಚಿಸುವಂತೆ ಮಾಡಿದೆ ಎನ್ನುವ ಖುಷಿ ಸಿಎಂಗೆ ಬರಬಹುದು. ಆದರೆ ಅದರಿಂದ ಅವರು ಸಾಧಿಸುವಂತಹುದು ಏನು? ಕೃಷಮಠದ ಅಭಿವೃದ್ಧಿ ನಿಂತ ನೀರಾಗುತ್ತದೆ. ನಂತರ ಏನಾಗುತ್ತದೆ? ನಾನು ಮೊದಲೇ ಹೇಳಿದಂತೆ ಜನಪ್ರತಿನಿಧಿಗಳ, ರಾಜಕಾರಣಿಗಳ ಚಮಚಾಗಳು ಅಲ್ಲಿ ಬಂದು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಡುತ್ತಾರೆ. ಸರಕಾರ ಯಾರನ್ನು ಆಡಳಿತಾಧಿಕಾರಿಯಾಗಿ ನೇಮಿಸುತ್ತೆ ಎಂದು ಹೇಳಲು ಆಗುವುದಿಲ್ಲ. ಆಂಧ್ರಪ್ರದೇಶ ಸರಕಾರ ಕ್ರಿಶ್ಷಿಯನ್ ಮಹಿಳೆಯನ್ನು ಏಕ್ಸಿಕ್ಯೂಟಿವ್ ಆಫೀಸರ್ ಆಗಿ ನೇಮಿಸಿದಂತೆ ಮಠದ ಒಳಗೆ ಕಾಲಿಡದ ಕೇವಲ ಕಚೇರಿಯಲ್ಲಿ ಏಸಿ ಹಾಕಿ ತಿರುಗುವ ಖುರ್ಚಿಯಲ್ಲಿ ಕುಳಿತುಕೊಳ್ಳುವ ವ್ಯಕ್ತಿಯನ್ನು ಆಡಳಿತಕ್ಕೆ ಬಿಟ್ಟರೆ ಅಲ್ಲಿಗೆ ಮುಗಿಯಿತು!

0
Shares
  • Share On Facebook
  • Tweet It


- Advertisement -
SiddaramaihUdupi Krishna Mutt


Trending Now
ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
Hanumantha Kamath June 18, 2025
ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
    • 114 ಮುಸ್ಲಿಮರು ಸೇರಿ ದೇಗುಲದ 167 ಸಿಬ್ಬಂದಿ ವಜಾ ಮಾಡಿ ಆದೇಶ!
    • ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
  • Popular Posts

    • 1
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 2
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 3
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • 4
      ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • 5
      ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search