• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಗಡಿ ದಾಟಿ ಬಂದ ಪಾಕಿಸ್ತಾನದ 12 ವರ್ಷದ ಮೂಕ ಬಾಲಕನನ್ನು ಭಾರತ ಸರ್ಕಾರ ಏನು ಮಾಡಿತು ಗೊತ್ತೆ..?

TNN Correspondent Posted On January 3, 2018
0


0
Shares
  • Share On Facebook
  • Tweet It

ದೆಹಲಿ: ಸದಾ ಭಾರತದ ವಿರುದ್ಧ ಹಲ್ಲು ಮಸೆಯುವ ಪಾಕಿಸ್ತಾನ ಮಾನವೀಯತೆ ಮರೆತು ವರ್ತಿಸಿದರೂ, ಭಾರತ ಮಾತ್ರ ತನ್ನ ಕರುಣೆಯನ್ನು ಆಗಗ ತೋರುತ್ತಲೇ ಇದೆ. ಅದಕ್ಕೆ ಸಾಕ್ಷಿ ಎಂಬಂತೆ  ಸುಮಾರು ಏಳು ತಿಂಗಳ ಹಿಂದೆ ಭಾರತದ ಗಡಿ ದಾಟಿ ಬಂದ ಪಾಕಿಸ್ತಾನದ 12 ವರ್ಷದ ಮೂಕ ಬಾಲಕನನ್ನು ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಕಳುಹಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದೆ.

ಮಾತು ಬಾರದ ಬಾಲಕ ಮೇ 2017ರಂದು ಪ್ರಮಾದ್ ವಶಾತ್ ಭಾರತದ ಗಡಿ ದಾಟಿ ಬಂದಿದ್ದ. ಆತನ ಬಳಿ 20 ರೂಪಾಯಿಯ ಪಾಕಿಸ್ತಾನದ ಡಾಲರ್ ಇದ್ದಿರುವುದು, ಆತ ಪಾಕಿಸ್ತಾನದ ಪ್ರಜೆ ಎಂಬುದು ಪತ್ತೆ ಹಚ್ಚಲು ಸಹಾಯಕವಾಗಿದೆ. ಅಟ್ಟರಿ ವಾಗಾ ಗಡಿಯಲ್ಲಿ ಬಾಲಕನನ್ನು ಭಾರತೀಯ ಸೇನೆಯ ನೇತೃತ್ವದಲ್ಲಿ ವಾಪಸ್ಸ ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದೆ.

ಪಾಕಿಸ್ತಾನದ ಹೈ ಕಮಿಷನರ್ ಉಪಸ್ಥಿತಿಯಲ್ಲಿ, ಪಾಕ್ ಭಾರತದ ರಾಯಭಾರಿ ಸೇರಿ ಹಲವು ಅಧಿಕಾರಿಗಳು ಉಪಸ್ಥಿತಿಯಲ್ಲಿ ಬಾಲಕನನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ.

ಬಾಲಕನ್ನು ಫರೀದ್ ಕೋಟ್ ಜೈಲಿನಲ್ಲಿ ಬಾಲಾಪರಾಧಿ ಎಂದು ವಿಚಾರಣೆ ನಡೆಸಲಾಗಿತ್ತು. ನಂತರ ಪಾಕಿಸ್ತಾನ ವಿದೇಶಾಂಗ ಸಚಿವಾಲಯದೊಂದಿಗೆ ಮಾತುಕತೆ ನಡೆಸಿ ಬಾಲಕನನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕ ಕೆಲವು ಉರ್ದು ಪದಗಳನ್ನು ಬರೆಯುತ್ತಿರುವುದು ಆತನ ಮೂಲ ಪತ್ತೆ ಹಚ್ಚಲು ಅನುಕೂಲವಾಗಿದೆ. ಆತ ಪಾಕಿಸ್ತಾನದ ರೂಪಾಯಿಯನ್ನು, ಪಾಕಿಸ್ತಾನದ ಧ್ವಜವನ್ನು ಗುರುತಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದ ಗಡಿಯೊಳಗೆ ಪ್ರಮಾದ್ ವಶಾತ್ ಪ್ರವೇಶಿಸಿದ ಬಾಲಕನನ್ನು ಭಾರತೀಯ ಅಧಿಕಾರಿಗಳು ಗೌರವಯುತವಾಗಿ ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಪಾಕಿಸ್ತಾನ ಭಾರತದ ವಿಷಯದಲ್ಲಿ ಈ ರೀತಿಯ ಮಾನವೀಯ ನಡೆಗಳನ್ನು ಇಡದೆ ತನ್ನ ವಿಧ್ವಂಸಕ ಮನಸ್ಥಿತಿಯನ್ನು ಮುಂದುವರಿಸಿರುವುದು ಮಾತ್ರ ದುರಂತ.

0
Shares
  • Share On Facebook
  • Tweet It




Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Tulunadu News November 11, 2025
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
  • Popular Posts

    • 1
      ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!

  • Privacy Policy
  • Contact
© Tulunadu Infomedia.

Press enter/return to begin your search