• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಾಶ್ಮೀರದಲ್ಲಿ ಕಾಂಗ್ರೆಸ್ -ಎನ್ ಸಿ ಫ್ರೆಂಡ್ಲಿ ಫೈಟ್ ಮತ್ತು ಮೈತ್ರಿ ಒಟ್ಟಿಗೆ!

Tulunadu News Posted On August 27, 2024


  • Share On Facebook
  • Tweet It

ರಾಜಕೀಯ ಗೊತ್ತಿರುವವರಿಗೆ ಇದು ವಿಚಿತ್ರ ಎನಿಸಬಹುದು. ರಾಜಕೀಯದಲ್ಲಿ ಏನೂ ಆಗಬಹುದು ಎನ್ನುವವರಿಗೆ ಇದು ಇನ್ನೊಂದು ಚರ್ಚೆಯ ವಿಷಯವಾಗಬಹುದು. ಅದಕ್ಕೆ ಜಮ್ಮು – ಕಾಶ್ಮೀರ ಸದ್ಯದ ಉದಾಹರಣೆ. ಚುನಾವಣೆಯ ಹೊಸ್ತಿಲಲ್ಲಿ ಕಣಿವೆ ರಾಜ್ಯ ಇದೆ. ವಿವಿಧ ರಾಜಕೀಯ ಸಮೀಕರಣಗಳು ನಡೆಯುತ್ತಿವೆ. ಬಹಳ ವಿಚಿತ್ರ ರೀತಿಯ ಮೈತ್ರಿಯನ್ನು ಜಮ್ಮು ಮತ್ತು ಕಾಶ್ಮೀರದ ಚುನಾವಣೆಯಲ್ಲಿ ನಾವು ಕಾಣಬಹುದಾಗಿದೆ. ಎರಡು ಪಕ್ಷಗಳು ಒಟ್ಟಾಗಿ ಮೈತ್ರಿ ಮಾಡಿಕೊಂಡಿದ್ದೇವೆ ಎಂದರೆ ಅಲ್ಲೊಂದು ತಾರ್ಕಿಕ ಒಪ್ಪಂದ ಆಗಿ ಹೊಂದಾಣಿಕೆ ಸೃಷ್ಟಿಯಾಗಬೇಕು. ಪರಸ್ಪರ ಅರ್ಥ ಮಾಡಿಕೊಂಡು ನಮ್ಮ ಎಲ್ಲಾ ಮನಸ್ತಾಪಗಳನ್ನು ಬದಿಗೊತ್ತಿ, ಒಂದೇ ಮನಸ್ಥಿತಿಯಲ್ಲಿ ಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದೇವೆ ಎನ್ನುವುದನ್ನೇ ರಾಜಕೀಯದಲ್ಲಿ ಮೈತ್ರಿ ಎನ್ನಲಾಗುತ್ತದೆ. ಆದರೆ ಇಲ್ಲಿ ನೋಡಿ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ಘೋಷಣೆ ಆಗಿದೆ. ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಪಕ್ಷಗಳು ಒಟ್ಟಾಗಿ ಚುನಾವಣೆಯನ್ನು ಎದುರಿಸುವ ನಿರ್ಧಾರಕ್ಕೆ ಬಂದಿವೆ. ಹಾಗಾದರೆ ಸೀಟು ಹಂಚಿಕೆ ಆಗಬೇಕಲ್ಲ. ಇಲ್ಲಿಯೇ ಸಮಸ್ಯೆಯಾಗಿರುವುದು. ಹೇಳಿ, ಕೇಳಿ ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಪರೆನ್ಸ್ ಜೆಕೆಯಲ್ಲಿ ಪರಸ್ಪರ ವಿರೋಧಿಗಳು. ಆದರೆ ಭಾರತೀಯ ಜನತಾ ಪಾರ್ಟಿಯನ್ನು ಸೋಲಿಸಬೇಕಾದರೆ ಮೈತ್ರಿ ಅನಿವಾರ್ಯ. ಅದರೊಂದಿಗೆ ಇತ್ತೀಚಿನ ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಕಾಂಗ್ರೆಸ್ಸಿಗೂ ರಾಷ್ಟ್ರದಲ್ಲಿ ಅಲ್ಲಲ್ಲಿ ಒಂದಿಷ್ಟು ಮರ್ಯಾದೆ ಸಿಗುತ್ತಿದೆ. ಯಾಕೆಂದರೆ ಹತ್ತು ವರ್ಷಗಳ ಬಳಿಕ ಈಗ ಪ್ರತಿಪಕ್ಷದ ಸ್ಥಾನವೂ ಸಿಕ್ಕಿದೆ.

ಈಗ ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷವಾಗಿರುವ ಕಾಂಗ್ರೆಸ್ಸಿಗೆ ಅಳೆದು ತೂಗಿ 32 ಸ್ಥಾನಗಳನ್ನು ಎನ್ ಸಿ ಬಿಟ್ಟುಕೊಟ್ಟಿದೆ. ಇನ್ನು 51 ಸ್ಥಾನಗಳನ್ನು ತಾನು ಇಷ್ಟುಕೊಂಡಿದೆ. ಒಂದು ಸ್ಥಾನ ಕಮ್ಯೂನಿಸ್ಟರಿಗೆ ಹಾಗೂ ಇನ್ನೊಂದು ಸ್ಥಳೀಯ ಪ್ಯಾಂಥರ್ಸ್ ಪಕ್ಷಕ್ಕೆ ನೀಡಿದೆ. ಇಷ್ಟೇ ಆಗಿದ್ರೆ ಅಲ್ಲಿಗೆ ವಿಷಯ ಮುಗಿಯುತ್ತಿತ್ತು. ಆದರೆ ಕುತೂಹಲ ಆರಂಭವಾಗುವುದೇ ಅಲ್ಲಿ. ಒಟ್ಟು 90 ಸ್ಥಾನಗಳಿರುವ ಜೆ ಅಂಡ್ ಕೆಯಲ್ಲಿ ಇನ್ನು ಐದು ಸ್ಥಾನಗಳ ಕಥೆ ಏನು ಎಂದು ನಿಮಗೆ ಅನಿಸಬಹುದು. ಐದು ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಎನ್ ಸಿ ಪರಸ್ಪರ ಕಾದಾಡುತ್ತಿವೆ. ಇದನ್ನು ಅವರು ಚೆಂದದ ಭಾಷೆಯಲ್ಲಿ ಫ್ರೆಂಡ್ಲಿ ಫೈಟ್ ಎನ್ನುತ್ತಿದ್ದಾರೆ. ಒಂದು ರಾಜ್ಯದ ಒಳಗೆ ಮೈತ್ರಿಯೂ ಆಗಿ, ಪರಸ್ಪರ ಹೋರಾಟವೂ ಆಗಿ, ಕೊನೆಗೆ ಫಲಿತಾಂಶ ಬಂದಾಗ ಅತಂತ್ರವೂ ನಿರ್ಮಾಣವಾದರೆ ಜೆಕೆಯ ಮುಂದಿನ ಭವಿಷ್ಯ ಏನಾಗಲಿದೆ ಎನ್ನುವುದೇ ಈಗ ಇರುವ ಕುತೂಹಲ. ಹಾಗಾದರೆ ಐದು ಸ್ಥಾನಗಳಲ್ಲಿ ಇವರು ಪರಸ್ಪರ ವಿರೋಧಿಗಳಾಗಿ ಕಣಕ್ಕೆ ಇಳಿದರೆ ರಾಜ್ಯದ ಉಳಿದ ಕ್ಷೇತ್ರಗಳ ಕಾರ್ಯಕರ್ತರಿಗೆ ಹೋಗುವ ಸಂದೇಶ ಏನು? ಎಲ್ಲರೂ ಪರಸ್ಪರ ಭಿನ್ನ ಅಭಿಪ್ರಾಯ ಬಿಟ್ಟು ಮೈತ್ರಿ ಧರ್ಮ ಪಾಲಿಸುತ್ತಾರಾ ಎನ್ನುವುದು ಈಗ ಉಳಿದಿರುವ ಪ್ರಶ್ನೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search