• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ನಾಗರಪಂಚಮಿಯಂದು ಸರಕಾರಿ ರಜೆ ಯಾಕಿಲ್ಲ!

TNN Correspondent Posted On July 18, 2017
0


0
Shares
  • Share On Facebook
  • Tweet It

ಆಸ್ತಿಕರು ಹೆಚ್ಚು ಬ್ಯುಸಿ ಇರುವ ಏಕೈಕ ಹಬ್ಬ ಇದು!

ನಮ್ಮ ದೇಶದಲ್ಲಿ ಸರಕಾರಿ ರಜೆಗಳಿಗೆ ಕಡಿಮೆ ಇಲ್ಲ, ನಿಜ. ಆದರೆ ಯಾವುದಕ್ಕೆ ರಜೆ ಕೊಡಬೇಕು ಮತ್ತು ಯಾವುದಕ್ಕೆ ಅಗತ್ಯ ಇಲ್ಲ ಎನ್ನುವುದು ಮಾತ್ರ ಯಾರಿಗೂ ಗೊತ್ತಿಲ್ಲ. ಹೆಚ್ಚಿನ ರಜೆಗಳು ಆಯಾ ಜಾತಿ, ಮತ, ಪಂಗಡಗಳಿಗೆ ಖುಷಿ ಮಾಡಲು ಮಾತ್ರ ಸೀಮಿತವಾಗಿದೆ. ಬೇಕಾದರೆ ಸರಕಾರ ರಜಾ ದಿನವನ್ನಾಗಿ ಘೋಷಿಸಿರುವ ಕೆಲವು ಜಯಂತಿಗಳನ್ನೇ ತೆಗೆದುಕೊಳ್ಳಿ. ಅದರಲ್ಲಿ ಆಯಾ ವ್ಯಕ್ತಿಯ ಜಯಂತಿಯನ್ನು ಅವರದ್ದೇ ಸಮಾಜದ ಕೆಲವು ಆಯ್ದ ಹಿರಿ ತಲೆಗಳು ಸಾಂಕೇತಿಕವಾಗಿ ಆಚರಿಸುತ್ತಾರೆ ವಿನ: ಅದಕ್ಕಿಂತ ಬೇರೆ ಏನೂ ಇಲ್ಲ. ಆವತ್ತು ಪತ್ರಿಕೆಗಳಲ್ಲಿ ಇಂತಿಂತಹ ಸಾಮಾಜಿಕ ಸುಧಾರಕರೊಬ್ಬರ ಜನ್ಮ ದಿನ. ಆ ನಿಮಿತ್ತ ಒಂದು ಲೇಖನ ಬರುತ್ತೆ ಬಿಟ್ಟರೆ ಬೇರೆ ಏನೂ ಇಲ್ಲ. ಹೆಚ್ಚಿನವರು ಈ ಸರಕಾರಿ ಜಯಂತಿಗಳನ್ನು ಫ್ಯಾಮಿಲಿ ಟ್ರಿಪ್ ಗಳನ್ನಾಗಿ ಪರಿವರ್ತಿಸಿ ತಿರುಗಾಡಲು ಹೊರಡುತ್ತಾರೆ ಎನ್ನುವುದು ಟೂರ್ ಆಯೋಜಕರಿಗೆ ಚೆನ್ನಾಗಿ ಗೊತ್ತು. ಅದಕ್ಕಾಗಿ ಅವರು ಆಯಾ ಜಯಂತಿಗಳು ಶುಕ್ರವಾರ, ಶನಿವಾರ ಬಂದರೆ ಜಾಹೀರಾತು ಕೊಟ್ಟು ತಮ್ಮೆಡೆಗೆ ಜನರನ್ನು ಆಕರ್ಷಿಸುತ್ತವೆ. ಆದ್ದರಿಂದ ಅಂತಹ ಕೆಲವು ಜಯಂತಿಗಳಿಗೆ ಕೊಡುತ್ತಿರುವ ಚುನಾವಣಾ ವೋಟ್ ಬ್ಯಾಂಕ್ ರಜೆ ರದ್ದು ಮಾಡಿ ನಿಜವಾಗಿ ಜನ ಸಕ್ರಿಯವಾಗಿ ಆಚರಿಸುವ ಸಂಗತಿಗಳಿಗೆ ಸರಕಾರ ರಜೆ ಕೊಡಬೇಕು ಎನ್ನುವುದು ಧಾರ್ಮಿಕ ನಾಯಕರ ವಾದ.

ನಾಗರ ಪಂಚಮಿಯನ್ನು ಸರಕಾರಿ ರಜಾದಿನವನ್ನಾಗಿ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತು ಮತ್ತು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಸದಸ್ಯ ಪದ್ಮನಾಭ ಕೋಟ್ಯಾನ್ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ದೇಶಾದ್ಯಂತ ನಾಗಾರಾಧನೆ ವಿಶಿಷ್ಟವಾದುದು. ಅದರಲ್ಲಿಯೂ ಕರ್ನಾಟಕ ಕರಾವಳಿಯಲ್ಲಿ ನಾಗಾರಾಧನೆ ವಿಶೇಷ ಮಾನ್ಯತೆ ಇದೆ. ಈ ನಾಗಾರಾಧನೆಯ ವಿಶೇಷ ದಿನವೇ ನಾಗರ ಪಂಚಮಿ. ಈ ದಿನ ಜನರು ತಮ್ಮ ಮೂಲಸ್ಥಾನಕ್ಕೆ ಹೋಗಿ ತಂಬಿಲ ಸೇವೆ ಮಾಡಿ ಬರುತ್ತಾರೆ. ಹಾಗೆ ಮೂಲ ಸ್ಥಾನವಿಲ್ಲದವರು ಕುಡುಪು, ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರ ಪ್ರಮುಖ ನಾಗಕ್ಷೇತ್ರಗಳಿಗೆ ಹೋಗಿ ನಾಗದೇವರನ್ನು ಪೂಜಿಸುತ್ತಾರೆ. ಆದ್ದರಿಂದ ಕರ್ನಾಟಕ ಸರಕಾರವು ಹಿಂದೂ ಧಾರ್ಮಿಕತೆಯ ಪೂಜಾ ಆರಾಧನೆಯ ಮಹತ್ವವನ್ನು ಅರಿತು, ಪ್ರತ್ಯೇಕವಾಗಿ ಮುಜುರಾಯಿ ಇಲಾಖೆಯನ್ನು ವ್ಯವಸ್ಥೆಗೊಳಿಸಿರುವುದರಿಂದ ನಾಗರಪಂಚಮಿಯ ಹಬ್ಬವನ್ನು ಪ್ರಮುಖ ಹಬ್ಬಗಳಲ್ಲಿ ಒಂದೊಂದು ಪರಿಗಣಿಸಿ ಕರ್ನಾಟಕ ಸರಕಾರವು ಸರಕಾರಿ ರಜಾದಿನವಾಗಿ ಘೋಷಿಸಬೇಕು ಎಂದು ಅವರು ವಿನಂತಿಸಿದ್ದಾರೆ.

ಬಹುಶ: ಈಗಿನ ರಾಜ್ಯ ಸರಕಾರ ಈ ಬಗ್ಗೆ ಹೆಚ್ಚಿನ ಒಲವು ತೋರಲಿಕ್ಕಿಲ್ಲ ಎನ್ನುವುದು ಹೆಚ್ಚಿನ ಆಸ್ತಿಕರಿಗೆ ಗೊತ್ತಿದೆ. ಕಾರಣ ಇದಕ್ಕೂ ರಜೆ ಕೊಟ್ಟರೆ ತಮ್ಮ ಜಾತ್ಯಾತೀತ ನೆಲೆಗೆ ತೊಂದರೆ ಉಂಟಾಗಬಹುದು ಎನ್ನುವ ಲೆಕ್ಕಾಚಾರ ಇರುತ್ತದೆ. ಸರಿಯಾಗಿ ನೋಡಿದರೆ ಬೇರೆ ಜಯಂತಿಗಳಿಗಿಂತ ನಮ್ಮ ಜನರು ಹೆಚ್ಚು ಬ್ಯುಸಿ ಇರುವುದು ನಾಗರಪಂಚಮಿಯ ದಿನ. ಆವತ್ತು ಪುಟ್ಟ ಮಗುವಿನಿಂದ ಹಿಡಿದು ವೃದ್ಧರು ಕೂಡ ನಾಗನನ್ನು ಹುಡುಕಿಕೊಂಡು ಹೋಗುತ್ತಾರೆ. ಅದಕ್ಕೆ ಕಾರಣ ನಾಗನ ಬಗ್ಗೆ ಇರುವ ಅಪರಿಮಿತ ಭಕ್ತಿ. ಬೆಳಿಗ್ಗೆ ಸೂರ್ಯ ಉದಯಿಸುವ ಮೊದಲೇ ಎದ್ದು ಮಧ್ಯಾಹ್ನದ ಪೂಜೆ ಮುಗಿದು ನಂತರ ತಡವಾಗಿ ಊಟವೋ ಅಥವಾ ಉಪಹಾರವೋ ಸೇವಿಸುವ ತನಕ ಎಲ್ಲರೂ ಒಂದು ಕ್ಷಣ ಬಿಡುವಿಲ್ಲದೆ ಈ ಹಬ್ಬವನ್ನು ಆಚರಿಸುತ್ತಾರೆ. ನಂತರ ಆಯಾ ಮೂಲಸ್ಥಾನದಿಂದ ಮನೆಗೆ ಬರುವಾಗ ಸಂಜೆಯಾಗಿರುತ್ತದೆ. ಇಂತಹ ಒಂದು ಹಬ್ಬಕ್ಕೆ ರಜೆ ಅಗತ್ಯವೋ, ಇಲ್ಲವೋ ಸರಕಾರಕ್ಕೆ ಬಿಟ್ಟಿದ್ದು.

0
Shares
  • Share On Facebook
  • Tweet It




Trending Now
ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
Tulunadu News July 11, 2025
ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
Tulunadu News July 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
  • Popular Posts

    • 1
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 2
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 3
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • 4
      ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • 5
      ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!

  • Privacy Policy
  • Contact
© Tulunadu Infomedia.

Press enter/return to begin your search