• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನೋಟ್ ಬ್ಯಾನ್, ಜಿಎಸ್ಟಿಯಿಂದ ದೇಶದ ವಿತ್ತೀಯ ಸ್ಥಿತಿ ಕುಸಿಯಿತು ಎಂದ ನಕಲಿ ಅರ್ಥಶಾಸ್ತ್ರಜ್ಞರು ಎಲ್ಲಿದ್ದಾರೆ ಈಗ?

TNN Correspondent Posted On April 7, 2018
0


0
Shares
  • Share On Facebook
  • Tweet It

ಪ್ರಧಾನಿ ನರೇಂದ್ರ ಮೋದಿ ಅವರು ಕಾಳಧನಿಕರ ಬಗ್ಗಬಡಿಯಲು ಐನೂರು, ಸಾವಿರ ರೂಪಾಯಿ ನೋಟು ನಿಷೇಧ ಮಾಡಿದ ಬಳಿಕ, ದಲ್ಲಾಳಿಗಳಿಂದ ನಲುಗುತ್ತಿದ್ದ ಭಾರತದ ಆರ್ಥಿಕ ಸುಧಾರಣೆಗಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಯೋಜನೆ ಜಾರಿ ಮಾಡಿದ ಬಳಿಕ, ಅವರ ವಿರೋಧಿಗಳೆಲ್ಲ ಧುತ್ತನೆ ಎದ್ದು ಕುಳಿತರು.

ಹೀಗೆ ಎದ್ದು ಕುಳಿತವರೇ ಆರ್ಥಿಕ ತಜ್ಞರಂತೆ ಮಾತನಾಡತೊಡಗಿದರು. ನೋಟು ನಿಷೇಧ, ಜಿಎಸ್ಟಿ ಜಾರಿಯಿಂದ ದೇಶದ ವಿತ್ತೀಯ ಸ್ಥಿತಿ ಪಾತಾಳಕ್ಕಿಳಿಯುತ್ತದೆ. ಪ್ರಸ್ತುತ ಜಿಡಿಪಿ ದರ ಕುಸಿಯುವುದನ್ನು ನೋಡಿದರೆ ದೇಶದ ಆರ್ಥ ವ್ಯವಸ್ಥೆ ಅಧೋಗತಿಗೆ ಇಳಿದುಬಿಡುತ್ತದೆ ಎಂದು ಘೀಳಿಟ್ಟರು.

ಆದರೂ ಪ್ರಧಾನಿ ಮೋದಿ ಅವರು ಜಾರಿಗೆ ತಂದ ಯೋಜನೆಗಳಿಗೇ ಜಯವಾಯಿತು. ಪ್ರಸ್ತುತ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ ದರ (ಜಿಡಿಪಿ) ಏಳರ ಗಡಿ ದಾಟಿ ಮುನ್ನುಗುತ್ತಿದೆ. ಭಾರತದ ಆರ್ಥಿಕ ಸ್ಥಿತಿ ಉತ್ತಮ ಗತಿಯಲ್ಲಿ ಸಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳೇ ತಿಳಿಸಿವೆ.

ಹಾಗಾದರೆ ನೋಟು ನಿಷೇಧ ಹಾಗೂ ಜಿಎಸ್ಟಿ ಜಾರಿಯಾದ ಬಳಿಕ ದೇಶದ ಅರ್ಥವ್ಯವಸ್ಥೆಯಲ್ಲಿ ನಿಖರವಾಗಿ ಆದ ಸಕಾರಾತ್ಮಕ ಬೆಳವಣಿಗೆಗಳು ಯಾವವು ಎಂಬುದರ ಕುರಿತು ಇಲ್ಲಿ ಪಟ್ಟಿಮಾಡಲಾಗಿದೆ. ಯೋಜನೆ ಜಾರಿಯಾದ ಬಳಿಕ ಬೊಬ್ಬೆಹಾಕಿದ ನಕಲಿ ಅರ್ಥಶಾಸ್ತ್ರಜ್ಞರು ಈ ಪಟ್ಟಿ ಓದಲಿ ಮೊದಲು.

  1. ಪ್ರತ್ಯಕ್ಷ ತೆರಿಗೆ ಸಂಗ್ರಹಣೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಮೊದಲು ಪ್ರತ್ಯಕ್ಷ ತೆರಿಗೆ ಸಂಗ್ರಹಣೆ ಪ್ರಮಾಣ 9.8 ಲಕ್ಷ ಕೋಟಿ ರೂಪಾಯಿ ಇತ್ತು. ಆದರೆ ನೋಟ್ ಬ್ಯಾನ್ ಹಾಗೂ ಜಿಎಸ್ಟಿ ಪರಿಣಾಮ 2017-18ನೇ ಸಾಲಿನ ವಿತ್ತೀಯ ವರ್ಷದಲ್ಲಿ ಇದರ ಪ್ರಮಾಣ 9.95 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಇದು ದೇಶದ ಆರ್ಥಿಕ ವ್ಯವಸ್ಥೆ ಮೇಲಾದ ಪ್ರಮುಖ ನಕಾರಾತ್ಮಕ ಪರಿಣಾಮ.
  2. ಯಾವುದೇ ಒಂದು ದೇಶ ಅಭಿವೃದ್ಧಿಯಾಗಬೇಕಾದರೆ, ಅಲ್ಲಿನ ಜನ ಹೇಗೆ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಾರೆ ಎಂಬುದು ಪರಿಗಣನೆಯಾಗುತ್ತದೆ ಎಂಬುದು ತೆರಿಗೆ ತಜ್ಞರ ಅಂಬೋಣ. ಜಿಎಸ್ಟಿ ಹಾಗೂ ನೋಟು ನಿಷೇಧ ಯೋಜನೆಗಳು ಇದೇ ಹಾದಿಯಲ್ಲಿ ಸಾಗುವ ಮೂಲಕ ಐಟಿ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆಯನ್ನು 6.84 ಕೋಟಿಗೆ ಏರಿಸಿತು. ಹೀಗೆ ಐಟಿ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಮೊದಲು 5.43 ಕೋಟಿ ಇತ್ತು. ಹೇಳಿ ಇದು, ದೇಶದ ವಿತ್ತೀಯ ವ್ಯವಸ್ಥೆಯ ಬೆಳವಣಿಗೆಯಲ್ಲವೇ?
  3. ದೇಶದಲ್ಲಿ ತೆರಿಗೆಚೋರರ ಬಹುದೊಡ್ಡ ತಂಡವೇ ಇತ್ತು. ಇದು ದೇಶದ ಬೊಕ್ಕಸಕ್ಕೆ ಹಾನಿ ಮಾಡುವಂತಿತ್ತು. ಆದರೆ ಜಿಎಸ್ಟಿ ಮತ್ತು ನೋಟು ನಿಷೇಧ ಜಾರಿ ಬಳಿಕ ಹತ್ತಿರ ಹತ್ತಿರ ಒಂದು ಕೋಟಿ, ಅಂದರೆ 99.49 ಲಕ್ಷ ನೂತನ ತೆರಿಗೆದಾರರು ನೋಂದಣಿಯಾದರು. ಅದಕ್ಕೂ ಮೊದಲು ಇದ್ದ ತೆರಿಗೆ ದಾರರ ಸಂಖ್ಯೆ 85 ಲಕ್ಷದಷ್ಟಿತ್ತು. ಅಲ್ಲಿಗೆಮೊದಲು ಇದ್ದ ತೆರಿಗೆದಾರರ ಸಂಖ್ಯೆಗಿಂತ ಇದು ದುಪ್ಪಟ್ಟಾಯಿತಲ್ಲ? ಇದು ದೇಶದ ವಿತ್ತೀಯ ಪರಿಸ್ಥಿತಿ ಮೇಲಾದ ಸಕಾರಾತ್ಮಕ ಪರಿಣಾಮ.
  4. ಅಷ್ಟೇ ಅಲ್ಲ, ಇ-ವೇ ಬಿಲ್ ಪಾವತಿದಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾದದ್ದು, ಜಿಡಿಪಿ 7ರ ಗಡಿ ದಾಟಿ ಚೀನಾವನ್ನೇ ಸೆಡ್ಡು ಹೊಡೆದಿದ್ದು, ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದು ಇದೇ ನೋಟು ನಿಷೇಧ ಹಾಗೂ ಜಿಎಸ್ಟಿ ಯೋಜನೆಗಳು. ಈಗ ಹೇಳಿ ಪ್ರಧಾನಿ ಮೋದಿ ಅವರು ಜಾರಿಗೊಳಿಸಿದ ಈ ಯೋಜನೆಗಳು ದೇಶದ ಆರ್ಥಿಕ ಪರಿಸ್ಥಿತಿಗೆ ಹೊಡೆತ ನೀಡಿವೆಯೇ? ಈಗ ಏಕೆ ನಕಲಿ ಆರ್ಥಿಕ ತಜ್ಞರು ಬಾಯಿಬಿಡುತ್ತಿಲ್ಲ?
0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Tulunadu News December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • 2
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 3
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 4
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

  • Privacy Policy
  • Contact
© Tulunadu Infomedia.

Press enter/return to begin your search