• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಾಧಿಕಾ ಪಂಡಿತ್ ಗೆ ಮೊದಲ ಚೂಡಿ ಸಂಭ್ರಮ!

TNN Correspondent Posted On July 31, 2017
0


0
Shares
  • Share On Facebook
  • Tweet It

ಕನ್ನಡದಲ್ಲಿ ರಾಧಿಕಾ ಪಂಡಿತ್ ಯಾರಿಗೆ ಗೊತ್ತಿಲ್ಲ, ಹೇಳಿ. ಕನ್ನಡ ಸಿನೆಮಾವನ್ನು ನೋಡುವವರಿಗೂ, ಟಿವಿಯಲ್ಲಿ ಕನ್ನಡ ಚಿತ್ರಗೀತೆಗಳನ್ನು ವೀಕ್ಷಿಸುವವರಿಗೂ ರಾಧಿಕಾ ಪಂಡಿತ್ ಗೊತ್ತೆ ಇದೆ. ಯಶ್ ಅವರೊಂದಿಗೆ ಮೊಗ್ಗಿನ ಮನಸ್ಸು ಸಿನೆಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಧಿಕಾ ಪಂಡಿತ್ ಈಗ ಯಶ್ ಅವರ ಮನೆ ಮತ್ತು ಮನದೊಡತಿಯೂ ಹೌದು. ಇತ್ತೀಚೆಗಷ್ಟೇ ಸಪ್ತಪದಿ ತುಳಿದಿರುವ ಯಶ್-ರಾಧಿಕಾ ದಂಪತಿಗಳಿಗೆ ಈ ಬಾರಿ ಹೊಸ ಚೂಡಿಯ ಸಂಭ್ರಮ.

ಕೊಂಕಣಿ ಸಾರಸ್ವತ ಬ್ರಾಹ್ಮಣ ಕುಟುಂಬದಿಂದ ಬಂದಿರುವ ರಾಧಿಕಾ ಪಂಡಿತ್ ಈ ಬಾರಿ ತಮ್ಮ ಜೀವನದ ಮೊದಲ ಚೂಡಿ ಸಂಭ್ರಮದಲ್ಲಿ ಇದ್ದಾರೆ. ಈ ಕುರಿತು ಫೇಸ್ ಬುಕ್ ನಲ್ಲಿ ಫೋಟೋ ಹಾಕಿರುವ ರಾಧಿಕಾ ಪಂಡಿತ್ ಅವರು “ನನ್ನ ಮೊದಲ ಚೂಡಿ ಪೂಜಾ” ಎಂದು ಹಾಕಿದ್ದಾರೆ. ಅದರೊಂದಿಗೆ ಬ್ಲಾಕೆಟ್ ನಲ್ಲಿ ಚೂಡಿಯನ್ನು ತುಳಸಿಗೆ ಅರ್ಪಿಸುವುದು ಎಂದು ಕೂಡ ಸೇರಿಸಿದ್ದಾರೆ. ಕಳೆದ ಶುಕ್ರವಾರದಿಂದ ನಾಡಿದ್ದು ಅಗಸ್ಟ್ 20 ರ ತನಕದ ಶುಕ್ರವಾರ ಮತ್ತು ಭಾನುವಾರ ಸಾರಸ್ವತ ಬ್ರಾಹ್ಮಣ ಕುಟುಂಬದ ಮುತೈದೆಯರು ಈ ಚೂಡಿ ಪೂಜೆಯನ್ನು ಆಚರಿಸಿಕೊಂಡು ಬರುತ್ತಾರೆ. ಇದನ್ನು ಈ ಬಾರಿ ತನ್ನ ಜೀವನದಲ್ಲಿ ಪ್ರಪ್ರಥಮವಾಗಿ ಆಚರಿಸಲು ಬಂದಿರುವ ಭಾಗ್ಯದ ಕುರಿತು ಸಂಭ್ರಮಿಸಿರುವ ರಾಧಿಕಾ ಪಂಡಿತ್ ಅವರು, ನನ್ನ ಜೀವನದ ವೈವಾಹಿಕ ಬದುಕಿನ ಮೊದಲ ಅದ್ಭುತ ಎಂದು ವ್ಯಾಖ್ಯಾನಿಸಿದ್ದಾರೆ. ತಮ್ಮ ಸನಾತನ ಧರ್ಮದ ಅನೇಕ ವೈಶಿಷ್ಟಗಳನ್ನು ಒಂದೊಂದಾಗಿ ಅನುಭವಿಸಲು ಸಿಕ್ಕಿರುವ ಭಾಗ್ಯ ಎಂದು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಬರೆದಿದ್ದಾರೆ.

ತನ್ನ ತಾಯಿ ಮನೆಯ ಆಚಾರ-ವಿಚಾರ, ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುವ ಖುಷಿಯನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್ ಅವರು ತುಳಸಿಗೆ ಚೂಡಿ ಅರ್ಪಿಸಿ ಪೂಜಿಸುವ ಫೋಟೋ ಈಗಾಗಲೇ ವೈರಲ್ ಆಗಿದೆ. ಸಾಂಪ್ರದಾಯಿಕ ಸೀರೆಯಲ್ಲಿ ಅದಕ್ಕೆ ಒಪ್ಪುವ ಕುಪ್ಪಸ ಧರಿಸಿ, ಕೈ ಬಳೆ, ಕಿವಿಗೆ ಝುಂಕಿ ಧರಿಸಿರುವ ರಾಧಿಕಾ ಪಂಡಿತ್ ತುಳಸಿ ಎಲೆಗಳಿಗೆ ಕುಂಕುಮ, ಅರಸಿನ ಹಚ್ಚುವಲ್ಲಿ ಮಗ್ನರಾಗಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ಹಾಕಿಕೊಂಡಿದ್ದಾರೆ. ಅಲ್ಲಿಯೇ ಪಕ್ಕದ ತಟ್ಟೆಯಲ್ಲಿ ವೀಳ್ಯದ ಎಲೆ, ಅಡಿಕೆ, ಹೂ ಹಣ್ಣು, ಬಿಂದಿಗೆಯಲ್ಲಿ ನೀರು ತಂದಿಟ್ಟು ಪೂಜೆ ಮಾಡುವ ಫೋಟೋ ರಾಧಿಕಾ ಪಂಡಿತ್ ಅವರು ಧಾರ್ಮಿಕ ಆಚರಣೆಯಲ್ಲಿ ಎಷ್ಟು ಶ್ರದ್ಧೆಯಿಂದ ತೊಡಗಿದ್ದಾರೆ ಎಂದು ತೋರಿಸುತ್ತದೆ.

ಸಾಮಾನ್ಯವಾಗಿ ಮದುವೆಯಾದ ನಂತರ ಈ ಪ್ರಥಮ ಚೂಡಿ ಪೂಜೆಯನ್ನು ವಧುವಿನ ಮನೆ ಮತ್ತು ವರನ ಮನೆ ಎರಡು ಕಡೆ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಆ ಸಂದರ್ಭದಲ್ಲಿ ಸಂಬಂಧದ ಕನಿಷ್ಟ ಐದು ಜನ ಮುತೈದೆಯನ್ನು ಕರೆಸಿ ಅವರನ್ನು ಸತ್ಕರಿಸಲಾಗುತ್ತದೆ. ಅದರೊಂದಿಗೆ ಹತ್ತಿರದ ಸಂಬಂಧಿಗಳನ್ನು ಕರೆಸಿ ಊಟೋಪಚಾರದ ಸಂಭ್ರಮ ಸಾರಸ್ವತ ಕುಟುಂಬಗಳಲ್ಲಿ ಖಂಡಿತ ಇದ್ದೇ ಇರುತ್ತದೆ. ಅದರ ಬಳಿಕ ಪ್ರತಿ ಶ್ರಾವಣ ಮಾಸದಲ್ಲಿ ಮುತೈದೆ ಪ್ರತಿ ಶುಕ್ರವಾರ ಮತ್ತು ಭಾನುವಾರ ಬೆಳಿಗ್ಗೆ ಬೇಗ ಎದ್ದು ತಲೆಸ್ನಾನ ಮಾಡಿ ಚೂಡಿಯನ್ನು ತುಳಸಿಗೆ ಅರ್ಪಿಸಿ ಪೂಜೆ ಮಾಡಿ ಆಹಾರವನ್ನು ಸೇವಿಸುತ್ತಾಳೆ. ಚೂಡಿ ಪೂಜೆ ಆದ ತಕ್ಷಣ ಒಂದು ಚೂಡಿಯನ್ನು ಗಂಡನ ಕೈಗೆ ನೀಡಿ ಆರ್ಶೀವಾದ ಕೋರುತ್ತಾಳೆ. ಅದರ ನಂತರ ತನ್ನ ಸಮುದಾಯದ ಬೇರೆ ಹಿರಿಯ ಮುತೈದೆಯರ ಮನೆಗೆ ಹೋಗಿ ಅವರಿಗೂ ಚೂಡಿ ಕೊಟ್ಟು ಆಶೀರ್ವಾದ ಕೋರುವ ಸಂಪ್ರದಾಯವಿದೆ. ಅದರ ಬಳಿಕ ಶ್ರಾವಣ ಮಾಸದಲ್ಲಿ ಯಾವುದಾದರೂ ಒಂದು ಶುಕ್ರವಾರ ಅಥವಾ ಭಾನುವಾರ ತನ್ನ ಊರಿನ ಕನಿಷ್ಟ ಐದು ದೇವಿಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೇವಿಯ ಬಳಿ ಆರ್ಶೀವಾದ ಕೋರುವ ಕ್ರಮ ಕಡ್ಡಾಯ. ಚೂಡಿಯೊಂದಿಗೆ ಕುಂಕುಮವನ್ನು ದೇವಿಗೆ ಅರ್ಪಿಸಿ ತನ್ನ ಮುತೈದೆತನಕ್ಕೆ ಧೀರ್ಘ ರಕ್ಷೆಯನ್ನು ಬೇಡುತ್ತಾಳೆ. ಈಗಿನ ಆಧುನಿಕ ಕಾಲದಲ್ಲಿಯೂ ಸಾರಸ್ವತ ಕುಟುಂಬಗಳಲ್ಲಿ ಇದನ್ನು ಮಹಿಳೆಯರು ಪಾಲಿಸಿಕೊಂಡು ಬರುತ್ತಿದ್ದಾರೆ. ಹೆಣ್ಣು ಎಷ್ಟೇ ಆಧುನಿಕವಾಗಿ ಮುಂದುವರೆಯಲಿ, ಈ ಶ್ರಾವಣ ಮಾಸ ಅವಳ ಪಾಲಿಗೆ ಪ್ರಕೃತಿ ಕೊಡುವ ತಾಯ್ತನದ ನೆನಪು, ಪತಿ ಪರಮಾತ್ಮ ಎನ್ನುವ ಧೈರ್ಯ ಮತ್ತು ಸಂಪ್ರದಾಯಗಳ ರಕ್ಷೆ ಒದಗಿಸುತ್ತದೆ. ಈಗೀಗ ಅನೇಕ ಮನೆಗಳಲ್ಲಿ ಈ ಚೂಡಿಯನ್ನು ಕಟ್ಟುವುದಕ್ಕೆ ಪುರುಸೋತ್ತು ಮತ್ತು ಆಸಕ್ತಿ ಎರಡೂ ಇಲ್ಲವಾಗಿರುವುದರಿಂದ ಮಾರುಕಟ್ಟೆಗಳಲ್ಲಿ ರೆಡಿಮೇಡ್ ಚೂಡಿಗಳು ಸಿಗಲು ಶುರುವಾಗಿದೆ. ಒಂದು ಚೂಡಿಗೆ ಹತ್ತು ರೂಪಾಯಿಯಲ್ಲಿ ಮಾರಲ್ಪಡುತ್ತಿವೆ. ಆ ಚೂಡಿಗಳಲ್ಲಿ ಐದು ಗರಿಕೆ ಗರಿ, ಐದು ನಮೂನೆಯ ಹೂಗಳು ಇರುತ್ತವೆ.

0
Shares
  • Share On Facebook
  • Tweet It




Trending Now
ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
Tulunadu News January 16, 2026
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
Tulunadu News January 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
  • Popular Posts

    • 1
      ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • 2
      ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!

  • Privacy Policy
  • Contact
© Tulunadu Infomedia.

Press enter/return to begin your search