• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಭ್ರಷ್ಟ, ಕೈಲಾಗದ ಕಾರ್ಪೋರೇಟರ್ ಗಳು ಮುಂದಿನ ಬಾರಿ ಆಯ್ಕೆಯಾಗಲೇಬಾರದು!!

Tulunadu News Posted On March 13, 2019
0


0
Shares
  • Share On Facebook
  • Tweet It

ಕಳೆದ ಅಗಸ್ಟ್ ನಲ್ಲಿ ಮೇಯರ್ ಆಗಿದ್ದ ಭಾಸ್ಕರ್ ಅವರು ಏನು ಹೇಳಿದ್ರು ಎಂದರೆ ಮಳೆಗಾಲದ ನಂತರ ಮಂಗಳೂರಿನಲ್ಲಿ ಹೊಂಡ, ಗುಂಡಿ ಬಿದ್ದಿರುವ, ಮಳೆಯಿಂದ ಹಾನಿಗೊಳಗಾಗಿರುವ ರಸ್ತೆಗಳಿಗೆ ಪ್ಯಾಚ್ ಅಪ್ ವರ್ಕ್ ಮಾಡಲಾಗುವುದು. ಅದಕ್ಕಾಗಿ ನಾಲ್ಕು ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ ಎಂದು ಹೇಳಿದ್ರು. ಸರಿ, ಒಳ್ಳೆಯ ವಿಷಯ ಎಂದು ನಾವು ಸುಮ್ಮನಾಗಿದ್ವಿ. ಮೇಯರ್ ಅಗಸ್ಟ್ ನಲ್ಲಿ ಘೋಷಣೆ ಮಾಡಿದ್ದದ್ದು. ಮಳೆಗಾಲ ಮುಗಿದ ನಂತರ ಕೆಲಸ ಶುರು ಎಂದು ಹೇಳಿದ್ದ ಕಾರಣ ನವೆಂಬರ್ ಒಂದರಿಂದ ಕಾಮಗಾರಿ ಪ್ರಾರಂಭವಾಗಬೇಕಿತ್ತು. ಆದರೆ ನವೆಂಬರ್ ನಲ್ಲಿ ಆರಂಭವಾಗಲಿಲ್ಲ. ಈಗ ಮಾರ್ಚ್ ಅರ್ಧ ಮುಗಿಯುತ್ತಾ ಬರುತ್ತಿದೆ. ಇನ್ನು ಕೂಡ ಎಷ್ಟೋ ರಸ್ತೆಗಳ ಹೊಂಡ, ಗುಂಡಿಗಳನ್ನು ಸರಿಪಡಿಸಲಾಗಿಲ್ಲ. ಇನ್ನೊಂದೆರಡು ತಿಂಗಳ ಬಳಿಕ ಮಳೆಗಾಲ ಶುರುವಾಗುತ್ತದೆ. ಮೇ ಅರ್ಧದ ನಂತರ ಹಾಕಿದ್ರೂ ಕೂಡ ಅದು ನೀರಿನ ಮೇಲೆ ಹೋಮ ಮಾಡಿದ ಹಾಗೆ.

ಹಾಗಾದರೆ ಪಾಲಿಕೆಯವರು ಏನು ಮಾಡುತ್ತಿದ್ದರು?

ನವೆಂಬರ್ ಒಂದರಂದು ಪಾಲಿಕೆಯ ಕಡೆಯಿಂದ ಕಾಮಗಾರಿಯನ್ನು ಶಿಸ್ತಿನಿಂದ ಪ್ರಾರಂಭಿಸಿದರೆ ಜನವರಿ ಅಂತ್ಯದೊಳಗೆ ಮುಗಿಯುತ್ತಿತ್ತು. ಆದರೆ ಇವರು ಆರಂಭಿಸಿಲ್ಲ. ಹಾಗೂ ಹೀಗೂ ಆರಂಭಿಸಿದ ಬಳಿಕ ಈಗ ನೋಡಿದರೆ ನಾಲ್ಕು ಕೋಟಿಯಲ್ಲಿ ಅರ್ಧದಷ್ಟು ಹಣ ಕೂಡ ಖರ್ಚಾಗಿಲ್ಲ. ಹಾಗಾದರೆ ಇವರು ಹೇಳುವುದು ಯಾಕೆ? ಪಾಲಿಕೆಯ ಎದುರಿಗೆ ಇರುವ ಎಂಜಿ ರಸ್ತೆಯಲ್ಲಿಯೇ ಕಾಂಕ್ರೀಟ್ ಹಾಕಿರುವ ಜಾಗಗಳನ್ನು ಬಿಟ್ಟು ಆಚೀಚೆ ಇರುವ ಅನೇಕ ಕಡೆ ಪ್ಯಾಚ್ ವರ್ಕ್ ಮಾಡಿಲ್ಲ. ಹಾಗಿರುವಾಗ ಅನೇಕ ವಾರ್ಡುಗಳ ಒಳರಸ್ತೆಗಳ ಪರಿಸ್ಥಿತಿ ಹೇಗಿರಬಹುದು. ಹಾಗಾದರೆ ಇದನ್ನೆಲ್ಲ ನೋಡಿಕೊಳ್ಳಬೇಕಾದವರು ಯಾರು?

ಮೊದಲನೇಯದಾಗಿ ಸಂಶಯವೇ ಇಲ್ಲ. ಪಾಲಿಕೆಯ ಮನಪಾ ಸದಸ್ಯರೇ ಇದಕ್ಕೆ ನೇರ ಜವಾಬ್ದಾರರು. ಯಾಕೆಂದರೆ ಪ್ಯಾಚ್ ಅಪ್ ಗಾಗಿ ಇಟ್ಟ ನಾಲ್ಕು ಕೋಟಿ ಅನುದಾನವನ್ನು ಯಾವೆಲ್ಲ ವಾರ್ಡುಗಳಿಗೆ ಎಷ್ಟೆಷ್ಟು ಹಂಚಬೇಕು ಎಂದು ಮೇಯರ್ ಅಥವಾ ಪಾಲಿಕೆಯ ಕಮೀಷನರ್ ಅವರಿಗೆ ಕುಳಿತ ಕಡೆಯಲ್ಲಿಯೇ ಕನಸು ಬೀಳುವುದಿಲ್ಲ. ನಿಮ್ಮ ನಿಮ್ಮ ವಾರ್ಡುಗಳಲ್ಲಿ ರಸ್ತೆಗಳ ಪ್ಯಾಚ್ ಅಪ್ ವರ್ಕ್ ಮಾಡಲು ಇದ್ದರೆ ಪಟ್ಟಿ ಕೊಡಿ ಎಂದು ಕೇಳಲಾಗಿರುತ್ತದೆ. ಕಾರ್ಪೋರೇಟರ್ ಗಳು ಕೊಟ್ಟಿರುತ್ತಾರೆ ಅಥವಾ ಕೊಡದೇ ಮಲಗಿರುತ್ತಾರೆ. ಅದರ ನಂತರ ಅದನೆಲ್ಲ ಒಟ್ಟು ಮಾಡಿ ಇಷ್ಟು ಹಣ ಎಂದು ನಿಗದಿಪಡಿಸಲಾಗಿರುತ್ತದೆ. ಹಾಗೇ ನಿಗದಿಯಾದದ್ದೇ ನಾಲ್ಕು ಕೋಟಿ. ಯಾವಾಗ ತಮ್ಮ ವಾರ್ಡುಗಳ ಹೊಂಡ,ಗುಂಡಿಗಳನ್ನು ಮುಚ್ಚುವ ಕಾಮಗಾರಿ ಪ್ರಾರಂಭವಾಗಿಲ್ಲವೋ ಆಗ ತಕ್ಷಣ ಧ್ವನಿ ಎತ್ತಬೇಕಾದವರು ಆ ವಾರ್ಡಿನ ಕಾರ್ಫೋರೇಟರ್ .

ಅವರು ಮಾತನಾಡುತ್ತಿಲ್ಲ …

ಅವರು ಮಾತನಾಡುತ್ತಿಲ್ಲ ಎಂದರೆ ಕಾಮಗಾರಿ ಮಾಡದೇಯೇ ಬಿಲ್ ಆಗಿರಬಹುದಾ ಎನ್ನುವ ಸಂಶಯ ನಿಮ್ಮನ್ನು ಕಾಣಬಹುದು. ಅದಕ್ಕಾಗಿ ನೀವು ಧ್ವನಿ ಎತ್ತಬೇಕು. ನಿಮ್ಮ ತೆರಿಗೆಯ ಹಣ ನಿಮ್ಮ ಉಪಯೋಗಕ್ಕೆ ಬೀಳದೇ ಕೇವಲ ಕೆಲವರ ಜೇಬಿಗೆ ಹೋಗುತ್ತಾ ಇದ್ದರೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವೇ? ಅದಕ್ಕೆ ನೀವು ನಿಮ್ಮ ಕಾರ್ಪೋರೇಟರ್ ಗಳನ್ನು ದಾರಿಯಲ್ಲಿ ನಿಲ್ಲಿಸಿ ಇಂತಿಂತಹ ರೋಡುಗಳ ರಿಪೇರಿಗಳ ಕೆಲಸ ಯಾಕೆ ಆಗಿಲ್ಲ ಎಂದು ಮುಖದ ಮೇಲೆಯೇ ಕೇಳಬೇಕು. ಅವರು ಪಾಲಿಕೆಯ ಇಂಜಿನಿಯರ್ ಗಳ ಹೆಸರನ್ನು ಹೇಳಿ ಅವರೇ ಕಾರಣ ಎನ್ನಬಹುದು. ಇಂಜಿನಿಯರ್ಸ್ ಗಳ ಫೋನ್ ನಂಬ್ರ ಕೇಳಿ, ಕರೆ ಮಾಡಿ. ನಮ್ಮ ರಸ್ತೆಗೆ ಯಾವಾಗ ಪ್ಯಾಚ್ ಅಪ್ ವರ್ಕ್ ಎಂದು ಕೇಳಿ. ಒಂದೋ ನಿಮ್ಮ ಕಾರ್ಪೋರೇಟರ್ ಹಣ ತಿಂದು ಸುಮ್ಮನೆ ಕುಳಿತಿರಬೇಕು. ಇಲ್ಲ ಅಸಹಾಯಕನಾಗಿರಬೇಕು. ಆಗ ಮಾತ್ರ ನಿಮ್ಮ ಹೊಂಡದ ಕೆಲಸ ಆಗಿರುವುದಿಲ್ಲ. ಭ್ರಷ್ಟ, ಕೈಲಾಗದವರು ಕಾರ್ಪೋರೇಟರ್ ಗಳಾಗಿ ಮುಂದಿನ ಬಾರಿ ಆಯ್ಕೆಯಾಗದೇ ಇರುವ ಹಾಗೆ ನೋಡುವ ಜವಾಬ್ದಾರಿ ಮಾತ್ರ ನಿಮ್ಮದು!

0
Shares
  • Share On Facebook
  • Tweet It




Trending Now
ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
Tulunadu News July 15, 2025
ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
Tulunadu News July 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
  • Popular Posts

    • 1
      ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • 2
      ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • 3
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 4
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 5
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!

  • Privacy Policy
  • Contact
© Tulunadu Infomedia.

Press enter/return to begin your search