• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದರೆ ಕುಮಾರಧಾರದಲ್ಲಿ ಸ್ನಾನ ಮಾಡುವ ಮುನ್ನ ಜಾಗ್ರತೆ!!

Hanumantha Kamath Posted On May 2, 2019


  • Share On Facebook
  • Tweet It

ಕುಕ್ಕೆ ಸುಬ್ರಹ್ಮಣ್ಯಕ್ಕೆ ಟೂರ್ ಹೋಗಲು ಪ್ಲಾನ್ ಮಾಡುತ್ತಿದ್ದಿರಾ, ದೇವಸ್ಥಾನ ಪ್ರವೇಶಿಸುವ ಮೊದಲು ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡಿಯೇ ಶುದ್ಧರಾಗಿ ಹೋಗೋಣ ಎಂದು ನೀವು ಸ್ಕೆಚ್ ಹಾಕಿದ್ದಿರಿ ಎಂದಾದರೆ ನೀರಿಗೆ ಇಳಿಯುವ ಮೊದಲು ಅದು ಎಷ್ಟು ಶುದ್ಧವಾಗಿದೆ ಎನ್ನುವುದನ್ನು ನೋಡಿ. ಮೇಲ್ನೋಟಕ್ಕೆ ಕುಮಾರಾಧಾರ ತಿಳಿಬೆಳಂದಿಗಳಂತೆ ಕಾಣುತ್ತದೆ. ಆದರೆ ಅದರ ಕೆಳಗೆ ಅಪ್ಪಟ ಅಮಾವಾಸ್ಯೆಯಂತೆ ಕಶ್ಮಲ ತುಂಬಿಕೊಂಡಿದೆ. ನೀವು ನೀರಿಗೆ ಇಳಿದು ಸ್ನಾನ ಮಾಡಲು ಮುಳುಗುವಾಗ ಯಾವ ಚರಂಡಿಯ ನೀರು ನಿಮ್ಮ ಮೂಗಿನ ಒಳಗೆ ಹೋಯಿತು ಎನ್ನುವುದೇ ನಿಮಗೆ ಗೊತ್ತಾಗುವುದಿಲ್ಲ. ನೀವು ನೀರ ಒಳಗೆ ಕಾಲಿಟ್ಟರೆ ಯಾರೋ ನೀರಿಗೆ ಬಿಟ್ಟ ದೇವರ ಫೋಟೋ ಮೇಲೆ ನೀವೆ ನಿಂತಿರಬಹುದು. ಆ ಫೋಟೋಗೆ ಫ್ರೇಮ್ ಕೂಡ ಹಾಕಿರಲಿಕ್ಕಿಲ್ಲ. ದೇವರ ಫೋಟೋ ಇರುವ ಚೀಲ, ಪ್ರಸಾದದ ಪ್ಯಾಕೇಟು, ಶಬರಿಮಲೆ ಸ್ವಾಮಿಗಳು ಧರಿಸುವ ಹಾರ ಸಹಿತ ಯಾವ ವಸ್ತುವಿನ ನಿಂತು ನೀವು ಸ್ನಾನ ಮಾಡುತ್ತಿದ್ದಿರಿ ಎನ್ನುವುದು ನಿಮಗೆ ಗೊತ್ತಾಗಲಿಕ್ಕಿಲ್ಲ. ನಿಮ್ಮ ಗ್ರಹಚಾರಕ್ಕೆ ಆ ಫೋಟೋಗಳ ಫ್ರೇಮುಗಳ ಮೊಳೆಗಳು ಹೊರಗೆ ಬಂದಿದ್ದರೆ ನಿಮ್ಮನ್ನು ದೇವರೇ ಕಾಪಾಡಬೇಕು. ಅದರೊಂದಿಗೆ ಯಾರೋ ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು, ಕಾರು, ಜೀಪು ತೊಳೆದ ಸಾಬೂನಿನ ನೀರು, ಯಾವುದೋ ಲಾಡ್ಜ್ ನ ಡ್ರೈನೇಜ್ ನೀರು, ಪಾಯಿಖಾನೆಗಳ ಗಲೀಜು ಎಲ್ಲವೂ ಕುಮಾರಧಾರೆಯ ಒಡಲನ್ನು ಸೇರುತ್ತಿದೆ. ಅದರ ಒಳಗೆ ನಿಂತು ನೀವು ಸ್ನಾನ ಮಾಡುತ್ತೀರಿ. ನಿಮ್ಮನ್ನು ದೇವರೇ ರಕ್ಷಿಸಬೇಕು.

ಯುವ ಬ್ರಿಗೇಡ್ ಕಾರ್ಯಕ್ಕೆ ಜೈ…

ಇದೆಲ್ಲ ನೋಡಿಯೇ ಯುವ ಬ್ರಿಗೇಡ್ ತಂಡ ಈ ಬಾರಿ ಕುಮಾರಧಾರವನ್ನು ಶುದ್ಧಿಕರಿಸಬೇಕು ಎಂದು ಹೊರಟಿತ್ತು. ಅದರ ನೇತೃತ್ವವನ್ನು ವಹಿಸಿದವರು ಚಕ್ರವರ್ತಿ ಸೂಲಿಬೆಲೆ. ಸೋದರಿ ನಿವೇದಿತಾ ಪ್ರತಿಷ್ಟಾನ, ನಮ್ಮ ಸುಬ್ರಹ್ಮಣ್ಯ, ಸ್ಥಳೀಯ ಸಮಾನ ಮನಸ್ಕರು ಇವರೊಂದಿಗೆ ಸೇರಿ ಕುಮಾರಧಾರದ ಒಂದಿಷ್ಟು ಕಶ್ಮಲವನ್ನು ಹೊರಗೆ ತೆಗೆದರು. ಒಂದಷ್ಟು ಎಂದರೆ ಕನಿಷ್ಟ 20 ಟ್ರ್ಯಾಕ್ಟರ್ ಗಳು. ನೀರಿಗೆ ಇಳಿಯುವಾಗ ಹೆಚ್ಚೆಂದರೆ ಮೂರ್ನಾಕು ಟ್ರ್ಯಾಕ್ಟರ್ ಗಲೀಜು ಇರಬಹುದು ಎಂದು ಅಂದಾಜಿತ್ತು. ಆದರೆ ಇಳಿದ ಮೇಲೆ ಗೊತ್ತಾಯ್ತು ಇದು ಸಣ್ಣ ಪೆಟ್ಟಿಗೆ ಸರಿಯಾಗುವ ಕೆಲಸವಲ್ಲ. ಉದಾಹರಣೆಗೆ ಕುಮಾರಧಾರಾದ ದರ್ಪಣ ತೀರ್ಥ ಎನ್ನುವ ಏರಿಯಾದಲ್ಲಿ 250 ಮಂದಿ ನೀರಿಗೆ ಇಳಿದು ಅಂದಾಜು 20 ಟ್ರ್ಯಾಕ್ಟರ್ ಗಲೀಜು ತೆಗೆಯುತ್ತಾರೆ ಎಂದರೆ ಅದೆಷ್ಟು ನಿರ್ಲಕ್ಷ್ಯವನ್ನು ಅಲ್ಲಿನ ಆಡಳಿತ ಮಂಡಳಿ ಇಲ್ಲಿಯ ತನಕ ತೋರಿಸಿತ್ತು ಎನ್ನುವುದು ಅರ್ಥ ಮಾಡಿಕೊಳ್ಳಿ. ಅದರಲ್ಲಿ ಹತ್ತು ಸಾವಿರ ಬಾಟಲಿಗಳೇ ಇದ್ದವು. ಆ ಬಾಟಲಿಗಳಲ್ಲಿ ಹೆಚ್ಚು ಕಡಿಮೆ ಮೂರು ಸಾವಿರ ಮದ್ಯದ ಬಾಟಲಿಗಳು. ದರ್ಪಣ ತೀರ್ಥದ ಒಡಲಿನಲ್ಲಿ ಮದ್ಯದ ಬಾಟಲಿಗಳದ್ದೇ ಕಾರುಬಾರು. ಹಾಗಾದರೆ ಭಕ್ತರ ಹಣ ಹುಂಡಿಯಲ್ಲಿ ಧಾರಾಕಾರವಾಗಿ ಬಿದ್ದಾಗ ಅದನ್ನು ಲೆಕ್ಕ ಹಾಕಿ ತೆಗೆದುಕೊಂಡು ಹೋಗಲು ಇಲ್ಲಿಯ ಆಡಳಿತ ಮಂಡಳಿಗೆ ಅಂದರೆ ರಾಜ್ಯ ಸರಕಾರದ ಮುಜುರಾಯಿ ಇಲಾಖೆಗೆ ಗೊತ್ತಿದೆ. ಅದೇ ಭಕ್ತರು ಪವಿತ್ರ ಸ್ನಾನ ಮಾಡುವ ನದಿಯನ್ನು ಸ್ವಚ್ಚ ಮಾಡಬೇಕೆಂದು ಗೊತ್ತಿಲ್ಲವಾ?

ತ್ಯಾಜ್ಯ ಶುದ್ಧಿಕರಣದ ಯಂತ್ರ ಮೊರಿಯಲ್ಲಿದೆಯಾ…

ಮುಖ್ಯವಾಗಿ ದೇವಳದ ವ್ಯಾಪ್ತಿಯ ಮತ್ತು ಆಸುಪಾಸಿನ ಗಲೀಜು ನೀರನ್ನು ಶುದ್ಧಿಕರಿಸಿ ನಂತರ ಅದನ್ನು ನದಿಗೆ ಬಿಡಬೇಕೆಂಬ ನಿಯಮವಿದೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ತ್ಯಾಜ್ಯ ಸಂಸ್ಕರಣ ಘಟಕದ ನಿರ್ಮಾಣವಾಗಿತ್ತು. ಆದರೆ ಅದು ಹಾಳಾಗಿ ರಿಪೇರಿಯಾಗದೇ ಪಾಳು ಬಿದ್ದಿದೆ. ಆದ್ದರಿಂದ ಎಲ್ಲಾ ಗಲೀಜು ಕುಮಾರಧಾರದ ಹೊಟ್ಟೆಯನ್ನು ಸೇರಿ ಅಲ್ಲಿಯೇ ಸೆಟಲ್ ಆಗುತ್ತಿದೆ. ಅದನ್ನು ಸರಿಪಡಿಸಬೇಕಾದ ಮುಜುರಾಯಿ ಇಲಾಖೆ ಮಲಗಿದೆ. ಅದೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಮಗ ಗೆಲ್ಲಬೇಕೆಂದರೆ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬಂಗಾರದ ರಥ ಮಾಡಿಸಬೇಕು ಎಂದು ಯಾರೋ ಕೆಲಸವಿಲ್ಲದ ಜ್ಯೋತಿಷಿ ಹೇಳಿದ ಕೂಡಲೇ ಸಿಎಂ ಮೌಖಿಕ ಸೂಚನೆಗೆ ದಡಬಡಿಸಿ ಎದ್ದ ಸಿಎಂ ಬೆಂಬಲಿಗ ಆಡಳಿತ ಮಂಡಳಿ ಸದಸ್ಯರು ತಕ್ಷಣ ಬಂಗಾರದ ರಥಕ್ಕೆ ಮುಂದಾಗಿದ್ದಾರೆ. ಅದರ ಬದಲು ತ್ಯಾಜ್ಯ ಸಂಸ್ಕರಣ ಘಟಕ ರಿಪೇರಿ ಮಾಡಿದ್ರೆ ನದಿಯೂ ಉಳಿಯುತ್ತಿತ್ತು ಮತ್ತೊಂದು ಕಡೆಯಲ್ಲಿ ಭಕ್ತರ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಆಗುವುದು ತಪ್ಪುತ್ತಿತ್ತು. ತಮ್ಮ ಪಾಪ ತೊಳೆಯುವ ಆಗಮಿಸುವ ಭಕ್ತರು ನದಿಯ ಗಲೀಜನ್ನು ಮೈಮೇಲೆ ಸುರಿದು ದೇವಸ್ಥಾನಕ್ಕೆ ಹೋಗುವಂತಾಗಿದೆ. ಇದನ್ನೇ ಕಲಿಯುಗ ಎನ್ನುವುದಾ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search