• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಹಾಲಕ್ಷ್ಮಿ ರೈಲು, ದಾದರ್-ಮಂಗಳೂರು, ವಿಶ್ವದರ್ಜೆಯ ಬೇಡಿಕೆ ಎದುರಿಗಿಟ್ಟೆ!!

Hanumantha Kamath Posted On July 22, 2019
0


0
Shares
  • Share On Facebook
  • Tweet It

ನನ್ನ ಮನವಿ ಪತ್ರದಲ್ಲಿ ಇದ್ದ ಮೊದಲ ಅಂಶವೇ ಮಂಗಳೂರಿನಿಂದ ಮೀರಜ್ ಗೆ ಹೋಗುತ್ತಿದ್ದ ಮಹಾಲಕ್ಷ್ಮಿ ರೈಲಿನ ಬಗ್ಗೆ. ಮಂಗಳೂರಿನ ಯುವ ಪೀಳಿಗೆಗೆ ಈ ಟ್ರೇನ್ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಈ ಟ್ರೇನ್ 1994 ರಲ್ಲಿ ನಿಂತು ಹೋಗಿದೆ. ಮಹಾಲಕ್ಷ್ಮಿ ಟ್ರೇನ್ ಮಂಗಳೂರಿನಿಂದ ಮೀರಜ್ ಗೆ ಹಾಸನ-ಅರಸಿಕೆರೆ ಮಾರ್ಗವಾಗಿ ಹೋಗುತ್ತಿತ್ತು. ಆದರೆ 1994 ರಲ್ಲಿ ಮೀಟರ್ ಗೇಜ್ ಮಾಡುವ ಉದ್ದೇಶದಿಂದ ಈ ಟ್ರೇನ್ ನನ್ನು ನಿಲ್ಲಿಸಲಾಗಿತ್ತು. ಅದರ ನಂತರ 2008 ರಲ್ಲಿ ಮೀಟರ್ ಗೇಜ್ ಕೆಲಸ ಮುಗಿದು ಹೋಗಿದ್ದರೂ ಈ ರೈಲು ಮತ್ತೆ ಪ್ರಾರಂಭವಾಗಲೇ ಇಲ್ಲ. ಈ ರೈಲನ್ನು ಮತ್ತೆ ಪ್ರಾರಂಭಿಸಿ ಎಂದು ರೈಲ್ವೆ ಸಹಾಯಕ ಸಚಿವ ಸುರೇಶ್ ಅಂಗಡಿಯವರಿಗೆ ಮನವಿ ಸಲ್ಲಿಸಿದೆ. ಈ ರೈಲು ಆರಂಭವಾದರೆ ಹುಬ್ಬಳ್ಳಿ, ಧಾರವಾಡಕ್ಕೆ ಹೋಗುವ ನಮ್ಮವರಿಗೆ ಅಥವಾ ಅಲ್ಲಿಂದ ಇಲ್ಲಿ ಬರುವವರಿಗೂ ತುಂಬಾ ಅನುಕೂಲವಾಗುತ್ತದೆ ಎನ್ನುವುದನ್ನು ಒತ್ತಿ ಹೇಳಿದೆ. ನಿಜಕ್ಕೂ ಆ ರೈಲು ಕರ್ನಾಟಕದ ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೆ ಸೇರಿಸುವ ಕೊಂಡಿಯಂತೆ ಕೆಲಸ ಮಾಡುತ್ತಿತ್ತು. ಆ ರೈಲು ನಿಂತು ಹೋದ ಬಳಿಕ ಅದಕ್ಕೆ ಸಮನಾಗಿ ಯಾವುದೇ ಪರ್ಯಾಯ ರೈಲು ಆರಂಭವಾಗಲೇ ಇಲ್ಲ. ಅದಕ್ಕೆ ಸುರೇಶ್ ಅಂಗಡಿಯವರು ಏನು ಹೇಳಿದ್ರು ಎಂದರೆ ಆ ಭಾಗದಲ್ಲಿ ಡಬ್ಲಿಂಗ್ ಕೆಲಸ ಆಗುತ್ತಿರುವುದರಿಂದ ಆ ರೈಲು ಸದ್ಯ ಓಡಿಸುವುದು ಕಷ್ಟಸಾಧ್ಯ ಎಂದರು. ಅದಕ್ಕೆ ನಾನು ಹೇಳಿದೆ, ಪ್ರಸ್ತುತ ಆ ರೈಲು ಓಡಿಸಲು ದಕ್ಷಿಣ ನೈರುತ್ಯ ರೈಲ್ವೆ ವಿಭಾಗ ತಯಾರಾಗಿದೆ. ಆದರೆ ಓಡಿಸಲು ಯಾವುದೇ ಆದೇಶ ಇಲ್ಲದೆ ಇರುವುದರಿಂದ ಸಾಧ್ಯವಾಗಿಲ್ಲ ಎಂದೆ. ಆ ಬಗ್ಗೆ ವರದಿ ತರಿಸಿ ಪರಿಶೀಲಿಸುವುದಾಗಿ ಸಚಿವರು ಹೇಳಿದರು.

ನನ್ನ ಮುಂದಿನ ಕೋರಿಕೆ ಇದ್ದದ್ದು ದಾದರ್ ನಿಂದ ಮಡಗಾಂಗೆ ಬರುವ ರೈಲನ್ನು ಮಂಗಳೂರು ತನಕ ವಿಸ್ತರಿಸಿ ಎನ್ನುವುದಾಗಿತ್ತು. ಯಾಕೆಂದರೆ ಮಂಗಳೂರಿನಿಂದ ಮುಂಬೈಗೆ ಹೋಗುವ ರೈಲುಗಳು ಯಾವುದೂ ಕೂಡ ದಾದರ್ ತನಕ ಹೋಗುವುದಿಲ್ಲ. ಹಾಗಿರುವಾಗ ದಾದರ್ ನಿಂದ ಮಡಗಾಂ ತನಕ ಬರುವ ರೈಲನ್ನು ಮಂಗಳೂರಿನ ತನಕ ವಿಸ್ತರಿಸಿದರೆ ಅದರಿಂದ ಎರಡೂ ಕಡೆಯವರಿಗೂ ಅನುಕೂಲವಾಗುತ್ತದೆ ಎಂದೆ. ಅದಕ್ಕೆ ಸುರೇಶ್ ಅಂಗಡಿಯವರು ಏನು ಹೇಳಿದ್ರು ಎಂದರೆ ಗೋವಾದಿಂದ ಮಂಗಳೂರು ತನಕ ಸಿಂಗಲ್ ಟ್ರಾಕ್ ಇರುವುದರಿಂದ ಹೆವಿ ಟ್ರಾಫಿಕ್ ಆಗುವುದರಿಂದ ಆ ರೈಲು ವಿಸ್ತರಿಸುವ ಗ್ಯಾರಂಟಿ ಕೊಡಲು ಆಗುವುದಿಲ್ಲ ಎಂದರು. ಆದರೂ ಪರಿಶೀಲನೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ.

ಇನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸಲಾಗುವುದು ಎಂದು ಹಿಂದೊಮ್ಮೆ ರೈಲ್ವೆ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಹೇಳಿದ ನೆನಪು. ಆದರೆ ವರ್ಡ್ ಕ್ಲಾಸ್ ಬಿಡಿ, ಓಲ್ಡ್ ಕ್ಲಾಸ್ ಆಗಿಯೇ ನಮ್ಮ ರೈಲು ನಿಲ್ದಾಣ ಉಳಿದಿದೆ. ಅದರ ನಡುವೆ ಕಂಕನಾಡಿ ಅಂದರೆ ಮಂಗಳೂರು ಜಂಕ್ಷನ್ ವಿಶ್ವದರ್ಜೆ ಮಾಡುವುದೋ, ಸೆಂಟ್ರಲ್ ರೈಲು ನಿಲ್ದಾಣ ವಿಶ್ವದರ್ಜೆ ಮಾಡುವುದೋ ಎನ್ನುವ ಬಗ್ಗೆ ಗೊಂದಲ ಏರ್ಪಟ್ಟಿತ್ತು. ಕೇಂದ್ರದಿಂದ ಕಿಸ್ಕೋ ಎನ್ನುವ ಸಂಸ್ಥೆ ಇಲ್ಲಿ ಬಂದು ಪರಿಶೀಲನೆ ಮಾಡಿತ್ತು. ಆ ಬಳಿಕ ವಿಶ್ವದರ್ಜೆ ಮಾಡಬೇಕಾದರೆ ಅಂತಹ ನಿಲ್ದಾಣದಲ್ಲಿ ಕನಿಷ್ಟ ಎಂಟು ಫ್ಲಾಟ್ ಫಾರಂ ಇರಬೇಕು ಎನ್ನುವ ನಿಯಮ ಇದೆ ಎನ್ನುವ ಕಾರಣಕ್ಕಾಗಿ ಸೆಂಟ್ರಲ್ ರೈಲು ನಿಲ್ದಾಣದ ವಿಶ್ವದರ್ಜೆಯ ಕನಸು ಮೂಲೆ ಸೇರಿತ್ತು. ಆದರೆ ನಂತರ ಕಿಸ್ಕೋ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಸಮಗ್ರ ಅಧ್ಯಯನ ಮಾಡಿ ಅಲ್ಲಿ ಎಂಟು ಫ್ಲಾಟ್ ಫಾರಂ ಮಾಡುವಷ್ಟು ಅನುಕೂಲತೆ ಇದೆ ಎಂದು ವರದಿ ನೀಡಿದೆ. ಆ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದೆ.

ಇನ್ನು ಮಂಗಳೂರು-ಬೆಂಗಳೂರು ರೈಲು ಹೋಗುವಾಗ ಸಕಲೇಶಪುರ-ಸುಬ್ರಹ್ಮಣ್ಯದ ಬಳಿ ಹಾಸನ-ಮಂಗಳೂರು ಭಾಗದಲ್ಲಿ ರೈಲ್ವೆ ಸುರಕ್ಷತಾ ವಿಭಾಗದವರು ವಿಧಿಸಿರುವ ನಿಯಮಗಳ ಪ್ರಕಾರ ಹೆಚ್ಚಿನ ರೈಲು ಸಂಚಾರ ಅಲ್ಲಿ ಆಗುತ್ತಿಲ್ಲ. ಘಾಟ್ ಸೆಕ್ಷನ್ ನಲ್ಲಿ ಸುರಕ್ಷತಾ ದೃಷ್ಟಿಯಿಂದ ಹಾಕುವ ಕ್ಯಾಚ್ ಸ್ಲೈಡಿಂಗ್ ಆ ಭಾಗದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಿದರೆ ಆಗ ರೈಲುಗಳ ಪ್ರಯಾಣಕ್ಕೆ ಅನುಕೂಲ ಮಾತ್ರವಲ್ಲ, ಇನ್ನಷ್ಟು ಹೊಸ ರೈಲುಗಳು ಓಡಾಡಲು ಸುಲಭ ಎಂದು ಮನವಿ ಮಾಡಿದ್ದೇನೆ ..

0
Shares
  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
    • 114 ಮುಸ್ಲಿಮರು ಸೇರಿ ದೇಗುಲದ 167 ಸಿಬ್ಬಂದಿ ವಜಾ ಮಾಡಿ ಆದೇಶ!
  • Popular Posts

    • 1
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 2
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 3
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 4
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • 5
      ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search