• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಆರೋಗ್ಯ ಸುದ್ದಿ 

ಕೊರೋನ ವೈರಸ್ ನಮಗೆ ತಗಲದಿರಲು ನಾವೇನು ಮಾಡಬೇಕು?

Tulunadu News Posted On February 3, 2020
0


0
Shares
  • Share On Facebook
  • Tweet It

ಈ ವೈರಸ್ ನಮ್ಮ ದುರ್ಬಲವಾದ ರೋಗನಿರೋಧಕ ಶಕ್ತಿಯಿಂದ ಬೆಳೆಯುತ್ತದೆ ಹಾಗಾಗಿ ನಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಆಹಾರ ವಿಹಾರ ಮತ್ತು ಮನೆಮದ್ದು ಪಾಲಿಸಿದರೆ ಉತ್ತಮ.

ಬೂದು ಕುಂಬಳಕಾಯಿ ಸೋರೆ, ಹರಿವೆ, ಮೆಂತೆ, ಹಾಗಲಕಾಯಿ ಹೀಗೆ ಸುಲಭ ಜೀರ್ಣವಾಗುವ ಮತ್ತು ಅಧಿಕ ಪೋಷಕಾಂಶ ಹೊಂದಿರುವ ಆಹಾರ ತಿನ್ನಬೇಕು, ಇದಲ್ಲದೆ ಸೀಬೆಹಣ್ಣು ಕಿತ್ತಳೆ ಮೋಸಂಬಿ ನೆಲ್ಲಿಕಾಯಿ ಚಿಕ್ಕು ತಿನ್ನುವುದು ಉತ್ತಮ.

ತಂಪು ಪಾನೀಯ ಐಸ್ಕ್ರೀಮ್ ತಣ್ಣಗಿರುವ ಆಹಾರ ಹಸಿಮಾಂಸ ಬೇಯಿಸದ ಆಹಾರ ವರ್ಜಿಸಬೇಕು. ಆಹಾರದಲ್ಲಿ ಶುಂಠಿ ಕಾಳುಮೆಣಸು ಅರಿಶಿನವನ್ನು ಕಡ್ಡಾಯವಾಗಿ ಬಳಸಿರಿ. ಕಾಫಿ ಚಹಾ ಬದಲಿಗೆ ಒಳ್ಳೆ ಮೆಣಸು ಮೆಂತೆ, ಜೀರಿಗೆ, ಶುಂಠಿ, ಬಳಸಿ ತಯಾರಿಸಿದ ವಿವಿಧ ಕಷಾಯಗಳನ್ನು ಕುಡಿಯಿರಿ.

ಈಗಿನ ಮಾಹಿತಿಯ ಪ್ರಕಾರ ಈ ವೈರಸ್ ಚಳಿ ವಾತಾವರಣ ಶೀತ ಆಹಾರದಿಂದ ಹಸಿ ಮಾಂಸ ಆಹಾರ ಸೇವನೆಯಿಂದ ಪ್ರಬಲವಾಗುತ್ತದೆ ಎಂದು ತಿಳಿಯುತ್ತದೆ. ಹಾಗಾಗಿ ಬಿಸಿಬಿಸಿ ತಿಂಡಿ-ಊಟ ಬಿಸಿ ಪಾನೀಯ ಕುದಿಸಿದ ನೀರನ್ನೇ ಸೇವಿಸಿರಿ. ಹವಾನಿಯಂತ್ರಿತ ಕೊಠಡಿಗಳು ಬಳಕೆ ಅಧಿಕವಾಗಿ ಮಾಡಬಾರದು. ಶಾರೀರಿಕ ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ. ಕಣ್ಣು ಮೂಗು ಬಾಯಿ ಮುಟ್ಟುವ ಮುನ್ನ ತನ್ನ ಕೈಗಳನ್ನು ತೊಳೆದುಕೊಳ್ಳಿ.

ಮನೆಮದ್ದಿನ ರೂಪದಲ್ಲಿ ದಿನನಿತ್ಯ ಜೀರಿಗೆ ನೀರನ್ನು ಕುಡಿಯಲು ಬಳಸಿರಿ ಕಾಲು ಚಮಚ ಶುಂಠಿ ರಸವನ್ನು ಚಿಟಿಕೆ ಉಪ್ಪಿನೊಂದಿಗೆ ಸೇವಿಸಿ. ಚಳಿಗಾಲದಲ್ಲಿ ದಿನನಿತ್ಯ ಒಂದು ಚಮಚ ಚ್ಯವನಪ್ರಾಶ ದೇಹವನ್ನು ಬಿಸಿನೀರಿನಲ್ಲಿ ಹಸಿ ಹೊಟ್ಟೆಯಲ್ಲಿ ಸೇವಿಸಿ. ಮನೆಯೊಳಗೆ ಪ್ರತಿನಿತ್ಯ ಅರಶಿನದ ಧೂಪವನ್ನು ಹಾಕಿರಿ.

ಐದು ಕೂಡಿ ಕಿರಾತಕಡ್ಡಿ ನೆಲನೆಲ್ಲಿ ನಾಲ್ಕು ಇಂಚು ಅಮೃತಬಲ್ಲಿ ಮತ್ತು ಒಂದು ಚಮಚ ಜೀರಿಗೆಯನ್ನು 4 ಲೋಟ ನೀರಿಗೆ ಹಾಕಿ ಕುದಿಸಿ ಒಂದು ಲೋಟಕ್ಕೆ ಬತ್ತಿಸಿದ ಕಷಾಯವನ್ನು ಭಾಗಗಳಲ್ಲಿ ಪ್ರತಿನಿತ್ಯ ಸೇವಿಸಿರಿ. ಇದರಿಂದ ರೋಗ ನಿರೋಧಕ ಶಕ್ತಿಯೂ ವೃದ್ಧಿಸುತ್ತದೆ. ಮಕ್ಕಳು ವೃದ್ಧರು ಗರ್ಭಿಣಿಯರು ದೀರ್ಘಕಾಲದ ರೋಗದಿಂದ ಬಳಲುತ್ತಿರುವವರು ಇದರಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು. ಮಕ್ಕಳು ವೃದ್ಧರು ಗರ್ಭಿಣಿಯರು ದೀರ್ಘಕಾಲದ ರೋಗದಿಂದ ಬಳಲುತ್ತಿರುವವರು ಶೀತ ಜ್ವರ ಬಂದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು, ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು.

-ಡಾ. ಶ್ರೀವತ್ಸ ಭಾರದ್ವಾಜ

0
Shares
  • Share On Facebook
  • Tweet It


coronacorona viruscoronaviruscoronavirus health advisorycoronavirus health and safetyvirus


Trending Now
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
  • Popular Posts

    • 1
      ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!

  • Privacy Policy
  • Contact
© Tulunadu Infomedia.

Press enter/return to begin your search