• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನೀವು ಐವನ್ ಡಿಸೋಜಾರತ್ರ ಯಾಕೆ ಹೋಗಿದ್ರಿ, ಇಲ್ಲಿ ಶಾಸಕ ನಾನಾ, ಅವರಾ!

TNN Correspondent Posted On August 5, 2017
0


0
Shares
  • Share On Facebook
  • Tweet It

ಕೊನೆಗೂ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಯ ವಿಚಾರವನ್ನು ಸೌಹಾರ್ಧಯುತವಾಗಿ ಮುಗಿಸಲು ಒಂದು ವೇದಿಕೆ ಇವತ್ತು ಸಿದ್ಧವಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸಚಿವ ರಮಾನಾಥ ರೈ, ಶಾಸಕ ಜೆ ಆರ್ ಲೋಬೋ, ಮೇಯರ್ ಕವಿತಾ ಸನಿಲ್, ಜಿಲ್ಲಾಧಿಕಾರಿ ಡಾ|ಜಗದೀಶ್, ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಅವರು ಉಪಸ್ಥಿತರಿದ್ದರು. ಯಥಾಪ್ರಕಾರವಾಗಿ ಎಲೋಶಿಯಸ್ ಕಾಲೇಜಿನ ಪ್ರತಿನಿಧಿಗಳು, ವಿಜಯಾ ಬ್ಯಾಂಕಿನ ನೌಕರರ ಸಂಘದ ಪ್ರತಿನಿಧಿಗಳು, ಈದ್ಗಾ ಹೆಸರು ಇಡಬೇಕೆನ್ನುವವರು, ಬಾವುಟ ಗುಡ್ಡ ಹೆಸರು ಇಡಬೇಕೆನ್ನುವವರು ಇದ್ದರು. ನಾನು ಭಾಗವಹಿಸಿದ್ದೆ.

ವಿಜಯಾ ಬ್ಯಾಂಕಿನ ನೌಕರರ ಪ್ರತಿನಿಧಿಯವರು ಕಾನೂನು ನಿಯಮ ಪ್ರಕಾರವಾಗಿ ಏನು ಆಗಬೇಕೋ ಅದರ ಬಗ್ಗೆ ಹೇಳಿ ಕೊನೆಗೆ ನಾಮಫಲಕ ಅನಾವರಣ ಕಾರ್ಯಕ್ರಮದ ದಿನಾಂಕ ನಿಗದಿಗೊಳಿಸಿ ಶಾಸಕ ಜೆ ಆರ್ ಲೋಬೋ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರೊಂದಿಗೆ ಮಾತನಾಡಿ ಕಾರ್ಯಕ್ರಮಕ್ಕೆ ಬರಲು ವಿನಂತಿಸಿಕೊಂಡಿದ್ದೆವು ಎಂದರು. ಆಗ ಸಮ್ಮತಿಸಿದ ಶಾಸಕದ್ವಯರು ಅಚಾನಕ್ ಆಗಿ ಉದ್ಘಾಟನೆಯ ಹಿಂದಿನ ದಿನ ತಡೆಯಾಜ್ಞೆ ತರಲು ಓಡಾಡಿದ್ದು ಯಾಕೆ ಎನ್ನುವುದು ಅವರ ಪ್ರಶ್ನೆ. ಅಷ್ಟೇ ಅಲ್ಲ, ಈ ವಿವಾದ ಆದ ನಂತರ ಶಾಸಕ ಜೆ ಆರ್ ಲೋಬೋ ಅವರು ಈ ವಿಜಯಾ ಬ್ಯಾಂಕಿನ ನೌಕರರ ಸಂಘದವರನ್ನು ಕರೆಸಿ ಬಿಷಪ್ ಅವರನ್ನು ಭೇಟಿಯಾಗಿ ಮಾತನಾಡುವಂತೆ ತಿಳಿಸಿದರಂತೆ. ಆದರೆ ವಿಜಯಾ ಬ್ಯಾಂಕಿನವರು ನಿರಾಕರಿಸಿದ್ದಾರೆ. ನಾವು ಬಿಷಪ್ ಅವರನ್ನು ಭೇಟಿಯಾಗುವ ಅಗತ್ಯವೇ ಬರುವುದಿಲ್ಲ ಎಂದು ಹೇಳಿದ್ದಾರೆ.

ನಂತರ ಮಾತನಾಡುವ ಅವಕಾಶ ಎಲೋಶಿಯಸ್ ಕಾಲೇಜಿನ ರೆಕ್ಟರ್ ಧರ್ಮಗುರು ಅವರಿಗೆ ಕೊಡಲಾಯಿತು. ಅವರು ಕಾಲೇಜಿನ ಪರವಾಗಿ ಪ್ರೋ|ನರಹರಿಯವರು ಮಾತನಾಡುತ್ತಾರೆ ಎಂದರು. ನರಹರಿಯವರು ಮಾತನಾಡಿ ತಮ್ಮಲ್ಲಿರುವ ದಾಖಲೆಗಳ ಪ್ರಕಾರ 1976 ರಿಂದ ಈ ರಸ್ತೆಯನ್ನು ಎಲೋಶಿಯಸ್ ಕಾಲೇಜು ರಸ್ತೆ ಎಂದು ಕರೆಯಲಾಗುತ್ತಿದೆ ಎಂದರು. ಬಂಟರ ಸಂಘದಿಂದ ರಾಜಗೋಪಾಲ ರೈ ಮಾತನಾಡಿ ” ನಾವು ಈ ವಿಷಯವನ್ನು ಮಾತನಾಡಲು ಶಾಸಕ ಜೆ ಆರ್ ಲೋಬೋ ಅವರ ಬಳಿ ಹೋದಾಗ ನೀವು ಯಾಕೆ ಐವನ್ ಡಿಸೋಜಾ ಅವರಲ್ಲಿ ಹೋಗಿದ್ರಿ, ಇಲ್ಲಿನ ಶಾಸಕ ನಾನಾ ಅವರಾ” ಎಂದು ಜೋರಾಗಿ ಮಾತನಾಡಿದ್ದನ್ನು ಪ್ರಸ್ತಾಪಿಸಿದರು. ನಂತರ ನನ್ನ ಮಾತನಾಡುವ ಸರದಿ ಬಂತು.

ಮಂಗಳೂರಿನಲ್ಲಿರುವ ರಸ್ತೆಗಳಲ್ಲಿ 70% ರಸ್ತೆಗಳ ಹೆಸರು ಅಧಿಕೃತ ಅಲ್ಲ. ಅವುಗಳನ್ನು ಜನರು ತಮ್ಮ ಗುರುತಿಗೆ ಇಟ್ಟ ಹೆಸರು. ಈಗ ಒಂದಿಷ್ಟು ಬದಲಾವಣೆಯಾಗಿ ಜನ ಈ ಊರಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ, ಉಪಕರಿಸಿದ ವ್ಯಕ್ತಿಗಳ ಹೆಸರನ್ನು ಇಡಲು ಬಯಸಿದರೆ ಅದು ತಪ್ಪಲ್ಲ. ಅಷ್ಟಕ್ಕೂ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಮಾನಾಥ ರೈ ಅವರು ಕಲಿತದ್ದು ಗೌರ್ನಮೆಂಟ್ ಕಾಲೇಜು, ಅದು ಕಾಲಾನುಕ್ರಮದಲ್ಲಿ ಯೂನಿವರಸಿಟಿ ಕಾಲೇಜಾಗಿದೆ. ಆದರೂ ಇವತ್ತಿಗೂ ಜನ ಅದನ್ನು ಗೌರ್ನಮೆಂಟ್ ಕಾಲೇಜು ಎಂದೇ ಕರೆಯುತ್ತಾರೆ. ಇನ್ನು 1996 ರಲ್ಲಿಯೇ ಕ್ಲಾಕ್ ಟವರ್ ಅನ್ನು ತೆಗೆದು ಬಿಸಾಡಲಾಗಿದೆ. ಆದರೆ ಜನ ಈಗಲೂ ಅದಕ್ಕೆ ಕ್ಲಾಕ್ ಟವರ್ ಎನ್ನುತ್ತಾರೆ. ಆವತ್ತು ಹಡಗುಗಳು ಬಂದು ತಂಗುವ ಪ್ರದೇಶದಲ್ಲಿ ದೂರದಲ್ಲಿ ಬರುವಾಗ ನಾವಿಕರಿಗೆ ಗೊತ್ತಾಗಲಿ ಎನ್ನುವ ಕಾರಣಕ್ಕೆ ಅಲ್ಲಿ ಲೈಟ್ ಹೌಸ್ ನಿರ್ಮಾಣ ಮಾಡಲಾಗಿತ್ತು. ಆವತ್ತಿನಿಂದ ಇವತ್ತಿನ ತನಕ ಲೈಟ್ ಹೌಸ್ ಹಿಲ್ ಎಂದೇ ಇದೆ. ಎಲೋಶಿಯಸ್ ಕಾಲೇಜಿನ ಬೋರ್ಡನಲ್ಲಿಯೂ ಹಾಗೆ ಇದೆ. ಇನ್ನೂ ಎಲ್ಲಾ ಕಾನೂನು ಪ್ರಕ್ರಿಯೆ ಮುಗಿದಿದೆ. ಸಂತ ಎಲೋಶಿಯಸ್ ಕಾಲೇಜು ನಮ್ಮ ಊರಿನಲ್ಲಿ ಮಾತ್ರವಲ್ಲ, ಈ ಜಿಲ್ಲೆ, ರಾಜ್ಯ, ದೇಶ, ವಿದೇಶಗಳಲ್ಲಿಯೂ ಪ್ರಖ್ಯಾತವಾಗಿದೆ. ಆದ್ದರಿಂದ ಒಂದು ರಸ್ತೆಯಿಂದ ಅದು ಹೆಸರುವಾಸಿಯಾಗಬೇಕಿಲ್ಲ. ಇಲ್ಲಿ ಕಲಿತ, ಕಲಿಯುತ್ತಿರುವ ಮುಂದೆ ಕಲಿಯಲಿರುವ ಮಕ್ಕಳಿಂದ ಕಾಲೇಜಿನ ಹೆಸರು ಉಳಿಯಲಿದೆ. ಆದರೆ ಮೂಲ್ಕಿ ಸುಂದರರಾಮ ಶೆಟ್ಟಿಯವರು ಆವತ್ತು ಉದ್ಯೋಗ ತೆಗೆಸಿಕೊಟ್ಟ ಸಾವಿರಾರು ಕುಟುಂಬಗಳ ಸದಸ್ಯರು ಈಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅವರ ನಂತರ ಮುಂದಿನ ಪೀಳಿಗೆ ಈ ಹೆಸರನ್ನು ಜ್ಞಾಪಕಕ್ಕೆ ಇಟ್ಟುಕೊಳ್ಳಬೇಕಾದರೆ ರಸ್ತೆಗೆ ಹೆಸರು ಅಗತ್ಯ ಎಂದೆ. ಶಾಸಕರು ಈ ಹೆಸರಿಟ್ಟರೆ ಶಾಂತಿಗೆ ಭಂಗ ಬರುತ್ತೆ ಎಂದಿದ್ದಾರೆ. ಶಾಂತಿ ಭಂಗ ಮಾಡುವಂತಹ ಕೆಲಸ ಕ್ರೈಸ್ತರು ಮಾಡುವುದಿಲ್ಲ, ಬಂಟರು ಮಾಡುವುದಿಲ್ಲ ಎಂದು ಹೇಳಿ ಮಾತು ಮುಗಿಸಿದೆ. ನಂತರ ಒಂದಿಬ್ಬರು ಮಾತನಾಡಿದರು. ಕೊನೆಗೆ ಒಂದು ಸಮಿತಿ ನಿರ್ಮಾಣವಾಗಿದೆ. ಅದರ ಸದಸ್ಯರು, ಅವರು ಮಾಡಲಿರುವ ಕೆಲಸಗಳು, ಅದರಿಂದ ಆಗುವ ಪ್ರಯೋಜನಗಳನ್ನು ಎಲ್ಲಾ ಮುಂದೆ ಹೇಳುತ್ತೇನೆ

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • 3
      ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • 4
      ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • 5
      ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!

  • Privacy Policy
  • Contact
© Tulunadu Infomedia.

Press enter/return to begin your search