• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಒಂದು ವೇಳೆ ಕಾಸರಗೋಡಿನ ರೋಗಿಯ ವರದಿ ಪಾಸಿಟಿವ್ ಬಂದಿದ್ದರೆ!!

Hanumantha Kamath Posted On April 12, 2020


  • Share On Facebook
  • Tweet It

ಮಂಗಳೂರಿನ ವೆನಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಪ್ರಾರಂಭವಾಗಿರುವ ಕೊರೊನಾ ಟೆಸ್ಟಿಂಗ್ ಲ್ಯಾಬ್ ಊಟಕ್ಕಿಲ್ಲದ ಉಪ್ಪಿನಕಾಯಿ ಆಗಬಾರದು ಎನ್ನುವುದು ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ನನ್ನ ಕಾಳಜಿ. ಈಗಾಗಲೇ ಕಾಸರಗೋಡುವಿನಿಂದ ರೋಗಿಗಳು ಮಂಗಳೂರಿಗೆ ಬರುತ್ತಿದ್ದಾರೆ. ಅದರಲ್ಲಿ ಒಬ್ಬ ರೋಗಿಯ ಗಂಟಲದ್ರವ ಲ್ಯಾಬ್ ನಲ್ಲಿ ಪರೀಕ್ಷೆಗೆ ಕಳುಹಿಸಿ 50 ಗಂಟೆಗಳ ತನಕ ಬರದೇ ಇದ್ದಾಗ ನನಗೆ ಒಂದಿಷ್ಟು ಆತಂಕವಾಯಿತು. ಏಕೆಂದರೆ ಆ ರೋಗಿಯ ಗಂಟಲದ್ರವ ಪಡೆದುಕೊಂಡ ಬಳಿಕ ಅದರ ವರದಿ ಬರುವ ತನಕ ಆ ರೋಗಿಯನ್ನು ಹೊರಗೆ ಬಿಡಬಾರದು ಎನ್ನುವ ನಿಯಮ ಇದೆ.

ಯಾಕೆಂದರೆ ಒಂದು ವೇಳೆ ಅದು ಪಾಸಿಟಿವ್ ಬಂದರೆ ತಕ್ಷಣ ರೋಗಿಯನ್ನು ಕ್ವಾರಂಟೈನ್ ಮಾಡಬೇಕಾಗುತ್ತದೆ. ಆಕೆಯ ಜೊತೆಗಿದ್ದವರನ್ನು, ಅಂಬ್ಯುಲೆನ್ಸ್ ಚಾಲಕನನ್ನು, ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನು ಕೂಡ ಕ್ವಾರಂಟೈನ್ ಮಾಡಬೇಕಾಗುತ್ತದೆ. ಪಾಸಿಟಿವ್ ಇರುವ ರೋಗಿಯನ್ನು ವಿಶೇಷ ನಿಗಾ ಘಟಕದಲ್ಲಿ ಇಟ್ಟು ಪರೀಕ್ಷೆ ಮಾಡಬೇಕಾಗುತ್ತದೆ. ನಾವು ಈಗಾಗಲೇ ಕಾಸರಗೋಡು ಜಿಲ್ಲೆಯ ಕೊರೊನಾ ಸೋಂಕಿತರು ಮಂಗಳೂರಿಗೆ ಬರುವುದು ಬೇಡಾ ಎನ್ನುವ ಕಾರಣದಿಂದ ಇದ್ದಬದ್ಧ ಪ್ರಯತ್ನವನ್ನು ಮಾಡುತ್ತಿದ್ದೇವೆ. ಹಾಗಿರುವಾಗ ಹೀಗೆ ಒಬ್ಬೊಬ್ಬರೇ ಎಮರ್ಜೆನ್ಸಿ ಎಂದು ಇಲ್ಲಿಗೆ ಬಂದು ಸೇರಿಕೊಂಡರೆ ಏನು ಮಾಡುವುದು ಎನ್ನುವ ಗೊಂದಲ ಇರುವಾಗಲೇ ಎರಡೂವರೆ ದಿನಗಳಾದರೂ ಆ ರೋಗಿಯ ವರದಿ ಬಂದಿಲ್ಲ ಎನ್ನುವಾಗ ಯಾರಿಗಾದರೂ ಬೇಸರವಾಗುತ್ತದೆ. ಯಾಕೆಂದರೆ ಕಾಸರಗೋಡಿನ ಆ ರೋಗಿಯಿಂದ ಗಂಟಲದ್ರವ ಪಡೆದುಕೊಂಡು ಅವರನ್ನು ಮಂಗಳೂರಿನಿಂದ ಕಳುಹಿಸಿಯಾಗಿತ್ತು. ಅದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾಡಿರುವ ಮೊದಲ ತಪ್ಪು. ಒಂದು ವೇಳೆ ಅದು ವರದಿ ಪಾಸಿಟಿವ್ ಬಂದಿದ್ದರೆ ಏನು ಕಥೆಯಾಗುತ್ತಿತ್ತು.

ಇನ್ನು ನಮ್ಮ ಕೆಲವು ಜನಪ್ರತಿನಿಧಿಗಳು ಪ್ರತಿ ದಿನ “ಇವತ್ತು ಯಾವುದೂ ಹೊಸ ಕೇಸ್ ಪತ್ತೆಯಾಗಿಲ್ಲ” ಎಂದು ಹಾಕುತ್ತಾರೆ ವಿನ: ಕಾಸರಗೋಡಿನ ರೋಗಿಯ ಗಂಟಲದ್ರವದ ಬಗ್ಗೆ ಚಕಾರ ಎತ್ತುವುದಿಲ್ಲ. ನಾನು ಕೊನೆಗೆ ಟೆಸ್ಟಿಂಗ್ ಲ್ಯಾಬ್ ಇನ್ ಚಾರ್ಜ್ ಶರತ್ ಅವರಿಗೆ ಫೋನ್ ಮಾಡಿ ಕೇಳಿದೆ. ಅದಕ್ಕೆ ಅವರು “ನಾನೇಲ್ಲೂ ಕೂಡ 6 ರಿಂದ 8 ಗಂಟೆಯ ಒಳಗೆ ವರದಿ ಬರುತ್ತದೆ ಎಂದು ಹೇಳಿಲ್ಲ” ಎಂದಿದ್ದಾರೆ. ಒಂದು ವೇಳೆ ಎರಡು ದಿನಗಳ ತನಕ ಕಾದೇ ವರದಿ ಸಿಗುವುದಾದರೆ ಹಾಸನ, ಶಿವಮೊಗ್ಗಕ್ಕೆ ಕಳುಹಿಸಿದರೂ ಅಷ್ಟೇ ಸಮಯ ಹಿಡಿಯುತ್ತಿತ್ತು. ನಮ್ಮ ಊರಿನಲ್ಲಿಯೇ ಮಾಡಿ ಏನು ಪ್ರಯೋಜನ? ಇನ್ನು ಲ್ಯಾಬ್ ಹೊಸದಾಗಿ ನಿರ್ಮಾಣವಾಗಿರುವುದರಿಂದ ನಮ್ಮ ವೈದ್ಯರಿಗೆ ಅದರ ಮೇಲೆ ಹತೋಟಿ ಸಿಗಲು ಕೆಲವು ದಿನ ಬೇಕಾಗಬಹುದು ಎಂದಾದರೆ ಅದನ್ನು ಜನಪ್ರತಿನಿಧಿಗಳು ಹೇಳಲಿ ಅಥವಾ ನಾವು ಕರೆ ಮಾಡಿದರೆ ಸರಿಯಾಗಿ ಉತ್ತರಿಸಲಿ. ಈ ನಡುವೆ ಡಿಎಚ್ ಒ ಅವರೊಂದಿಗೆ ನಾನು ಫೋನಿನಲ್ಲಿ ಮಾತನಾಡಿದ್ದೇನೆ. ಅವರು ಸಂಜೆಯೊಳಗೆ ಹೇಳುತ್ತೇನೆ ಎಂದಿದ್ದರು. ಸದ್ಯ ವರದಿ ನೆಗೆಟಿವ್ ಎಂದು ಬಂದಿರುವುದರಿಂದ ಇವರೆಲ್ಲರೂ ಬಚಾವ್. ಇಲ್ಲದಿದ್ದರೆ ಪ್ರತಿಯೊಬ್ಬರಿಗೂ ಕುತ್ತಿಗೆ ತನಕ ಬರುತ್ತಿತ್ತು. ಇನ್ನು ನಾನು ನನ್ನ ಒಬ್ಬನಿಗಾಗಿ ಇವರಿಗೆಲ್ಲ ಫೋನ್ ಮಾಡಿ ಕೇಳುವುದಲ್ಲ. ಜನರಿಗಾಗಿ ಕೇಳುವುದು. ಇದನ್ನು ಶಾಸಕರು, ಸಚಿವರು, ಸಂಸದರಲ್ಲಿ ಯಾರಾದರೊಬ್ಬರು ಮಾಡಬೇಕು. ಅವರು ಮಾಡುವುದಿಲ್ಲ, ಮಾಡಿದರೂ ಹೇಳುವುದಿಲ್ಲ.

ಇನ್ನು ಕಾಸರಗೋಡಿನಿಂದ ಬರುವ ರೋಗಿಗಳನ್ನು ಕೆಎಸ್ ಹೆಗ್ಡೆ ಆಸ್ಪತ್ರೆಗೆ ಮಾತ್ರ ಯಾಕೆ, ನಮ್ಮಲ್ಲಿಗೂ ಕಳುಹಿಸಿ ಎಂದು ಒತ್ತಡವನ್ನು ಕೆಲವು ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯವರು ಮಾಡುತ್ತಿದ್ದಾರೆ. ಜಿಲ್ಲೆಯ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ. ಯಾಕೆಂದರೆ ತಲಪಾಡಿಯಿಂದ ಒಳಗೆ ಬರುವ ಕೇರಳದ ಅಂಬ್ಯುಲೆನ್ಸ್ ಗಳು ಹೀಗೆ ಮಂಗಳೂರನ್ನು ಸುತ್ತಾಡುತ್ತಿದ್ದರೆ ಪರಿಸ್ಥಿತಿ ಏನಾಗಬೇಕು? ಇನ್ನು ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಕೇರಳದ ರೋಗಿಗಳಿಗಾಗಿಯೇ ಪ್ರತ್ಯೇಕ ಬ್ಲಾಕ್ ಮತ್ತು ಲಿಫ್ಟ್ ವ್ಯವಸ್ಥೆ ಇದೆ. ಅದು ಬೇರೆ ಆಸ್ಪತ್ರೆಯಲ್ಲಿ ಕಷ್ಟಸಾಧ್ಯ. ಹಟಕ್ಕೆ ಬಿದ್ದು ನಿಯಮ ಬದಲಾಯಿಸುವಲ್ಲಿ ಬೇರೆ ಖಾಸಗಿ ಆಸ್ಪತ್ರೆಯವರು ಯಶಸ್ವಿಯಾದ್ದಲ್ಲಿ ಮುಂದೆ ಏನಾಗಬಹುದೋ ಗೊತ್ತಿಲ್ಲ. ಕೇರಳದ ಮಾಧ್ಯಮಗಳು ನಮ್ಮಿಂದ ತಪ್ಪು ಘಟಿಸಲಿ ಎಂದು ಬಕಪಕ್ಷಿಯಂತೆ ಗಡಿಯಾಚೆ ನಿಂತು ಕಾಯುತ್ತಿದ್ದಾರೆ. ಈಗಾಗಲೇ ಒಬ್ಬಿಬ್ಬರನ್ನು ರೋಗಿಯ ನೆಪದಲ್ಲಿ ಕಳುಹಿಸಿ ಇಲ್ಲಿನ ವ್ಯವಸ್ಥೆಯನ್ನು ಪರೀಕ್ಷಿಸಿಕೊಂಡಿದ್ದಾರೆ. ಹಾಗಿರುವಾಗ ನಾವು ಎಚ್ಚರಿಕೆಯಿಂದ ಇರಬೇಕು. ಇನ್ನು ಜನಪ್ರತಿನಿಧಿಗಳು ಕೇವಲ ಕಿಟ್ ಹಂಚುವ ಫೋಟೋಗಳನ್ನು ಮಾತ್ರ ಹಾಕದೇ ಇಂತಹ ಗಂಭೀರ ವಿಷಯಗಳ ಬಗ್ಗೆ ಕೂಡ ಮಾತನಾಡಬೇಕು!

  • Share On Facebook
  • Tweet It


- Advertisement -


Trending Now
ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
Hanumantha Kamath May 24, 2025
ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
Hanumantha Kamath May 23, 2025
Leave A Reply

  • Recent Posts

    • ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!
    • ಕನ್ನಡತಿಯ ಮುಸ್ಲಿಂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕತೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
    • ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
  • Popular Posts

    • 1
      ಬೆಂಗಳೂರಿನ 9 ತಿಂಗಳ ಮಗುವಿಗೆ ಕೊರೋನಾ ಸೋಂಕು ದೃಢ!
    • 2
      ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • 3
      ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • 4
      ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • 5
      ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search