• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಂಗಳೂರು ಬಂದರಿನಲ್ಲಿ ಕೊರೊನಾ ಹಂಚುವ ಕೆಲಸ ಜೋರಾಗಿ ನಡೆಯುತ್ತಿದೆಯಾ?

Hanumantha Kamath Posted On April 27, 2020
0


0
Shares
  • Share On Facebook
  • Tweet It

ಮಂಗಳೂರು ಬಂದರು ಪ್ರದೇಶದಲ್ಲಿ ಹಳೆ ಬಂದರು ರಸ್ತೆ ಎನ್ನುವುದಿದೆ. ಅಲ್ಲಿನ ಜನರಿಗೆ ಕರೋನಾ ಎನ್ನುವುದು ಕರೀನಾ ಎಂದು ಕೇಳಿಸಿರಬೇಕು. ಅವರಿಗೆ ಸಾಮಾಜಿಕ ಅಂತರ ಎನ್ನುವ ಶಬ್ದದ ಅರ್ಥ ಏನು ಎಂದು ಗೊತ್ತಾಗಲು ಇನ್ನೊಂದು ಜನ್ಮ ಬೇಕಾಗಬಹುದು. ಅಕ್ಷರಶ: ಅಲ್ಲಿ ಮೀನು ವ್ಯಾಪಾರಕ್ಕಾಗಿ ಜನ ಒಬ್ಬರ ಮೇಲೆ ಒಬ್ಬರು ಬೀಳುತ್ತಿರುತ್ತಾರೆ. ನಾನು ಹೇಳುವುದಕ್ಕಿಂತ ರಾಷ್ಟ್ರೀಯ ವಾಹಿನಿಗಳು ಅದನ್ನು ಚಿತ್ರೀಕರಿಸಿ ನ್ಯೂಸ್ ಸ್ಟೋರಿ ಮಾಡಿರುವ ಕ್ಲೀಪಿಂಗ್ ನನ್ನ ಬಳಿ ಇದೆ. ಆಂಗ್ಲ ಭಾಷೆಯ ಟೈಮ್ಸ್ ನೌ ವಾಹಿನಿಯಲ್ಲಿ ನ್ಯೂಸ್ ಮಾಡಿದ್ದಾರೆ. ಆ ದೃಶ್ಯ ನೋಡಿದರೆ ನಿಮಗೆ ಮಂಗಳೂರಿನ ಪರಿಸ್ಥಿತಿಯ ಬಗ್ಗೆ ಆತಂಕ ಶುರುವಾಗುತ್ತದೆ. ಅದರಲ್ಲಿ ನಿರೂಪಕಿ ವರದಿಗಾರನಿಗೆ ಕೇಳುತ್ತಾರೆ. ” ಮಂಗಳೂರಿನಲ್ಲಿ ಈ ಪರಿ ಜನ ಮೀನಿಗಾಗಿ ಮುಗಿಬೀಳುತ್ತಿದ್ದಾರಲ್ಲ, ಸಾಮಾಜಿಕ ಅಂತರವನ್ನು ಪಾಲಿಸುತ್ತಿಲ್ಲ, ಯಾಕೆ?” ಅದಕ್ಕೆ ವರದಿಗಾರರು ” ಅದನ್ನು ಇಲ್ಲಿನ ಸ್ಥಳೀಯ ಜಿಲ್ಲಾಡಳಿತವೇ ಉತ್ತರಿಸಬೇಕು” ಎನ್ನುತ್ತಾರೆ. ಇದೆಲ್ಲಾ ಪೊಲೀಸರ ಕಣ್ಣಂಚಿನಲ್ಲಿಯೇ ನಡೆಯುತ್ತಿದೆ ಎಂದು ಕೂಡ ಆತ ಸೇರಿಸುತ್ತಾನೆ.

ನಿಮಗೆ ಗೊತ್ತಿರಲಿ, ಇದೆಲ್ಲಾ ನಡೆಯುವುದು ಮಧ್ಯರಾತ್ರಿಯಲ್ಲಿ. ರಾಶಿ ಜನರ ಮಧ್ಯೆ ಯಾವುದೇ ಚಾನಲ್ ನ ವರದಿಗಾರ ಅಥವಾ ಛಾಯಾಗ್ರಾಹಕ ಹೋಗಿ ಚಿತ್ರೀಕರಣ ನಡೆಸಲು, ವರದಿ ಮಾಡಲು ಧೈರ್ಯ ತೋರಿಸುವುದಿಲ್ಲ. ಒಂದು ಅಲ್ಲಿನವರ ಭಯ, ಎರಡನೇಯದು ಆ ನೂರಾರು ಜನರ ನಡುವೆ ಯಾರಿಗೆ ಕೋರೋನಾ ಇದೆ ಯಾರಿಗೆ ಗೊತ್ತು. ಅದರಿಂದ ಧೈರ್ಯವಾಗಿ ವ್ಯಾಪಾರ ನಡೆಯುತ್ತದೆ. ಈ ಮಧ್ಯೆ ಟೌಮ್ಸ್ ನೌ ಧೈರ್ಯ ಮೆಚ್ಚಬೇಕು. ನಮ್ಮ ಮಂಗಳೂರಿನವರ ಹೆಸರು ಹೇಗೆ ಹಾಳಾಗುತ್ತಿದೆ ಎನ್ನುವುದಕ್ಕೆ ನಿರೂಪಕಿ ಮತ್ತು ವರದಿಗಾರರ ನಡುವೆ ನಡೆಯುವ ಮುಂದಿನ ಸಂಭಾಷಣೆನೆ ಸಾಕ್ಷಿ. ಆಕೆ ಕೇಳುತ್ತಾಳೆ. ” ಅಲ್ಲಿನ ಜಿಲ್ಲಾಡಳಿತ ಪ್ರತಿ ಬಾರಿ ಮಾತನಾಡಿದರೆ ಕಾಸರಗೋಡು ಜಿಲ್ಲೆಯಿಂದ ಕೊರೋನಾ ಬರುತ್ತದೆ ಎಂದು ಅರ್ಜೆಂಟ್ಟಲ್ಲಿ ಗಡಿ ಮುಚ್ಚಿದೆ. ಮಾಜಿ ಪ್ರಧಾನಿ ದೇವೆಗೌಡರು ಗಡಿ ಮುಚ್ಚಬೇಡಿ ಎಂದು ವಿನಂತಿಸಿದರೂ ಅಲ್ಲಿನ ಜಿಲ್ಲಾಡಳಿತ ನಮ್ಮ ಜನರ ಸುರಕ್ಷೆ ಮುಖ್ಯ ಎಂದು ಹೇಳುತ್ತಾ ಬರುತ್ತಿದೆ, ಇದು ಅವರಿಗೆ ಕಾಣಿಸಲ್ವಾ” ಎನ್ನುತ್ತಾಳೆ. ಅದಕ್ಕೆ ವರದಿಗಾರ “ಹೌದು, ಇದೆಲ್ಲಾ ಜಿಲ್ಲಾಡಳಿತವೇ ನೋಡಬೇಕು” ಎಂದು ಹೇಳುತ್ತಾರೆ. ನಾನು ಈಗ ಕೇಳುತ್ತಿರುವುದು ಅದೇ ಪ್ರಶ್ನೆ. ನೀವು ತಲಪಾಡಿ ಗಡಿಯಲ್ಲಿ ಒಂದು ಕೊರೊನಾ ಸೊಂಕಿತ ನೊಣ ಒಳಗೆ ಬರುತ್ತದಾ ಎಂದು ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದೀರಿ. ಅದು ತಪ್ಪು ಎಂದು ನಾನು ಹೇಳುತ್ತಿಲ್ಲ. ಹಾಗಾದರೆ ಬಂದರಿನಲ್ಲಿ ನಿಮ್ಮವರು ಬಾಯಿಗೆ ಎಣ್ಣೆ ಬಿಟ್ಟು ಮಲಗಿದ್ದಾರಾ. ಸ್ಥಳೀಯ ಜನಪ್ರತಿನಿಧಿಗಳು ಕಿಟ್ ವಿತರಣೆ, ಹೆಣ ಸುಡಲು ಜಾಗೃತಿ ಮಾಡುತ್ತಾರೆ ವಿನ: ನಾವು ಹೀಗೆ ಬರೆದು ತಿಳಿಸುವ ತನಕ ಅತ್ತ ಹೋಗುವುದೂ ಇಲ್ಲ.

ಇನ್ನು ಕೆಲವು ಸೂಪರ್ ಮಾರ್ಕೆಟ್ ಗಳಿವೆ. ಅಲ್ಲಿ 7 ರಿಂದ 12 ತನಕ ವ್ಯಾಪಾರ ನಡೆಯುತ್ತದೆ. ಅಲ್ಲಿ ನಾಗರಿಕರು ಎಷ್ಟು ಸಾಮಾಜಿಕ ಅಂತರ ಪಾಲಿಸುತ್ತಾರೆ. ಇನ್ನು ನಮ್ಮ ಜನರು ಕೂಡ ತಮ್ಮ ವಾರ್ಡಿನಲ್ಲಿಯೇ ಒಂದಲ್ಲ ಒಂದು ಜನರಲ್ ಸ್ಟೋರ್ ಇರುವಾಗ ಕಾರು ಹಿಡಿದುಕೊಂಡು ಸುತ್ತಾಡುವುದು ಏಕೆ? ಈಗ ಎಲ್ಲಿಯ ತನಕ ಪರಿಸ್ಥಿತಿ ಎಂದರೆ ಮೊದಮೊದಲು ಪೊಲೀಸರು ಕೂಡ ಕಟ್ಟುನಿಟ್ಟಾಗಿ ನಿಲ್ಲಿಸಿ ವಿಚಾರಿಸುತ್ತಿದ್ದರು. ಈಗ ಅವರು ಯಾರಿಗೆ ಕೇಳಿದರೂ ಎಲ್ಲರ ಕೈಲಿ ಪಾಸ್ ಇದೆ. ಪಾಸ್ ಎಷ್ಟು ಕಾಮನ್ ಆಗಿದೆ ಎಂದರೆ ಸುಮ್ಮನೆ ತಿರುಗಾಡುವವ ಕೂಡ ಊಟ ಹಂಚುವ ಪಾಸ್ ತೋರಿಸುತ್ತಾನೆ. ಅವರಿಗೆ ಎಲ್ಲಿಂದ ಪಾಸ್ ಸಿಗುತ್ತಿದೆ. ಇನ್ನು ಮುಡಿಪು-ಕೊಣಾಜೆ-ದೇರಳಕಟ್ಟೆ ಭಾಗದಲ್ಲಿ ಲಾಕ್ ಡೌನ್ ಖಾದರ್ ಅವರೇ ತೆಗೆದಿದ್ದಾರಾ ಎಂದು ಡೌಟು. ಅಲ್ಲಿನ ಜನ ನಿತ್ಯದಂತೆ ವಾಹನಗಳಲ್ಲಿ ಓಡಾಟ ನಡೆಸುತ್ತಿದ್ದಾರೆ. ಬೇಕಾದರೆ ನೀವು ಅಲ್ಲಿ ನಿಮ್ಮ ಯಾವುದಾದರೂ ಮಿತ್ರರ ಬಳಿ ಕೇಳಿ ನೋಡಿ. ಹಾಗಾದರೆ ಲಾಕ್ ಡೌನ್ ಅರ್ಥ ಏನು?

ಇನ್ನು ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಒಂದೊಂದಾಗಿ ಕೋವಿಡ್ -19 ಪಾಸಿಟಿವ್ ಸೋಂಕಿತರು ಬರದಿರಲಿ ಎಂದು ನಾವೆಲ್ಲರೂ ದೇವರ ಬಳಿ ಪ್ರಾರ್ಥಿಸಬೇಕು. ಯಾವ ಕೇರಳದ ವ್ಯಕ್ತಿ ಬಂದು ಬಂಟ್ವಾಳದ ಮಹಿಳೆಗೆ ಅಂಟಿಸಿ ಹೋದನೋ ದೇವರಿಗೆ ಗೊತ್ತು. ಈಗ ಎಚ್ಚರಿಕೆಯ ಕರೆಗಂಟೆ ಹೊಡೆಯಲು ಶುರುವಾಗಿದೆ. ಕೆಲವರು ಮಾಡಿದ ನಿರ್ಲಕ್ಷ್ಯದಿಂದ ಅಮಾಯಕರು ಕೊರೊನಾ ಪೆಟ್ಟು ತಿಂದು ಮಲಗುವಂತಾಗಿದೆ. ಬಂಟ್ವಾಳದ ಆ ಇಬ್ಬರು ಮಹಿಳೆಯರು ಏನು ತಪ್ಪು ಮಾಡಿದ್ದರು. ಅತ್ತೆ ಯಾವುದೋ ಬೇರೆ ಆರೋಗ್ಯ ಸಮಸ್ಯೆಯಿಂದ ಒಂದು ತಿಂಗಳಿಗಿಂತ ಜಾಸ್ತಿ ಆ ಆಸ್ಪತ್ರೆಯಲ್ಲಿ ಇದ್ದರು. ಅವರನ್ನು ನೋಡಲು ಸೊಸೆ ಕೆಲವು ಸಲ ಬಂದಿದ್ದಾರೆ. ಅತ್ತೆಯ ಕೋಣೆಯನ್ನು ಕ್ಲೀನ್ ಮಾಡಿದ ಸಹಾಯಕಿ ಕೂಡ ಈಗ ಕೋವಿಡ್ 19 ಪಾಸಿಟಿವ್. ಈ ಮೂವರ ತಪ್ಪು ಏನು ಇತ್ತು. ಮಂಗಳೂರಿನ ಐದುವರೆ ಲಕ್ಷ ಜನರಲ್ಲಿ ಕೆಲವರ ನಿರ್ಲಕ್ಷ್ಯ ಇನ್ನೆಷ್ಟು ಜನರಿಗೆ ಉಚಿತವಾಗಿ ಈ ಕಾಯಿಲೆ ಹರಡಲಿದೆಯೋ ಭಗವಂತನೇ ಬಲ್ಲ!!

0
Shares
  • Share On Facebook
  • Tweet It




Trending Now
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
Hanumantha Kamath January 12, 2026
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
Hanumantha Kamath January 10, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
  • Popular Posts

    • 1
      ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • 2
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • 3
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 4
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!

  • Privacy Policy
  • Contact
© Tulunadu Infomedia.

Press enter/return to begin your search