• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಾರ್ಯಕರ್ತರ ಆಶಯದಂತೆ ಹೆಸರಿಡುವ ಧೈರ್ಯ ಬಿಜೆಪಿಗೆ ಇದೆಯಾ?

Hanumantha Kamath Posted On June 4, 2020
0


0
Shares
  • Share On Facebook
  • Tweet It

ಸರಕಾರಿ ಸ್ವತ್ತುಗಳಿಗೆ ಹೆಸರುಗಳನ್ನು ಇಡುವುದು ಹೊಸದೇನಲ್ಲ. ಆದರೆ ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ತನಕ ಬಹುತೇಕ ಸರಕಾರಿ ಆಸ್ತಿಗಳಿಗೆ ಇಂದಿರಾ, ರಾಜೀವ್ ಅಥವಾ ನೆಹರೂ ಹೆಸರುಗಳನ್ನೇ ಇಡಲಾಗುತ್ತಿತ್ತು. ಅದು ಒಂದಿಷ್ಟು ಬದಲಾದದ್ದು ಇತ್ತೀಚಿನ ಆರೇಳು ವರ್ಷಗಳಿಂದ. ಅದರಲ್ಲಿಯೂ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರಕಾರ ಬಂದ ಬಳಿಕ ಹಿಂದೂ ಸಂಸ್ಕೃತಿಯನ್ನು ಎತ್ತರಕ್ಕೆ ಏರಿಸಿದ ಮಹನೀಯರ ಹೆಸರನ್ನು ಇಡುವ ಸಂಪ್ರದಾಯ ಶುರುವಾಗಿತ್ತು. ಆದರೆ ಕೊರೊನಾ ನಡುವೆ ಯಾವುದೂ ಬೇಡಾ ಎಂದು ಎಲ್ಲರಿಗೂ ಅನಿಸಿದ್ದ ಕಾರಣ ಈ ವಿಚಾರಗಳು ಹಿಂದೆ ಬಿದ್ದಿದ್ದವು. ಯಾವಾಗ ಬೆಂಗಳೂರಿನ ಯಲಹಂಕದಲ್ಲಿ ನಿರ್ಮಾಣವಾದ ಹೊಸ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ಇಡಲು ಬಿಜೆಪಿ ತೀರ್ಮಾನಿಸಿತ್ತೋ ಅದನ್ನು ಮೊದಲು ವಿರೋಧಿಸಿದ್ದು ಕಾಂಗ್ರೆಸ್.

ಕಾಂಗ್ರೆಸ್ ವಿರೋಧಿಸಿದ ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಗೆ ಹೆದರಿಬಿಟ್ಟರೆಂದರೆ ಕಾಂಗ್ರೆಸ್ ರಾಜ್ಯದಲ್ಲಿ ಸರಕಾರ ಮಾಡುತ್ತಿದೆಯೋ, ಬಿಜೆಪಿ ಮಾಡುತ್ತಿದೆಯೋ ಎನ್ನುವ ಅನುಮಾನ ಸ್ವತ: ಬಿಜೆಪಿ ಕಾರ್ಯಕರ್ತರಲ್ಲಿ ಹುಟ್ಟಿತ್ತು. ಇದು ಒಂದು ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅನುಮಾನವಾದಂತೆ ಆಯಿತು. ಅದಕ್ಕಾಗಿ ಯಾರೋ ಮಂಗಳೂರಿನ ಪಂಪ್ ವೆಲ್ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ಇಡಲು ಒಂದು ಬ್ಯಾನರ್ ಮಾಡಿಸಿ ಅಲ್ಲಿ ರಾತ್ರೋರಾತ್ರಿ ಹೋಗಿ ಹಾಕಿ ಬಂದರು. ಅದರ ಪಕ್ಕದಲ್ಲಿ ಬಜರಂಗದಳ ಎಂದು ಕೂಡ ಬರೆಯಲಾಯಿತು. ಹಾಕಿದವರು ಬಜರಂಗದಳದವರಾ? ಗೊತ್ತಿಲ್ಲ, ಆದರೆ ಮರುದಿನ ಅಲ್ಲಿ ಆ ಬ್ಯಾನರ್ ಇರಲಿಲ್ಲ. ಇದು ಮತ್ತೆ ಹಿಂದೂ ಸಂಘಟನೆಗಳ ಕಸಿವಿಸಿಗೆ ಕಾರಣವಾಯಿತು. ಅದಕ್ಕೆ ಈ ಹೆಸರಿಡುವ ವಿಷಯ ಮಂಗಳೂರಿನ ವಿವಿಧ ಸ್ಥಳಗಳಲ್ಲಿ ತನ್ನದೇ ರೀತಿಯ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಮೊದಲನೇಯದಾಗಿ ಈ ಬಗ್ಗೆ ವಿರೋಧದ ಧ್ವನಿ ಎತ್ತಿದ ಶಾಸಕ ಯುಟಿ ಖಾದರ್. ವೀರ ಸಾವರ್ಕರ್ ಎಂದು ಬ್ಯಾನರ್ ಹಾಕಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸುದ್ದಿಗೋಷ್ಟಿ ಮಾಡಿ ಆಗ್ರಹಿಸಿದರು.

ಅದರಿಂದ ಏನಾಗಿದೆ ಎಂದರೆ ತೊಕ್ಕೊಟ್ಟು ಮೇಲ್ಸೇತುವೆಗೆ ವೀರ ವನಿತೆಿ ಅಬ್ಬಕ್ಕ ರಾಣಿಯ ಹೆಸರು ಇಡುವ ಪ್ರಸ್ತಾಪ ಬಂದಿದೆ. ಹಾಗೆ ಸುರತ್ಕಲ್ ಮೇಲ್ಸೇತುವೆಗೆ ಭಗತ್ ಸಿಂಗ್ ಹೆಸರು ಇಡುವ ಪ್ರಸ್ತಾಪ ಇದೆ. ಅದಕ್ಕೆ ಸರಿಯಾಗಿ ಅಲ್ಲಲ್ಲಿ ಬ್ಯಾನರ್ ಮಾಡಿ ಆಯಾ ಮೇಲ್ಸೇತುವೆಗೆ ಕಟ್ಟಲಾಗಿದೆ. ಅದರೊಂದಿಗೆ ಇನ್ನೊಂದು ಹೆಸರು ಚಾಲ್ತಿಯಲ್ಲಿ ಬರುತ್ತಿದೆ. ಅದೇನೆಂದರೆ ಮಂಗಳೂರಿನ ನೆಹರೂ ಮೈದಾನಕ್ಕೆ ಯಾವ ಹೆಸರು ಇಡಬೇಕು ಎನ್ನುವ ವಿಷಯ ಕೂಡ ಈಗ ಚರ್ಚೆಗೆ ಬರುವ ಸಾಧ್ಯತೆ ಇದೆ. ಈಗಾಗಲೇ ನೆಹರೂ ಮೈದಾನಕ್ಕೆ ಕೋಟಿ ಚೆನ್ನಯ್ಯ ಮೈದಾನ ಇಡಬೇಕು ಎನ್ನುವ ಕೂಗು ಕೇಳಿಬರುತ್ತಿದೆ. ಯಾಕೆಂದರೆ ನೆಹರೂ ಮೈದಾನ ಎನ್ನುವ ಹೆಸರು ಮಂಗಳೂರು ಮಹಾನಗರ ಪಾಲಿಕೆಯ ದಾಖಲೆಗಳಲ್ಲಿ ಇಲ್ಲವೇ ಇಲ್ಲ. ಈಗ ಕೇಂದ್ರ, ರಾಜ್ಯ, ಪಾಲಿಕೆಯಲ್ಲಿಯೂ ಬಿಜೆಪಿ ಸರಕಾರ ಇದೆ. ಬಿಜೆಪಿಯವರಿಗೆ ಧೈರ್ಯ ಇದೆ ಎಂದಾದರೆ ಅವರದ್ದೇ ಶಬ್ದ ಕೇಂದ್ರ ಮೈದಾನ ಎನ್ನುವುದನ್ನು ಕೋಟಿ ಚೆನ್ನಯ್ಯ ಮೈದಾನ ಎಂದು ಹೆಸರಿಡಲಿ. ಅದಕ್ಕೆ ಬೇಕಾದ ತಾಂತ್ರಿಕ ಕೆಲಸಗಳನ್ನು ಮಾಡಲಿ. ಯಾಕೆಂದರೆ ಇಲ್ಲಿಯ ತನಕ ಪಾಲಿಕೆಯಲ್ಲಿ ಇದ್ದದ್ದು ಕಾಂಗ್ರೆಸ್. ಕಾಂಗ್ರೆಸ್ಸಿನವರು ಎಷ್ಟು ಹುಶಾರಿದ್ದಾರೆ ಎಂದರೆ ಆ ಮೈದಾನದಲ್ಲಿ ನೆಹರೂ ಪ್ರತಿಮೆಯನ್ನು ಸ್ಥಾಪಿಸಿ ಅಲ್ಲಿ ಪರೋಕ್ಷವಾಗಿ ಅದಕ್ಕೆ ನೆಹರೂ ಮೈದಾನ ಎನ್ನುವ ಹೆಸರೇ ಶಾಶ್ವತವಾಗಲಿ ಎಂದು ಕೆಲಸ ಮಾಡಿದ್ದಾರೆ. ಇನ್ನು ಪಂಪ್ವೆಲ್ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರಿಡಲು ಸಾಧ್ಯವಿಲ್ಲ ಎಂದಿರುವುದು ಖಾದರ್. ಅವರ ಪ್ರಕಾರ ಈಗಾಗಲೇ ಅಲ್ಲಿರುವ ವೃತ್ತಕ್ಕೆ ಮಹಾವೀರ ವೃತ್ತ ಎಂದು ಹೆಸರಿಡಲಾಗಿದೆ. ಆದ್ದರಿಂದ ಈ ಸೇತುವೆಗೆ ಸಾವರ್ಕರ್ ಹೆಸರು ಇಡಲು ಸಾಧ್ಯವಿಲ್ಲ ಎಂದು ವಾದ ಮಂಡಿರುತ್ತಾರೆ. ಅವರ ತಂದೆ ಶಾಸಕರಾಗಿದ್ದಾಗ ಆ ವೃತ್ತದ ನಿರ್ಮಾಣವಾಗಿ ಪೂಜ್ಯ ವಿರೇಂದ್ರ ಹೆಗ್ಗಡೆಯವರ ಕೈಯಿಂದ ಉದ್ಘಾಟಿಸಿರಬಹುದು. ಆದರೆ ಆವತ್ತಿನಿಂದ ಇವತ್ತಿನ ತನಕ ಪಾಲಿಕೆಯ ದಾಖಲೆಗಳಲ್ಲಿ ಮಹಾವೀರ ವೃತ್ತ ಎನ್ನುವುದು ಇಲ್ಲವೇ ಇಲ್ಲ. ಅದರೊಂದಿಗೆ ಈಗ ಆ ವೃತ್ತ ಕೂಡ ಇಲ್ಲವಾಗಿದೆ. ಹಾಗಿರುವಾಗ ಪಾಲಿಕೆಯಲ್ಲಿ ಬಿಜೆಪಿ ಮುಂದಿನ ನಿರ್ಧಾರ ಕೈಗೊಳ್ಳಬಹುದು.

ಇನ್ನು ಸುರತ್ಕಲ್ ಮೇಲ್ಸೇತುವೆಗೆ ಭಗತ್ ಸಿಂಗ್ ಹೆಸರಿಟ್ಟು ಕೆಲವರು ಅಲ್ಲಿ ಬ್ಯಾನರ್ ಹಾಕಿದ್ದಾರೆ. ಹೀಗೆ ಬ್ಯಾನರ್ ಹಾಕಿ ನಾಲ್ಕು ದಿನ ಈ ವಿಷಯ ಪ್ರಚಾರದಲ್ಲಿ ಇರುವಂತೆ ಯುವಕರು ಮಾಡುವ ಬದಲು ಸಂಘಟನೆಯ ಕಾರ್ಯಕರ್ತರ ಬಯಕೆಯಂತೆ ಆಯಾ ಹೆಸರುಗಳನ್ನೇ ಬಿಜೆಪಿ ಸರಕಾರ ಅಂತಿಮಗೊಳಿಸಿ ಪಾಲಿಕೆಯಲ್ಲಿ ಇಟ್ಟು ಅನುಮೋದನೆ ಪಡೆದುಕೊಳ್ಳಬಹುದಲ್ಲ. ಅದರೊಂದಿಗೆ ನಾನು ಇದಕ್ಕೆ ಪೂರಕವಾಗಿ ಹೇಳುವುದೇನೆಂದರೆ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಳ್ಳಾಲ ಶ್ರೀನಿವಾಸ ಮಲ್ಯ ಎನ್ನುವ ಹೆಸರು ಇಡಬಹುದು. ಯಾಕೆಂದರೆ ಅವರು ಸಂಸದರಾಗಿದ್ದಾಗಲೇ ಆ ವಿಮಾನ ನಿಲ್ದಾಣ ಮಂಗಳೂರಿಗೆ ಬಂದಿತ್ತು. ಇನ್ನು ಕಾರ್ನಾಡು ಸದಾಶಿವರಾವ್ ವಿಮಾನ ನಿಲ್ದಾಣ ಎಂದು ಕೂಡ ಇಡಬಹುದು. ಒಟ್ಟಿನಲ್ಲಿ ಒಂದು ಸತ್ಯ. ಆ ಹೆಸರುಗಳಿಂದ ಆ ದಿವ್ಯಚೇತನಗಳಿಗೆ ಏನೂ ಲಾಭವಿಲ್ಲ. ಆದರೆ ನಾವು ಆಗಾಗ ಆ ಹೆಸರುಗಳನ್ನು ಬಾಯಲ್ಲಿ ತೆಗೆಯುವುದರಿಂದ ನಮಗೆ ಪುಣ್ಯ ಸಿಗುತ್ತದೆ. ಆದರೆ ಹೆಸರಿಡುವ ಧೈರ್ಯ ಯೋಗಿಗೆ ಇದ್ದ ಹಾಗೆ ಇಲ್ಲಿನ ಬಿಜೆಪಿ ಶಾಸಕರುಗಳಿಗೆ ಇದೆಯಾ??

0
Shares
  • Share On Facebook
  • Tweet It




Trending Now
ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
Hanumantha Kamath October 21, 2025
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
  • Popular Posts

    • 1
      ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search