• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸೆಂಟಲ್ ಮಾರ್ಕೆಟ್ ನಲ್ಲಿ ನುಂಗಿದ್ದು ಈಗ ವಾಂತಿ ಮಾಡುತ್ತಿದೆ!!

Hanumantha Kamath Posted On August 21, 2020
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ಸೆಂಟ್ರಲ್ ಮಾರುಕಟ್ಟೆ ಎನ್ನುವುದನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರತಿಯೊಬ್ಬ ನಾಗರಿಕರು ಒಂದಲ್ಲ ಒಂದು ಸಲ ಕೇಳಿಯೇ ಇರುತ್ತೀರಿ. ತುಂಬಾ ಜನ ಅಲ್ಲಿ ನಿತ್ಯ ಹೋಗುವವರಿದ್ದಾರೆ. ಹಲವರು ವಾರಕ್ಕೊಮ್ಮೆ, ಕೆಲವರು ತಿಂಗಳಿಗೊಮ್ಮೆ ಹೋಗುವವರು ಇದ್ದಾರೆ. ಆದರೆ ಆ ಮಾರುಕಟ್ಟೆ ಸದ್ಯ ಐಸಿಯುನಲ್ಲಿದೆ. ಯಾವಾಗ ಪ್ರಾಣ ಬಿಡುತ್ತೋ, ಇಲ್ವೋ ಗೊತ್ತಿಲ್ಲ. ಅದಕ್ಕಾಗಿ ಅದನ್ನು ಕೆಡವಿ ಹೊಸ ಮಾರುಕಟ್ಟೆ ಕಟ್ಟಿಕೊಡುವ ಪ್ರಕ್ರಿಯೆ ಅನಾದಿ ಕಾಲದಿಂದಲೂ ಜಾರಿಯಲ್ಲಿದೆ. ಆದರೆ ವ್ಯಾಪಾರಿಗಳನ್ನು ಅಲ್ಲಿಂದ ಶಿಫ್ಟ್ ಮಾಡದೇ ಯಾವ ಹೊಸ ಕಟ್ಟಡ ಕೂಡ ಕಟ್ಟಲು ಸಾಧ್ಯವಿಲ್ಲ. ಆದರೆ ಶಿಫ್ಟ್ ಆಗಲು ಯಾವ ವ್ಯಾಪಾರಿಯೂ ತಯಾರಿಲ್ಲ. ಯಾಕೆಂದರೆ ಒಮ್ಮೆ ಅಲ್ಲಿಂದ ಜಾಗ ಖಾಲಿ ಮಾಡಿದರೆ ನಂತರ ಅಲ್ಲಿ ಸಿಗುವುದಿಲ್ಲ ಎನ್ನುವುದು ಅಲ್ಲಿ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವ ಪ್ರತಿಯೊಬ್ಬ ವ್ಯಾಪಾರಿಗೂ ಗೊತ್ತಿದೆ. ಯಾಕೆಂದರೆ ಅಲ್ಲಿ ಅಧಿಕೃತವಾಗಿ ವ್ಯಾಪಾರ ಮಾಡುತ್ತಿರುವವರು ಕೇವಲ 20% ಮಾತ್ರ. ಉಳಿದ 80% ವ್ಯಾಪಾರಿಗಳು ಪಕ್ಕಾ ಅನಧಿಕೃತವಾಗಿಯೇ ಅಲ್ಲಿ ನೆಲೆಯೂರಿದ್ದಾರೆ. ಅಲ್ಲಿ ಹೊಸ ಕಟ್ಟಡ ಆಗಬೇಕಾದರೆ ಎರಡು ಕಟ್ಟಡದವರು (ಪಕ್ಕದ ಹಳೆ ಮೀನು ಮಾರುಕಟ್ಟೆಯ ಕಟ್ಟಡದಲ್ಲಿ ಇರುವವರು) ಸೇರಿ ಅಲ್ಲಿಂದ ಬೇರೆಡೆ ಶಿಫ್ಟ್ ಆಗಲೇಬೇಕು. ಆಗುತ್ತಿಲ್ಲ.
ಹಾಗಾದರೆ 80% ವ್ಯಾಪಾರಿಗಳು ಅನಧಿಕೃತವಾಗಿ ಹೇಗೆ ಅಲ್ಲಿ ನುಸುಳಿದರು ಎನ್ನುವುದು ಈಗ ಪ್ರಶ್ನೆ. ಅಲ್ಲಿ ಯಾರಿಗೆ ಗುತ್ತಿಗೆ ಸಿಕ್ಕಿರುತ್ತದೆಯೋ ಅವರು ಸೆಂಟ್ರಲ್ ಮಾರುಕಟ್ಟೆಯ ಮಾಲೀಕರಂತೆಯೇ ವ್ಯವಹರಿಸುತ್ತಿರುವುದರಿಂದಲೇ ಹೀಗೆ ಆಗಿದೆ. ಅಲ್ಲಿ 12 ವರ್ಷಗಳಿಗೊಮ್ಮೆ ಅಂಗಡಿಗಳ ಲೈಸೆನ್ಸ್ ನವೀಕರಣ ಮಾಡಬೇಕು ಎನ್ನುವ ನಿಯಮವಿದೆ. ಆದರೆ ಗುತ್ತಿಗೆದಾರರು ಮತ್ತು ವ್ಯಾಪಾರಿಗಳ ಅಪವಿತ್ರ ಮೈತ್ರಿಯಿಂದ ಯಾರು ಹಿಂದಿನಿಂದ ವ್ಯಾಪಾರ ಮಾಡುತ್ತಿದ್ದಾರೋ ಅವರಿಗೆನೆ ಅಂಗಡಿ ಹೋಗುತ್ತಿದೆ. ಇನ್ನು ಕೆಲವು ಅಂಗಡಿಗಳ ಮಾಲೀಕರ ನಂತರ ಅವರ ಮಕ್ಕಳು ಅಲ್ಲಿ ವ್ಯಾಪಾರ ಮಾಡಲು ಮನಸ್ಸಿಲ್ಲದೆ ಅದನ್ನು ಬೇರೆಯವರಿಗೆ ಒಂದೆರಡು ಲಕ್ಷಗಳನ್ನು ತೆಗೆದುಕೊಂಡು ಹಸ್ತಾಂತರಿಸಿದ್ದಾರೆ. ಹಳೆ ಮಾಲೀಕರಿಗೆ ಹಣ ಕೊಟ್ಟು ತೆಗೆದುಕೊಂಡವ ಹೆಸರು ದಾಖಲೆಗಳಲ್ಲಿ ಇರುವುದೇ ಇಲ್ಲ. ಇನ್ನು ಮಾರುಕಟ್ಟೆಯ ಪ್ರವೇಶ ದ್ವಾರದಿಂದ ಒಳಗೆ ಎಲ್ಲಿ ಜಾಗ ಒಂದು ಚೂರು ಇತ್ತೋ ಅಲ್ಲೆಲ್ಲ ಗುತ್ತಿಗೆದಾರರು ಅಂಗಡಿ ತರಹ ಮಾಡಿ ಅದನ್ನು ಬಾಡಿಗೆಗೆ ಕೊಟ್ಟುಬಿಟ್ಟಿದ್ದಾರೆ. ಅವರಿಗೆಲ್ಲ ಮುಂದೆನು ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ.
ಈ ನಡುವೆ ಮಂಗಳೂರಿನ ನೆಹರೂ(!) ಮೈದಾನದಲ್ಲಿ ತಾತ್ಕಾಲಿಕ ನೆಲೆಯಲ್ಲಿ 4 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ಮಾರುಕಟ್ಟೆಯನ್ನು ಕಟ್ಟುವ ಕೆಲಸ ನಡೆಯುತ್ತಿದೆ. ಅದು ಕಟ್ಟಿ ಮುಗಿಯುವ ತನಕ ಲೇಡಿಗೋಶನ್ ಆಸ್ಪತ್ರೆಯ ಪಕ್ಕದಲ್ಲಿ ತಾತ್ಕಾಲಿಕ ಚಪ್ಪರ ವ್ಯವಸ್ಥೆ ಮಾಡಲಾಗಿದೆ. ಆದರೆ ಹೋಗಲು ಯಾಕೆ ಮೀನಾಮೇಶ. ಈ ನಡುವೆ ನಾವು ಸಂಸದರಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ಸೆಟ್ ಮಾಡಿದ್ದೇವೆ ಎಂದು ಕೆಲವು ವ್ಯಾಪಾರಿಗಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇದು ನೂರಕ್ಕೆ ನೂರು ಸುಳ್ಳು. ಅಂತಹ ಯಾವುದೇ ಭ್ರಷ್ಟಾಚಾರದ ವಾಸನೆ ಇಲ್ಲಿಯ ತನಕ ಇಲ್ಲ. ಇನ್ನು ರಖಂ ವ್ಯಾಪಾರಿಗಳು ಬೈಕಂಪಾಡಿಯಲ್ಲಿ ವ್ಯಾಪಾರ ಮಾಡಲು ತಯಾರಿಲ್ಲ. ಒಟ್ಟಿನಲ್ಲಿ ಹಳೆ ಸೆಂಟ್ರಲ್ ಮಾರುಕಟ್ಟೆಯಲ್ಲಿಯೇ ವ್ಯಾಪಾರ ಮಾಡಬೇಕು ಎನ್ನುವ ಹಟ ಯಾಕೆ? ಅಷ್ಟಕ್ಕೂ ಅಲ್ಲಿ ಸರಿಯಾದ ಮೂಲಭೂತ ಸೌಕರ್ಯ ಇಲ್ಲ. ಟಾಯ್ಲೆಟ್ ಗಳು ಸರಿ ಇಲ್ಲ. ವ್ಯಾಪಾರಿಗಳು ಅದನ್ನು ಗುತ್ತಿಗೆದಾರರ ಅಥವಾ ಪಾಲಿಕೆಯ ಗಮನಕ್ಕೆ ತಂದಾಗ ಅಲ್ಲಲ್ಲಿಯೇ ತೇಪೆ ಹಾಕುವ ಕೆಲಸ ಮಾಡಲಾಗುತ್ತದೆ. ಅದು ಬಿಟ್ಟು ವ್ಯಾಪಾರಿಗಳು ದೊಡ್ಡ ಧ್ವನಿಯಲ್ಲಿ ರಂಪ ತೆಗೆದಿಲ್ಲ. ಯಾಕೆಂದರೆ ಅವರಿಗೂ ಗೊತ್ತು. ಮೂತ್ರ ತಡೆಹಿಡಿಯಬಹುದು, ಬೇಕಾದರೆ ಅಲ್ಲಿಯೇ ಬದಿಯಲ್ಲಿ ಎಲ್ಲಿಯಾದರೂ ಮಾಡಬಹುದು. ಪ್ರತಿಭಟನೆ ಮಾಡಿದಾಗ ಎದುರಿಗೆ ನಿಂತು ಘೋಷಣೆ ಕೂಗಿದರೆ ಇವನು ಅಂಗಡಿಯವನಲ್ಲ ಎಂದು ಮಾಧ್ಯಮಗಳಲ್ಲಿ ಸುದ್ದಿಯಾದರೆ ಮರ್ಯಾದೆ ಹೋಗಲ್ವಾ. ಅದಕ್ಕೆ ಯಾರೂ ವ್ಯಾಪಾರಿಗಳು ಪ್ರತಿಭಟನೆ ಮಾಡಲು ಹೋಗಲ್ಲ. ಆದರೆ ಒಂದು ಮಳೆ ಬಂದರೆ ಮಾರುಕಟ್ಟೆಯ ಒಳಗೆ ಕಾಲಿಡುವುದೇ ಬೇಡಾ ಎನ್ನುವುದು ಗ್ರಾಹಕರ ಬೇಸರ. ಅದಕ್ಕೆ ಅವರು ಹೊರಗೆ ರಸ್ತೆ ಬದಿ ವ್ಯಾಪಾರ ಮಾಡುವವರ ಬಳಿ ತಮಗೆ ಬೇಕಾದ ತರಕಾರಿಗಳನ್ನು ಖರೀದಿಸಿ ಹೋಗುತ್ತಾರೆ. ಇದರಿಂದ ಒಳಗಿನವರಿಗೆ ವ್ಯಾಪಾರ ಕಡಿಮೆಯೂ ಆಗುತ್ತದೆ. ಇನ್ನು ಕಟ್ಟಡದ ಯಾವ ಭಾಗ ಯಾವಾಗ ಬೀಳುತ್ತದೆ ಎನ್ನುವುದು ಹೇಳಲು ಸಾಧ್ಯವಿಲ್ಲ. ಹೀಗೆ ಇರುವಾಗ ಅದು ಅಲ್ಲಿ ವ್ಯಾಪಾರ ಮಾಡುವವರಿಗೂ ರಿಸ್ಕ್, ಗ್ರಾಹಕರಿಗೂ ರಿಸ್ಕ್. ಕದ್ರಿ, ಉರ್ವಾ ಮಾರುಕಟ್ಟೆಗಳನ್ನು ಹೊಸದಾಗಿ ಕಟ್ಟುವಾಗ ಅಲ್ಲಿನ ವ್ಯಾಪಾರಿಗಳನ್ನು ಅಲ್ಲಿಯೇ ಪಕ್ಕದಲ್ಲಿರುವ ಜಾಗದಲ್ಲಿ ಶಿಫ್ಟ್ ಮಾಡಿಸಿ ನಂತರ ಹೊಸ ಕಟ್ಟಡ ಆದ ನಂತರ ಮುಂದಿನ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ಕದ್ರಿ, ಉರ್ವಾ ಮಾರುಕಟ್ಟೆಗಳಿಗೆ ಹೋಲಿಸಿದರೆ ಇದು ದೊಡ್ಡ ಸಮುದ್ರ. ಸಮುದ್ರಕ್ಕೆ ಕೈ ಹಾಕುವುದು ಸುಲಭವಲ್ಲ!
0
Shares
  • Share On Facebook
  • Tweet It




Trending Now
ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
Hanumantha Kamath February 12, 2026
ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
Hanumantha Kamath February 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
  • Popular Posts

    • 1
      ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • 2
      ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 3
      'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • 4
      ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • 5
      ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್

  • Privacy Policy
  • Contact
© Tulunadu Infomedia.

Press enter/return to begin your search