• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

61 ಕಡೆ ನೋಪಾರ್ಕಿಂಗ್ ಝೋನ್ ಒಕೆ, ಒತ್ತಡ ಬರಬಹುದು ಜೋಕೆ!!

Tulunadu News Posted On October 3, 2020
0


0
Shares
  • Share On Facebook
  • Tweet It

ಮಂಗಳೂರು ಪೊಲೀಸ್ ಕಮೀಷನರ್ ಅವರು ತಮ್ಮ ಕಮೀಷನರೇಟ್ ವ್ಯಾಪ್ತಿಯ 61 ಕಡೆಗಳಲ್ಲಿ ನೋ ಪಾರ್ಕಿಂಗ್ ಝೋನ್ ಮಾಡಿದ್ದಾರೆ. ಬೆಳೆಯುತ್ತಿರುವ ಮಂಗಳೂರಿಗೆ ಇದು ಅತ್ಯಗತ್ಯ. ಆದರೆ ಇದು ನಿಜಕ್ಕೂ ಯಶಸ್ವಿಯಾಗಿ ಅನುಷ್ಠಾನಕ್ಕೆ ಬರುತ್ತದಾ ಅಥವಾ ಪ್ರಾಯೋಗಿಕ ಹಂತದಲ್ಲಿಯೇ ರದ್ದಾಗುತ್ತದೆಯಾ ಎನ್ನುವುದು ಈಗ ಕಾಣಿಸುತ್ತಿರುವ ಪ್ರಶ್ನೆ. ನಾನು ಯಾಕೆ ಹೀಗೆ ಹೇಳುತ್ತಿದ್ದೇನೆ ಎಂದರೆ ಈ ಟ್ರಾಫಿಕ್ ಸುಧಾರಣೆಗೆ ಪೊಲೀಸ್ ಅಧಿಕಾರಿಗಳು ಮಾಡುವ ಬದಲಾವಣೆಗೆ ದೊಡ್ಡ ಇತಿಹಾಸವೇ ಇದೆ. ಕೊನೆಗೆ ಅದು ಪ್ರಭಾವಿ

ಉದ್ದಿಮೆದಾರರ ಒತ್ತಡದಿಂದ ರಾಜಕಾರಣಿಗಳು ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟು ಎಲ್ಲವನ್ನು ಹಾಳು ಮಾಡಿಬಿಡುತ್ತಾರೆ. ಬೇಕಾದರೆ ಉದಾಹರಣೆ ಕೊಡುತ್ತೇನೆ. ಕಲೆಕ್ಟರ್ ಗೇಟ್ ನಿಂದ ಕಂಕನಾಡಿಗೆ ಹೋಗಲು ಎಸ್ ಸಿಎಸ್ ಆಸ್ಪತ್ರೆಯಿಂದ ಬೆಂದೂರ್ ವೆಲ್ ಕಡೆ ಹೋಗಬಹುದು. ಹಾಗೇ ಬೆಂದೂರ್ ವೆಲ್ ನಿಂದ ಬಲ್ಮಠ ಕಡೆ ಹೋಗಲು ಅಲ್ಲಿಯೇ ಮೇಲೆ ಬಂದು ಮುಖ್ಯರಸ್ತೆಗೆ ಹೋಗಬೇಕು. ಆದರೆ ಹೀಗೆ ಮಾಡಿದರೆ ತಮ್ಮ ವ್ಯಾಪಾರಕ್ಕೆ ದಕ್ಕೆ ಬರುತ್ತದೆ ಎಂದು ಉದ್ದಿಮೆದಾರರು ರಾಜಕೀಯ ನಾಯಕರ ಮೇಲೆ ಒತ್ತಡ ತಂದು ಪೊಲೀಸ್ ಇಲಾಖೆಯ ಯೋಜನೆಯನ್ನೇ ರದ್ದುಪಡಿಸಿದ್ದರು. ಸದ್ಯಕ್ಕೆ ಉಳಿದಿರುವುದು ಮಂಗಳೂರಿನಲ್ಲಿ ಹಂಪನಕಟ್ಟೆ ಸಿಗ್ನಲ್ ಹತ್ತಿರ ಪಳ್ನೀರ್ ಕಡೆಯಿಂದ ಬರುವ ವಾಹನಗಳು ಸಿಗ್ನಲ್ ಹತ್ತಿರ ಕೆ.ಎಸ್.ರಾವ್ ರಸ್ತೆ ಕಡೆ ತಿರುಗಿಸುವಂತಿಲ್ಲ. ಹಾಗೇ ಕೆ.ಎಸ್.ರಾವ್ ರಸ್ತೆಯಿಂದ ರೈಲ್ವೆ ನಿಲ್ದಾಣದ ಕಡೆ ನೇರವಾಗಿ ಹೋಗಲು ಆಗುವುದಿಲ್ಲ.

ಈ ದಾವಣಗೆರೆ, ಮೈಸೂರು, ಬೆಂಗಳೂರು ನಗರಗಳಲ್ಲಿ ಹೀಗೆ ಹೊಸ ಟ್ರಾಫಿಕ್ ನಿಯಮಗಳನ್ನು ಜಾರಿಗೆ ತರುವಾಗ ಏನು ಮಾಡುತ್ತಾರೆ ಎಂದರೆ ನಗರದಲ್ಲಿ ಆಗುತ್ತಿರುವ ವಾಹನ ನೋಂದಾವಣೆ, ವಾಹನಗಳ ದಟ್ಟಣಿಗಳನ್ನು ಕೂಲಂಕೂಶವಾಗಿ ಪರಿಶೀಲಿಸಿ ನಂತರ ಮೊದಲು ಪ್ರಾಯೋಗಿಕವಾಗಿ ಜಾರಿಗೆ ತರುತ್ತಾರೆ. ಅದು ಒನ್ ವೇ ಇರಬಹುದು, ನೋಎಂಟ್ರಿ ಆಗಿರಬಹುದು ಅಥವಾ ನೋ ಪಾರ್ಕಿಂಗ್ ಕೂಡ ಹಾಗೇನೆ ಮೊದಲು ಪ್ರಾಯೋಗಿಕವಾಗಿ ಯಶಸ್ವಿಯಾಗಿ ನಂತರ ಮುಂದುವರಿಕೆಯಾಗುತ್ತದೆ. ಇಂತಹ ನಿಯಮಗಳನ್ನು ತರುವಾಗ ಸಾಮಾನ್ಯವಾಗಿ ಪೊಲೀಸ್ ಕಮೀಷನರ್ ಅವರು ಪಾಲಿಕೆಯ ಕಮೀಷನರ್ ಅವರೊಂದಿಗೆ ಸೇರಿ ಚರ್ಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗಂತ ನಗರದ ಟ್ರಾಫಿಕ್ ಜಾಮ್ ತಪ್ಪಿಸಲು ಇವರುಗಳು ತೆಗೆದುಕೊಳ್ಳುವ ಎಲ್ಲಾ ನಿಯಮಗಳು ಯಶಸ್ವಿಯಾಗಲೇ ಬೇಕೆಂದಿಲ್ಲ. ಒಂದು ವೇಳೆ ಕೆಲವು ಸಮಸ್ಯೆಗಳು ಕಾಣಿಸಿಕೊಂಡರೆ ಒಂದಿಷ್ಟು ಬದಲಾವಣೆ ಕೂಡ ಮಾಡಬಹುದು. ಆದರೆ ಯಾವುದೇ ಕಾರಣಕ್ಕೂ ರಾಜಕೀಯ ಒತ್ತಡಕ್ಕಾಗಿ ಬದಲಾವಣೆ ಮಾಡಬೇಕಾದ ಪ್ರಸಂಗ ಬರಬಾರದು. ಈಗ 61 ಕಡೆ ನೋ ಪಾರ್ಕಿಂಗ್ ನಿಯಮ ತಂದಿರುವಾಗ ಕೆಲವು ಕಡೆಯಿಂದ ಖಂಡಿತ ಒತ್ತಡ ಬಂದೇ ಬರುತ್ತದೆ. ಆ ಸಮಯದಲ್ಲಿ ರಾಜಕಾರಣಿಗಳು ತಾವು ಪೊಲೀಸ್ ಇಲಾಖೆ ಮಾಡಿದ ಒಳ್ಳೆಯ ಕೆಲಸಗಳಿಗೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿಬಿಡಬೇಕು.

ಇನ್ನು ಮಂಗಳೂರು ನಗರ ಪ್ರವೇಶಿಸುವ ಬಹುತೇಕ ಎಲ್ಲ ರಸ್ತೆಗಳು ಚತುಷ್ಪಥಗೊಂಡಿದೆ. ಪಿವಿಎಸ್ ನಿಂದ ಬಂಟ್ಸ್ ಹಾಸ್ಟೆಲ್ ಕಡೆ ಹೋಗುವ ರಸ್ತೆ ಬಿಟ್ಟರೆ ಪಂಪ್ ವೆಲ್ ನಿಂದ ಒಳಗೆ ಬರುವಂತದ್ದು, ಕೊಟ್ಟಾರ ಚೌಕಿಯಿಂದ ಒಳಗೆ ಬರುವಂತದ್ದು ಎಲ್ಲವೂ ನಾಲ್ಕು ಲೇನ್ ಗಳನ್ನು ಹೊಂದಿದೆ. ಆದರೆ ನಮ್ಮ ಅವಸ್ಥೆ ಏನಾಗಿದೆ ಎಂದರೆ ರಸ್ತೆ ಅಗಲ ಮಾಡಿರುವುದು ವಾಹನಗಳನ್ನು ನಿಲ್ಲಿಸಲಿಕ್ಕೆ ಎಂದು ಆಗಿದೆ. ಜಾಗ ಬಿಟ್ಟುಕೊಟ್ಟವರು ನಾವು ಯಾರದ್ದೋ ವಾಹನಗಳನ್ನು ನಮ್ಮ ಅಂಗಡಿಗಳ ಮುಂದೆ ಅಡ್ಡಾದಿಡ್ಡಿ ನಿಲ್ಲಿಸಲು ರಸ್ತೆ ಅಗಲಗೊಳಿಸಿದ್ದಾ ಎಂದು ಕೇಳುವ ಮಟ್ಟಿಗೆ ರಸ್ತೆಗಳು ಪಾರ್ಕಿಂಗ್ ಕೇಂದ್ರಗಳಾಗಿವೆ. ಇನ್ನು ಹಲವು ಕಡೆ ನಕ್ಷೆಯಲ್ಲಿ ಪಾರ್ಕಿಂಗ್ ಎಂದು ಜಾಗ ತೋರಿಸಿ ಕಟ್ಟಿದ ನಂತರ ಆ ಜಾಗದಲ್ಲಿಯೂ ಅಂಗಡಿಗಳು ಎದ್ದು ನಿಂತಿರುತ್ತವೆ. ಇದನ್ನು ನೋಡಿಯೂ ಪಾಲಿಕೆಯವರು ಮೌನವಾಗಿ ಕಣ್ಣುಮುಚ್ಚಿ ಮಲಗಿರುತ್ತಾರೆ. ಈಗ ಪೊಲೀಸರು ಏನು ಮಾಡಬೇಕು ಎಂದರೆ ಯಾವ ರಸ್ತೆಯಲ್ಲಿ ತಾವು ನೋಪಾರ್ಕಿಂಗ್ ಮಾಡಿದ್ದಿರೋ ಅಲ್ಲಿ ಇನ್ನು ಮುಂದೆ ಕೂಡ ವಾಹನಗಳು ನಿಂತರೆ ಅದನ್ನು ಅಲ್ಲಿಂದ ಎತ್ತಾಕಿಕೊಂಡು ಹೋಗುವುದು ಒಕೆ. ಅದರೊಂದಿಗೆ ಯಾವ ವಾಣಿಜ್ಯ ಕಟ್ಟಡಗಳ ಮುಂದೆ ವಾಹನಗಳು ಪಾರ್ಕಿಂಗ್ ಇಲ್ಲದೆ ನಿಂತಿದ್ದರೆ ಅವುಗಳನ್ನು ಕೂಡ ತೆಗೆದುಕೊಂಡು ಹೋಗಬೇಕು. ನಾಲ್ಕು ಸಲ ಹೀಗೆ ಮಾಡಿದರೆ ನಂತರ ಜನ ಆ ವಾಣಿಜ್ಯ ಕಟ್ಟಡಗಳಿಗೆ ವ್ಯವಹಾರಕ್ಕೆ ಬರಲ್ಲ. ಆಗ ಕಟ್ಟಡದ ಮಾಲೀಕರಿಗೂ ಬುದ್ಧಿ ಬರುತ್ತದೆ. ಅದರೊಂದಿಗೆ ಬೀದಿಬದಿ ವ್ಯಾಪಾರಿಗಳನ್ನು ಆಗಾಗ ಎಬ್ಬಿಸುವ ಕೆಲಸ ಪಾಲಿಕೆ ಮಾಡುತ್ತದೆ. ಅದಕ್ಕೆ ಅವರು ಬಳಸುವುದು ಬಾಡಿಗೆ ವಾಹನ ಮತ್ತು ಜನ. ಅದಕ್ಕೆ ಖರ್ಚು ಬೇರೆ. ಆದರೆ ಪೊಲೀಸರ ಬಳಿ ಇದಕ್ಕೆ ಸ್ವಂತ ವ್ಯವಸ್ಥೆ ಇದೆ. ಆದರೆ ಯಾವಾಗ ಪಾಲಿಕೆ ಫುಟ್ ಪಾತ್ ಮೇಲೆ ವ್ಯಾಪಾರ ಮಾಡುವವರನ್ನು ಎಬ್ಬಿಸುತ್ತೋ ಕೆಲವು ದಿನಗಳ ಬಳಿಕ ಅದೇ ವ್ಯಾಪಾರಿಗಳು ಅಲ್ಲಿಯೇ ವ್ಯಾಪಾರಕ್ಕೆ ಕುಳಿತುಕೊಳ್ಳಲು ಪೊಲೀಸ್ ಇಲಾಖೆ ಬಿಡಬಾರದು!

 

0
Shares
  • Share On Facebook
  • Tweet It


- Advertisement -


Trending Now
ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
Tulunadu News May 31, 2025
ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
Tulunadu News May 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
    • ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
    • ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!
    • ಹನಿಮೂನಿಗೆ ಶಿಲ್ಲಾಂಗಿಗೆ ಹೋದ ನವಜೋಡಿ ಕಣ್ಮರೆ! ನಾಪತ್ತೆಯಾದ ಪ್ರದೇಶ ತುಂಬಾ ಡೇಂಜರ್!
    • ತಮಿಳಿನಿಂದಲೇ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ..
    • ಬೆಂಗಳೂರಿನಲ್ಲಿ ಟ್ರೋಯಿಂಗ್ ಶುರು, ಮಂಗಳೂರಿನಲ್ಲಿಯೂ ಆರಂಭವಾಗಬೇಕಾ?

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search