• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ನೀರಿನ ಬಿಲ್ ಹೆಚ್ಚು ಬಾಕಿ ಇಟ್ಟವರ ಹೆಸರು ಪತ್ರಿಕೆಯಲ್ಲಿ ಪ್ರಿಂಟ್ ಹಾಕಿಸಿ!

Tulunadu News Posted On November 28, 2020
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಕೆಯ ನೀರಿನ ವಿಷಯಕ್ಕೆ ಬರೋಣ. ಮೇಯರ್ ಅಗಿದ್ದಾಗ ಕವಿತಾ ಸನಿಲ್ ಅವರು ಈ ಬಾರಿ ಇದಕ್ಕೊಂದು ಅಂತ್ಯ ಹಾಡುತ್ತಾರೆ. ಮುಂದೆ ಬರುವ ಮೇಯರ್ ಗಳಿಗೆ ಮಾದರಿಯಾಗಬಹುದೆಂದು ನಾನು ಭಾವಿಸಿದೆ ಅದು ಠುಸ್ ಆಯಿತು ನೀರಿನ ಬಾಕಿ ಇರುವ 20 ಕೋಟಿ ಬಿಲ್ ಅನ್ನು ಅವರು ಕರೆಕ್ಟಾಗಿ ಕಲೆಕ್ಟ್ ಮಾಡಿದರೆ ಮಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಅವರ ಹೆಸರು ಸುವರ್ಣಾಕ್ಷರದಲ್ಲಿ ಬರೆಯಬಹುದಾಗಿತ್ತು. ಯಾಕೆಂದರೆ ಇಂತಹ ಸಾಧನೆಯನ್ನು ಯಾವ ಹಿಂದಿನ ಮೇಯರ್ ಕೂಡ ಮಾಡಿಲ್ಲ. ಅದರೆ ನನ್ನ ನಿರೀಕ್ಷೆ ಸುಳ್ಳು ಯಿತು

ಇದರ ನಂತರ ನಮ್ಮ ಜನರ ಜವಾಬ್ದಾರಿ ಕೂಡ ಪ್ರಾರಂಭವಾಗುತ್ತದೆ. ನೀರಿನ ಬಿಲ್ ಅನ್ನು ಕಟ್ಟಲು ನಿರ್ಲಕ್ಷ್ಯ ಮಾಡಬಾರದು. ವಿದ್ಯುತ್ ಬಿಲ್ ಕಟ್ಟಲು ಎರಡು ದಿನ ತಡವಾದರೆ ನಮ್ಮ ಜನ ಆತಂಕಿತರಾಗುತ್ತಾರೆ. ಅದಕ್ಕೆ ಕಾರಣ ಮೆಸ್ಕಾಂನವರು ಬಂದು ಫ್ಯೂಸ್ ತೆಗೆದುಕೊಂಡು ಹೋಗಬಹುದು ಎನ್ನುವ ಭಯ. ನಿಜ ಹೇಳಬೇಕೆಂದರೆ ವಿದ್ಯುತ್ ಇಲ್ಲದೆ ನಾವು ಒಂದೆರಡು ದಿನ ಇರಬಹುದು. ಅದೇ ನೀರು ಇಲ್ಲದೆ ಸಾಧ್ಯಾನಾ? ಹಾಗಿರುವಾಗ ನೀರಿನ ಬಿಲ್ ಕಟ್ಟಲು ಯಾಕೆ ಕ್ಯಾರ್ ಲೆಸ್? ಹೋಗಲಿ, ಒಂದೆರಡು ವಾರ ಹೋಗಲು ಆಗಲಿಲ್ಲ, ಬ್ಯುಸಿ ಇದ್ರಿ, ಬೇರೆ ವಿಷಯ. ಆದರೆ ಲಕ್ಷ ಆಗುವ ತನಕ ಯಾಕೆ ಬಾಕಿ ಇಡ್ತಾರೋ ದೇವರಿಗೆ ಗೊತ್ತು. ಅಷ್ಟಕ್ಕೂ ದೊಡ್ಡ ದೊಡ್ಡ ಅಮೌಂಟ್ ಬಾಕಿ ಇಡುವುದು ಹಣವಿದ್ದವರು, ಶ್ರೀಮಂತರು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಭಾವಿಗಳು. ಅವರಿಗೆ ಎಲ್ಲವನ್ನು ಸೆಟಲ್ ಮೆಂಟ್ ಮಾಡುವ ಧೈರ್ಯ ಇರುತ್ತದೆ. ಅದಕ್ಕೆ ಬಾಕಿ ಇಡುತ್ತಾರೆ. ಮೊದಲು ಅವರಿಂದ ವಸೂಲಿ ಮಾಡಬೇಕು. ನಿರ್ದಾಕ್ಷಿಣ್ಯವಾಗಿ ಅವರ ನಡುಬಗ್ಗಿಸಿ ಕಟ್ಟಲು ಸೂಚಿಸಬೇಕು. ಅಂತವರು ಹಣ ಇದ್ದರೂ ನಾಚಿಕೆ ಬಿಟ್ಟು ಜನಪ್ರತಿನಿಧಿಗಳಿಂದ ಒತ್ತಡ ತರುತ್ತಾರೆ. ನಮ್ಮ ರಾಜಕಾರಣಿಗಳು ಕೂಡ “ಅವರನ್ನು ಒಬ್ಬರನ್ನು ಬಿಟ್ಟು ಬಿಡಿ” ಎಂದು ಮೇಯರ್ ಮತ್ತು ಅಧಿಕಾರಿಗಳ ಮೇಲೆ ಪ್ರೆಶರ್ ತರುತ್ತಾರೆ. ಹೀಗೆ ಒಂದು ಹತ್ತು ಮಂದಿ ಒತ್ತಡ ತಂದರೆ ಅಲ್ಲಿ ಪುನ: ಬಾಕಿ ದೊಡ್ಡದಾಗುತ್ತದೆ. ಪ್ರಸ್ತುತ 20 ಕೋಟಿ ಹೋಗಿ 80 ಕೋಟಿ ಅಗಿದೆ.

ಹರಿನಾಥ್ ಮೇಯರ್ ಆಗಿದ್ದಾಗ ಇದ್ದ 10 ಕೋಟಿ ಕವಿತಾ ಸನಿಲ್ ಕಾಲದಲ್ಲಿ ಇಪ್ಪತ್ತು ಕೋಟಿ ಆಯಿತು ಎಂದರೆ ನೀವೆ ಲೆಕ್ಕ ಹಾಕಿ. ಒಬ್ಬ ಮೇಯರ್ ಬದಲಾದ ಕೂಡಲೇ ಬಾಕಿ ಮೊತ್ತ ಡಬ್ಬಲ್ ಆಗುತ್ತೇ ಎಂದರೆ ನಾವು ನೀರಿನ ಬಿಲ್ ಕಟ್ಟುವ ವಿಷಯದಲ್ಲಿ ಎಷ್ಟು ಯೋಚಿಸುತ್ತೇವೆ. ಅಲ್ಲವೇ?

ನೀವು ಮೆಸ್ಕಾಂನವರಂತೆ ನೀರಿನ ಮೀಟರ್ ತೆಗೆದುಕೊಂಡು ಹೋಗಬಹುದಲ್ಲವೇ ನೀರಿನ ಬಿಲ್ ಕಟ್ಟದ ಮನೆಗಳಿಂದ ಎಂದು ನಾನು ಅಧಿಕಾರಿಗಳಿಗೆ ಹೇಳಿದ್ದಕ್ಕೆ ಅವರು ಹಾಗೆ ಮಾಡಿದರೆ ಮನೆಯವರು ಮರುದಿನ ಪ್ಲಂಬರ್ ಅವರನ್ನು ಕರೆಸಿ ಜೋಡಿಸುತ್ತಾರೆ ಎನ್ನುತ್ತಾರೆ. ಅಕ್ರಮ ಮಾಡಿದ್ದಕ್ಕೆ ಪೊಲೀಸ್ ಕಂಪ್ಲೇಟ್ ಕೊಡಿ ಎಂದರೆ ಅದಕ್ಕೆ ಸ್ಥಳೀಯ ಜನಪ್ರತಿನಿಧಿಯಿಂದ ಒತ್ತಡ ತರುತ್ತಾರೆ ಎನ್ನುತ್ತಾರೆ. ಪರಿಸ್ಥಿತಿ ಹೇಗೆ ಹದಗೆಟ್ಟಿದೆ. ಆಯುಕ್ತರು ಏನು ಮಾಡುತ್ತಾರೋ.

0
Shares
  • Share On Facebook
  • Tweet It




Trending Now
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
Tulunadu News December 23, 2025
ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
  • Popular Posts

    • 1
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 2
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 3
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • 4
      ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • 5
      ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!

  • Privacy Policy
  • Contact
© Tulunadu Infomedia.

Press enter/return to begin your search