• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಕೆಲವರು ಶಾಶ್ವತ ಗುತ್ತಿಗೆದಾರರು.. ಒಂದು ರೀತಿಯಲ್ಲಿ Life Time Membership..

Hanumantha Kamath Posted On December 7, 2020
0


0
Shares
  • Share On Facebook
  • Tweet It

ಕೆಲವೇ ಗುತ್ತಿಗೆದಾರರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಹಳ ವರ್ಷಗಳಿಂದ ಗುತ್ತಿಗೆಯನ್ನು ತಾವೇ ವಹಿಸಿಕೊಂಡು ಅರಾಮವಾಗಿ ಇರುತ್ತಾರಲ್ಲ, ಅದು ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ನಿಮಗೆ ಅನಿಸಬಹುದು. ಅವರು ಪಾಲಿಕೆಯಲ್ಲಿ ಮೊದಲು ಬರುವಾಗ ಹೇಗೊ ಕಷ್ಟಪಟ್ಟು ಒಂದು ಗುತ್ತಿಗೆ ಹಿಡಿದಿರಬಹುದು, ನಂತರ ಆ ಗುತ್ತಿಗೆಯ ಅವಧಿ ಮುಗಿದರೂ ಆ ಗುತ್ತಿಗೆದಾರರಿಗೆ ಯಾವ ಟೆನ್ಷನ್ ಇರುವುದಿಲ್ಲ. ಯಾಕೆಂದರೆ ನಮ್ಮ ಪಾಲಿಕೆಯಲ್ಲಿ ಒಮ್ಮೆ ಗುತ್ತಿಗೆ ಹಿಡಿದುಕೊಂಡವರು ಯಾವತ್ತೂ ಪಾಲಿಕೆಯಲ್ಲಿ ಜೀವನಪೂರ್ತಿ ಗುತ್ತಿಗೆಯನ್ನು ತಮ್ಮಲ್ಲಿ ಇಟ್ಟುಕೊಂಡಿರುತ್ತಾರೆ. ಅದು ಒಂದು ರೀತಿಯಲ್ಲಿ ಲೈಫ್ ಟೈಮ್ ಮೆಂಬರ್ ಶಿಪ್ ಇದ್ದ ಹಾಗೆ. ಇವರು ಯಾರಿಗೆಲ್ಲ ಡೊನೇಶನ್ ಅಥವಾ ಮೆಂಬರ್ ಶಿಪ್ ಫೀ ಕಟ್ಟಬೇಕೊ ಅವರಿಗೆ ಆಯಾ ಸಮಯಕ್ಕೆ ಕಟ್ಟುತ್ತಾ ಇದ್ದರೆ ಮುಗಿಯಿತು. ಇವರನ್ನು ಯಾರೂ ಕೂಡ ‘ಸದಸ್ಯತ್ವ’ ದಿಂದ ಬದಲಾಯಿಸುವುದಿಲ್ಲ. ಮತ್ತೆ ಪಾಲಿಕೆಯೇ ಆಫೀಸು ಮತ್ತು ಇವರು ಪಾಲಿಕೆಯಲ್ಲಿ ಬೆಲೆದಿರುವ ಸಮೃದ್ಧ ಹುಲ್ಲುಗಾವಲಲ್ಲಿ ಮೇಯುವ ಜಾನುವಾರುಗಳು.
ಅದಕ್ಕೆ ಮತ್ತೊಂದು ಉದಾಹರಣೆ ಪಾಲಿಕೆಯಲ್ಲಿ ಇರುವ ವಾಹನಗಳ ಗುತ್ತಿಗೆಯನ್ನು ಪಡೆದುಕೊಳ್ಳುತ್ತಾರಲ್ಲ, ಯಾವ ವಾಹನ ಅಂದರೆ ಈ ಮ್ಯಾನ್ ಹೋಲ್ ನಲ್ಲಿ ತುಂಬಿರುವ ಮಣ್ಣು ಮತ್ತು ಇತರ ಕಲ್ಮಶಗಳನ್ನು ತೆಗೆಯಲು ಯಂತ್ರವನ್ನು ಅಳವಡಿಸಿರುವ ವಾಹನಗಳು ಇರುತ್ತವಲ್ಲ, ಅದಕ್ಕೆ ಪ್ರತಿ ಆರು ತಿಂಗಳಿಗೊಮ್ಮೆ ಟೆಂಡರ್ ಕರೆದು ಗುತ್ತಿಗೆಯನ್ನು ವಹಿಸಿಕೊಡಬೇಕಾಗುತ್ತದೆ. ಆದರೆ ಪಾಲಿಕೆಯವರಿಗೆ ಅದು ಮರೆತೇ ಹೋಗಿರುತ್ತದೆ. ನಮ್ಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹೇಗೆಂದರೆ ಅಲ್ಲಿನ ಅಧಿಕಾರಿಗಳಿಗೆ ನೆನಪಾದಾಗ ಗುತ್ತಿಗೆಯನ್ನು ವಹಿಸಿಕೊಡುವುದಕ್ಕೆ ಟೆಂಡರ್ ಕರೆಯುವುದು. ನಿಯಮ ಪ್ರಕಾರ ಏನು ಮಾಡಿದ್ದರೆ ಸರಿ ಎಂದರೆ ಟೆಂಡರ್ ಅರು ತಿಂಗಳಿನದ್ದು ಆದರೆ ಆ ಅವಧಿ ಮುಗಿಯುವ ಎರಡು ತಿಂಗಳು ಮುಗಿಯುವ ಮೊದಲೆ ಹೊಸ ಟೆಂಡರ್ ಕರೆಯಬೇಕಾಗುತ್ತದೆ. ಆಗ ಮುಂದಿನ ಅವಧಿಗೆ ಯಾರು ಆ ಗುತ್ತಿಗೆಯನ್ನು ಪಡೆದುಕೊಳ್ಳಲು ಬರುತ್ತಾರೆ ಅಥವಾ ಏನು ಬದಲಾವಣೆ ಇದೆ ಎಂದೆಲ್ಲ ಸ್ಪಷ್ಟವಾಗುತ್ತದೆ. ಆದರೆ ಪಾಲಿಕೆ ಹಾಗೆ ಮಾಡುವುದಿಲ್ಲ. ಗುತ್ತಿಗೆಯ ಅವಧಿ ಎರಡು ತಿಂಗಳು ಇರುವಾಗ ಬಿಡಿ, ಗುತ್ತಿಗೆಯ ಅವಧಿ ಮುಗಿದರೂ ಇವರು ಟೆಂಡರ್ ಕರೆಯುವುದಿಲ್ಲ.
ಮ್ಯಾನ್ ಹೋಲ್ ನಲ್ಲಿ ಮಣ್ಣು ತೆಗೆಯುವ ಯಂತ್ರ ಅಳವಡಿಸಿರುವ ವಾಹನದ ಗುತ್ತಿಗೆಯನ್ನು ಪಡೆದುಕೊಂಡವರ ಅವಧಿ ಮುಗಿದಿತ್ತು. ಮುಂದಿನ ಅವಧಿಗೆ ಆ ಟೆಂಡರ್ ಅನ್ನು ಹೊಸದಾಗಿ ಕರೆಯಬೇಕಿತ್ತಲ್ಲ. ಅದರೆ ಇವರು ಕರೆಯಲೇ ಇಲ್ಲ. ಪಾಲಿಕೆಯ ನಗರ ಯೋಜನಾ ಸ್ಥಾಯಿ ಸಮಿತಿಯವರು ಏನು ಮಾಡಿದ್ದರು ಎಂದರೆ ಅಕ್ಟೋಬರ್ ನಲ್ಲಿ ಒಂದು ಸೂಚನೆ ನೀಡಿ ಹಿಂದಿನ ಮೊತ್ತಕ್ಕೆನೆ ನಿರ್ವಹಣೆ ಮುಂದುವರೆಸಬೇಕು ಎಂದು ಹೇಳಿ ಅದೇ ಹಳೇ ಗುತ್ತಿಗೆದಾರರ ಅವಧಿಯನ್ನು ನವೀಕರಣ ಮಾಡಿದ್ದಾರೆ. ಇದು ಕೇವಲ ನಾಟಕಕ್ಕೆ ಮಾತ್ರ.ಇಲ್ಲಿ ವಾಹನ ಕೊಡುವುದು ಪಾಲಿಕೆಯೇ. ಆದರೆ ಆ ವಾಹನಕ್ಕೆ ಚಾಲಕ ಹಾಗೂ ಕೂಲಿಯಾಳನ್ನು ಆ ಗುತ್ತಿಗೆಯನ್ನು ವಹಿಸಿಕೊಂಡವರೇ ನೇಮಿಸಬೇಕು. ನಂತರ ಆ ವಾಹನಕ್ಕೆ ಸಂದರ್ಭಕ್ಕೆ ಬೇಕಾಗುವಾಗ ಅಗತ್ಯಕ್ಕೆ ತಕ್ಕಂತೆ ಇಂಧನವನ್ನು ತುಂಬಿಸುವ ಹೊಣೆಗಾರಿಕೆ ಮತ್ತು ಖರ್ಚು ಆಯಾ ಗುತ್ತಿಗೆದಾರರದ್ದೇ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ Silt removing machine ಒಟ್ಟು ಮೂರು ಇದೆ. JETSEC KA-19 D-7270 JETSEC 4000 CCH KA-19 D- 9372 GULPIT SESPOLL ಇಷ್ಟು ವಾಹನಗಳು ಅದೇ ಗುತ್ತಿಗೆದಾರರಿಂದ ಮತ್ತೇ ಮತ್ತೇ ಅವಧೀಯನ್ನು ನವೀಕರಿಸುತ್ತಲೇ ಬರುತ್ತಿವೆ. ಇದು ಕಾನೂನು ಪ್ರಕಾರ ದೊಡ್ಡ ತಪ್ಪು. ಇದರಿಂದ ಏನಾಗುತ್ತದೆ ಎಂದರೆ ಗುತ್ತಿಗೆಯನ್ನು ವಹಿಸಿಕೊಳ್ಳಲು ತುಂಬಾ ಉತ್ಸಾಹದಿಂದ ಬರುವ ಹೊಸ ಗುತ್ತಿಗೆದಾರರಿಗೆ ಅವಕಾಶವೇ ಸಿಗುವುದಿಲ್ಲ. ಹಳೆ ಗುತ್ತಿಗೆದಾರರಿಗೆ ಹೇಗೂ ನಾವು ಯಾರಿಗೆ ಏನು ಸಂದಾಯ ಮಾಡಬೇಕೊ ಮಾಡಿರುವುದರಿಂದ ಕೆಲಸ ಆಗಲಿ, ಬಿಡಲಿ ತಮ್ಮನ್ನು ಯಾರೂ ಕೇಳುವುದಿಲ್ಲ ಎನ್ನುವ ಜಂಭ ಇರುತ್ತದೆ. ಇವು ನಿರ್ಲಕ್ಷ್ಯದಿಂದ ಕೆಲಸ ಮಾಡುವುದರಿಂದ ಏನು ಕೆಲಸ ಆಗಬೇಕಿತ್ತೋ ಅದು ಆಗುವುದಿಲ್ಲ. ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಇವರು ಕೊಡುವ ಭಕ್ಷೀಸು ಸಿಗುವುದರಿಂದ ಇವರಿಗೆ ಬಿಟ್ಟು ಬೇರೆಯವರಿಗೆ ಗುತ್ತಿಗೆ ಸಿಗದಂತೆ ಅವರು ಮಾಡಿಬಿಡುತ್ತಾರೆ. ಇನ್ನೂ ಕಾಳಿಕಂಬ-ಕಂಡತ್ತಪಳ್ಳಿ (ಕೆಳ ರಥಬೀದಿ)ರಸ್ತೆಯನ್ನು ಕಾಂಕ್ರೀಟಿಕರಣ ಮಾಡಬಹುದಿತ್ತು. ಅತೀ ಹೆಚ್ಚು ಸರಕು ತುಂಬಿದ ವಾಹನಗಳು ಹಳೆಬಂದರಿಗೆ ಹೋಗುತ್ತವೆ. ಆ ರಸ್ತೆ ಅಗಲೀಕರಣ ಮಾಡಿದ್ದರೆ ವಾಹನಗಳಿಗೆ ಉಪಯೋಗವಾಗುತ್ತಿತ್ತು ಸ್ಮಾರ್ಟ್ ಸಿಟಿ ಯಲ್ಲಿ ಮಾಡುತ್ತವೆ ಹೇಳುತ್ತಾರೆ ನೋಡುವ.
0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Hanumantha Kamath September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Hanumantha Kamath September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search