• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ದಾಖಲೆಯಲ್ಲಿ ಸರಗಳ್ಳತನ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮೌನ!!

Hanumantha Kamath Posted On December 22, 2020


  • Share On Facebook
  • Tweet It

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳೆದ ಹತ್ತು ದಿನಗಳಲ್ಲಿ ಕನಿಷ್ಟ 12 ಕಡೆ ಬಂಗಾರದ ಸರ ಎಳೆದು ಪರಾರಿಯಾಗಿರುವ ಪ್ರಕರಣ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ಈ ಪ್ರಮಾಣದಲ್ಲಿ ಸರಗಳ್ಳತನ ಹೆಚ್ಚಿರುವುದು ಇತ್ತೀಚಿನ ದಿನಗಳಲ್ಲಿ ಇದು ಪ್ರಥಮ. ಹಾಗಂತ ಇದು ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿಲ್ಲ. ಯಾಕೆಂದರೆ ಕ್ರೈಂ ಬೀಟ್ ಬರೆಯುವ ಪತ್ರಿಕಾ ವರದಿಗಾರರು ಪೊಲೀಸರು ಹೇಳಿದ್ದನ್ನೇ ಬರೆಯುವುದರಿಂದ ಇಂತಹ ಸುದ್ದಿಗಳನ್ನು ಪೊಲೀಸರೇ ಹೇಳಲು ಹೋಗುವುದಿಲ್ಲ. ಹೇಳಿದರೆ ಅದು ತಮಗೆ ಅವಮಾನ ಎನ್ನುವುದು ಪೊಲೀಸರಿಗೆ ಗೊತ್ತಿದೆ. ಆದ್ದರಿಂದ ಅದನ್ನು ದೊಡ್ಡದು ಮಾಡಲು ಹೋಗುವುದಿಲ್ಲ. ಅವರು ಪತ್ರಿಕೆಯವರಿಗೆ ಇಂತದ್ದನ್ನು ಹೇಳುವುದಿಲ್ಲವಾದ್ದರಿಂದ ಅದು ಹೊರಗಿನ ಪ್ರಪಂಚಕ್ಕೆ ಗೊತ್ತಾಗುವುದಿಲ್ಲ. ಹೊರಗೆ ಯಾರಿಗೂ ಗೊತ್ತಾಗುವುದಿಲ್ಲವಾದ್ದರಿಂದ ಮಹಿಳೆಯರು ಹೆಚ್ಚೆಚ್ಚು ಮುಂಜಾಗ್ರತೆ ಮಾಡಲು ಎಚ್ಚರ ವಹಿಸುವುದಿಲ್ಲ. ಇದು ಕಳ್ಳರಿಗೆ ಸುಲಭವಾಗುತ್ತಿದೆ. ಹೀಗೆ ಸರಗಳ್ಳತನ ಹೆಚ್ಚಾಗುತ್ತಿದೆ. ಇದರಿಂದ ಏನಾಗುತ್ತಿದೆ ಎಂದರೆ ಇತ್ತ ಸರಗಳ್ಳತನ ಕೂಡ ಕಡಿಮೆಯಾಗುವುದಿಲ್ಲ. ಅತ್ತ ನಹಿಳೆಯರಲ್ಲಿ ಮುನ್ನೆಚ್ಚರಿಕೆ ಮೂಡುವುದಿಲ್ಲ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುತ್ತಿದ್ದರೂ ಯಾರಿಗೂ ಗೊತ್ತಾಗಲ್ಲ ಎಂದು ಅಂದುಕೊಂಡಿದೆ. ಪೊಲೀಸರು ಇಂತಹ ಪ್ರಕರಣಗಳನ್ನು ಹೇಳದಿದ್ದರೆ ಯಾರಿಗೂ ಗೊತ್ತಾಗಲ್ಲ ಎಂದು ಅಂದುಕೊಂಡಿದ್ದಾರೆ.

ಈ ಮೂಲಕ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಫಲವಾಗಿದೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಮೊದಲನೇಯದಾಗಿ ಪೊಲೀಸರು ತಮ್ಮ ಇಗೋ ಬಿಡಬೇಕು. ಸರಗಳ್ಳತನ ಆಗುತ್ತಿದೆ ಎಂದರೆ ಅದನ್ನು ಒಪ್ಪಿಕೊಳ್ಳಬೇಕು. ಮೊದಲನೇಯದಾಗಿ ಇದಕ್ಕೆ ಕಡಿವಾಣ ಹಾಕಬೇಕು. ಕಡಿವಾಣ ಹೇಗೆ ಎಂದರೆ ಆದಷ್ಟು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಜಾಸ್ತಿ ಹಾಕಬೇಕು. ಇನ್ನು ಸರಗಳ್ಳತನ ಮಾಡುವವರಲ್ಲಿ ಹೆಚ್ಚಿನವರು ಹಿಂದಿನ ಸಾಂಪ್ರದಾಯಿಕ ಕಳ್ಳರೇ ಆಗಿರುತ್ತಾರೆ. ಅವರನ್ನು ಕರೆಸಿ ವಿಚಾರಿಸಬೇಕು. ಹಳೆ ಕಳ್ಳರು ಮತ್ತೆ ಬಾಲ ಬಿಚ್ಚಿದಾರಾ ಎಂದು ನೋಡಬೇಕು. ಅವರಲ್ಲ ಎಂದಾದರೆ ಹೊಸ ಕಳ್ಳರ ಬಗ್ಗೆ ಹಳಬರಿಗೆ ಏನಾದರೂ ಕ್ಲೂ ಇದೆಯಾ ಎಂದು ನೋಡಬೇಕು. ಸಾಮಾನ್ಯವಾಗಿ ಹೀಗೆ ಸರಗಳ್ಳತನ ಮಾಡುವ ಕಳ್ಳರು ಅಂತಹ ಬಂಗಾರವನ್ನು ಇಂತಹುದೇ ಅಂಗಡಿಗಳಲ್ಲಿ ಮಾರುವ ಸಂಪ್ರದಾಯ ಇದೆ. ಆ ಅಂಗಡಿಗಳನ್ನು ವಿಚಾರಿಸಬೇಕು. ಇನ್ನು ಇದು ಸರಣಿಯಲ್ಲಿ ಆಗುತ್ತಿರುವುದರಿಂದ ಹೆಚ್ಚಿನ ಕಡೆ ಒಂದೇ ತಂಡದವರು ಮಾಡುತ್ತಿರುತ್ತಾರೆ. ಅವರು ಒಮ್ಮೆ ಸಿಕ್ಕರೆ ಅವರು ಕಾಲಿನಲ್ಲಿ ನಡೆದುಕೊಂಡು ಹೋಗದ ಹಾಗೆ ಮಾಡಬೇಕು. ಇನ್ನು ಅಲ್ಲಿಯ ತನಕ ಪೊಲೀಸರು ಜನರಲ್ಲಿ ಜಾಗೃತಿ ಉಂಟು ಮಾಡುವ ಕಾರ್ಯ ಮಾಡಬೇಕು. ಬೇಕಾದರೆ ಪೊಲೀಸ್ ಕಮೀಷನರ್ ಅವರೇ ಒಂದು ವಿಡಿಯೋ ಬೈಟ್ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಿ. ಅದೇ ರೀತಿಯಲ್ಲಿ ಪತ್ರಿಕಾ ಪ್ರಕಟನೆ ಕೂಡ ನೀಡಲಿ. ಇದರಿಂದ ಹಿರಿಯ ವಯಸ್ಸಿನ ಮಹಿಳೆಯರನ್ನು ಗುರಿಯಾಗಿಟ್ಟು ಸರಗಳ್ಳರು ಮಾಡುವ ಈ ಕ್ರೈಂಗಳನ್ನು ನಿಯಂತ್ರಣಕ್ಕೆ ತರಬಹುದು. ಇನ್ನೊಂದು ವಾರ ಹೀಗೆ ದಾಖಲೆಯ ಪ್ರಮಾಣದಲ್ಲಿ ಸರಗಳ್ಳತನ ಮುಂದುವರೆದರೆ ಇದು ಖಂಡಿತ ಪೊಲೀಸ್ ಕಮೀಷನರ್ ಕಚೇರಿಯ ವೈಫಲ್ಯ ಎಂದೇ ಹೇಳಬೇಕು. ಯಾಕೆಂದರೆ ಕಳೆದ ನಾಲ್ಕು ತಿಂಗಳಲ್ಲಿ ನಮ್ಮಲ್ಲಿ ಅಪರಾಧ ಪ್ರಕರಣಗಳು ವಿವಿಧ ರೂಪಗಳಲ್ಲಿ ಕಾಣಸಿಗುತ್ತಿವೆ. ಅದು ಹಲ್ಲೆಯಿಂದ ಹಿಡಿದು ಕೊಲೆಯನ್ನು ಸೇರಿಸಿ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆ ಮಾಡುವ ತನಕ ಬಂದು ತಲುಪಿದೆ. ಈಗ ಹೊಸದಾಗಿ ಸರಗಳ್ಳತನ. ಇದು ಏನನ್ನು ಸೂಚಿಸುತ್ತದೆ? 100 ಸಂಖ್ಯೆಗೆ ಡಯಲ್ ಮಾಡಿ ಎಂದು ಇದ್ದದ್ದು 112 ಎಂದು ಬದಲಾಯಿಸಿದರೆ ಸಾಕಾ? ಇಂತಹುದನ್ನು ನೋಡೋದು ಬೇಡ್ವಾ? ಮೊದಲೇ ಸರಗಳ್ಳರಿಗೆ ಲಾಕ್ ಡೌನ್ ನಿಂದಾಗಿ ಜೀವನವೇ ದುಸ್ಥಿತಿಯಾಗಿತ್ತು. ಯಾವುದೇ ಕಳ್ಳತನ ಮಾಡಲು ಸಾಧ್ಯವಾಗದೇ ಹೊಟ್ಟೆ ಮೇಲೆ ಒದ್ದೆ ಬಟ್ಟೆಯೇ ಗತಿಯಾಗಿತ್ತು. ಆದ್ದರಿಂದ ಆಗ ಮಾಡಿರುವ ಸಾಲವನ್ನು ತೀರಿಸಲು ಅಂತವರು ಒವರ್ ಡ್ಯೂಟಿ ಮಾಡುವಂತೆ ಹಟಕ್ಕೆ ಬಿದ್ದು ಹೆಚ್ಚೆಚ್ಚು ಸರಗಳ್ಳತನ ಮಾಡುತ್ತಿರುವಂತೆ ತೋರುತ್ತಿದೆ. ಈ ಹಂತದಲ್ಲಿಯೇ ಪೊಲೀಸರ ಜವಾಬ್ದಾರಿ ಕೂಡ ಹೆಚ್ಚಿರುತ್ತದೆ. ಯಾಕೆಂದರೆ ಮಹಿಳಾ ಜಾಗೃತಿ ಮಾಡುವುದು ಕೂಡ ಮುಖ್ಯ. ಯಾವುದಾದರೂ ಮಹಿಳೆ ಒಂಟಿಯಾಗಿ ಹೋಗುವಾಗ ಬೈಕಿನಲ್ಲಿ ಬರುವ ಆಗಂತುಕರು ವಿಳಾಸ ಕೇಳುವ ನೆಪದಲ್ಲಿ ನಿಲ್ಲಿಸಿದರೆ ತಕ್ಷಣ ಮಹಿಳೆ ಜಾಗೃತರಾಗಬೇಕು. ಎಲ್ಲರೂ ಸರಗಳ್ಳರೇ ಆಗುವುದಿಲ್ಲ. ಆದರೆ ಸರಗಳ್ಳರು ಅಡ್ರೆಸ್ ಕೇಳುವುದನ್ನೇ ತಮ್ಮ ಕಳ್ಳತನದ ಶೈಲಿಯನ್ನಾಗಿ ಮಾಡಿದ್ದಾರೆ. ಇನ್ನು ಕೆಲವರು ಒಂಟಿ ಮನೆಗಳಿಗೆ ಬಂದು ನೀರು ಕೇಳುವ ನೆಪದಲ್ಲಿ ಬೆಲ್ ಮಾಡಿ ಆ ರೀತಿಯಲ್ಲಿಯೂ ಹೆಂಗಸರು ಬಾಗಿಲು ತೆರೆದರೆ ಸರ ಎಳೆದು ಪರಾರಿಯಾಗುವ ಸಾಧ್ಯತೆಗಳಿವೆ. ಇದೆಲ್ಲದರ ಬಗ್ಗೆ ಪೊಲೀಸರು ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಬೇಕು. ಯಾವುದ್ಯಾವುದೋ ಸಚಿವರು ವಾರ್ತಾ ಇಲಾಖೆಯ ಮೂಲಕ ಅರ್ಧ ಪೇಜ್ ತಮ್ಮ ಇಲಾಖೆಯ ಸಾಧನೆಗಳನ್ನು ಬರೆಸಿ ಬೆನ್ನು ತಟ್ಟಿ ಕೊಳ್ಳುವ ಬದಲು ಈ ರೀತಿ ಜಾಗೃತಿ ಮೂಡಿಸಿದರೆ ಉತ್ತಮ. ಹಿಂದೆ ಮಂಗಳೂರು ಕೋಮು ಸೂಕ್ಷ್ಮ ಪ್ರದೇಶ ಎಂದು ಗುರುತಿಸಿಕೊಂಡಿತ್ತು. ಈಗ ಮೂರು ವರ್ಷಗಳಲ್ಲಿ ಅದು ಕಡಿಮೆಯಾಗುವ ಹಂತದಲ್ಲಿದೆ. ಹಾಗಂತ ನಾವು ನೆಮ್ಮದಿಯ ಉಸಿರು ಎಳೆದುಕೊಳ್ಳುವಷ್ಟರಲ್ಲಿ ಮಂಗಳೂರು ಇನ್ನು ಕ್ರೈ ಸಿಟಿ ಎಂದು ಕರೆಸಿಕೊಳ್ಳುವ ದಿನ ದೂರವಿಲ್ಲ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search