• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

3 ದಿನದ ಉಳಿದ ಅಡುಗೆ ರಸ್ತೆಯಲ್ಲಿ ನಲಿದಾಡುತ್ತಿತ್ತು!!

Hanumantha Kamath Posted On December 29, 2020
0


0
Shares
  • Share On Facebook
  • Tweet It

ಕೇವಲ ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ತಿಂಗಳಿಗೆ 2 ರಿಂದ 2.5 ಕೋಟಿ ರೂಪಾಯಿ ಬಿಲ್ ಆಗುವ ಒಂದು ನಗರ ಹೇಗಿರಬೇಕು ಎಂದರೆ ಸಿಂಗಾಪುರದ ತರಹ ಇರಬೇಕು ಎಂದು ನೀವು ಹೇಳಬಹುದು. ಆದರೆ ಕೋಟಿ ಕೋಟಿ ಹಣವನ್ನು ವ್ಯಯಿಸಿದ ಮೇಲೆಯೂ ನಮ್ಮ ಮಂಗಳೂರು ಸಿಂಗಾಪುರ ಆಗುವುದು ಚಂದ್ರನಷ್ಟೇ ದೂರದ ಮಾತು ಎಂದು ಬಹಳ ಬೇಸರದಿಂದ ಹೇಳಬೇಕಾಗಿದೆ. ಎರಡೂ ಕೋಟಿ ಕೊಟ್ಟರೂ 60 ಲಕ್ಷದ ಕೆಲಸ ಆದರೆ ಏನು ಮಾಡಬೇಕು? ಉಳಿದ ಹಣ ವ್ಯರ್ಥ ಎಂದು ನಿಮಗೆ ಅನಿಸಲ್ವಾ? ಅಷ್ಟಕ್ಕೂ ಜನರ ತೆರಿಗೆಯ ಹಣ ಈ ರೀತಿಯಲ್ಲಿ ಪೋಲಾಗುತ್ತಿರುವುದು ನಮ್ಮ ಮಂಗಳೂರಿನಲ್ಲಿ ಮಾತ್ರ.
ನಿಮಗೆ ಇವತ್ತು ಕೆಲವು ಫೋಟೋಗಳನ್ನು ತೋರಿಸುತ್ತಿದ್ದೇನೆ. ಇದು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಸ ಸಂಗ್ರಹಣ ಗುತ್ತಿಗೆಯನ್ನು ಪಡೆದುಕೊಂಡಿರುವ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ನವರು ಕೊಡಿಯಲ್ ಬೈಲ್, ಸೆಂಟ್ರಲ್ ಮಾರುಕಟ್ಟೆ ಏರಿಯಾದಲ್ಲಿ ಡಿಸೆಂಬರ್ 25,26,27 ಒಟ್ಟು ಮೂರು ದಿನಗಳ ಕಾಲ ಕಸ ಸಂಗ್ರಹಣೆಯನ್ನು ಮಾಡಲೇ ಇಲ್ಲ. ಅದರ ಪರಿಣಾಮವಾಗಿ ನಾಯಿಗಳಿಗೆ ಹಬ್ಬದೂಟದ ಪರಿಸ್ಥಿತಿ ಉದ್ಭವವಾಗಿದೆ. ಜನರು ಮೂರು ದಿನ ಒಳ್ಳೆಯ ರಜೆ ಇದ್ದ ಕಾರಣ ಮನೆಗಳಲ್ಲಿ ಒಳ್ಳೆಯ ಅಡುಗೆ ಎಲ್ಲ ಮಾಡಿ ಉಳಿದದ್ದನ್ನು ಹಾಗೆ ಕಸದವರು ತೆಗೆದುಕೊಂಡು ಹೋಗುತ್ತಾರೆ ಎನ್ನುವ ಧೈರ್ಯದಿಂದ ಹೊರಗೆ ಇಟ್ಟಿದ್ದರು. ಆದರೆ ಯಾರೂ ತೆಗೆದುಕೊಂಡು ಹೋಗಲು ಬರಲೇ ಇಲ್ಲ. ಬಂದದ್ದು ಬೀದಿ ನಾಯಿಗಳು. ಅವುಗಳು ಈ ಹಳಸಿದ ಅಡುಗೆ ಪರಿಮಳಕ್ಕೆ ಮಾರು ಹೋಗಿದ್ದವು. ತೊಟ್ಟೆಯಲ್ಲಿ ಇದ್ದ ಪದಾರ್ಥವನ್ನು ಕಚ್ಚಿ ಬೀಳಿಸಿ ಸಂಭ್ರಮಿಸಿದವು. ಅವುಗಳ ಕೊಡುಗೆಯಿಂದ ಹೆಚ್ಚಿನ ರಸ್ತೆಗಳ ಪರಿಸ್ಥಿತಿ ಹೀಗೆ ಆಗಿದೆ. ಹಾಗಾದರೆ ಇಂತಹ ಏರಿಯಾಗಳ ಪಾಲಿಕೆ ಸದಸ್ಯರು ಯಾಕೆ ಮಾತನಾಡುವುದಿಲ್ಲ. ಅವರಿಗೆ ಯಾರೂ ಕೇಳುವುದಿಲ್ಲವೇ? ಅಥವಾ ಕೇಳಿದ್ದರೂ ಅವರು ಕ್ಯಾರ್ ಮಾಡುತ್ತಿಲ್ಲವೆ? ಅಥವಾ ಅವರು ಕೂಡ ಆಂಟೋನಿ ವೇಸ್ಟ್ ನವರೊಂದಿಗೆ ಹೊಂದಾಣಿಕೆ ಮಾಡಿ ಚೆನ್ನಾಗಿ ಇದ್ದಾರಾ? ಅಧಿಕಾರಿಗಳು ಈ ಬಗ್ಗೆ ಮೌನವಾಗಿದ್ದಾರೆ. ಆಂಟೋನಿ ವೇಸ್ಟ್ ನವರಿಗೆ ಕೇಳಿದ್ರೆ ಎಲ್ಲಾ ಕಡೆಯಿಂದ ಕಸ ಸಂಗ್ರಹಣೆ ಮಾಡಿದ್ದೇವೆ ಎಂದು ಹೇಳಿ ಜಾರಿಕೊಳ್ಳುತ್ತಾರೆ. ನನ್ನ ಬಳಿ ಇರುವ ಫೋಟೋಗಳು ಸಾವಿರ ಶಬ್ದಗಳಿಗಿಂತ ಹೆಚ್ಚು ಮಾತನಾಡುತ್ತಿವೆ.
ಸ್ಯಾಂಪಲ್ ಗೆ ಕೆಲವು ಫೋಟೊಗಳನ್ನು ಪೋಸ್ಟ್ ಮಾಡುತ್ತಿದ್ದೇನೆ. ಅಷ್ಟಕ್ಕೂ ಇದೆಲ್ಲಾ ಯಾಕೆ ಆಯಿತು?
ವಿಷಯ ಏನೆಂದರೆ ಮಂಗಳೂರಿನಲ್ಲಿ ಹಿಂದೆ ಇದ್ದ ಕಸ ಸಂಗ್ರಹಣಾ ವ್ಯವಸ್ಥೆ ಸರಿಯಾಗಿಲ್ಲ ಎನ್ನುವ ಕಾರಣಕ್ಕೆ ಸಮರ್ಪಕ ರೀತಿಯಲ್ಲಿ ಆಗಲಿ ಎಂದು ಈ ಆಂಟೋನಿ ವೇಸ್ಟ್ ನವರಿಗೆ ಗುತ್ತಿಗೆ ಕೊಡಲಾಗಿತ್ತು. ಕೊಡುವಾಗಲೇ ನೀವು ಒಳ ಗುತ್ತಿಗೆಯನ್ನು ಕೊಡುವಂತಿಲ್ಲ, ನೀವೆ ನೇರವಾಗಿ ಮಾಡಬೇಕು ಎಂದೇ ಷರತ್ತು ವಿಧಿಸಲಾಗಿತ್ತು. ಆದರೆ ಆಂಟೋನಿಯಲ್ಲಿ ಕೆಲಸ ಮಾಡುವ 90 ಶೇಕಡಾ ಜನ ಉಪ ಗುತ್ತಿಗೆದಾರರ ಅಡಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ ವಿನ: ಆಂಟೋನಿ ವೇಸ್ಟ್ ನವರ ಅಡಿಯಲ್ಲಿ ಅಲ್ಲ. ಹಿಂದಿನವರು ಸರಿಯಿಲ್ಲ ಎಂದು ಹೊಸಬರಿಗೆ ಕೊಟ್ಟರೆ ಅವರು ಮತ್ತೆ ಹಳಬರನ್ನೇ ಕೆಲಸಕ್ಕೆ ಇಟ್ಟುಕೊಂಡರೆ ಪರಿಸ್ಥಿತಿ ಹೇಗೆ ಸುಧಾರಿಸುತ್ತದೆ. ಹಳಬರಿಗೆ ಯಾರನ್ನು ಎಷ್ಟು “ಚೆನ್ನಾಗಿ” ಇಟ್ಟುಕೊಂಡರೆ ಯಾವ ತೊಂದರೆಯೂ ಇಲ್ಲ ಎಂದು ಲೆಕ್ಕಾಚಾರ ಇರುವುದರಿಂದ ಅವರು ಹಾಗೆ ಮಾಮೂಲಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದಲೇ ಮನೆಯ ಬಾಗಿಲಲ್ಲಿ ಇಟ್ಟ ತ್ಯಾಜ್ಯ ರಸ್ತೆಯಲ್ಲಿ ಬಂದು ಕುಣಿದಾಡುತ್ತಿದೆ. ಈಗ ಬೇಕಾದರೆ ಪಾಲಿಕೆಯ ವ್ಯಾಪ್ತಿಯಲ್ಲಿ ಇದ್ದುದರಲ್ಲಿಯೇ ಪೋಶ್ ಏರಿಯಾಗಳಲ್ಲಿ ಒಂದಾಗಿರುವ ಮಣ್ಣಗುಡ್ಡೆಯನ್ನೇ ತೆಗೆದುಕೊಳ್ಳೋಣ. ಮಣ್ಣಗುಡ್ಡೆ ನಗರದ ಮಧ್ಯದಲ್ಲಿ ಇದ್ದರೂ ನಗರದ ಯಾವುದೇ ಜಂಜಾಟದಿಂದ ದೂರ ಇದ್ದಂತೆ ಕಾಣುವ ತಣ್ಣಗಿನ ವಾರ್ಡ್. ಬ್ರಿಟಿಷರು ಕಟ್ಟಿಸಿದ್ದ ಒಂದೆರಡು ಬಂಗಲೆಗಳನ್ನು ಇವತ್ತಿಗೂ ಇಲ್ಲಿ ಆಸುಪಾಸಿನಲ್ಲಿ ಕಾಣಬಹುದು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಪ್ಲ್ಯಾನ್ ಮಾಡಿದಂತೆ ಶಿಸ್ತುಬದ್ಧವಾಗಿ ಉತ್ತಮ ರೀತಿಯಲ್ಲಿ ಲೇಔಟ್ ತರಹ ಈ ವಾರ್ಡ್ ಕಾಣುತ್ತದೆ. ಇಲ್ಲಿ ಪಾಲಿಕೆಯ ಷರತ್ತಿನ ಪ್ರಕಾರ ಆಂಟೋನಿಯವರು ನಿತ್ಯ ರಸ್ತೆ ಗುಡಿಸಬೇಕೆಂಬ ನಿಯಮವಿದೆ. ಆದರೆ ಈ ವಾರ್ಡನ್ನು ತಿಂಗಳಿಗೊಮ್ಮೆ ಗುಡಿಸಲಾಗುತ್ತದೆ. ಅದರಿಂದ ಕಸ ರಸ್ತೆಗಳಲ್ಲಿ ರಾಶಿ ರಾಶಿ ಬೀಳುತ್ತಿದೆ. ಅದರ ಫೋಟೋಗಳು ಕೂಡ ಇವೆ. ಈ ಬಗ್ಗೆ ಪರಿಶೀಲನೆ ನಡೆಸಬೇಕಾದ ಹೆಲ್ತ್ ಇನ್ಸಪೆಕ್ಟರ್, ಪರಿಸರ ಅಭಿಯಂತರರು, ಆಂಟೋನಿ ವೇಸ್ಟ್ ನವರು ಯಾರೂ ಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಜನರು ಮಾತನಾಡಲೇಬೇಕಿದೆ. ಆಂಟೋನಿ ವೇಸ್ಟ್ ನವರಿಗೆ ಅಧಿಕಾರಿಗಳನ್ನು ಹೇಗೆ ಹೊಂದಾಣಿಕೆ ಮಾಡಿ ಹೋಗಬೇಕು ಎನ್ನುವುದು ಗೊತ್ತಿದೆ. ಆದ್ದರಿಂದ ನಮ್ಮ ನಾಗರಿಕರು ಏನು ಮಾಡಬೇಕು ಎಂದರೆ ಮಹಾನಗರ ಪಾಲಿಕೆಗೆ ಅಕ್ಷಯ್ ಶ್ರೀಧರ್ ಎನ್ನುವ ಯುವ ಆಯುಕ್ತರು ಬಂದಿದ್ದಾರೆ. ಅವರ ಬಳಿ ಈ ಬಗ್ಗೆ ವಾರ್ಡಿನ ಪ್ರಮುಖರು ಮಾತನಾಡಬೇಕು. ಇದರಿಂದ ಆಯುಕ್ತರಿಗೂ ಆಂಟೋನಿ ವೇಸ್ಟ್ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲವನ್ನು ಮೇಯರ್ ಒಬ್ಬರೇ ಮಾಡಲು ಸಾಧ್ಯವಿಲ್ಲ. ನಮ್ಮ ಧ್ವನಿ ನಾವು ಎತ್ತಲೇಬೇಕು. ಇಲ್ಲದಿದ್ದರೆ ಬೀಡಾಡಿ ನಾಯಿಗಳು ಒಂದು ದಿನ ನಿಮಗೆ ಅಥವಾ ಮನೆಯ ಪುಟ್ಟ ಮಕ್ಕಳಿಗೆ ಕಚ್ಚಲು ಬಂದಾವು!!
0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search