• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

30 ವರ್ಷಗಳಿಂದ ನಗರ ಯೋಜನಾ ವಿಭಾಗದಲ್ಲಿ ಹೊರಳಾಡುತ್ತಿರುವವರಿಗೆ ಓಡಿಸಿ!!

Hanumantha Kamath Posted On January 20, 2021
0


0
Shares
  • Share On Facebook
  • Tweet It

ಮಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಕಡಿಮೆ ಮಾಡಬೇಕಾದರೆ ಏನು ಮಾಡಬೇಕು ಎನ್ನುವ ಪ್ರಶ್ನೆಗೆ ಅನಧಿಕೃತ ನಿರ್ಮಾಣಗಳನ್ನು ತೆಗೆದು ಹಾಕಬೇಕು, ಪಾರ್ಕಿಂಗ್ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ್ದನ್ನು ತೆರವು ಮಾಡಬೇಕು ಎನ್ನುವ ಉತ್ತರ ಎಲ್ಲರಿಗೂ ಗೊತ್ತಿದೆ. ಆದರೆ ಮಾಡುವುದು ಯಾರು? ಹಾಗೂ ಶುರು ಮಾಡುವುದು ಎಲ್ಲಿಂದ? ಎನ್ನುವ ಪ್ರಶ್ನೆಗೆ ಉತ್ತರ ಯಾರ ಬಳಿಯೂ ಇಲ್ಲ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವ ಪ್ರಶ್ನೆಗೆ ಇಲ್ಲಿಯ ತನಕ ನಾನೇ ಕಟ್ಟುತ್ತೇನೆ ಎಂದು ಯಾರೂ ಮುಂದೆ ಬಂದಿರಲಿಲ್ಲ. ಸದ್ಯ ಈಗ ಮಂಗಳೂರು ಮಹಾನಗರ ಪಾಲಿಕೆಯ ಯುವ ಕಮೀಷನರ್, ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್ ತಯಾರಾಗಿದ್ದಾರೆ.

ಅವರು ಐವತ್ತಕ್ಕೂ ಹೆಚ್ಚು ಅಕ್ರಮ ನಿರ್ಮಾಣಗಳಿಗೆ ಈಗಾಗಲೇ ನೋಟಿಸು ನೀಡಿದ್ದಾರೆ. ಅವರಿಗೆ ಈಗ ಜನಪ್ರತಿನಿಧಿಗಳ ಬೆಂಬಲದ ಅಗತ್ಯ ಇದೆ. ನೀವು ಮಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಪರಿಹಾರ ಮಾಡಲು ನನ್ನದೇ ಸ್ವಂತ ಚಿಕ್ಕಪ್ಪನ ಮಗನ ಅಂಗಡಿಯನ್ನು ನೆಲಸಮ ಮಾಡಲು ಹೊರಟರೂ ನಾನು ಅಡ್ಡಿ ಬರುವುದಿಲ್ಲ ಎಂದು ಜನಪ್ರತಿನಿಧಿಗಳು ಹೇಳಿಬಿಟ್ಟರೆ ಕಮೀಷನರ್ ಅವರಿಗೆ ನಿಜವಾದ ಸ್ವಾತಂತ್ರ್ಯ 1947 ರಲ್ಲಿ ಅಲ್ಲ ಇವತ್ತು ಸಿಕ್ಕಿತು ಎಂದೇ ಅರ್ಥ. ಕಮೀಷನರ್ ಅವರ ನೋಟಿಸಿಗೆ ಕೆಲವು ಅಂಗಡಿಗಳ ಮಾಲೀಕರು ತಮ್ಮ ಅತಿಕ್ರಮಣ ಅಥವಾ ಅನಧಿಕೃತ ಸೆಟಪ್ ತೆರವುಗೊಳಿಸಿದ್ದಾರೆ. ಆದರೆ ಹೆಚ್ಚಿನವರು ಏನೂ ಮಾಡಿಲ್ಲ. ಯಾಕೆಂದರೆ ಪಾಲಿಕೆ ಕಮೀಷನರ್ ಏನು ಮಹಾ ಮಾಡಿಯಾರು? ಅವರು ನೆಲಸಮ ಮಾಡಲು ಒಂದು ವೇಳೆ ಬಂದರೆ ಮೇಯರ್ ಅವರಿಗೋ, ಶಾಸಕರಿಗೋ, ಸಂಸದರಿಗೋ ಫೋನ್ ಮಾಡಿದರೆ ಮುಗಿಯಿತು, ವೋಟ್ ಹಾಕಿಲ್ವಾ ಎಂದು ಕೆಲವರು ಅಂದುಕೊಂಡಿರಬಹುದು. ಇನ್ನು ಕೆಲವರು ತಾವು ಜನಪ್ರತಿನಿಧಿಗಳೊಂದಿಗೆ “ಚೆನ್ನಾಗಿ” ಇದ್ದೇವೆ ಎಂದುಕೊಂಡು ಧೈರ್ಯದಿಂದ ಇದ್ದಿರಲೂಬಹುದು. ಆದರೆ ಪಾಲಿಕೆ ಕಮೀಷನರ್ ಯಾವಾಗ ನಿಜವಾಗಿ ರಂಗಕ್ಕೆ ಇಳಿಯುತ್ತಾರೋ ಆಗ ಪ್ರಭಾವ ಬೀರಬಲ್ಲ ಜನಪ್ರತಿನಿಧಿಗಳು ಊರಿನಲ್ಲಿ ಇಲ್ಲದಿದ್ದರೆ ಒಳ್ಳೆಯದು. ಯಾಕೆಂದರೆ ಜನಪ್ರತಿನಿಧಿಗಳು ತಾವು ಒಬ್ಬರಿಗೆ ಸಹಾಯ ಮಾಡುವುದರಿಂದ ಆ ರಸ್ತೆಯಲ್ಲಿ ನಿತ್ಯ ಸಂಚರಿಸುವ ಸಾವಿರಾರು ಜನರಿಗೆ ಉಪದ್ರವ ಮಾಡಿದಂತಾಗುತ್ತದೆ ಎನ್ನುವುದನ್ನು ನೆನಪಿನಲ್ಲಿಡಬೇಕು. ಇನ್ನು ಒಬ್ಬ ಜನಪ್ರತಿನಿಧಿ ಒಬ್ಬರಿಗೆ ಸಹಾಯ ಮಾಡಿದರೆ ಇನ್ನೊಬ್ಬ ಬಂದು ತನಗೂ ಸಹಾಯ ಮಾಡು ಎಂದು ಗೋಗರೆಯುತ್ತಾನೆ. ಒಬ್ಬೊಬ್ಬ ಜನಪ್ರತಿನಿಧಿ ನಾಲ್ಕೈದು ಜನರಿಗೆ ಹೀಗೆ ಸಹಾಯ ಮಾಡುತ್ತಾ ಹೋದರೆ ಮಂಗಳೂರು ಪುನ: ಈಗ ಇದ್ದಲ್ಲಿಗೆ ಬಂದು ನಿಲ್ಲುತ್ತದೆ. ಅದರಿಂದ ಸಮಸ್ಯೆ ಮುಂದುವರೆಯುತ್ತದೆ.

ಇನ್ನು ಜನಸಾಮಾನ್ಯರು ಕೂಡ ಅಧಿಕಾರಿಗಳಿಗೆ ಸಾಥ್ ನೀಡಬೇಕು. ಕೇವಲ ನಮ್ಮ ಗಾಡಿಗಳು ಟೋ ಮಾಡಿ ತೆಗೆದುಕೊಂಡು ಹೋದರು ಎನ್ನುವ ಕಾರಣಕ್ಕೆ ಆ ಕ್ಷಣಕ್ಕೆ ಆಕ್ರೋಶ ವ್ಯಕ್ತಪಡಿಸುವುದು ಮಾತ್ರ ಮಾಡಿದರೆ ಸಾಕಾಗದು. ನಿಮ್ಮ ವಾಹನ ನೋ ಪಾರ್ಕಿಂಗ್ ನಲ್ಲಿ ಅನಿವಾರ್ಯವಾಗಿ ಇಡಲು ಯಾರು ಕಾರಣ ಎನ್ನುವುದನ್ನು ಕೂಡ ನೋಡಬೇಕು. ಒಂದು ಮಳಿಗೆಯ ಹೊರಗೆ ನೀವು ವಾಹನ ಇಟ್ಟು ಒಳಗೆ ಏನಾದರೂ ಖರೀದಿ ಮಾಡಲು ಹೋದಾಗ ನಿಮ್ಮ ಗಾಡಿಯನ್ನು ಟೋ ಮಾಡಿದರೆ ಆಗ ದಂಡ ಕಟ್ಟಬೇಕಾದವರು ನೀವು. ಆದರೆ ನಿಜವಾಗಿ ದಂಡ ಮಾತ್ರವಲ್ಲ ತಲೆದಂಡ ಆಗಬೇಕಾಗಿರುವುದು ಆ ಮಳಿಗೆಗಳಿಗೆ ಪಾರ್ಕಿಂಗ್ ಜಾಗದಲ್ಲಿ ಅತಿಕ್ರಮಣ ಮಾಡಲು ಅವಕಾಶ ಮಾಡಿಕೊಟ್ಟು ಕಾಂಚಣವನ್ನು ತಮ್ಮ ಕಿಸೆಗೆ ಇಳಿಸಿಕೊಳ್ಳುತ್ತಿರುವ ನಗರ ಯೋಜನಾ ಅಧಿಕಾರಿಗಳದ್ದು.

ಒಬ್ಬ ನಗರ ಯೋಜನಾ ಅಧಿಕಾರಿಯ ಜವಾಬ್ದಾರಿ ಈ ಟ್ರಾಫಿಕ್ ಜಾಮ್ ವಿಷಯದಲ್ಲಿ ದೊಡ್ಡದಿರುತ್ತದೆ. ಅವರು ಎಂಜಿಲು ಕಾಸಿಗೆ ಆಸೆ ಪಡುತ್ತಿರುವುದರಿಂದ ನಾವು ನಮ್ಮ ವಾಹನಗಳನ್ನು ಇಡಲು ಜಾಗವಿಲ್ಲದೆ ಟೋ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಆದರೆ ಟಿಪಿಒಗಳು ಮಾತ್ರ ಲಂಚವನ್ನು ಕಿಸೆಗೆ ಇಳಿಸಿಕೊಂಡು ಆರಾಮವಾಗಿದ್ದಾರೆ. ಒಬ್ಬ ಟಿಪಿಒ ಒಂದೇ ಕಡೆ ಮೂವತ್ತು ವರ್ಷಗಳಿಂದ ಇದ್ದಾರೆ ಎಂದರೆ ನೀವೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಅಂತವರು ಎಲ್ಲ ಮಳಿಗೆಗಳ ಮಾಲೀಕರೊಂದಿಗೆ ಚೆನ್ನಾಗಿಯೇ ಇದ್ದಾರೆ. ಇಂತವರು ಯಾವ ಉತ್ಸಾಹಿ ಯುವ ಕಮೀಷನರ್ ಅವರೇ ಪಾಲಿಕೆಗೆ ಬರಲಿ, ತಮಗೆ ಬೇಕಾದವರ ಬಗ್ಗೆ ಯಾವುದೇ ತಪ್ಪುಗಳನ್ನು ಹೇಳುವುದಿಲ್ಲ. ಇದರಿಂದ ಮುಖ್ಯವಾಗಿ ಕಮೀಷನರ್ ಅವರಿಗೆ ಸರಿಯಾದ ಮಾಹಿತಿಗಳೇ ಸಿಗುವುದಿಲ್ಲ. ಇದರಿಂದ ನಿಜವಾದ ತಪ್ಪಿತಸ್ಥರು ಬಲೆಯೊಳಗೆ ಬೀಳುವುದೇ ಇಲ್ಲ.

ಈಗ ಮೇಯರ್, ಜಿಲ್ಲಾಧಿಕಾರಿಗಳು, ಮೂಡಾ ಕಮೀಷನರ್, ಪೊಲೀಸ್ ಕಮೀಷನರ್ ಪೂರ್ಣವಾಗಿ ಪಾಲಿಕೆ ಕಮೀಷನರ್ ಅವರ ಬೆಂಬಲಕ್ಕೆ ನಿಲ್ಲಬೇಕು. ಒಂದು ಕಡೆ ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನ್ಯಾಯಾಲಯದ ಆದೇಶದ ಅನ್ವಯ ನಿಂತಿವೆ. ಈ ಮೂಲಕ ಜನರಿಗೆ ತೊಂದರೆಯಾಗುತ್ತಿರುವುದು ಕೂಡ ಹೌದು. ಆದರೆ ಅನೇಕ ಕಡೆಗಳಲ್ಲಿ ನ್ಯಾಯಾಲಯದಿಂದ ಸ್ಟೇ ತರದೆ, ನ್ಯಾಯಾಲಯದ ಮೆಟ್ಟಿಲು ಹತ್ತದೆ, ಅನಧಿಕೃತವಾಗಿ ಉಳಿದಿರುವ ಕಟ್ಟಗಳಿಗೆ ಒಂದು ಗತಿ ಕಾಣಿಸಿದರೆ ಅರ್ಧ ಮಂಗಳೂರು ಟ್ರಾಫಿಕ್ ಫ್ರೀ ಆಗುತ್ತದೆ!

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search