• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಶಾಲೆಗಳಲ್ಲಿ ಬೈಬಲ್ ಬೋಧಿಸುವುದು ಬೇಕಾ!!

Hanumantha Kamath Posted On April 30, 2022
0


0
Shares
  • Share On Facebook
  • Tweet It

ಬೆಂಗಳೂರಿನ ಕ್ರೈಸ್ತ ಮಿಷನರಿ ಶಾಲೆಯೊಂದರಲ್ಲಿ ಬೈಬಲ್ ಕಲಿಸಲಾಗುತ್ತದೆ ಎನ್ನುವ ವಿಷಯ ಚರ್ಚೆಯಾಗುತ್ತಿದೆ. ಮಕ್ಕಳನ್ನು ಶಾಲೆಗೆ ದಾಖಲಿಸುವಾಗಲೇ ನಾವು ಅವರ ಪೋಷಕರಿಂದ ನಿರಪೇಕ್ಷಣಾ ಪತ್ರದಲ್ಲಿ ಸಹಿ ಹಾಕಿಸಿದ್ದೇವೆ ಎಂದು ಶಾಲಾ ಅಡಳಿತ ಮಂಡಳಿ ಹೇಳುತ್ತಿದೆ. ಹಾಗಾದರೆ ಶಾಲೆಯಲ್ಲಿ ಆಗುತ್ತಿರುವುದು ಸರಿಯಾ ಎಂದು ನಿಮಗೆ ಅನಿಸಬಹುದು. ಇಲ್ಲಿ ಎರಡು ರೀತಿಯ ಆಯಾಮಗಳು ಇವೆ. ಮೊದಲನೇಯದಾಗಿ ನಿರಪೇಕ್ಷಣಾ ಪತ್ರ ಎನ್ನುವುದು ನಿರೀಕ್ಷಣಾ ಜಾಮೀನು ಅಲ್ಲ. ಆ ಪತ್ರಕ್ಕೆ ಅರ್ಥ ಇಲ್ಲಿ ಇರುವುದೇ ಇಲ್ಲ. ಕರ್ನಾಟಕ ಶಿಕ್ಷಣ ಮಂಡಳಿಯ ಅಡಿಯಲ್ಲಿ ನೋಂದಾವಣಿಯಾಗಿರುವ ಯಾವ ಶಾಲೆ ಕೂಡ ಹೀಗೆ ಶಾಲೆಯಲ್ಲಿ ಮಕ್ಕಳಿಗೆ ಬೈಬಲ್ ಬೋಧಿಸುತ್ತೇವೆ ಮತ್ತು ಅದಕ್ಕೆ ನಮ್ಮ ಸಮ್ಮತಿ ಇದೆ ಎಂದು ಪೋಷಕರಿಂದ ನಿರಪೇಕ್ಷಣಾ ಪತ್ರಕ್ಕೆ ಸಹಿ ಹಾಕಿಸುವುದೇ ತಪ್ಪು. ಯಾಕೆಂದರೆ ಇದು ಕಾನೂನಿಗೆ ವಿರುದ್ಧವಾಗಿರುವ ಪ್ರಕ್ರಿಯೆ. ಕೆಇಎಯ ನಿಯಮದಲ್ಲಿಯೇ ಇದು ಅಡಕವಾಗಿದೆ. ಆದ್ದರಿಂದ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾದರೆ ಆಡಳಿತ ಮಂಡಳಿ ಮೊದಲ ಹಂತದಲ್ಲಿಯೇ ತನ್ನ ವಾದದಲ್ಲಿ ವಿಫಲವಾಗುತ್ತದೆ. ತರಗತಿಯಲ್ಲಿ ಬೈಬಲ್ ಬೋಧಿಸುವುದು ತಪ್ಪು ಎನ್ನುವುದು ಆಡಳಿತ ಮಂಡಳಿಗೆ ಗೊತ್ತಿದ್ದ ಕಾರಣ ಮತ್ತು ಇದರಿಂದ ಭವಿಷ್ಯದಲ್ಲಿ ಹಿಂದೂ ಸಂಘಟನೆಗಳಿಂದ ವಿರೋಧ ಬರಬಹುದು ಎಂದು ತಿಳಿದಿದ್ದ ಕಾರಣ ನಿರಪೇಕ್ಷಣಾ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ. ಯಾರಾದರೂ ಕೇಳಿದರೆ ಪೋಷಕರದ್ದೇ ವಿರೋಧವಿಲ್ಲ, ಇನ್ನು ನಿಮ್ಮದೇನ್ರಿ ಎಂದು ಜಾಡಿಸಬಹುದು ಎನ್ನುವುದು ಆಡಳಿತ ಮಂಡಳಿಯ ನಿಲುವು ಆಗಿತ್ತು. ಇಲ್ಲಿ ಇನ್ನೊಂದು ಆಯಾಮ ಇದೆ. ಅದೇನೆಂದರೆ ಅನೇಕ ಹೆತ್ತವರು ಮಕ್ಕಳನ್ನು ಸೇರಿಸುವಾಗ ಅಲ್ಲಿ ಒಮ್ಮೆ ಸೀಟು ಸಿಕ್ಕಿದರೆ ಸಾಕು ಎನ್ನುವ ಮನೋಭಾವನೆಯನ್ನು ಹೊಂದಿರುತ್ತಾರೆ. ಆದ್ದರಿಂದ ಶಾಲೆಯವರು ಬೆರಳು ತೋರಿಸಿದ ಕಡೆ ಇವರು ಸಹಿ ಹಾಕಿಬಿಡುತ್ತಾರೆ. ಅದರಲ್ಲಿ ಏನು ಬರೆದಿದ್ದಾರೆ ಎಂದು ಓದಲು ಕುಳಿತರೆ ಎಲ್ಲಿ ಸೀಟು ಮಿಸ್ ಆಗುತ್ತದೋ ಎನ್ನುವ ಆತಂಕ ಇವರಿಗೆ ಇರುತ್ತದೆ. ಬ್ಯಾಂಕುಗಳಲ್ಲಿ ಲೋನ್ ಸಿಕ್ಕಿದರೆ ಸಾಕು ಎಂದು ಒಮ್ಮೆ ಕಣ್ಣುಮುಚ್ಚಿ ಸಹಿ ಹಾಕುತ್ತಾರಲ್ಲ, ಅದೇ ರೀತಿ ಇಲ್ಲಿಯೂ ನಡೆಯುತ್ತದೆ. ಬೆಂಗಳೂರಿನಲ್ಲಿ ಬ್ರಾಂಡೆಂಡ್ ಶಾಲೆಗಳು ಎಂದು ಇವೆಯಲ್ಲ, ಅವರು ಹೇಳಿದ್ದೇ ರೂಲ್ಸ್. ಅವರು ಮಾಡಿದ್ದೇ ನಿಯಮ.ಓಕೆ. ಈಗ ಇನ್ನೊಂದು ದೃಷ್ಟಿಕೋನದಲ್ಲಿ ನೋಡೋಣ. ನೀವು ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸಲು ಹೊರಟಿದ್ದೀರಿ. ಅದೇ ನಾವು ಬೈಬಲ್ ಕಲಿಸಲು ಹೋದರೆ ವಿರೋಧ ಯಾಕೆ ಎನ್ನುವುದು ಕೆಲವು ಕ್ರೈಸ್ತ ಮುಖಂಡರ ವಾದ. ಇಲ್ಲಿ ಎರಡು ವಿಷಯಗಳಿವೆ. ಬೈಬಲ್ ಕ್ರೈಸ್ತ ಮತದ ಧಾರ್ಮಿಕ ಗ್ರಂಥ. ಅದನ್ನು ಬೋಧಿಸಿದರೆ ಕ್ರೈಸ್ತ ಮತವನ್ನು ಪ್ರಚಾರ ಮಾಡಿದಂತೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ಭಗವದ್ಗೀತೆ ಹಿಂದೂ ಧರ್ಮದ ಧಾರ್ಮಿಕ ಗ್ರಂಥವಲ್ಲ. ಇದರಲ್ಲಿ ಇರುವ ಉತ್ತಮ ಸಂದೇಶಗಳನ್ನು ಆಯ್ದು ಅದನ್ನು ಪಠ್ಯದಲ್ಲಿ ಸೇರಿಸಿದರೆ ಅದು ಧರ್ಮದ ಪ್ರಚಾರ ಆಗುವುದಿಲ್ಲ. ಇನ್ನು ಭಗವದ್ಗೀತೆ, ರಾಮಾಯಾಣ, ಮಹಾಭಾರತದಲ್ಲಿರುವ ಉದಾತ್ತ ಅಂಶಗಳು ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ. ಅದರಲ್ಲಿರುವ ಸಂದೇಶಗಳು ಇಡೀ ಮನುಕುಲಕ್ಕೆ ಅಗತ್ಯವಾಗಿರುವುದು. ಬೇರೆ ಮತಗಳ ಧಾರ್ಮಿಕ ಗ್ರಂಥಗಳು ತಮ್ಮ ಧರ್ಮವೇ ಶ್ರೇಷ್ಟ ಎಂದು ಬೋಧಿಸಿದರೆ, ಭಗವದ್ಗೀತೆ ಎಲ್ಲಿಯೂ ಅನ್ಯ ಮತಗಳ ಬಗ್ಗೆ ನಂಜು ಕಾರಿಲ್ಲ. ಆದ್ದರಿಂದ ಬೈಬಲ್ ಮತ್ತು ಭಗವದ್ಗೀತೆಯನ್ನು ಒಂದೇ ತಕ್ಕಡಿಯಲ್ಲಿಟ್ಟು ಹೇಳಿಕೆ ಕೊಡುವ ಕೆಲಸವನ್ನು ಕ್ರೈಸ್ತರು ಮಾಡದಿರುವುದೇ ಒಳ್ಳೆಯದು. ಇನ್ನು ಭಾರತದಲ್ಲಿರುವ ಕ್ರೈಸ್ತರ ಮೂಲವನ್ನು ಕೆದಕಿ ಕುಳಿತುಕೊಂಡರೆ ಅದೇ ಬೇರೆ ಕಥೆಯಾದೀತು. ನೀವು ನಿಮ್ಮ ಮತವನ್ನು ಅನುಸರಿಸಿ, ಬೇಕಾದರೆ ಬೋಧಿಸಿ ಎಲ್ಲಿ ಎಂದರೆ ನಿಮ್ಮ ಚರ್ಚಿನಲ್ಲಿ. ಅದು ಬಿಟ್ಟು ಸರಕಾರದ ಅಧೀನದಲ್ಲಿ ಬರುವ ಕರ್ನಾಟಕ ಶಿಕ್ಷಣ ಮಂಡಳಿಯ ನಿಯಮಗಳಿಗೆ ಒಳಪಟ್ಟ ಶಾಲೆಯಲ್ಲಿ ಅಲ್ಲವೇ ಅಲ್ಲ.ಇನ್ನು ಈ ನಿಯಮವನ್ನು ಎಲ್ಲಾ ಕಡೆ ಅನ್ವಯಿಸಿ, ಕ್ರೈಸ್ತ ಶಾಲೆಗಳಿಗೆ ಮಾತ್ರವಲ್ಲ ಎಂದು ಕ್ರೈಸ್ತರಲ್ಲಿ ಕೆಲವರು ಹೇಳುತ್ತಿದ್ದಾರೆ. ಅದರಲ್ಲಿ ಅವರಿಗೆ ಸಂಶಯ ಬೇಡಾ. ಕುರಾನ್ ಕೆಇಎ ಶಾಲೆಗಳಲ್ಲಿ ಬೋಧಿಸುವುದು ಕೂಡ ಅಷ್ಟೇ ತಪ್ಪು. ಅದನ್ನು ಸರಕಾರ ನೋಡಿಕೊಳ್ಳುತ್ತದೆ. ಈ ಬಗ್ಗೆ ಸರಕಾರ ಸೂಕ್ತ ಕೈಗೊಳ್ಳಲಿ ಎಂದು ಎಲ್ಲರ ನಿರೀಕ್ಷೆ. ಯಾಕೆಂದರೆ ಮೊದಲೇ ರಾಜ್ಯದಲ್ಲಿ ಇಂತಹ ವಿಷಯಗಳು ಸೂಕ್ಷ್ಮತೆಯ ಪರಿಧಿಯನ್ನು ದಾಟಿಕೊಂಡು ಹೊರಗೆ ಬರಲು ಕಾಯುತ್ತಿರುತ್ತವೆ. ಹೀಗಿರುವಾಗ ಕೈಸ್ತ ಶಿಕ್ಷಣ ಸಂಸ್ಥೆಗಳು ವ್ಯರ್ಥ ಹಟ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ!

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumantha Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search