• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮೇಲ್ವರ್ಗದ ದಬ್ಬಾಳಿಕೆ ಎನ್ನುವ ಹಳೆ ಕಾಲದ ಅಜ್ಜಿ ಕಥೆ!

Santhosh Kumar Mudradi Posted On January 5, 2024
0


0
Shares
  • Share On Facebook
  • Tweet It

95 ಪರ್ಸೆಂಟ್ ಅಂಕವನ್ನು ಪಡೆದ ಕೇಶವನಿಗಿಂತ 35% ಅಂಕವನ್ನು ಪಡೆದ ಶಿವಲಿಂಗಪ್ಪ ಜಾತಿಯ ಆಧಾರದಲ್ಲಿ ಐಎಎಸ್ ಕೆಲಸವನ್ನು ಗಿಟ್ಟಿಸಿಕೊಂಡ. ಆತನ ತಮ್ಮ ನಿಜಲಿಂಗಪ್ಪ ಇಷ್ಟೇ ಮಾರ್ಕನ್ನು ತೆಗೆದುಕೊಂಡು ಈಗ ಜಡ್ಜ್ ಆಗಿದ್ದಾನೆ. ಮತ್ತೊಬ್ಬ ತಮ್ಮ ಪೊಲೀಸ್ ಆಗಿದ್ದಾನೆ. ಯಾರು ಕೂಡ ಕಲಿತು ಹುದ್ದೆಯನ್ನು ಗಿಟ್ಟಸಿಕೊಂಡವರಲ್ಲ.

ಭೂ ಮಸೂದೆಯ ಕಾನೂನಿನಡಿಯಲ್ಲಿ 50 ಎಕರೆಯನ್ನು ಕಳೆದುಕೊಂಡ ಕೇಶವ ಜೋಶಿಗಳು 5 ಸೆನ್ಸ್ ಜಾಗದಲ್ಲಿ ಮನೆಯೊಂದಿಗೆ ತಾಗಿಸಿಕೊಂಡು ಅಂಗಡಿಯನ್ನು ಹಾಕಿಕೊಂಡು ಬದುಕುತ್ತಿದ್ದಾರೆ. ಕೊರೋನದ ಸಂದರ್ಭದಲ್ಲಿ ಪರಿಹಾರ ನಿಧಿಗಾಗಿ ಸಾಲಿಗೆ ನಿಂತರೆ ಹತ್ತಿರದ ಮನೆಯ 10 ಮಕ್ಕಳ ತಂದೆ ಅಬ್ದುಲ್ಲನಿಗೆ 10 ಕೆಜಿ ಅಕ್ಕಿಯೊಂದಿಗೆ ಇನ್ನಿತರ ಧಾನ್ಯ ಕಾಳುಗಳೆಲ್ಲವೂ ಉಚಿತ. ಜಾತಿಯ ಆಧಾರದಲ್ಲಿ ಗತಿ ಇಲ್ಲದಿದ್ದರೂ ಜೋಷಿಯ ಹೊಟ್ಟೆಗೆ ತಣ್ಣೀರ ಬಟ್ಟೆ ಮಾತ್ರ.

ಹಗಲು ರಾತ್ರಿ ಓದಿ ಸರ್ಕಾರದ ಕೆಲಸಕ್ಕೆ ಹೇಗಾದರೂ ಮಾಡಿ ಸೇರಬೇಕೆಂದುಕೊಂಡ ರಾಘು,ಕೊನೆಗೂ ತಾಲೂಕು ಆಫೀಸಿನಲ್ಲಿ ಗುಮಾಸ್ತನಾಗಿ ಸೇರಿಕೊಂಡ. ತಹಸಿಲ್ದಾರನಾಗಿ ಬಂದದ್ದು ಇವನ ಬಾಲ್ಯದ ಗೆಳೆಯ ಹನುಮಂತಪ್ಪ. ಪ್ರತಿಯೊಂದು ಕ್ಲಾಸಿನಲ್ಲೂ ಎರಡೆರಡು ಬಾರಿ ಕೂತು ಜಾತಿಯ ಆಧಾರದಲ್ಲಿ ಅಧಿಕಾರವನ್ನು ಹಾಗೂ ಗೌರವವನ್ನು ಪಡೆದುಕೊಂಡ.

ಎಷ್ಟು ಕಲಿತರು ವಿದ್ಯೆಗೆ ಹಾಗೂ ಯೋಗ್ಯತೆಗೆ ಇಲ್ಲಿ ಬೆಲೆಯೇ ಇಲ್ಲ. ಬ್ರಾಹ್ಮಣರಿಗೆ ದುಡಿದು ತಿನ್ನುವ ಎಂದರೆ ಇದ್ದಬದ್ದ ಕೃಷಿ ಜಾಗವೆಲ್ಲ ಈಗಾಗಲೇ ಕಳೆದುಕೊಂಡಾಗಿದೆ. ಪರಂಪರೆಯಿಂದ ಬಂದ ಮಠ ಮಂದಿರಗಳ ಅರ್ಚಕ ಸ್ಥಾನ ಕೂಡ ಪ್ರಮಾಣ ಪತ್ರದ ಆಧಾರದಲ್ಲಿ ಇನ್ನಿತರ ಜಾತಿಯವರಿಗೆ ಹಂಚಿಕೆಯಾಗುತ್ತಿದೆ. ಪಾರಂಪರಿಕವಾಗಿ ಬಂದ ಯಾವ ವೃತ್ತಿಯೂ ಈಗ ಬ್ರಾಹ್ಮಣರಲ್ಲಿ ಉಳಿದಿಲ್ಲ. ಸಾಧ್ಯವಿದ್ದಷ್ಟು ಮಟ್ಟಿಗೆ ಉಳಿಸಿಕೊಂಡು ಬೆಳೆಸಿಕೊಂಡು ಬಂದರೂ ಕೂಡ ಈಗ ಎಲ್ಲವನ್ನು ಕಳೆದುಕೊಳ್ಳುತ್ತಿದೆ ಈ ಸಮಾಜ. ಸಾಮಾಜಿಕವಾಗಿ ಈ ರೀತಿಯಾಗಿ ಪಾರಂಪರಿಕ ವೃತ್ತಿಯನ್ನು ಕಳೆದುಕೊಂಡ ಯಾವ ಜಾತಿಯು ಇರಲಿಕ್ಕಿಲ್ಲ. ಬ್ರಾಹ್ಮಣರಲ್ಲಿ ಬುದ್ಧಿವಂತಿಕೆಯುಳ್ಳವ ಹೇಗಾದರೂ ಬದುಕಿಕೊಳ್ಳುತ್ತಿದ್ದಾನೆ. ಇನ್ನು ಹಣವಂತರು ಸ್ವಂತ ಉದ್ಯಮವನ್ನು ಕಟ್ಟಿಕೊಂಡಿದ್ದಾರೆ. ಸಾಮಾನ್ಯರ ಬದುಕು ಈ ಜಾತಿಯಾಧಾರಿತ ಮೀಸಲಾತಿಯ ನಡುವಲ್ಲಿ ಸಿಕ್ಕಿ ನೀರಿನಿಂದ ಮೇಲೆ ಬಂದ ಮೀನಿನಂತೆ ಒದ್ದಾಡುತ್ತಿದೆ. ಅತ್ತ ನೀರಿಗೆ ಹೋಗಲು ದಾರಿಯಲ್ಲ. ಇತ್ತ ನೀರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ.

ಒಕ್ಕಲು ಮಸೂದೆಯಲ್ಲಿ ಕೃಷಿ ಜಾಗವನ್ನು ಪಡೆದುಕೊಂಡವರು ಈಗೇನು ಕೃಷಿ ಮಾಡುತ್ತಿದ್ದಾರೆಯೇ. ಎಲ್ಲಾ ಮಾರಿ ತಿಂದು ದೂರದ ಪಟ್ಟಣಗಳಲ್ಲಿ ಮನೆ ಮಾಡಿಕೊಂಡು ಹಾಯಾಗಿದ್ದಾರೆ. ಸರಕಾರದಿಂದ ಪೇಟೆಗಳಲ್ಲಿ ಸಿಗುವ ಮಾಡ ಎನ್ನುವ ಮನೆಗಳನ್ನು ಸುತಾರಾಂ ಮಾರಲು ಸಾಧ್ಯವಿಲ್ಲ. ಮನೆಯನ್ನು ತೆಗೆದುಕೊಂಡವರಿಗೆ ಸರ್ಕಾರ ಅಂತಹ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಮಾಡಿದೆ. ಅದೇ ಸರ್ಕಾರಕ್ಕೆ ಊಳುವವನೆ ಹೊಲದ ಒಡೆಯ ಎಂದಾಗ ಊಳದಿದ್ದಲ್ಲಿ ಒಡೆಯನಿಗೆ ಆ ಹೊಲ ಸೇರುತ್ತದೆ ಎಂದು ಹೇಳಲು ಬಾಯಿ ಬಂದಿರಲಿಲ್ಲ. ಏಕೆಂದರೆ ಸರಕಾರಕ್ಕೆ ಯಾವಾಗಲೂ ಬ್ರಾಹ್ಮಣರನ್ನು ಹೇಗಾದರೂ ಮಾಡಿ ಗುಂಡಿ ಮಾಡಿ ಹೂತು ಹಾಕಬೇಕು ಎನ್ನುವ ಕೆಟ್ಟ ಯೋಚನೆಯೇ ಇರುತ್ತದೆ.

ಉತ್ತರ ಭಾರತದ ಬ್ರಾಹ್ಮಣರಿಗೆ ಹೋಲಿಸಿದರೆ ದಕ್ಷಿಣ ಭಾರತದ ಬ್ರಾಹ್ಮಣರು ಸ್ವಲ್ಪ ಸ್ಥಿತಿವಂತರಂತೆ ಕಾಣುತ್ತಾರೆ.ಆದರೆ ಈ ಸ್ಥಿತಿ ಇನ್ನು ಬಹುಕಾಲ ಉಳಿಯುವುದಿಲ್ಲ. ಸಾಮಾಜಿಕವಾಗಿ ಎಲ್ಲದರಲ್ಲೂ ಸೋಲುತ್ತಿರುವ ಬ್ರಾಹ್ಮಣ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವುದು ಕಷ್ಟ. ಜಾತಿಯಾಧಾರಿತ ಮೀಸಲಾತಿಯಿರುವ ತನಕ ಯಾವ ವ್ಯವಸ್ಥೆಯಲ್ಲೂ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ. ಅಸಾಮಾನ್ಯನಾದವ ಹೇಗಾದರೂ ಬದುಕಿಕೊಳ್ಳುತ್ತಾನೆ. ಆದ್ದರಿಂದ ಇಲ್ಲಿಯ ಬ್ರಾಹ್ಮಣರು ಕೂಡ ಇನ್ನು ಮುಂದೆ ಉತ್ತರ ಭಾರತದ ಬ್ರಾಹ್ಮಣರಂತೆ ಗಾರೆ ಕೆಲಸವನ್ನು ಮಾಡಿಕೊಂಡು, ರಿಕ್ಷಾ ಓಡಿಸಿಕೊಂಡು, ಟಾಯ್ಲೆಟ್ ಬಾತ್ರೂಮುಗಳನ್ನು ಕ್ಲೀನ್ ಮಾಡಿಕೊಂಡು ಬದುಕುವುದನ್ನು ರೂಡಿಸಿಕೊಳ್ಳಲೇಬೇಕು.

ಘಜ್ನಿ ಘೋರಿಗಳಂತೆ ಎಲ್ಲಿಯೂ ಕೊಲೆ ಸುಲಿಗೆಗಳನ್ನು ನಡೆಸಲಿಲ್ಲ. ಕ್ಸೇವಿಯರ್ನಂತೆ ಎಲ್ಲಿಯೂ ಕೂಡ ಸಾರ್ವತ್ರಿಕವಾಗಿ ಮತಾಂತರವನ್ನು ಮಾಡಲಿಲ್ಲ. ಇತಿಹಾಸದ ಉದ್ದಗಲಕ್ಕೂ ಕೂಡ ಸಾಮಾಜಿಕವಾದ ಎಲ್ಲ ಬದಲಾವಣೆಯನ್ನು ಕೂಡ ತಾನೇ ಮುಂದೆ ನಿಂತು ಮಾಡಿದ ಒಂದು ಪರಂಪರೆ,ಕಾಲ ಕಸವಾಗಿ ಹೋಗುತ್ತಿದೆ. ಇಲ್ಲಸಲ್ಲದ ಮೇಲ್ವರ್ಗದ ದಬ್ಬಾಳಿಕೆ ಎನ್ನುವ ಹಳೆ ಕಾಲದ ಅಜ್ಜಿ ಕಥೆಯನ್ನು ಹೇಳಿಕೊಂಡು ಈಗಲೂ ಬ್ರಾಹ್ಮಣರನ್ನು ದೂರುವವರು ಬೇಕಾದಷ್ಟು ಮಂದಿಯಿದ್ದಾರೆ. ಆದರೆ ದುರಂತ ಅವರೆಲ್ಲರೂ ಕೂಡ ಜಾತಿಯ ಆಧಾರದಲ್ಲಿಯೇ ಸ್ಥಾನಮಾನವನ್ನು ಗಿಟ್ಟಿಸಿಕೊಂಡದ್ದು ಎನ್ನುವುದು ಮರೆತಿದ್ದಾರೆ.

ಯಾವ ಕಾಲಕ್ಕೂ ಬ್ರಾಹ್ಮಣರ ಮೇಧಾ ಶಕ್ತಿಯನ್ನು, ಪ್ರಜ್ಞಾಶಕ್ತಿಯನ್ನು ಅಷ್ಟು ಸುಲಭದಲ್ಲಿ ಕೃಷಿ ಜಾಗವನ್ನು ಅಥವಾ ಇನ್ನಿತರ ಅಧಿಕಾರವನ್ನು ಪಡೆದುಕೊಂಡಂತೆ ಗುತ್ತಿಗೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಕಸ್ತೂರಿಯ ಪರಿಮಳ ಎಷ್ಟು ಒಳಗಿಟ್ಟರು ಬಂದೇ ಬರುತ್ತದೆ. ಹೇಗೆ ತುಳಿದರು ಚೆಂಡಿನಂತೆ ಮತ್ತೆ ಹಳೆಯ ರಭಸಕ್ಕಿಂತಲೂ ಹೆಚ್ಚಾಗಿ ಪುಟ್ಟಿದೇಳುವ ಶಕ್ತಿ ಬ್ರಾಹ್ಮಣರಲ್ಲಿ ಇದ್ದೇ ಇದೆ.

ಅದಕ್ಕೆ ಬೇಕಾದ ಅವಕಾಶವನ್ನು ತಾವು ತಾವುಗಳೇ ಸಂಘಟಿತರಾಗಿ ಮಾಡಿಕೊಳ್ಳಲೇಬೇಕು. ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಚಿಸಬೇಕು ಇಲ್ಲದಿದ್ದರೆ ಅಂತಹ ಸಂಘ ಸಂಸ್ಥೆಗಳು ಇದ್ದರೂ ಪ್ರಯೋಜನವಿಲ್ಲ.

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Santhosh Kumar Mudradi July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Santhosh Kumar Mudradi July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search