• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೇಲ್ವರ್ಗದ ದಬ್ಬಾಳಿಕೆ ಎನ್ನುವ ಹಳೆ ಕಾಲದ ಅಜ್ಜಿ ಕಥೆ!

Santhosh Kumar Mudradi Posted On January 5, 2024


  • Share On Facebook
  • Tweet It

95 ಪರ್ಸೆಂಟ್ ಅಂಕವನ್ನು ಪಡೆದ ಕೇಶವನಿಗಿಂತ 35% ಅಂಕವನ್ನು ಪಡೆದ ಶಿವಲಿಂಗಪ್ಪ ಜಾತಿಯ ಆಧಾರದಲ್ಲಿ ಐಎಎಸ್ ಕೆಲಸವನ್ನು ಗಿಟ್ಟಿಸಿಕೊಂಡ. ಆತನ ತಮ್ಮ ನಿಜಲಿಂಗಪ್ಪ ಇಷ್ಟೇ ಮಾರ್ಕನ್ನು ತೆಗೆದುಕೊಂಡು ಈಗ ಜಡ್ಜ್ ಆಗಿದ್ದಾನೆ. ಮತ್ತೊಬ್ಬ ತಮ್ಮ ಪೊಲೀಸ್ ಆಗಿದ್ದಾನೆ. ಯಾರು ಕೂಡ ಕಲಿತು ಹುದ್ದೆಯನ್ನು ಗಿಟ್ಟಸಿಕೊಂಡವರಲ್ಲ.

ಭೂ ಮಸೂದೆಯ ಕಾನೂನಿನಡಿಯಲ್ಲಿ 50 ಎಕರೆಯನ್ನು ಕಳೆದುಕೊಂಡ ಕೇಶವ ಜೋಶಿಗಳು 5 ಸೆನ್ಸ್ ಜಾಗದಲ್ಲಿ ಮನೆಯೊಂದಿಗೆ ತಾಗಿಸಿಕೊಂಡು ಅಂಗಡಿಯನ್ನು ಹಾಕಿಕೊಂಡು ಬದುಕುತ್ತಿದ್ದಾರೆ. ಕೊರೋನದ ಸಂದರ್ಭದಲ್ಲಿ ಪರಿಹಾರ ನಿಧಿಗಾಗಿ ಸಾಲಿಗೆ ನಿಂತರೆ ಹತ್ತಿರದ ಮನೆಯ 10 ಮಕ್ಕಳ ತಂದೆ ಅಬ್ದುಲ್ಲನಿಗೆ 10 ಕೆಜಿ ಅಕ್ಕಿಯೊಂದಿಗೆ ಇನ್ನಿತರ ಧಾನ್ಯ ಕಾಳುಗಳೆಲ್ಲವೂ ಉಚಿತ. ಜಾತಿಯ ಆಧಾರದಲ್ಲಿ ಗತಿ ಇಲ್ಲದಿದ್ದರೂ ಜೋಷಿಯ ಹೊಟ್ಟೆಗೆ ತಣ್ಣೀರ ಬಟ್ಟೆ ಮಾತ್ರ.

ಹಗಲು ರಾತ್ರಿ ಓದಿ ಸರ್ಕಾರದ ಕೆಲಸಕ್ಕೆ ಹೇಗಾದರೂ ಮಾಡಿ ಸೇರಬೇಕೆಂದುಕೊಂಡ ರಾಘು,ಕೊನೆಗೂ ತಾಲೂಕು ಆಫೀಸಿನಲ್ಲಿ ಗುಮಾಸ್ತನಾಗಿ ಸೇರಿಕೊಂಡ. ತಹಸಿಲ್ದಾರನಾಗಿ ಬಂದದ್ದು ಇವನ ಬಾಲ್ಯದ ಗೆಳೆಯ ಹನುಮಂತಪ್ಪ. ಪ್ರತಿಯೊಂದು ಕ್ಲಾಸಿನಲ್ಲೂ ಎರಡೆರಡು ಬಾರಿ ಕೂತು ಜಾತಿಯ ಆಧಾರದಲ್ಲಿ ಅಧಿಕಾರವನ್ನು ಹಾಗೂ ಗೌರವವನ್ನು ಪಡೆದುಕೊಂಡ.

ಎಷ್ಟು ಕಲಿತರು ವಿದ್ಯೆಗೆ ಹಾಗೂ ಯೋಗ್ಯತೆಗೆ ಇಲ್ಲಿ ಬೆಲೆಯೇ ಇಲ್ಲ. ಬ್ರಾಹ್ಮಣರಿಗೆ ದುಡಿದು ತಿನ್ನುವ ಎಂದರೆ ಇದ್ದಬದ್ದ ಕೃಷಿ ಜಾಗವೆಲ್ಲ ಈಗಾಗಲೇ ಕಳೆದುಕೊಂಡಾಗಿದೆ. ಪರಂಪರೆಯಿಂದ ಬಂದ ಮಠ ಮಂದಿರಗಳ ಅರ್ಚಕ ಸ್ಥಾನ ಕೂಡ ಪ್ರಮಾಣ ಪತ್ರದ ಆಧಾರದಲ್ಲಿ ಇನ್ನಿತರ ಜಾತಿಯವರಿಗೆ ಹಂಚಿಕೆಯಾಗುತ್ತಿದೆ. ಪಾರಂಪರಿಕವಾಗಿ ಬಂದ ಯಾವ ವೃತ್ತಿಯೂ ಈಗ ಬ್ರಾಹ್ಮಣರಲ್ಲಿ ಉಳಿದಿಲ್ಲ. ಸಾಧ್ಯವಿದ್ದಷ್ಟು ಮಟ್ಟಿಗೆ ಉಳಿಸಿಕೊಂಡು ಬೆಳೆಸಿಕೊಂಡು ಬಂದರೂ ಕೂಡ ಈಗ ಎಲ್ಲವನ್ನು ಕಳೆದುಕೊಳ್ಳುತ್ತಿದೆ ಈ ಸಮಾಜ. ಸಾಮಾಜಿಕವಾಗಿ ಈ ರೀತಿಯಾಗಿ ಪಾರಂಪರಿಕ ವೃತ್ತಿಯನ್ನು ಕಳೆದುಕೊಂಡ ಯಾವ ಜಾತಿಯು ಇರಲಿಕ್ಕಿಲ್ಲ. ಬ್ರಾಹ್ಮಣರಲ್ಲಿ ಬುದ್ಧಿವಂತಿಕೆಯುಳ್ಳವ ಹೇಗಾದರೂ ಬದುಕಿಕೊಳ್ಳುತ್ತಿದ್ದಾನೆ. ಇನ್ನು ಹಣವಂತರು ಸ್ವಂತ ಉದ್ಯಮವನ್ನು ಕಟ್ಟಿಕೊಂಡಿದ್ದಾರೆ. ಸಾಮಾನ್ಯರ ಬದುಕು ಈ ಜಾತಿಯಾಧಾರಿತ ಮೀಸಲಾತಿಯ ನಡುವಲ್ಲಿ ಸಿಕ್ಕಿ ನೀರಿನಿಂದ ಮೇಲೆ ಬಂದ ಮೀನಿನಂತೆ ಒದ್ದಾಡುತ್ತಿದೆ. ಅತ್ತ ನೀರಿಗೆ ಹೋಗಲು ದಾರಿಯಲ್ಲ. ಇತ್ತ ನೀರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ.

ಒಕ್ಕಲು ಮಸೂದೆಯಲ್ಲಿ ಕೃಷಿ ಜಾಗವನ್ನು ಪಡೆದುಕೊಂಡವರು ಈಗೇನು ಕೃಷಿ ಮಾಡುತ್ತಿದ್ದಾರೆಯೇ. ಎಲ್ಲಾ ಮಾರಿ ತಿಂದು ದೂರದ ಪಟ್ಟಣಗಳಲ್ಲಿ ಮನೆ ಮಾಡಿಕೊಂಡು ಹಾಯಾಗಿದ್ದಾರೆ. ಸರಕಾರದಿಂದ ಪೇಟೆಗಳಲ್ಲಿ ಸಿಗುವ ಮಾಡ ಎನ್ನುವ ಮನೆಗಳನ್ನು ಸುತಾರಾಂ ಮಾರಲು ಸಾಧ್ಯವಿಲ್ಲ. ಮನೆಯನ್ನು ತೆಗೆದುಕೊಂಡವರಿಗೆ ಸರ್ಕಾರ ಅಂತಹ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಮಾಡಿದೆ. ಅದೇ ಸರ್ಕಾರಕ್ಕೆ ಊಳುವವನೆ ಹೊಲದ ಒಡೆಯ ಎಂದಾಗ ಊಳದಿದ್ದಲ್ಲಿ ಒಡೆಯನಿಗೆ ಆ ಹೊಲ ಸೇರುತ್ತದೆ ಎಂದು ಹೇಳಲು ಬಾಯಿ ಬಂದಿರಲಿಲ್ಲ. ಏಕೆಂದರೆ ಸರಕಾರಕ್ಕೆ ಯಾವಾಗಲೂ ಬ್ರಾಹ್ಮಣರನ್ನು ಹೇಗಾದರೂ ಮಾಡಿ ಗುಂಡಿ ಮಾಡಿ ಹೂತು ಹಾಕಬೇಕು ಎನ್ನುವ ಕೆಟ್ಟ ಯೋಚನೆಯೇ ಇರುತ್ತದೆ.

ಉತ್ತರ ಭಾರತದ ಬ್ರಾಹ್ಮಣರಿಗೆ ಹೋಲಿಸಿದರೆ ದಕ್ಷಿಣ ಭಾರತದ ಬ್ರಾಹ್ಮಣರು ಸ್ವಲ್ಪ ಸ್ಥಿತಿವಂತರಂತೆ ಕಾಣುತ್ತಾರೆ.ಆದರೆ ಈ ಸ್ಥಿತಿ ಇನ್ನು ಬಹುಕಾಲ ಉಳಿಯುವುದಿಲ್ಲ. ಸಾಮಾಜಿಕವಾಗಿ ಎಲ್ಲದರಲ್ಲೂ ಸೋಲುತ್ತಿರುವ ಬ್ರಾಹ್ಮಣ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವುದು ಕಷ್ಟ. ಜಾತಿಯಾಧಾರಿತ ಮೀಸಲಾತಿಯಿರುವ ತನಕ ಯಾವ ವ್ಯವಸ್ಥೆಯಲ್ಲೂ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ. ಅಸಾಮಾನ್ಯನಾದವ ಹೇಗಾದರೂ ಬದುಕಿಕೊಳ್ಳುತ್ತಾನೆ. ಆದ್ದರಿಂದ ಇಲ್ಲಿಯ ಬ್ರಾಹ್ಮಣರು ಕೂಡ ಇನ್ನು ಮುಂದೆ ಉತ್ತರ ಭಾರತದ ಬ್ರಾಹ್ಮಣರಂತೆ ಗಾರೆ ಕೆಲಸವನ್ನು ಮಾಡಿಕೊಂಡು, ರಿಕ್ಷಾ ಓಡಿಸಿಕೊಂಡು, ಟಾಯ್ಲೆಟ್ ಬಾತ್ರೂಮುಗಳನ್ನು ಕ್ಲೀನ್ ಮಾಡಿಕೊಂಡು ಬದುಕುವುದನ್ನು ರೂಡಿಸಿಕೊಳ್ಳಲೇಬೇಕು.

ಘಜ್ನಿ ಘೋರಿಗಳಂತೆ ಎಲ್ಲಿಯೂ ಕೊಲೆ ಸುಲಿಗೆಗಳನ್ನು ನಡೆಸಲಿಲ್ಲ. ಕ್ಸೇವಿಯರ್ನಂತೆ ಎಲ್ಲಿಯೂ ಕೂಡ ಸಾರ್ವತ್ರಿಕವಾಗಿ ಮತಾಂತರವನ್ನು ಮಾಡಲಿಲ್ಲ. ಇತಿಹಾಸದ ಉದ್ದಗಲಕ್ಕೂ ಕೂಡ ಸಾಮಾಜಿಕವಾದ ಎಲ್ಲ ಬದಲಾವಣೆಯನ್ನು ಕೂಡ ತಾನೇ ಮುಂದೆ ನಿಂತು ಮಾಡಿದ ಒಂದು ಪರಂಪರೆ,ಕಾಲ ಕಸವಾಗಿ ಹೋಗುತ್ತಿದೆ. ಇಲ್ಲಸಲ್ಲದ ಮೇಲ್ವರ್ಗದ ದಬ್ಬಾಳಿಕೆ ಎನ್ನುವ ಹಳೆ ಕಾಲದ ಅಜ್ಜಿ ಕಥೆಯನ್ನು ಹೇಳಿಕೊಂಡು ಈಗಲೂ ಬ್ರಾಹ್ಮಣರನ್ನು ದೂರುವವರು ಬೇಕಾದಷ್ಟು ಮಂದಿಯಿದ್ದಾರೆ. ಆದರೆ ದುರಂತ ಅವರೆಲ್ಲರೂ ಕೂಡ ಜಾತಿಯ ಆಧಾರದಲ್ಲಿಯೇ ಸ್ಥಾನಮಾನವನ್ನು ಗಿಟ್ಟಿಸಿಕೊಂಡದ್ದು ಎನ್ನುವುದು ಮರೆತಿದ್ದಾರೆ.

ಯಾವ ಕಾಲಕ್ಕೂ ಬ್ರಾಹ್ಮಣರ ಮೇಧಾ ಶಕ್ತಿಯನ್ನು, ಪ್ರಜ್ಞಾಶಕ್ತಿಯನ್ನು ಅಷ್ಟು ಸುಲಭದಲ್ಲಿ ಕೃಷಿ ಜಾಗವನ್ನು ಅಥವಾ ಇನ್ನಿತರ ಅಧಿಕಾರವನ್ನು ಪಡೆದುಕೊಂಡಂತೆ ಗುತ್ತಿಗೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಕಸ್ತೂರಿಯ ಪರಿಮಳ ಎಷ್ಟು ಒಳಗಿಟ್ಟರು ಬಂದೇ ಬರುತ್ತದೆ. ಹೇಗೆ ತುಳಿದರು ಚೆಂಡಿನಂತೆ ಮತ್ತೆ ಹಳೆಯ ರಭಸಕ್ಕಿಂತಲೂ ಹೆಚ್ಚಾಗಿ ಪುಟ್ಟಿದೇಳುವ ಶಕ್ತಿ ಬ್ರಾಹ್ಮಣರಲ್ಲಿ ಇದ್ದೇ ಇದೆ.

ಅದಕ್ಕೆ ಬೇಕಾದ ಅವಕಾಶವನ್ನು ತಾವು ತಾವುಗಳೇ ಸಂಘಟಿತರಾಗಿ ಮಾಡಿಕೊಳ್ಳಲೇಬೇಕು. ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಚಿಸಬೇಕು ಇಲ್ಲದಿದ್ದರೆ ಅಂತಹ ಸಂಘ ಸಂಸ್ಥೆಗಳು ಇದ್ದರೂ ಪ್ರಯೋಜನವಿಲ್ಲ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Santhosh Kumar Mudradi May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Santhosh Kumar Mudradi May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search